ಪಾಕಿಸ್ಥಾನದಲ್ಲಿ ಮುಸ್ಲಿಮೇತರ ಮತದಾರರ ಸಂಖ್ಯೆ ಶೇ.30 ಹೆಚ್ಚಳ
Team Udayavani, May 28, 2018, 12:30 PM IST
ಇಸ್ಲಾಮಾಬಾದ್ : ಇದೇ ವರ್ಷ ಜುಲೈ 25ರಂದು ಪಾಕಿಸ್ಥಾನ ಮಹಾ ಚುನಾವಣೆಯನ್ನು ಕಾಣಲಿದೆ. ಈ ಸಂಬಂಧ ನಡೆಸಲಾದ ಅಧ್ಯಯನವೊಂದರಲ್ಲಿ ಪಾಕಿಸ್ಥಾನದಲ್ಲಿನ ಮುಸ್ಲಿಮೇತರ ಮತದಾರರ ಸಂಖ್ಯೆ ಹೆಚ್ಚಾಗಿರುವುದು ಕಂಡು ಬಂದಿದೆ.
ಪಾಕಿಸ್ಥಾನದ ಡಾನ್ ಸುದ್ದಿ ಪತ್ರಿಕೆ ಮಾಡಿರುವ ವರದಿಯ ಪ್ರಕಾರ ದೇಶದಲ್ಲಿ 2013ರಲ್ಲಿ ಮುಸ್ಲಿಮೇತರ ಮತದಾರರ ಸಂಖ್ಯೆ 27.70 ಲಕ್ಷ ಇತ್ತು. ಈ ವರ್ಷ ಅದು 36.30 ಲಕ್ಷಕ್ಕೆ ಏರಿದೆ. ಎಂದರೆ ಶೇ.30ರ ಏರಿಕೆ ಕಂಡು ಬಂದಂತಾಗಿದೆ.
ಅಲ್ಪ ಸಂಖ್ಯಾಕರೆಂದು ಕರೆಯಲ್ಪಡುವ ಮುಸ್ಲಿಮೇತರ ಮತದಾರರ ಪೈಕಿ ಅತ್ಯಧಿಕ ಸಂಖ್ಯೆಯ ಮತದಾರರು ಹಿಂದುಗಳಾಗಿದ್ದಾರೆ. 2013ರಲ್ಲಿ ಮುಸ್ಲಿಮೇತರ ಮತದಾರರಲ್ಲಿ ಹಿಂದುಗಳ ಪ್ರಮಾಣ ಅರ್ಧದಷ್ಟಿತ್ತು. ಈ ವರ್ಷ ಅದು ಅರ್ಧಕ್ಕಿಂತ ಕೆಳಕ್ಕೆ ಇಳಿದಿದೆ.
2013ರಲ್ಲಿ ಪಾಕಿಸ್ಥಾನದಲ್ಲಿ ಒಟ್ಟು ಹಿಂದು ಮತದಾರರ ಸಂಖ್ಯೆ 14 ಲಕ್ಷ ಇತ್ತು. 2018ರಲ್ಲಿ ಅದು 17.70 ಲಕ್ಷವಾಗಿದೆ. ಆದರೆ ಹಿಂದುಯೇತರ ಮತದಾರರ ಸಂಖ್ಯೆ ಹೆಚ್ಚಿರುವುದು ಗಮನಾರ್ಹವಾಗಿದೆ.
ಡಾನ್ ವರದಿಯ ಪ್ರಕಾರ ಪಾಕಿಸ್ಥಾನದ ಎರಡನೇ ದೊಡ್ಡ ಅಲ್ಪ ಸಂಖ್ಯಾಕ ಮತದಾರರು ಕ್ರೈಸ್ತರಾಗಿದ್ದಾರೆ. ಈ ವರ್ಷ ನಡೆಯುವ ಮಹಾ ಚುನಾವಣೆಯಲ್ಲಿ ಮತ ಹಾಕುವ ಕ್ರೈಸ್ತರ ಸಂಖ್ಯೆ 16.40 ಲಕ್ಷ ಇದೆ. ಕ್ರೈಸ್ತ ಮತದಾರರ ಸಂಖ್ಯೆಯಲ್ಲಿನ ಏರಿಕೆಯ ಹಿಂದೂ ಮತದಾರರ ಏರಿಕೆಗಿಂದ ಹೆಚ್ಚಿರುವುದು ಕಂಡು ಬಂದಿದೆ.
ಇದೇ ರೀತಿ ಪಾರ್ಸಿ ಮತದಾರರ ಸಂಖ್ಯೆಯಲ್ಲೂ ಹೆಚ್ಚಳವಾಗಿದೆ ಎಂದು ಡಾನ್ ದೈನಿಕ ವರದಿ ಮಾಡಿದೆ.
ಪಾಕ್ ಚುನಾವಣಾ ಆಯೋಗವು ಜು.25ರಿಂದ 27ರ ವರೆಗಿನ ದಿನಾಂಕದಲ್ಲಿ ಮಹಾ ಚುನಾವಣೆ ನಡೆಸುವುದಕ್ಕೆ ರಾಷ್ಟ್ರಪತಿಗಳ ಅನುಮತಿಯನ್ನು ಕೋರಿದೆ. ರಾಷ್ಟ್ರಪತಿಯವರು ಮಹಾ ಚುನಾವಣೆಯ ಅಂತಿಮ ದಿನಾಂಕವನ್ನು ನಿರ್ಧರಿಸುವ ಅಧಿಕಾರ ಹೊಂದಿದ್ದಾರೆ.
ಈಗಿನ ಪಾಕ್ ಸರಕಾರದ ಅಧಿಕಾರಾವಧಿ ಮೇ 31ಕ್ಕೆ ಕೊನೆಗೊಳ್ಳುತ್ತದೆ. ಜೂನ್ 1ರಂದು ಅದು ಉಸ್ತುವಾರಿ ಸರಕಾರವಾಗಲಿದ್ಧು ಹೊಸ ಸರಕಾರ ಅಸ್ತಿತ್ವಕ್ಕೆ ಬರುವ ತನಕ ಕರ್ತವ್ಯ ನಿರ್ವಹಿಸಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು
Kuala Lumpur; ಪರಸ್ಪರ ಡಿಕ್ಕಿ ಹೊಡೆದು ಪತನಗೊಂಡ ಕಾಪ್ಟರ್ಗಳು: 10 ಯೋಧರು ಸಾವು
Malaysia ನೌಕಾಪಡೆಯ 2 ಹೆಲಿಕಾಪ್ಟರ್ ಪತನ; 10 ಮಂದಿ ಮೃತ್ಯು, ಭಯಾನಕ ವಿಡಿಯೋ ಸೆರೆ
Taiwan ನಲ್ಲಿ ಸರಣಿ ಭೂಕಂಪ… ರಾತ್ರಿಯಿಡೀ ಮನೆಯಿಂದ ಹೊರಗುಳಿದ ಮನೆಮಂದಿ
US ಪೌರತ್ವ: ಭಾರತೀಯರಿಗೆ ದ್ವಿತೀಯ ಸ್ಥಾನ
MUST WATCH
ಹೊಸ ಸೇರ್ಪಡೆ
Dakshina Kannada; ಕ್ಯಾಪ್ಟನ್ ಬ್ರಿಜೇಶ್ ಚೌಟರ ‘ನವಯುಗ-ನವಪಥ’ ಕಾರ್ಯಸೂಚಿ
Janardhana Poojary; ನನ್ನ ಜೀವಿತಾವಧಿಯಲ್ಲಿಯೇ ಶಿಷ್ಯ ಪದ್ಮರಾಜ್ ಗೆಲುವು ಕಾಣುವಾಸೆ..
Jayaprakash Hegde: ಎಲ್ಲ ವರ್ಗದ ಜನರ ಆಶೋತ್ತರಗಳಿಗೆ ಸ್ಪಂದಿಸುವ ಸಾಮರ್ಥ್ಯ ಇನ್ನೂ ಇದೆ
DCvsGT; ಪಂತ್ ನಾಯಕತ್ವಕ್ಕೆ ಅಗ್ನಿಪರೀಕ್ಷೆ: ತವರಿನ “ಕೋಟ್ಲಾ’ದಲ್ಲಿ ಗುಜರಾತ್ ಎದುರಾಳಿ
ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?