ಸಯೀದ್, ಲಾದನ್ಗೆ ರಕ್ಷಣೆ ನೀಡುವ ಪಾಕ್ ವಿಫಲ ದೇಶ : ಭಾರತ
Team Udayavani, Mar 10, 2018, 11:07 AM IST
ಜಿನೇವಾ, ಸ್ವಿಟ್ಸರ್ಲಂಡ್ : ಕಾಶ್ಮೀರದಲ್ಲಿ ಭಾರತ ಮಾನವ ಹಕ್ಕಗಳ ಉಲ್ಲಂಘನೆ ನಡೆಸುತ್ತಿದೆ ಎಂದು ವಿಶ್ವಸಂಸ್ಥೆಯಲ್ಲಿ ದೂರಿದ ಪಾಕಿಸ್ಥಾನವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡ ಭಾರತ, 9/11ರ ದಾಳಿಯ ಮಾಸ್ಟರ್ ಮೈಂಡ್ ಉಸಾಮಾ ಬಿನ್ ಲಾದನ್ ಮತ್ತು ವಿಶ್ವಸಂಸ್ಥೆಯಿಂದ ಉಗ್ರನೆಂದು ಘೋಷಿಸಲ್ಪಟ್ಟಿಟರುವ ಹಾಫೀಜ್ ಸಯೀದ್ ಗೆ ರಕ್ಷಣೆ ನೀಡಿರುವ ಪಾಕಿಸ್ಥಾನಕ್ಕೆ ಈ ರೀತಿಯ ಆಪಾದಾನೆ ಮಾಡುವ ಯಾವುದೇ ನೈತಿಕ ಹಕ್ಕಿಲ್ಲ ಎಂದು ತಿರುಗೇಟು ನೀಡಿತು.
ಪಾಕಿಸ್ಥಾನ ಒಂದು ವಿಫಲ ದೇಶ . ಅದು ಉಸಾಮಾ ಬಿನ್ ಲಾದನ್, ಮುಲ್ಲಾ ಉಮರ್ ನಂತಹ ಉಗ್ರರಿಗೆ ರಕ್ಷಣೆ ಕೊಟ್ಟಿರುವ ದೇಶ. ಭಯೋತ್ಪಾದನೆಯೇ ಮಾನವ ಹಕ್ಕು ಉಲ್ಲಂಘನೆ ಆಗಿರುವಾಗ ಪಾಕಿಸ್ಥಾನಕ್ಕೆ ಭಾರತವನ್ನು ಮಾನವ ಹಕ್ಕು ಉಲ್ಲಂಘನೆಗಾಗಿ ದೂಷಿಸುವ, ದೂರುವ ಯಾವುದೇ ನೈತಿಕ ಹಕ್ಕಿಲ್ಲ ಎಂದು ವಿಶ್ವಸಂಸ್ಥೆಯಲ್ಲಿ ಭಾರತದ ದ್ವಿತೀಯ ಕಾರ್ಯದರ್ಶಿ ಮಿನಿ ದೇವಿ ಕುಮಾಮ್ ಹೇಳಿದರು.
2008ರ ಮುಂಬಯಿ ದಾಳಿ ಮತ್ತು 2016ರ ಪಠಾನ್ ಕೋಟ್ ಮತ್ತು ಉರಿ ದಾಳಿಯ ಅಪರಾಧಿಗಳನ್ನು ಪಾಕಿಸ್ಥಾನ ಕಾನೂನು ಪ್ರಕಾರ ಶಿಕ್ಷಿಸುವುದನ್ನು ನಾವು ನಿರೀಕ್ಷಿಸುತ್ತಿದ್ದೇವೆ ಎಂದು ವಿಶ್ವಸಂಸ್ಥೆಯಲ್ಲಿ ಭಾರತ ಪುನರುಚ್ಚರಿಸಿತು.
ಪಾಕಿಸ್ಥಾನ ತನ್ನ ದೇಶದಲ್ಲಿರುವ ಹಿಂದು, ಸಿಕ್ಖ ಮತ್ತು ಕ್ರೈಸ್ತ ಮಹಿಳೆಯರನ್ನು ಬಲವಂತವಾಗಿ ಇಸ್ಲಾಂ ಗೆ ಮತಾಂತರಿಸಿ ಅವರ ಇಚ್ಛೆಗೆ ವಿರುದ್ಧವಾಗಿ ಮದುವೆ ಮಾಡಿಸುವಂತಹ ದುಷ್ಕೃತ್ಯಗಳನ್ನು ಕೊನೆಗೊಳಿಸಬೇಕು ಎಂದು ಕುಮಾಮ್ ಆಗ್ರಹಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Russia War: ಉಕ್ರೇನ್ ಮೇಲೆ ರಷ್ಯಾ ಭೀಕರ ದಾಳಿ-17 ಮಂದಿ ಮೃತ್ಯು; ನೆರವಿಗಾಗಿ ಮನವಿ
ನನ್ನ ಪತ್ನಿಗೆ ಏನಾದರೂ ಆದರೆ…: ಸೇನಾ ಮುಖ್ಯಸ್ಥರಿಗೆ ಎಚ್ಚರಿಕೆ ನೀಡಿದ ಇಮ್ರಾನ್ ಖಾನ್
Heavy Rain: ಮರಳುಗಾಡು ದುಬೈನಲ್ಲಿ ಧಾರಾಕಾರ ಮಳೆ, ಪ್ರವಾಹ ಪರಿಸ್ಥಿತಿ-ಜನಜೀವನ ಅಸ್ತವ್ಯಸ್ತ
Rain: ವರುಣನ ಆರ್ಭಟಕ್ಕೆ ನಲುಗಿದ ದುಬೈ… ವಿಮಾನ ನಿಲ್ದಾಣ ಜಲಾವೃತ, ಜನಜೀವನ ಅಸ್ತವ್ಯಸ್ಥ
Israel-Iran ಅಣುಯುದ್ಧ? ಇರಾನ್ನ ಅಣುಸ್ಥಾವರಗಳ ಮೇಲೆ ದಾಳಿ: ವಿಶ್ವಸಂಸ್ಥೆ ಆತಂಕ