72 ವರ್ಷಗಳ ನಂತರ ಪಾಕ್ ದೇಗುಲ ಮತ್ತೆ ಓಪನ್
Team Udayavani, Jul 30, 2019, 5:57 AM IST
ಲಾಹೋರ್: ಭಾರತ ಇಬ್ಭಾಗವಾಗಿ ಪಾಕಿಸ್ತಾನ ಉದಯವಾದಾಗಿನಿಂದ ಮುಚ್ಚಲ್ಪಟ್ಟಿದ್ದ ಪಾಕಿಸ್ತಾನದ ಸಿಯಾಲ್ಕೋಟ್ನಲ್ಲಿರುವ, 1000 ವರ್ಷಗಳಷ್ಟು ಪುರಾತನವಾದ ‘ಶಾವಾಲಾ ತೇಜ ಸಿಂಗ್’ ಎಂಬ ಹಿಂದೂ ದೇಗುಲವೊಂದನ್ನು 72 ವರ್ಷಗಳ ನಂತರ ಸೋಮವಾರ ಸಾರ್ವಜನಿಕರ ದರ್ಶನಕ್ಕಾಗಿ ತೆರೆಯಲಾಗಿದೆ. ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಆದೇಶದ ಮೇರೆಗೆ ದೇಗುಲ ತೆರೆಯಲಾಗಿದೆ ಎಂದು ಪಾಕ್ನ ‘ಸಮಾ ನ್ಯೂಸ್’ ವರದಿ ಮಾಡಿದೆ. ಸ್ಥಳೀಯ ಹಿಂದೂ ಸಂಸ್ಥೆಯೊಂದರ ಆಗ್ರಹದ ಮೇರೆಗೆ ಈ ದೇಗುಲ ತೆರೆಯಲಾಗಿದ್ದು, ಅಲ್ಪಸಂಖ್ಯಾತರ ಧಾರ್ಮಿಕ ಕೇಂದ್ರಗಳ ನಿರ್ವಹಣೆಯ ಹೊಣೆ ಹೊತ್ತಿರುವ ‘ದ ಇವಾಕ್ಯೂ ಟ್ರಸ್ಟ್ ಪ್ರಾಪರ್ಟಿ ಬೋರ್ಡ್’ (ಇಟಿಪಿಬಿ), ಈ ದೇಗುಲವನ್ನು ಭಕ್ತಾದಿಗಳಿಗೆ ಮುಕ್ತವಾಗಿಸಿದೆ. ಸಿಯಾಲ್ಕೋಟ್ನ ಧಾರೋವಾಲ್ ಪ್ರಾಂತ್ಯದ ಶಾವಾಲಾ ತೇಜ ಸಿಂಗ್ ದೇಗುಲವೆಂದೇ ಹೆಸರಾದ ಈ ದೇವಸ್ಥಾನವು ಲಾಹೋರ್ನಿಂದ 100 ಕಿ.ಮೀ. ದೂರದಲ್ಲಿದೆ.
1992ರಲ್ಲಿ ಬಾಬ್ರಿ ಮಸೀದಿ ಧ್ವಂಸ ಪ್ರಕರಣ ನಡೆದಾಗ, ಸಿಯಾಲ್ಕೋಟ್ನಲ್ಲಿದ್ದ ಉದ್ರಿಕ್ತರು ಈ ದೇಗುಲಕ್ಕೆ ಕೊಂಚ ಹಾನಿ ಮಾಡಿದ್ದರು. ಇತ್ತೀಚೆಗೆ, ಇಟಿಪಿಬಿ ಇದರ ದುರಸ್ತಿ ಮಾಡಿತ್ತು ಎಂದು ಇಟಿಬಿಪಿ ವಕ್ತಾರ ಅಮೀರ್ ಹಶ್ಮಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Israel – Iran: ಕ್ಷಿಪಣಿ ದಾಳಿಯ ಮೂಲಕ ಸೇಡು ತೀರಿಸಿಕೊಂಡ ಇಸ್ರೇಲ್; ಎಚ್ಚರಿಕೆ ನೀಡಿದ ಇರಾನ್
Russia War: ಉಕ್ರೇನ್ ಮೇಲೆ ರಷ್ಯಾ ಭೀಕರ ದಾಳಿ-17 ಮಂದಿ ಮೃತ್ಯು; ನೆರವಿಗಾಗಿ ಮನವಿ
ನನ್ನ ಪತ್ನಿಗೆ ಏನಾದರೂ ಆದರೆ…: ಸೇನಾ ಮುಖ್ಯಸ್ಥರಿಗೆ ಎಚ್ಚರಿಕೆ ನೀಡಿದ ಇಮ್ರಾನ್ ಖಾನ್
Heavy Rain: ಮರಳುಗಾಡು ದುಬೈನಲ್ಲಿ ಧಾರಾಕಾರ ಮಳೆ, ಪ್ರವಾಹ ಪರಿಸ್ಥಿತಿ-ಜನಜೀವನ ಅಸ್ತವ್ಯಸ್ತ
Rain: ವರುಣನ ಆರ್ಭಟಕ್ಕೆ ನಲುಗಿದ ದುಬೈ… ವಿಮಾನ ನಿಲ್ದಾಣ ಜಲಾವೃತ, ಜನಜೀವನ ಅಸ್ತವ್ಯಸ್ಥ
MUST WATCH
ಹೊಸ ಸೇರ್ಪಡೆ
Puttur: ಶ್ರೀ ಮಹಾಲಿಂಗೇಶ್ವರ ದೇವರ ಅವಭೃಥ ಸವಾರಿ
Neha Hiremath Case; ಕೊಲೆಗಡುಕನನ್ನು ಎನ್ ಕೌಂಟರ್ ಮಾಡಿ: ಪ್ರಮೋದ್ ಮುತಾಲಿಕ್ ಆಗ್ರಹ
Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್
Belagavi; ಕಾಂಗ್ರೆಸ್ ಸರ್ಕಾರದ ಓಲೈಕೆಯಿಂದ ಜಿಹಾದಿ ಕೃತ್ಯಗಳು ಹೆಚ್ಚುತ್ತಿದೆ: ಶೆಟ್ಟರ್
Bengaluru: ರೈಲಿಗೆ ಸಿಲುಕಿ ವೈದ್ಯ, ಸ್ಟಾಫ್ ನರ್ಸ್ ಆತ್ಮಹತ್ಯೆ