- Sunday 08 Dec 2019
ಹೌಡಿ ಮೋದಿ ಆಯ್ತು ಈಗ “ಸ್ವಸ್ಡೀ ಪಿಎಂ ಮೋದಿ’
Team Udayavani, Nov 2, 2019, 3:30 PM IST
ಬ್ಯಾಂಕಾಕ್ (ಥೈಲೆಂಡ್): ಬರೋಬ್ಬರಿ 50 ಸಾವಿರ ಮಂದಿ ಅನಿವಾಸಿ ಭಾರತೀಯರು ನೆರೆದಿದ್ದ ಸಭೆಯನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗೆ ಹ್ಯೂಸ್ಟನ್ನಲ್ಲಿ ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚೆಗೆ ಮಾತನಾಡಿದ್ದರು. ಈಗ ಇದೇ ರೀತಿಯ ಸಭೆಯೊಂದರಲ್ಲಿ ಭಾಷಣವನ್ನು ಬ್ಯಾಂಕಾಕ್ನಲ್ಲೂ ಮಾಡಲಿದ್ದಾರೆ.
ಹ್ಯೂಸ್ಟನ್ ಕಾರ್ಯಕ್ರಮಕ್ಕೆ “ಹೌಡಿ ಮೋದಿ’ (ಹೌ ಡೂ ಯೂ ಡೂ ಮೋದಿ) ಎಂದಿದ್ದರೆ ಬ್ಯಾಂಕಾಕ್ ಸಭೆಗೆ ಸ್ವಸ್ಡೀ (ಹಲೋ ಪಿಎಂ ಮೋದಿ) ಎಂಬ ಹೆಸರನ್ನು ಇಡಲಾಗಿದೆ. ಸ್ವಸ್ಡೀ ಎಂದರೆ ಸಂಸ್ಕೃತದಲ್ಲಿ “ಸ್ವಸ್ತಿ’ ಎಂಬ ಅರ್ಥ. ಒಳ್ಳೆಯದಾಗಲಿ ಶುಭವಾಗಲಿ ಎಂಬರ್ಥದಲ್ಲಿ ಈ ಪದವನ್ನು ಥಾಯ್ ಭಾಷೆಯಲ್ಲಿ ಬಳಸುತ್ತಾರೆ.
ಶನಿವಾರ ಬೆಳಗ್ಗೆ ಆಸಿಯಾನ್ ರಾಷ್ಟ್ರಗಳ ಶೃಂಗ ಮತ್ತು ಆರ್ಸಿಇಪಿ ಸಭೆಗಾಗಿ ಪ್ರಧಾನಿ ಮೋದಿ ಥೈಲೆಂಡ್ಗೆ ತೆರಳಿದ್ದು, 3 ದಿನ ಅಲ್ಲಿರಲಿದ್ದಾರೆ. ಶನಿವಾರ ಭಾರತೀಯ ಕಾಲಮಾನ 6 ಗಂಟೆಗೆ ಮೋದಿ ಅಲ್ಲಿನ ಅನಿವಾಸಿ ಭಾರತೀಯರನ್ನುದ್ದೇಶಿಸಿ ಮಾತನಾಡಲಿದ್ದಾರೆ. ಇದರೊಂದಿಗೆ ಗುರುನಾನಕರ 550 ಹುಟ್ಟಿದ ವರ್ಷಾಚರಣೆ ಅಂಗವಾಗಿ ನಾಣ್ಯವೊಂದನ್ನೂ ಬಿಡುಗಡೆ ಮಾಡಲಿದ್ದಾರೆ. ನ.3ರಂದು ಪ್ರಧಾನಿ ಮೋದಿ ಅವರು ಥಾಯ್ ಪ್ರಧಾನಿ ಪ್ರಯುತ್ ಚಾನ್ ಒ ಚಾ ಅವರೊಂದಿಗೆ ಆಸಿಯಾನ್ ಶೃಂಗದಲ್ಲಿ ಭಾಗಿಯಾಗಲಿದ್ದಾರೆ.
ಈ ವಿಭಾಗದಿಂದ ಇನ್ನಷ್ಟು
-
ವಾಷಿಂಗ್ಟನ್: ಯುಎಸ್ ನೌಕಾ ನೆಲೆಯಲ್ಲಿ ಪೈಲಟ್ ತರಬೇತಿ ಪಡೆಯುತ್ತಿದ್ದ ವಿದ್ಯಾರ್ಥಿಯೊಬ್ಬ ನಡೆಸಿದ ಗುಂಡಿನ ದಾಳಿಯಲ್ಲಿ ಮೂವರು ಮೃತಪಟ್ಟು, 8 ಮಂದಿ ಗಾಯಗೊಂಡ...
-
ಕಾಬೂಲ್: ತಾಲಿಬಾನ್ ಉಗ್ರರ ವಿರುದ್ಧ ಅಫ್ಘಾನ್ ವಿಶೇಷ ಪಡೆಯ ಕಾರ್ಯಾಚರಣೆಯಲ್ಲಿ ಸುಮಾರು 15 ಉಗ್ರರನ್ನು ಹತ್ಯೆಗೈಯಲಾಗಿದೆ. ದಕ್ಷಿಣ ಪ್ರಾಂತ್ಯದ ಕಂದಹಾರ್ ನಲ್ಲಿ...
-
ನವದೆಹಲಿ/ಈಕ್ವೆಡಾರ್: ಭಾರತದಿಂದ ಪರಾರಿಯಾಗಿದ್ದ ವಿವಾದಿತ ನಿತ್ಯಾನಂದ ಈಕ್ವೆಡಾರ್ ನಲ್ಲಿ ದ್ವೀಪವೊಂದನ್ನು ಖರೀದಿಸಿ ತಾನೊಂದು ಹೊಸ ದೇಶ ಸ್ಥಾಪಿಸಿಕೊಂಡಿರುವುದಾಗಿ...
-
ವಾಷಿಂಗ್ಟನ್: ಸೂರ್ಯನ ಅಧ್ಯಯನಕ್ಕಾಗಿ ಅಮೆರಿಕದ ಬಾಹ್ಯಾಕಾಶ ಸಂಸ್ಥೆ (ನಾಸಾ) ಕಳುಹಿಸಿದ್ದ 'ಪಾರ್ಕರ್', ಮಾನವ ನಿರ್ಮಿತ ಯಾವುದೇ ಆಕಾಶಕಾಯ ಈವರೆಗೆ ತಲುಪದಿರುವ...
-
ಜಕಾರ್ತಾ: ಇಂಡೋನೇಷಿಯಾದ ಸುಮಾತ್ರಾ ದ್ವೀಪದಲ್ಲಿರುವ ಅಶೆ ಪ್ರದೇಶದಲ್ಲಿ ಸ್ಥಳೀಯ ವ್ಯಕ್ತಿಯೊಬ್ಬನಿಗೆ ಛಡಿಯೇಟು ಶಿಕ್ಷೆ ನೀಡುತ್ತಿದ್ದ ಸಂದರ್ಭದಲ್ಲಿ ಆತ ಪ್ರಜ್ಞೆ...
ಹೊಸ ಸೇರ್ಪಡೆ
-
ಸುಳ್ಯ: ಉಭಯ ಜಿಲ್ಲೆಗಳಲ್ಲಿ ಸಾಲಮನ್ನಾ ಹಣ ಬಿಡುಗಡೆಗೊಂಡು ಕಿಸಾನ್ ಕ್ರೆಡಿಟ್ ಕಾರ್ಡ್ ಉಳಿತಾಯ ಖಾತೆ ಸಂಖ್ಯೆ ಸಮರ್ಪಕವಾಗಿಲ್ಲದೆ ಹಣ ವಾಪಸಾಗಿದ್ದ ಫಲಾನು...
-
ಪರಿಸರ ಮಾಲಿನ್ಯವು ದೇಶವನ್ನು ಕಾಡುತ್ತಿರುವ ಜಠಿಲವಾದ ಸಮಸ್ಯೆ. ಸಾರಿಗೆ, ಸಂಚಾರದಲ್ಲಿ ಕ್ರಾಂತಿಯಿಂದಾಗಿ ಇಂದು ನಗರದಲ್ಲಿ ವಾಹನಗಳ ಸಂಖ್ಯೆಯೂ ದಿನದಿಂದ ದಿನಕ್ಕೆ...
-
ಕರಿಬೇವಿನ ಎಲೆಯಲ್ಲಿರುವ ಗಂಧಕಯುಕ್ತ ಎಣ್ಣೆಯ ಅಂಶವೇ "ಘಮ…' ಎನ್ನುವ ಸುವಾಸನೆಗೆ ಕಾರಣ. ಇದನ್ನು ಅಡುಗೆ ಮನೆಯಲ್ಲಿ ಮಾತ್ರವೇ ಅಲ್ಲದೆ, ಆಯುರ್ವೇದ ಔಷಧಗಳ ತಯಾರಿಕೆಗೂ...
-
"ಬಲೆ ಬೆಳೆ' ಎಂದರೆ ಮುಖ್ಯಬೆಳೆಯನ್ನು ಕೀಟಬಾಧೆಯಿಂದ ರಕ್ಷಿಸುವುದು. ಬಲೆ ಬೆಳೆಯಾಗಿ ಕೆಲವಾರು ಬೆಳೆಗಳನ್ನು ಬೆಳೆಯುತ್ತಾರೆ. ಈ ಎಲ್ಲ ಬೆಳೆಯನ್ನೂ ಒಟ್ಟಿಗೆ ಬೆಳೆಯುವ...
-
ಆ್ಯಂಡ್ರೋಕ್ಲಿಫ್ ಎಂಬ ರೈತನಿದ್ದ. ಅವನು ಶ್ರಮಪಟ್ಟು ದುಡಿದು ಬಂಜರು ಭೂಮಿಯಲ್ಲಿ ಕೃಷಿ ಮಾಡಿದ್ದ. ಹಲವಾರು ಹಣ್ಣುಗಳ ಮರಗಳನ್ನು ಬೆಳೆಸಿ ಕೈತುಂಬ ಫಸಲು ಕೊಯ್ಯುತ್ತಿದ್ದ....