ರಾಷ್ಟ್ರಾಧ್ಯಕ್ಷನಾಗಿ ಅಭಿನಯಿಸಿದಾತ ಉಕ್ರೇನ್‌ ಅಧ್ಯಕ್ಷ!


Team Udayavani, Apr 23, 2019, 6:01 AM IST

ukrain

ಕೀವ್‌ (ಉಕ್ರೇನ್‌): ಇದು ಯಾವುದೇ ಸಿನೆಮಾ ಕತೆಯಲ್ಲ; ಟಿವಿ ಕಾರ್ಯ ಕ್ರಮದಲ್ಲಿ ರಾಷ್ಟ್ರಾಧ್ಯಕ್ಷನಾಗಿ ನಟಿಸಿ ಜನಪ್ರಿಯತೆ ಗಳಿಸಿಕೊಂಡ ಹಾಸ್ಯನಟರೊಬ್ಬರು ವಾಸ್ತವವಾಗಿ ಅದೇ ದೇಶದ ಅಧ್ಯಕ್ಷರಾಗಿ ಚುನಾತರಾದ ನಿಜಕತೆ!

ರಾಜಕೀಯದ ಗಂಧಗಾಳಿಯೂ ಇಲ್ಲದ ನಟ ವೊಲೊಡಿಮಿರ್‌ ಝೆಲೆನ್ಸಿ$R (41) ಉಕ್ರೇನ್‌ನಲ್ಲಿ ಎಷ್ಟೊಂದು ಜನಪ್ರಿಯತೆ ಗಳಿಸಿದ್ದರೆಂದರೆ, ಚುನಾವಣೆಯಲ್ಲಿ ಇವರು ಅಧ್ಯಕ್ಷರಾಗಿ ಆಯ್ಕೆಯಾದರು! ಇತ್ತೀಚೆಗೆ ನಡೆದಿದ್ದ ಅಧ್ಯಕ್ಷೀಯ ಚುನಾವಣೆಯಲ್ಲಿ ಅವರು, ಹಾಲಿ ಅಧ್ಯಕ್ಷ ಪೆಟ್ರೊ ಪೊರೊಶೆಂಕೊ ವಿರುದ್ಧ ಶೇ. 73.2 ಮತಗಳನ್ನು ಗಳಿಸಿ ಜಯಶಾಲಿಯಾಗಿದ್ದಾರೆ. ಅಧ್ಯಕ್ಷರ ಆಡಳಿತ ವೈಖರಿಯನ್ನು ಅಣಕಿಸುವ “ಸರ್ವೆಂಟ್‌ ಆಫ್ ದ ಪೀಪಲ್‌’ ಎಂಬ ವಿಡಂಬ ನಾತ್ಮಕ ಟಿವಿ ಕಾರ್ಯಕ್ರಮವನ್ನು ಝೆಲೆನ್ಸಿ ನಡೆಸುತ್ತಿದ್ದರು.

ಉಕ್ರೇನ್‌ನ ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ ಸಮಸ್ಯೆಗಳನ್ನಿಟ್ಟುಕೊಂಡು ಜನರಿಗೆ ಹತ್ತಿರವಾಗಿರುವ, ಜನರು ನಿತ್ಯ ಎದುರಿಸುತ್ತಿರುವ ಸಮಸ್ಯೆಗಳಿಗೆ ಉತ್ತರವೆಂಬಂತೆ ರೂಪುಗೊಂಡ ಈ ಧಾರಾವಾಹಿಯಲ್ಲಿ ಖುದ್ದು ಝೆಲೆನ್ಸಿ$R ಅವರೇ ದೇಶದ ಅಧ್ಯಕ್ಷರಾಗಿ ಪಾತ್ರ ನಿರ್ವಹಿಸುತ್ತಾರೆ. 2015ರಲ್ಲಿ ಶುರುವಾದ ಧಾರಾವಾಹಿ ದೇಶದಲ್ಲಿ ಅಗಾಧ ಜನಪ್ರಿಯತೆ ಗಳಿಸಿತ್ತು.

ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ, ಝೆಲೆನ್ಸಿ$R ಈ ಬಾರಿಯ ಅಧ್ಯಕ್ಷೀಯ ಚುನಾವಣ ಅಖಾಡದಲ್ಲಿ ಹಾಲಿ ಅಧ್ಯಕ್ಷ ಪೆಟ್ರೊ ಪೊರೊಶೆಂಕೊ ವಿರುದ್ಧವೇ ಕಣಕ್ಕಿಳಿದಿದ್ದರು. ಮೊದಲೇ ಆಡಳಿತ ವಿರೋಧಿ ಅಲೆ ಇದ್ದಿದ್ದರಿಂದ ಅದು ಝೆಲೆನ್ಸಿ$R ಪಾಲಿಗೆ “ವಿಜಯ ಮಾಲೆ’ಯಾಗಿ ಬದಲಾಗಿದೆ.

ಹಾಲಿ ಅಧ್ಯಕ್ಷರ ಸರಕಾರದಲ್ಲಿನ ಭ್ರಷ್ಟಾಚಾರ, ಸಾಮಾಜಿಕ ನ್ಯಾಯ ವಿಲೇವಾರಿಯಲ್ಲಿನ ತಾರತಮ್ಯ, ರಷ್ಯಾ ಬೆಂಬಲಿತ ಶಕ್ತಿಗಳೊಂದಿಗಿನ ಕದನದಿಂದಾಗಿ ಪೂರ್ವ ಉಕ್ರೇನ್‌ನಲ್ಲಿನ ಅಶಾಂತ ವಾತಾವರಣ ಮತ್ತು ಅದರಿಂದ 13,000 ಜನರ ಸಾವು ಮುಂತಾದ ಬೆಳವಣಿಗೆಗಳಿಂದ ನೊಂದಿದ್ದ ಜನ ಝೆಲೆನ್ಸಿ$Rಯಲ್ಲಿ ಒಬ್ಬ ಸಂವೇದಿ ರಾಷ್ಟ್ರಾಧ್ಯಕ್ಷರನ್ನು ಗುರುತಿಸಿ ಅವರಿಗೆ ಮತ ಹಾಕಿದ್ದಾರೆ ಎಂದು ಕೆಲವು ಪತ್ರಿಕೆಗಳು ವರದಿ ಮಾಡಿವೆ. ಫ‌ಲಿತಾಂಶದ ಕುರಿತು ಪ್ರತಿಕ್ರಿಯಿಸಿರುವ ಅವರು, ನಮ್ಮನ್ನೊಮ್ಮೆ ನೋಡಿ, ಅಸಾಧ್ಯವಾದುದು ಏನೂ ಇಲ್ಲ’ ಎಂದಿದ್ದಾರೆ.

ಯಾರೀ ಝೆಲೆನ್ಸಿ$R?
ಝೆಲೆನ್ಸಿ$R ಹುಟ್ಟಿದ್ದು, ಸೋವಿಯತ್‌ ರಷ್ಯಾದ ಭಾಗವಾಗಿದ್ದ ಉಕ್ರೇನಿಯನ್‌ ಎಸ್‌ಎಸ್‌ಆರ್‌ನ ಕ್ರಿವ್ವಿ ರಿಹ್‌ ಎಂಬಲ್ಲಿ. ಕ್ರಿವ್ಹಿ ರಿಹ್‌ನಲ್ಲೇ ತಮ್ಮ ಪ್ರಾಥಮಿಕ ವಿದ್ಯಾಭ್ಯಾಸ ಮುಗಿಸಿದ ಅವರು, ಅನಂತರ ಕಿÂವ್‌ ನ್ಯಾಶನಲ್‌ ಎಕನಾಮಿಕ್‌ ಯೂನಿವರ್ಸಿಟಿಯಲ್ಲಿ ಕಾನೂನು ಪದವಿ ಪಡೆದಿದ್ದಾರೆ.

ತನ್ನ 17ನೇ ವರ್ಷದಲ್ಲಿ ಕೆ.ವಿ.ಎನ್‌. ತಂಡವನ್ನು ಸೇರಿಕೊಂಡ ಅವರು, ಲಿವ್‌ ಇನ್‌ ದ ಬಿಗ್‌ ಸಿಟಿ, ಆಫೀಸ್‌ ರೊಮಾನ್ಸ್‌, ಅವರ್‌ ಟೈಂ, ರೆವಿಸ್ಕಿ ವರ್ಸಸ್‌ ನೆಪೋಲಿಯನ್‌ ಮುಂತಾದ ಸಿನೆಮಾಗಳಲ್ಲಿ ಅಭಿನಯಿಸಿದರು.

ತಿರುವು ತಂದ ಆ ಪ್ರಕರಣ
2014ರಲ್ಲಿ ಅಂದಿನ ಉಕ್ರೇನ್‌ನ ಸಂಸ್ಕೃತಿ ಸಚಿವಾಲಯವು ರಷ್ಯಾದ ಕಲಾವಿದರು ಉಕ್ರೇನ್‌ನ ಕಲಾ ಕ್ಷೇತ್ರಗಳಲ್ಲಿ ಕೆಲಸ ಮಾಡಬಾರದೆಂಬ ನಿಯಮ ಜಾರಿಗೊಳಿಸಲು ಮುಂದಾಗಿತ್ತು. ಇದನ್ನು ಝೆಲೆನ್ಸಿ$R ಬಹಿರಂಗವಾಗಿ ವಿರೋಧಿಸಿದ್ದರು. ಇಂಥ ರಾಜಕೀಯ ವಾಕ್ಸಮರದ ಪರಿಣಾಮ ಇವರ ಲವ್‌ ಇನ್‌ ಬಿಗ್‌ ಸಿಟಿ – 2 ಚಿತ್ರವನ್ನು ನಿಷೇಧಿಸಲಾಯಿತು. ಅಷ್ಟರಲ್ಲಿ ಉಕ್ರೇನ್‌ನಲ್ಲಿನ ಹಿಂಸಾಚಾರ, ತಾರತಮ್ಯ ಧೋರಣೆಗಳು ಜನರನ್ನು ಹಿಂಡಿ ಹಿಪ್ಪೆ ಮಾಡಿತ್ತು. ಇದೆಲ್ಲದನ್ನೂ ವಿರೋಧಿಸುವ ಆದರೆ, ವಿಡಂಬ ನಾತ್ಮಕವಾಗಿ ಸರಕಾರದ ರೀತಿ ನೀತಿಗಳನ್ನು ಹಳಿಯುವ ಹೊಸ ಪ್ರಯತ್ನಕ್ಕೆ ಝೆಲೆನ್ಸಿ$R ಮುಂದಾಗಿದ್ದು, ಇದರ ಫ‌ಲ “ಸರ್ವೆಂಟ್‌ ಆಫ್ ದ ಪೀಪಲ್‌’.

ಟಾಪ್ ನ್ಯೂಸ್

9-

Chamarajanagara: ಪ್ರಮೋದ್ ಆರಾಧ್ಯಗೆ ಯುಪಿಎಸ್‌ಸಿ 671 ರ‍್ಯಾಂಕ್‌  

Election ಗೆದ್ದ ನಂತರ ಜನರಿಂದ ದೂರವಾಗದೆ ಕ್ಷೇತ್ರವನ್ನು ಅಭಿವೃದ್ಧಿ ಮಾಡುವತ್ತ ಸಾಗಬೇಕು

Election ಗೆದ್ದ ಬಳಿಕ ಕ್ಷೇತ್ರವನ್ನು ಅಭಿವೃದ್ಧಿ ಮಾಡುವತ್ತ ಸಾಗಬೇಕು; ಬಿ.ವೈ.ರಾಘವೇಂದ್ರ

BJP ಪ್ರಾಥಮಿಕ ಸದಸ್ಯತ್ವಕ್ಕೆ ಸಂಸದ ಸಂಗಣ್ಣ ಕರಡಿ ರಾಜೀನಾಮೆ… ಮುಂದಿನ ನಡೆ ಏನು?

BJP ಪ್ರಾಥಮಿಕ ಸದಸ್ಯತ್ವಕ್ಕೆ ಸಂಸದ ಸಂಗಣ್ಣ ಕರಡಿ ರಾಜೀನಾಮೆ… ಮುಂದಿನ ನಡೆ ಏನು?

UPSC ಪರೀಕ್ಷೆಯಲ್ಲಿ 101ನೇ ರ್‍ಯಾಂಕ್ ಪಡೆದ ಸೌಭಾಗ್ಯಗೆ ಗುರುವಾಗಿ ನಿಂತದ್ದು ಡಾ.ಅಶ್ವಿನಿ

UPSC ಪರೀಕ್ಷೆಯಲ್ಲಿ 101ನೇ ರ್‍ಯಾಂಕ್ ಪಡೆದ ಸೌಭಾಗ್ಯಗೆ ಗುರುವಾಗಿ ನಿಂತದ್ದು ಡಾ.ಅಶ್ವಿನಿ

ಛತ್ತೀಸ್‌ಗಢದ ಕಂಕೇರ್‌ನಲ್ಲಿ ಎನ್ ಕೌಂಟರ್: ನಕ್ಸಲ್ ನಾಯಕ ಸೇರಿ 18 ಮಾವೋವಾದಿಗಳ ಹತ್ಯೆ

ಛತ್ತೀಸ್‌ಗಢದ ಕಂಕೇರ್‌ನಲ್ಲಿ ಎನ್ ಕೌಂಟರ್: ನಕ್ಸಲ್ ನಾಯಕ ಸೇರಿ 18 ಮಾವೋವಾದಿಗಳ ಹತ್ಯೆ

UPSC Result: ಬೀದರ್ ನ ಮೊಹಮ್ಮದ್ ಅಸೀಮ್‌ ಮುಜತೇಬಾಗೆ 481ನೇ ರ‍್ಯಾಂಕ್‌

UPSC Result: ಬೀದರ್ ನ ಮೊಹಮ್ಮದ್ ಅಸೀಮ್‌ ಮುಜತೇಬಾಗೆ 481ನೇ ರ‍್ಯಾಂಕ್‌

ವಿಜಯಪುರ: ಗಂಡನಿಂದ ಕಿತ್ತು ಹೆಂಡತಿಗೆ ಕೊಡುವುದೇ ಸಿದ್ದು ಗ್ಯಾರಂಟಿ: ಸಿ.ಟಿ.ರವಿ ವಾಗ್ದಾಳಿ

ವಿಜಯಪುರ: ಗಂಡನಿಂದ ಕಿತ್ತು ಹೆಂಡತಿಗೆ ಕೊಡುವುದೇ ಸಿದ್ದು ಗ್ಯಾರಂಟಿ: ಸಿ.ಟಿ.ರವಿ ವಾಗ್ದಾಳಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ISREL

Iran ವಿರುದ್ಧ ಪ್ರತೀಕಾರ ಬೇಡ: ಇಸ್ರೇಲ್‌ ಮೇಲೆ ಹಲವು ರಾಷ್ಟ್ರಗಳ ಒತ್ತಡ

Flash Floods: ಅಫ್ಘಾನಿಸ್ತಾನದಲ್ಲಿ ಭೀಕರ ಪ್ರವಾಹ: 33 ಮಂದಿ ಮೃತ್ಯು, 600 ಮನೆಗಳಿಗೆ ಹಾನಿ

Flash Floods: ಅಫ್ಘಾನಿಸ್ತಾನದಲ್ಲಿ ಭೀಕರ ಪ್ರವಾಹ: 33 ಮಂದಿ ಮೃತ್ಯು, 600 ಮನೆಗಳಿಗೆ ಹಾನಿ

1eewqew

Sydney attack: ತನ್ನ ಪ್ರಾಣವೇ ಹೋಗುತ್ತಿದ್ದರೂ ಪುತ್ರಿ ರಕ್ಷಣೆಗೆ ಮಹಿಳೆ ಕೋರಿಕೆ!

1qeqweqwe

Canada; ಅಮೆರಿಕ ಮಾದರಿಯಲ್ಲಿ ಭಾರತೀಯ ವಿದ್ಯಾರ್ಥಿಯ ಹತ್ಯೆ

police USA

US ಷಿಕಾಗೋದಲ್ಲಿ ಶೂಟೌಟ್‌: 7 ವರ್ಷದ ಬಾಲಕಿ ಸಾವು

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

12-

Gangolli: ರಿಕ್ಷಾ-ಕಾರು ಢಿಕ್ಕಿ

11-

UPSC ಪರೀಕ್ಷೆಯಲ್ಲಿ ಹುಣಸೂರಿನ ಲೇಖನ್‌ಗೆ 77ನೇ ರ‍್ಯಾಂಕ್

9-

Chamarajanagara: ಪ್ರಮೋದ್ ಆರಾಧ್ಯಗೆ ಯುಪಿಎಸ್‌ಸಿ 671 ರ‍್ಯಾಂಕ್‌  

Election ಗೆದ್ದ ನಂತರ ಜನರಿಂದ ದೂರವಾಗದೆ ಕ್ಷೇತ್ರವನ್ನು ಅಭಿವೃದ್ಧಿ ಮಾಡುವತ್ತ ಸಾಗಬೇಕು

Election ಗೆದ್ದ ಬಳಿಕ ಕ್ಷೇತ್ರವನ್ನು ಅಭಿವೃದ್ಧಿ ಮಾಡುವತ್ತ ಸಾಗಬೇಕು; ಬಿ.ವೈ.ರಾಘವೇಂದ್ರ

BJP ಪ್ರಾಥಮಿಕ ಸದಸ್ಯತ್ವಕ್ಕೆ ಸಂಸದ ಸಂಗಣ್ಣ ಕರಡಿ ರಾಜೀನಾಮೆ… ಮುಂದಿನ ನಡೆ ಏನು?

BJP ಪ್ರಾಥಮಿಕ ಸದಸ್ಯತ್ವಕ್ಕೆ ಸಂಸದ ಸಂಗಣ್ಣ ಕರಡಿ ರಾಜೀನಾಮೆ… ಮುಂದಿನ ನಡೆ ಏನು?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.