ಮಗಳ ಮದುವೆಗೆಂದು ಬಂದಿದ್ದ ದುಬೈ ನಿವಾಸಿ ಕೇರಳದ ಪ್ರವಾಹಕ್ಕೆ ಬಲಿ
Team Udayavani, Aug 13, 2019, 9:24 PM IST
ದುಬೈ: ಕೇರಳದ ಮಲ್ಲಪುರ ಜಿಲ್ಲೆಯಲ್ಲಿ ಸಂಭವಿಸಿದ ಭೀಕರ ಪ್ರವಾಹದಲ್ಲಿ ದುಬೈನಲ್ಲಿ ನೆಲೆಸಿದ್ದ ಭಾರತೀಯ ಮೂಲಕದ ವ್ಯಕ್ತಿಯೊಬ್ಬರು ಬಲಿಯಾಗಿದ್ದಾರೆ. ಪ್ರವಾಹದಲ್ಲಿ ಸಿಲುಕಿದ್ದ ತನ್ನ ಮಗ ಹಾಗೂ ಅಳಿಯನ್ನು ರಕ್ಷಿಸುತ್ತಿದ್ದ ಸಂದರ್ಭದಲ್ಲಿ ರಝಾಕ್ ಅಕ್ಕಿಪರಂಭಿಲ್ (42) ಅವರು ನೆರೆಯ ಆರ್ಭಟಕ್ಕೆ ಬಲಿಯಾಗಿದ್ದಾರೆ.
ಇವರು ದುಬೈನ ಇಂಡಿಯನ್ ಸ್ಕೂಲ್ನ ಉದ್ಯೋಗಿಯಾಗಿದ್ದಾರೆ. ಪ್ರವಾಹಕ್ಕೆ ಸಿಲುಕಿದ್ದ ಪುತ್ರ ಹಾಗೂ ಆಳಿಯನ್ನು ರಕ್ಷಿಸುತ್ತಿದ್ದ ಸಂದರ್ಭ ಈ ಅವಘಡಕ್ಕೆ ತುತ್ತಾಗಿದ್ದಾರೆ. ಇವರು ರಜೆಯ ಮೇಲೆ ಊರಿಗೆ ಬಂದಿದ್ದರು ಎಂದು ತಿಳಿದುಬಂದಿದೆ.
ನೆರೆ ನೋಡಲು ಹೋಗಿದ್ದ ಮಕ್ಕಳು
ರಝಾಕ್ ಅವರ ದೊಡ್ಡ ಮಗಳ ಮದುವೆಯ ಶುಭ ಸಂದರ್ಭಕ್ಕೆ ಭಾರತಕ್ಕೆ ಬಂದಿದ್ದರು. ಕಳೆದ ವಾರವಷ್ಟೇ ಮದುವೆ ನಡೆದಿತ್ತು. ನೂತನ ದಂಪತಿಗಳನ್ನು ಶರೀಫ್ ಎಂಬವರು ತಮ್ಮ ಮನೆಗೆ ಆಹ್ವಾನಿಸಿದ್ದರು. ಮನೆಯಲ್ಲಿ ಊಟ ಎಲ್ಲ ಆಗಿ ಕುಳಿತು ಮಾತನಾಡುತ್ತಿದ್ದರು. ಈ ಸಂದರ್ಭದಲ್ಲಿ ಭಾರೀ ಮಳೆಯ ಪರಿಣಾಮ ದೂರಲ್ಲಿದ್ದ ನೆರೆ ನೀರನ್ನು ವೀಕ್ಷಿಸಲು ಮಕ್ಕಳು ತೆರಳಿದ್ದರು. ನೆರೆಯ ನೀರು ಹೆಚ್ಚಾಗುತ್ತಿದ್ದದ್ದು ಮಕ್ಕಳ ಗಮನಕ್ಕೆ ಬಂದಿಲ್ಲ ಎನ್ನಲಾಗಿದೆ.
ಮಕ್ಕಳನ್ನು ಬಜಾವ್ ಮಾಡಲು ತೆರಳಿದ ವೇಳೆ ಈ ದುರ್ಘಟನೆ ನಡೆದಿದೆ. ರಝಾಕ್ ಅವರ ಮಗ ಹಾಗೂ ಶರೀಫ್ ಎಂಬವರ ಮಗ ಪ್ರವಾಹಕ್ಕೆ ಸಿಲುಕಿದ್ದ ಮಕ್ಕಳು.
ಒತ್ತಡದಲ್ಲಿದ್ದರು
ಪುತ್ರಿಯ ವಿವಾಹಕ್ಕೆ ಎಂದು ಊರಿಗೆ ಬಂದಿದ್ದ ರಝಾಕ್ ತೀವ್ರ ಒತ್ತಡದಲ್ಲಿದ್ದರು ಎಂದು ಶರೀಫ್ ಎಂಬವರು ತಿಳಿಸಿದ್ದಾರೆ. ಮಕ್ಕಳನ್ನು ಕಾಪಾಡುವ ವೇಳೆ ಈಜು ಬರದಿದ್ದರೂ ನೀರಿಗೆ ಹಾರಿದ್ದರು. ನೀರು ಭಾರೀ ಸೆಳೆತದಿಂದ ಕೂಡಿದ ಪರಿಣಾಮ ಕೊಚ್ಚಿಕೊಂಡು ಹೋಗಿದ್ದಾರೆ. ಊರಿಗೆ ಬಂದಿದ್ದ ಅವರಿಗೆ ರಜೆಯ ಅವಧಿ ಕಡಿಮೆ ಇತ್ತು. ರಜೆಯನ್ನು ವಿಸ್ತರಿಸುವಂತೆ ಮಾಡಲಾಗಿದ್ದರೂ ಪ್ರಯೋಜನವಾಗಿಲ್ಲ ಎಂದು ಶರೀಫ್ ಹೇಳಿದ್ದನ್ನು ಗಲ್ಫ್ ನ್ಯೂಸ್ ವರದಿ ಮಾಡಿದೆ.
ಕಳೆದ ವರ್ಷದ ಪ್ರವಾಹದಲ್ಲಿ ಇವರ ಮನೆ ಕೊಚ್ಚಿಹೋಗಿತು. ಈ ನೆರೆ ಇವರನ್ನೇ ಬಲಿ ಪಡೆದಿದೆ. ಇದೀಗ ತಮ್ಮ ಸಹೋದ್ಯೋಗಿ ರಝಾಕ್ ರನ್ನು ಕಳೆದುಕೊಂಡಿರುವ ಅಲ್ಲಿನ ಇಂಡಿಯನ್ ಸ್ಕೂಲ್ನ ಸಿಬಂಧಿಗಳಲ್ಲಿ ಬೇಸರ ಮನೆ ಮಾಡಿದೆ ಎಂದು ಪತ್ರಿಕೆ ವರದಿ ಮಾಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ
Thailandನಲ್ಲಿ ಗುಜರಿ ಮಾಫಿಯಾದ ಕಿಂಗ್ ಪಿನ್ ರವಿ ಕಾನಾ, ಪ್ರಿಯತಮೆ ಕಾಜಲ್ ಜಾ ಬಂಧನ
ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ
Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು
MUST WATCH
ಹೊಸ ಸೇರ್ಪಡೆ
Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ
Exam; ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆ-2ಕ್ಕೆ 1.49 ಲಕ್ಷ ವಿದ್ಯಾರ್ಥಿಗಳ ನೋಂದಣಿ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ