ಕರ್ತಾರ್ಪುರ ಯಾತ್ರಿಕರ ಅನುಕೂಲಕ್ಕೆ 80 ವಲಸೆ ಕೌಂಟರ್
ಪಾಕ್ ಸರ್ಕಾರದಿಂದ ಘೋಷಣೆ
Team Udayavani, Oct 28, 2019, 8:20 PM IST
ಲಾಹೋರ್: ಕರ್ತಾರ್ಪುರ ಕಾರಿಡಾರ್ಗೆ ಭಾರೀ ಸಂಖ್ಯೆಯಲ್ಲಿ ಯಾತ್ರಿಗಳು ಭೇಟಿ ನೀಡುವ ನಿರೀಕ್ಷೆಯಿರುವ ಕಾರಣ, ಅವರಿಗೆ ಅನುಮತಿ ನೀಡುವ ಪ್ರಕ್ರಿಯೆಯನ್ನು ಕ್ಷಿಪ್ರವಾಗಿ ಹಾಗೂ ಸರಾಗವಾಗಿ ಮಾಡಲು ಅನುಕೂಲವಾಗುವಂತೆ 80 ವಲಸೆ ಕೌಂಟರ್ಗಳನ್ನು ತೆರೆಯುವುದಾಗಿ ಪಾಕಿಸ್ತಾನ ಸರ್ಕಾರ ಘೋಷಿಸಿದೆ.
ಕಳೆದ ವಾರವಷ್ಟೇ ಭಾರತ ಮತ್ತು ಪಾಕ್ ನಡುವೆ ಕರ್ತಾರ್ಪುರ ಕಾರಿಡಾರ್ಗೆ ಸಂಬಂಧಿಸಿದ ಒಪ್ಪಂದ ನಡೆದಿದೆ. ಕರ್ತಾರ್ಪುರದಲ್ಲಿನ ಗುರುದ್ವಾರ ದರ್ಬಾರ್ ಸಾಹಿಬ್ಗ ಪ್ರತಿ ದಿನ 5 ಸಾವಿರ ಭಾರತೀಯ ಯಾತ್ರಿಕರಿಗೆ ಆಗಮಿಸಲು ಅವಕಾಶ ಕಲ್ಪಿಸಲಾಗುತ್ತದೆ. ಯಾತ್ರಿಕರಿಗೆ ಅನುಮತಿ ನೀಡುವ ಪ್ರಕ್ರಿಯೆಯನ್ನು ತ್ವರಿತಗತಿಯಲ್ಲಿ ಮುಗಿಸಲು 80 ವಲಸೆ ಕೌಂಟರ್ಗಳನ್ನು ಹಾಗೂ ದರ್ಬಾರ್ ಸಾಹಿಬ್ನಿಂದ 4 ಕಿ.ಮೀ. ದೂರದಲ್ಲಿ ವಲಸೆ ಹಾಲ್ವೊಂದನ್ನು ತೆರೆಯಲು ನಿರ್ಧರಿಸಲಾಗಿದೆ.
ನಗರ್ ಕೀರ್ತನೆ ಆರಂಭ:
ಭಾರತದ ಸಿಖ್ ಭಕ್ತರ ಒಂದು ಸಮೂಹವು ಸೋಮವಾರವೇ ನವದೆಹಲಿಯಿಂದ ಪಾಕ್ನ ನನ್ಕಾನಾ ಸಾಹಿಬ್ಗ ಧಾರ್ಮಿಕ ಮೆರವಣಿಗೆ ಆರಂಭಿಸಿದೆ ಎಂದು ರಾಯಭಾರ ಕಚೇರಿ ತಿಳಿಸಿದೆ. ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಸೇರಿದಂತೆ ಅನೇಕ ಗಣ್ಯರು ಹಾಜರಿದ್ದು, ಈ ಮೆರವಣಿಗೆಗೆ ಚಾಲನೆ ನೀಡಿದ್ದಾರೆ. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಕ್ನ ಪ್ರಭಾರ ಹೈಕಮಿಷನರ್ ಸೈಯದ್ ಹೈದರ್ ಶಾ ಪಾಲ್ಗೊಂಡಿದ್ದರು. ನಗರ ಕೀರ್ತನೆಯು ಲೂಧಿಯಾನಾ ಮತ್ತು ಅಮೃತಸರ ದಾಟಿ, ಅ.31ರಂದು ವಾಘಾ ಗಡಿ ಮೂಲಕ ಪಾಕಿಸ್ತಾನ ತಲುಪಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pak ಆತ್ಮಾಹುತಿ ದಾಳಿ: ಐವರು ಜಪಾನೀಯರು ಪಾರು
Israel – Iran: ಕ್ಷಿಪಣಿ ದಾಳಿಯ ಮೂಲಕ ಸೇಡು ತೀರಿಸಿಕೊಂಡ ಇಸ್ರೇಲ್; ಎಚ್ಚರಿಕೆ ನೀಡಿದ ಇರಾನ್
Russia War: ಉಕ್ರೇನ್ ಮೇಲೆ ರಷ್ಯಾ ಭೀಕರ ದಾಳಿ-17 ಮಂದಿ ಮೃತ್ಯು; ನೆರವಿಗಾಗಿ ಮನವಿ
ನನ್ನ ಪತ್ನಿಗೆ ಏನಾದರೂ ಆದರೆ…: ಸೇನಾ ಮುಖ್ಯಸ್ಥರಿಗೆ ಎಚ್ಚರಿಕೆ ನೀಡಿದ ಇಮ್ರಾನ್ ಖಾನ್
Heavy Rain: ಮರಳುಗಾಡು ದುಬೈನಲ್ಲಿ ಧಾರಾಕಾರ ಮಳೆ, ಪ್ರವಾಹ ಪರಿಸ್ಥಿತಿ-ಜನಜೀವನ ಅಸ್ತವ್ಯಸ್ತ