ಅಳಿಯನನ್ನು ಮದುವೆಯಾದ ಅತ್ತೆಗೆ ಮಗಳೇ ವಿಲನ್: ಸಿನಿಮಾ ಕಥೆಯನ್ನು ಮೀರಿಸುವಂತಿದೆ ಈ ಸುದ್ದಿ !


Team Udayavani, Jul 19, 2020, 9:14 AM IST

marrige

ಸಾಂಧರ್ಭಿಕ ಚಿತ್ರ ಬಳಸಲಾಗಿದೆ. ಕೃಪೆ-google

ರಷ್ಯಾ: ಕೆಲದಿನಗಳ ಹಿಂದೆ ಮಾವನೇ ಸೊಸೆಯನ್ನು ಮದುವೆಯಾದ ಸುದ್ದಿಯನ್ನು ಓದಿರುವಿರಿ. ಇದೀಗ ಅತ್ತೆ ತನ್ನ ಅಳಿಯನನ್ನೇ ವಿವಾಹವಾಗಿರುವ ಘಟನೆಯೊಂದು ನಡೆದಿದೆ. ಆದರೆ ಇಲ್ಲಿ ಹಲವು ಟ್ವಿಸ್ಟ್ ಗಳಿದ್ದು ಸುದ್ದಿಯನ್ನು ಸಂಪೂರ್ಣ ಓದಿ.

ರಷ್ಯಾದ ಸೇಂಟ್ ಪೀಟರ್ಸ್ ಬರ್ಗ್ ನಲ್ಲಿ ನೆಲೆಸಿರುವ 75 ವರ್ಷದ ಗಲಿನಾ ಝೂಕೋವಸ್ಕಯ ಎಂಬ ವೃದ್ಧೆ ವ್ಯಾಚೆಸ್ಲಾವ್ ಎಂಬ ವ್ಯಕ್ತಿಯನ್ನು ವಿವಾಹವಾಗಿದ್ದರು. ಆದರೇ ಟ್ವಿಸ್ಸ್ ಎಂದರೇ ವ್ಯಾಚೆಸ್ಲಾವ್ ಸ್ವತಃ ಗಲಿನಾ ಅವರ ಮಗಳ ಪತಿಯಾಗಿದ್ದ.

ಗಲಿನಾ ಅವರ ಮಗಳು ಎಲಿನಾರನ್ನು ವ್ಯಾಚೆಸ್ಲಾವ್ 2007ರಲ್ಲಿ ಮದುವೆಯಾಗಿದ್ದ. ಆದರೆ ಸಂಸಾರದಲ್ಲಿ ವಿರಸವುಂಟಾಗಿ ಇಬ್ಬರು 2010ರಲ್ಲಿ ಬೇರೆಬೇರೆಯಾದರು. ಮಾತ್ರವಲ್ಲದೆ ಎಲಿನಾ ಸ್ವತಃ ತನ್ನ ಗಂಡನನ್ನೆ ಮನೆಯಿಂದ ಹೊರದಬ್ಬುತ್ತಾಳೆ. ಇತ್ತ ಮನೆಯೂ ಇಲ್ಲದೆ, ಹೆಂಡತಿಯೂ ಇಲ್ಲದೆ ವ್ಯಾಚೆಸ್ಲಾವ್ ಅತ್ತೆ ಗಲಿನಾ ಮನೆಗೆ ತೆರಳಿ ಘಟನೆಯನ್ನು ವಿವರಿಸುತ್ತಾನೆ, ಅದರ ಜೊತೆಗೆ ಅಲ್ಲಿಯೇ ಆಶ್ರಯ ಪಡೆಯುತ್ತಾನೆ.

ಈ ನಡುವೆ ಅತ್ತೆ ಗಲಿನಾಗೆ ವ್ಯಾಚೆಸ್ಲಾವ್ ಮೇಲೆ ಪ್ರೇಮಾಂಕುರವಾಗುತ್ತದೆ. ಇದನ್ನು ನಿವೇದಿಸಿಕೊಂಡಾಗ ವ್ಯಾಚೆಸ್ಲಾವ್ ಒಪ್ಪಿಕೊಂಡು ಮದುವೆಯಾಗುತ್ತಾರೆ.  ಈ ನಡುವೆ ಕಥೆಯಲ್ಲಿ ಮತ್ತೊಂದು ಟ್ವಿಸ್ಟ್ ಎದುರಾಗುತ್ತದೆ. ಅದು ಕೂಡ ಮದುವೆಯಾದ 10 ವರ್ಷದ ನಂತರ.

ವ್ಯಾಚೆಸ್ಲಾವ್ ಮೊದಲ ಪತ್ನಿ ಎಲಿನಾ ಇದೀಗ ಮತ್ತೆ ಬಂದಿದ್ದು ನಮ್ಮ ಸಂಸಾರವನ್ನು ಹಾಳುಗೆಡವಲು ಪ್ರಯತ್ನಿಸುತ್ತಿದ್ದಾಳೆ ಎಂದು ಗಲಿನಾ ಸ್ವತಃ ತನ್ನ ಮಗಳ ಮೇಲೆ ದೂರಿದ್ದಾರೆ. ಮಗಳು ತನ್ನ ಮಾಜಿ ಪತಿಯನ್ನ ತನ್ನತ್ತ ಸೆಳೆಯಲು ಪ್ರಯತ್ನಿಸುವ ಮೂಲಕ ಸಂಸಾರದಲ್ಲಿ ಹುಳಿ ಹಿಂಡುತ್ತಿದ್ದಾಳೆ ಎಂದು ದೂರಿದ್ದಾರೆ. ಇದೀಗ ಈ ವಿಚಾರ ರಷ್ಯಾ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಯಾಗುತ್ತಿದೆ.

ಗಲಿನಾ ತನ್ನ ಪುತ್ರಿ ಎಲಿನಾ ವಿರುದ್ಧ ಈಗ ಸಿಡಿದೆದ್ದಿದ್ದಾರೆ. `ಒಂದು ದಶಕದ ಹಿಂದೆ ಆಕೆ ಮತ್ತು ವ್ಯಾಚೆಸ್ಲಾವ್ ಬೇರ್ಪಟ್ಟ ಬಳಿಕ ಎಲಿನಾ ಎಲ್ಲಿದ್ದಳು ಎಂದೇ ಗೊತ್ತಿರಲಿಲ್ಲ. ಆದರೆ, ನಮ್ಮ ಸುಖ ಸಂಸಾರ ಕಂಡು ಪುತ್ರಿ ಎಲಿನಾ ಅಸೂಹೆ ಹೊಂದಿದ್ದಾಳೆ. ತನ್ನ ಮಾಜಿ ಪತಿಯೊಂದಿಗೆ ತಾಯಿ ಸುಖವಾಗಿರುವುದನ್ನು ಕಂಡು ಬೇಸರಗೊಂಡಿರುವ ಅವಳು ತನ್ನ ಮಾಜಿ ಪತಿಯನ್ನು ಮತ್ತೆ ತನ್ನತ್ತ ಸೆಳೆಯಲು ಯತ್ನಿಸುತ್ತಿದ್ದಾಳೆ’ ಎಂಬುದು ಗಲಿನಾರ ಆರೋಪ. ಈ ಕಾರ್ಯಕ್ಕೆ ಬೇರೊಬ್ಬ ವ್ಯಕ್ತಿಯಿಂದ ಜನಿಸಿದ ತನ್ನ 30 ವರ್ಷದ ಮಗಳನ್ನು ಎಲಿನಾ ಬಳಸುತ್ತಿದ್ದಾಳೆ ಎಂಬುದು ಗಲಿನಾರ ದೂರು.

ಎಲಿನಾ ಮತ್ತು ವ್ಯಾಚೆಸ್ಲಾವ್ ಪ್ರೇಮಕಥೆ.

ವ್ಯಾಚೆಸ್ಲಾವ್ ಒಮ್ಮೆ ತನ್ನ ಮಾಲಿಕ ಸರಿಯಾಗಿ ವೇತನ ಕೊಡಲಿಲ್ಲ ಎಂಬ ಕಾರಣ ನೀಡಿ ಆತನನ್ನೆ ಕೊಲೆ ಮಾಡಿ ಜೈಲು ಪಾಲಾಗಿದ್ದ. ಜೈಲಿನಲ್ಲಿದ್ದಾಗಲೇ  ಈತ ಸ್ಥಳೀಯ ಪತ್ರಿಕೆಗೆ ಪತ್ರ ಬರೆದು ತಾನು ಪ್ರೀತಿಯ ಹುಡುಕಾಟದಲ್ಲಿದ್ದೇನೆ ಎಂದು ವಿವರಿಸಿದ್ದ. ಇದು ಪತ್ರಿಕೆಯಲ್ಲಿ ಪ್ರಕಟವಾಗುತ್ತಿದ್ದಂತೆಯೇ ಎಲಿನಾ ಈ ಪತ್ರಕ್ಕೆ ಮನಸೋತಿದ್ದರು. ಅಲ್ಲದೆ, ವ್ಯಾಚೆಸ್ಲಾವ್ ಬಿಡುಗಡೆಗಾಗಿ ಕಾದು 2007ರಲ್ಲಿ ವಿವಾಹವಾದರು. ಆದರೆ, ಇದಾದ ಮೂರು ವರ್ಷಕ್ಕೆ ಈ ದಂಪತಿ ಬೇರ್ಪಟ್ಟಿದ್ದರು…!

ಇದಾದ ಬಳಿಕವೇ ವ್ಯಾಚೆಸ್ಲಾವ್‌ನನ್ನು ಗಲಿನಾ ವರಿಸಿದ್ದು…! ಆದರೆ, ಈಗ ಮತ್ತೆ ಇವರ ಜಗಳ ಆರಂಭವಾಗಿದೆ. ಒಬ್ಬ ವ್ಯಕ್ತಿಗಾಗಿ ತಾಯಿ ಮಗಳು ಇಲ್ಲಿ ಪರಸ್ಪರ ಜಗಳಕ್ಕೆ ನಿಂತ ಕತೆ ಈಗ ರಷ್ಯಾದ ಸುದ್ದಿ ಮಾಧ್ಯಮಗಳಲ್ಲಿ ಭರ್ಜರಿಯಾಗಿ ಸದ್ದು ಮಾಡುತ್ತಿದೆ.

ಟಾಪ್ ನ್ಯೂಸ್

ಚೊಂಬಿನ ಮೂಲಕ ಮೋದಿ ಸ್ವಾಗತಕ್ಕೆ ಕಾಂಗ್ರೆಸ್‌ ಸಿದ್ಧತೆ

ಚೊಂಬಿನ ಮೂಲಕ ಮೋದಿ ಸ್ವಾಗತಕ್ಕೆ ಕಾಂಗ್ರೆಸ್‌ ಸಿದ್ಧತೆ

Congresss ಚೊಂಬು ಜಾಹೀರಾತು ವಿರುದ್ಧ ಬಿಜೆಪಿ ಚಾರ್ಜ್‌ಶೀಟ್‌

Congresss ಚೊಂಬು ಜಾಹೀರಾತು ವಿರುದ್ಧ ಬಿಜೆಪಿ ಚಾರ್ಜ್‌ಶೀಟ್‌

Lok Sabha Elections ಕೆಲಸ ಮಾಡದಿದ್ದರೆ ಮನೆಗೆ: ಸುರ್ಜೇವಾಲ

Lok Sabha Elections ಕೆಲಸ ಮಾಡದಿದ್ದರೆ ಮನೆಗೆ: ಸುರ್ಜೇವಾಲ

Shobha, Bharathi Shetty  ಹೊರತು ಬಿಎಸ್‌ವೈ ಬೇರೆ ಯಾರನ್ನೂ ಬೆಳೆಸುತ್ತಿಲ್ಲ: ಈಶ್ವರಪ್ಪ

Shobha, Bharathi Shetty ಹೊರತು ಬಿಎಸ್‌ವೈ ಬೇರೆ ಯಾರನ್ನೂ ಬೆಳೆಸುತ್ತಿಲ್ಲ: ಈಶ್ವರಪ್ಪ

Lok Sabha Elections; ಮುಗಿದ ವೀಣಾ ಮುನಿಸು; ಕಾಂಗ್ರೆಸ್‌ ಈಗ “ಸಂಯುಕ್ತ’

Lok Sabha Elections; ಮುಗಿದ ವೀಣಾ ಮುನಿಸು; ಕಾಂಗ್ರೆಸ್‌ ಈಗ “ಸಂಯುಕ್ತ’

High Court ಎಚ್‌ಡಿಕೆಗೆ ಮಹಿಳಾ ಆಯೋಗ ನೀಡಿದ್ದ ನೋಟಿಸ್‌ಗೆ ಹೈಕೋರ್ಟ್‌ ತಡೆ

High Court ಎಚ್‌ಡಿಕೆಗೆ ಮಹಿಳಾ ಆಯೋಗ ನೀಡಿದ್ದ ನೋಟಿಸ್‌ಗೆ ಹೈಕೋರ್ಟ್‌ ತಡೆ

banMysuru: ಮೋದಿ ಕುರಿತು ಹಾಡು ಬರೆದ ಯೂಟ್ಯೂಬರ್‌ಗೆ ಹಲ್ಲೆ

Mysuru: ಮೋದಿ ಕುರಿತು ಹಾಡು ಬರೆದ ಯೂಟ್ಯೂಬರ್‌ಗೆ ಹಲ್ಲೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Israel – Iran: ಕ್ಷಿಪಣಿ ದಾಳಿಯ ಮೂಲಕ ಸೇಡು ತೀರಿಸಿಕೊಂಡ ಇಸ್ರೇಲ್; ಎಚ್ಚರಿಕೆ ನೀಡಿದ ಇರಾನ್

Israel – Iran: ಕ್ಷಿಪಣಿ ದಾಳಿಯ ಮೂಲಕ ಸೇಡು ತೀರಿಸಿಕೊಂಡ ಇಸ್ರೇಲ್; ಎಚ್ಚರಿಕೆ ನೀಡಿದ ಇರಾನ್

Russia War: ಉಕ್ರೇನ್‌ ಮೇಲೆ ರಷ್ಯಾ ಭೀಕರ ದಾಳಿ-17 ಮಂದಿ ಮೃತ್ಯು; ನೆರವಿಗಾಗಿ ಮನವಿ

Russia War: ಉಕ್ರೇನ್‌ ಮೇಲೆ ರಷ್ಯಾ ಭೀಕರ ದಾಳಿ-17 ಮಂದಿ ಮೃತ್ಯು; ನೆರವಿಗಾಗಿ ಮನವಿ

ನನ್ನ ಪತ್ನಿಗೆ ಏನಾದರೂ ಆದರೆ…: ಸೇನಾ ಮುಖ್ಯಸ್ಥರಿಗೆ ಎಚ್ಚರಿಕೆ ನೀಡಿದ ಇಮ್ರಾನ್ ಖಾನ್

ನನ್ನ ಪತ್ನಿಗೆ ಏನಾದರೂ ಆದರೆ…: ಸೇನಾ ಮುಖ್ಯಸ್ಥರಿಗೆ ಎಚ್ಚರಿಕೆ ನೀಡಿದ ಇಮ್ರಾನ್ ಖಾನ್

Heavy Rain: ಮರಳುಗಾಡು ದುಬೈನಲ್ಲಿ ಧಾರಾಕಾರ ಮಳೆ, ಪ್ರವಾಹ ಪರಿಸ್ಥಿತಿ-ಜನಜೀವನ ಅಸ್ತವ್ಯಸ್ತ

Heavy Rain: ಮರಳುಗಾಡು ದುಬೈನಲ್ಲಿ ಧಾರಾಕಾರ ಮಳೆ, ಪ್ರವಾಹ ಪರಿಸ್ಥಿತಿ-ಜನಜೀವನ ಅಸ್ತವ್ಯಸ್ತ

Rain: ವರುಣನ ಆರ್ಭಟಕ್ಕೆ ನಲುಗಿದ ದುಬೈ… ವಿಮಾನ ನಿಲ್ದಾಣ ಜಲಾವೃತ, ಜನಜೀವನ ಅಸ್ತವ್ಯಸ್ಥ

Rain: ವರುಣನ ಆರ್ಭಟಕ್ಕೆ ನಲುಗಿದ ದುಬೈ… ವಿಮಾನ ನಿಲ್ದಾಣ ಜಲಾವೃತ, ಜನಜೀವನ ಅಸ್ತವ್ಯಸ್ಥ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

ಚೊಂಬಿನ ಮೂಲಕ ಮೋದಿ ಸ್ವಾಗತಕ್ಕೆ ಕಾಂಗ್ರೆಸ್‌ ಸಿದ್ಧತೆ

ಚೊಂಬಿನ ಮೂಲಕ ಮೋದಿ ಸ್ವಾಗತಕ್ಕೆ ಕಾಂಗ್ರೆಸ್‌ ಸಿದ್ಧತೆ

Congresss ಚೊಂಬು ಜಾಹೀರಾತು ವಿರುದ್ಧ ಬಿಜೆಪಿ ಚಾರ್ಜ್‌ಶೀಟ್‌

Congresss ಚೊಂಬು ಜಾಹೀರಾತು ವಿರುದ್ಧ ಬಿಜೆಪಿ ಚಾರ್ಜ್‌ಶೀಟ್‌

Lok Sabha Elections ಕೆಲಸ ಮಾಡದಿದ್ದರೆ ಮನೆಗೆ: ಸುರ್ಜೇವಾಲ

Lok Sabha Elections ಕೆಲಸ ಮಾಡದಿದ್ದರೆ ಮನೆಗೆ: ಸುರ್ಜೇವಾಲ

Shobha, Bharathi Shetty  ಹೊರತು ಬಿಎಸ್‌ವೈ ಬೇರೆ ಯಾರನ್ನೂ ಬೆಳೆಸುತ್ತಿಲ್ಲ: ಈಶ್ವರಪ್ಪ

Shobha, Bharathi Shetty ಹೊರತು ಬಿಎಸ್‌ವೈ ಬೇರೆ ಯಾರನ್ನೂ ಬೆಳೆಸುತ್ತಿಲ್ಲ: ಈಶ್ವರಪ್ಪ

Lok Sabha Elections; ಮುಗಿದ ವೀಣಾ ಮುನಿಸು; ಕಾಂಗ್ರೆಸ್‌ ಈಗ “ಸಂಯುಕ್ತ’

Lok Sabha Elections; ಮುಗಿದ ವೀಣಾ ಮುನಿಸು; ಕಾಂಗ್ರೆಸ್‌ ಈಗ “ಸಂಯುಕ್ತ’

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.