ಲಸಿಕೆ ಉತ್ಪಾದನೆಗೆ ದೇಶಕ್ಕೆ 11 ಸಾವಿರ ಕೋಟಿ ನೆರವು
Team Udayavani, Nov 26, 2021, 6:50 AM IST
ಹೊಸದಿಲ್ಲಿ/ಲಂಡನ್: ಏಷ್ಯನ್ ಅಭಿವೃದ್ಧಿ ಬ್ಯಾಂಕ್ ಭಾರತಕ್ಕೆ 11,185 ಕೋಟಿ ರೂ ನೆರವು ಪ್ರಕಟಿಸಿದೆ. ಈ ಮೊತ್ತದ ಮೂಲಕ ಕೊರೊನಾಕ್ಕಾಗಿ ಲಸಿಕೆ ಅಭಿವೃದ್ಧಿ ಮತ್ತು ವಿತರಣೆಗೆ ನೆರವಾಗಲಿದೆ ಎಂದು ಬ್ಯಾಂಕ್ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಲಾಗಿದೆ. ಇದರ ಜತೆಗೆ ಏಷ್ಯದ ಮೂಲಸೌಕರ್ಯ ಬಂಡವಾಳ ಹೂಡಿಕೆ ಬ್ಯಾಂಕ್ ಕೂಡ ಹೆಚ್ಚುವರಿಯಾಗಿ 500 ಮಿಲಿಯ ಅಮೆರಿಕನ್ ಡಾಲರ್ ಮೊತ್ತದ ನೆರವನ್ನೂ ಒದಗಿಸಲಿದೆ. ಎಡಿಬಿ ನೆರವಿನಿಂದ ಕನಿಷ್ಠ 66.7 ಕೋಟಿ ಡೋಸ್ಗಳನ್ನು 31.7 ಕೋಟಿ ಮಂದಿಗೆ ನೀಡಲು ಸಾಧ್ಯವಾಗಲಿದೆ.
ಹೊಸ ರೂಪಾಂತರಿ: ಹಲವು ದೇಶಗಳಲ್ಲಿ ಮತ್ತೆ ಅದರ ಅಬ್ಬರ ಕಾಣಿಸಿಕೊಂಡಿದೆ. ಅದಕ್ಕೆ ಪೂರಕವಾಗಿ ದ.ಆಫ್ರಿಕಾದಲ್ಲಿ ಬಿ.1.1.529 ಎಂಬ ಹೊಸ ಮಾದರಿಯ ರೂಪಾಂತರಿ ಇರುವ ಬಗ್ಗೆ ದೃಢಪಟ್ಟಿದೆ ಎಂದು ಲಂಡನ್ ಇಂಪೀರಿಯಲ್ ಕಾಲೇಜಿನ ವೈರಾಣು ತಜ್ಞ ಡಾ. ಟಾಂ ಪಿಕಾಕ್ ಹೇಳಿದ್ದಾರೆ. ಇದು ಹೆಚ್ಚಿನ ಪ್ರಮಾಣದಲ್ಲಿ ರೂಪಾಂತರ ಹೊಂದಲು ಸಾಮರ್ಥ್ಯ ಇರುವಂಥದ್ದು ಎಂದು ಪ್ರತಿಪಾದಿಸಿದ್ದಾರೆ. ಹೊಸ ರೂಪಾಂತರಿ ದೃಢಪಡುತ್ತಿದ್ದಂತೆಯೇ ದ.ಆಫ್ರಿಕಾ, ಬೋಟ್ಸ್ವಾನಾ, ಹಾಕಾಂಗ್ನಿಂದ ಬರುವವರ ಮೇಲೆ ಹೆಚ್ಚಿನ ನಿಗಾ ಇರಿಸಬೇಕು ಎಂಗು ರಾಜ್ಯಗಳಿಗೆ ಕೇಂದ್ರ ಸರ್ಕಾರ ಮುನ್ನೆಚ್ಚರಿಕೆ ನೀಡಿದೆ.
ಲಕ್ಷ ದಾಟಿದ ಸಾವು: ಜರ್ಮನಿಯಲ್ಲಿ ಸೋಂಕಿನಿಂದಾಗಿ ಅಸುನೀಗಿದವರ ಸಂಖ್ಯೆ 1 ಲಕ್ಷ ದಾಟಿದೆ. ಐರೋಪ್ಯ ಒಕ್ಕೂಟದ ದೇಶದಲ್ಲಿ 1 ಲಕ್ಷ ಸಾವಿನ ಸಂಖ್ಯೆ ದಾಟಿದ 5ನೇ ದೇಶ ಜರ್ಮನಿ. ಮುಂದೆ ಆಸ್ಪತ್ರೆಗಳ ತುರ್ತು ಚಿಕಿತ್ಸಾ ಘಟಕಗಳ ಕೊರತೆ ಉಂಟಾಗಬಹುದು ಎಂದು ಎಚ್ಚರಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!
Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು
Lok Sabha 1 Phase: ನಿತಿನ್ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…
Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ
Stones Pelted: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ
MUST WATCH
ಹೊಸ ಸೇರ್ಪಡೆ
Davanagere; ಮುಖ್ಯಮಂತ್ರಿ ಜವಾಬ್ದಾರಿಯಿಂದ ಹೇಳಿಕೆ ನೀಡಬೇಕು: ಎಂ.ಪಿ. ರೇಣುಕಾಚಾರ್ಯ
ತಂತ್ರಜ್ಞಾನದಿಂದ ಮಾನವ ಜೀವನ ಸುಲಭ: ಸ್ಮಾರ್ಟ್ ಸಿಟಿ ಅಧಿಕಾರಿ ಶ್ರೀನಿವಾಸ
Vijayapura; ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ : ಸಂಸದ ಜಿಗಜಿಣಗಿ
ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ
Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!