ಬಾಹ್ಯಾಕಾಶ ನಿಲ್ದಾಣಕ್ಕೆ ಕಾಲಿಟ್ಟ ವಿಶೇಷ ಜೀವಿ!
ಈ ಜೀವಿಯ ಜೀವನ ಶೈಲಿಯಲ್ಲಿ ಕಾಣುವ ವ್ಯತ್ಯಾಸವನ್ನು ಗ್ರಹಿಸಲು ಉದ್ದೇಶಿಸಲಾಗಿದೆ.
Team Udayavani, Aug 13, 2021, 9:35 AM IST
ಅಂತರಿಕ್ಷದಲ್ಲಿ ತೇಲಾಡುತ್ತಿರುವ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ (ಐಎಸ್ಎಸ್), ಗುರುವಾರ ಹೊಸ ಜೀವಿಯೊಂದು ಸೇರ್ಪಡೆಗೊಂಡಿದೆ. ಅದರ ಹೆಸರು “ಬ್ಲಾಬ್’! ಇದರ ವಿಶೇಷವೇನು ಗೊತ್ತೇ? ಇದು ಮನುಷ್ಯನಲ್ಲ, ಪ್ರಾಣಿಯೂ ಅಲ್ಲ; ಸಸ್ಯ ಅಲ್ಲ ಅಥವಾ ಶಿಲೀಂಧ್ರವೂ ಅಲ್ಲ… ಹಾಗಿದ್ದರೆ ಏನಿದು? ಏಕೆ ಇದನ್ನು ಐಎಸ್ಎಸ್ಗೆ ಕಳುಹಿಸಲಾಗಿದೆ? ಇಲ್ಲಿದೆ ಕುತೂಹಲಕರ ಮಾಹಿತಿ.
ಯಾವ ವರ್ಗಕ್ಕೂ ಸೇರದ್ದು! :
ನೋಡಲು ಹಳದಿ ಬಣ್ಣದ, ಸ್ಪಾಂಜಿನ ಗುಣಲಕ್ಷಣಗಳಿರುವ ಇದರ ವೈಜ್ಞಾನಿಕ ಹೆಸರು, ಫೈಝಾರಮ್ ಪಾಲಿಸೆಫಾಲಮ್ (ಕಜysಚruಞ ಟಟlycಛಿಟಜಚluಞ). ಸುಮಾರು 50 ಕೋಟಿ ವರ್ಷಗಳ ಹಿಂದೆ ಇದು ಭೂಮಿಯಲ್ಲಿ ಉಗಮವಾಗಿದೆ ಎಂದು ನಂಬಲಾಗಿದೆ. ಇದೊಂದು ಏಕಾಣು ಜೀವಿ. ಆದರೆ ಏಕಾಣು ಜೀವಿಗಳಲ್ಲಿರುವಂತೆ ಇದರಲ್ಲಿ ನ್ಯೂಕ್ಲಿಯಸ್ ಇರುವುದಿಲ್ಲ. ಇದನ್ನು ಈ ಹಿಂದೆ, ಶಿಲೀಂಧ್ರಗಳ ವರ್ಗಕ್ಕೆ ಸೇರಿಸಲಾಗಿತ್ತಾದರೂ, ಆನಂತರ ಅದರ ಜೈವಿಕ ವ್ಯತ್ಯಾಸಗಳಿಂದಾಗಿ ಅದನ್ನು ಆ ವರ್ಗದಿಂದ ಹೊರಗಿಡಲಾಯಿತು. ಅಂದಿನಿಂದ ಇಲ್ಲಿಯವರೆಗೂ ಅದು “ಅವರ್ಗೀಯ’ವಾಗಿಯೇ ಉಳಿದಿದೆ.
ಸೋಜಿಗಜೀವಿ “ಬ್ಲಾಬ್’ನ ವಿಚಿತ್ರ ಜೀವನ, ವಿಶೇಷಣ! :
ಸಾಮಾನ್ಯವಾಗಿ ಯಾವುದೇ ಜೀವಿಯಲ್ಲಿ ಗಂಡು- ಹೆಣ್ಣು ಎಂಬ ಪ್ರಭೇದವಿರುತ್ತದೆ. ಆದರೆ ಇದರಲ್ಲಿ 720 ಪ್ರಭೇದಗಳಿವೆ! ಇದಕ್ಕೆ ಬಾಯಿ, ಅಂಗಾಂಗಗಳು, ಮೆದುಳು ಇಲ್ಲ. ಆದರೆ ಇದು ಆಹಾರ ಸೇವಿಸುತ್ತದೆ, ಅತ್ಯಂತ ನಿಧಾನವಾಗಿ ಚಲಿಸುತ್ತದೆ. ಇನ್ನೊಂದು ವಿಶೇಷವೆಂದರೆ, ಸಾಮಾನ್ಯವಾಗಿ ಏಕಾಣು ಜೀವಿಗಳು ಜೀವಕೋಶಗಳ ವಿಭಜನೆಯಿಂದ ತಮ್ಮ ಸಂತಾನೋತ್ಪತ್ತಿ ಮಾಡುತ್ತವೆ. ಆದರೆ ಬ್ಲಾಬ್ನಲ್ಲಿ ಈ ಪ್ರಕ್ರಿಯೆ ನಡೆಯದೇ ಸಂತಾನೋತ್ಪತ್ತಿ ಮಾಡಿಕೊಳ್ಳುತ್ತದೆ.
ಐಎಸ್ಎಸ್ಗೆ ಕಳುಹಿಸಿದ್ದೇಕೆ? :
ಭೂಮಿಯ ಮೇಲಿನ ಯಾವುದೇ ಜೀವಿಗೆ ಇರದಂಥ ಸೋಜಿಗಗಳನ್ನು ಹೊಂದಿರುವ ಇದು ಗುರುತ್ವಾಕರ್ಷಣವಿಲ್ಲದ ಕಡೆ ಹೇಗೆ ಬೆಳೆಯಬಲ್ಲದು ಎಂಬ ಕುತೂಹಲ ವಿಜ್ಞಾನಿಗಳದ್ದು. ಹಾಗಾಗಿ, ಇದನ್ನು ಐಎಸ್ಎಸ್ಗೆ ಕಳುಹಿಸಲಾಗಿದೆ. ಅಲ್ಲಿ, ಖಗೋಳಯಾತ್ರಿಕರು ಇದನ್ನು ಆಳವಾಗಿ ಅಧ್ಯಯನ ಮಾಡಲಿದ್ದಾರೆ. ಇದೇ ಅಧ್ಯಯನವನ್ನು ಫ್ರಾನ್ಸ್ನ ಶಾಲಾ ವಿದ್ಯಾರ್ಥಿಗಳು
ಫ್ರಾನ್ಸ್ನಲ್ಲಿ ಕೈಗೊಳ್ಳಲಿದ್ದಾರೆ. ಎರಡೂ ಕಡೆಗಳಲ್ಲಿ ಈ ಜೀವಿಯ ಜೀವನ ಶೈಲಿಯಲ್ಲಿ ಕಾಣುವ ವ್ಯತ್ಯಾಸವನ್ನು ಗ್ರಹಿಸಲು ಉದ್ದೇಶಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ
Thailandನಲ್ಲಿ ಗುಜರಿ ಮಾಫಿಯಾದ ಕಿಂಗ್ ಪಿನ್ ರವಿ ಕಾನಾ, ಪ್ರಿಯತಮೆ ಕಾಜಲ್ ಜಾ ಬಂಧನ
ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ
Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು
MUST WATCH
ಹೊಸ ಸೇರ್ಪಡೆ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ