ಸ್ನೇಹದ ಅಣೆಕಟ್ಟೆಗೆ ಉಗ್ರರ ದಾಳಿ
Team Udayavani, Jun 26, 2017, 3:45 AM IST
ಕಾಬೂಲ್: ಆಫ್ಘಾನಿಸ್ತಾನ-ಭಾರತದ ಗೆಳೆತನಕ್ಕೆ ಪ್ರತೀಕವಾದ, ಹಾರಿ ನದಿಗೆ ಕಟ್ಟಿರುವ ಪ್ರಮುಖ ಸಲ್ಮಾ ಅಣೆಕಟ್ಟಿಗೆ ದಾಳಿ ನಡೆಸಲು ತಾಲಿಬಾನ್ ಉಗ್ರರು ಯತ್ನಿಸಿದ್ದಾರೆ.
ಚಿಸ್ತಿ ಷರೀಫ್ ಜಿಲ್ಲೆಯ ಹೆರಾತ್ ಪ್ರಾಂತ್ಯದಲ್ಲಿರುವ ಈ ಅಣೆಕಟ್ಟನ್ನು 1,775 ಕೋಟಿ ರೂ. ವೆಚ್ಚದಲ್ಲಿ ಭಾರತ ಆಫ್ಘಾನಿಸ್ತಾನಕ್ಕೆ ಮರುನಿರ್ಮಾಣ ಮಾಡಿಕೊಟ್ಟಿತ್ತು.
ಸಲ್ಮಾ ಅಣೆಕಟ್ಟಿಗೆ ಸುಮಾರು 13 ಕಿ.ಮೀ. ದೂರದಲ್ಲಿರುವ, ಚೆಸ್ತ್ ಜಿಲ್ಲೆಯಲ್ಲಿನ ಚೆಕ್ಪೋಸ್ಟ್ಗೆ ತಾಲಿಬಾನ್ ಉಗ್ರರು ಶನಿವಾರ ರಾತ್ರಿ ದಾಳಿ ನಡೆಸಿದ್ದು ಈ ವೇಳೆ ನಡೆದ ಗುಂಡಿನ ಕಾಳಗದಲ್ಲಿ 10 ಮಂದಿ ಆಫ^ನ್ ಪೊಲೀಸರು ಮೃತಪಟ್ಟಿದ್ದಾರೆ. ಜೊತೆಗೆ ಐವರು ಉಗ್ರರೂ ಮೃತಪಟ್ಟಿದ್ದಾರೆ. ಕಾದಾಟದ ವೇಳೆ ಉಗ್ರರು ಅಲ್ಲಿದ್ದ ಶಸ್ತ್ರಾಸ್ತ್ರಗಳನ್ನೂ ಲೂಟಿ ಮಾಡಿದ್ದಾರೆ ಎಂದು ಆಫ^ನ್ ಸರ್ಕಾರದ ಮೂಲಗಳು ಹೇಳಿವೆ.
2014ರಲ್ಲಿ ಆಫ^ನ್ನಿಂದ ಅಮೆರಿಕ ಮೈತ್ರಿಕೂಟದ ಪಡೆಗಳು ತಮ್ಮ ಸೈನಿಕ ಬಲವನ್ನು ಹಿಂದೆಗೆದುಕೊಂಡ ಬಳಿಕ ತಾಲಿಬಾನ್ ಮತ್ತು ಪಾಕ್ ಬೆಂಬಲಿತ ಉಗ್ರರ ಅಟ್ಟಹಾಸ ಜೋರಾಗಿದ್ದು, ಹಿಂಸಾಚಾರ ವ್ಯಾಪಕವಾಗಿದೆ. ಜೊತೆಗೆ ತಾಲಿಬಾನ್ ತನ್ನ ಬಾಹುಳ್ಯವನ್ನು ಮತ್ತೆ ಆಫ್ಘಾನ್ನಲ್ಲಿ ವಿಸ್ತರಿಸುತ್ತಿದೆ.
ಅಣೆಕಟ್ಟಿಗೆ ಹಾನಿಯಿಲ್ಲ:
ಉಗ್ರ ದಾಳಿ ಕುರಿತಂತೆ ಪ್ರತಿಕ್ರಿಯಿಸಿದ ಆಫ^ನ್ ಭಾರತೀಯ ರಾಯಭಾರಿ ಮನ್ಪ್ರೀತ್ ವೋಹ್ರಾ, ಅಣೆಕಟ್ಟಿಗೆ ಸಮಸ್ಯೆ ಆಗಿಲ್ಲ. ಅಣೆಕಟ್ಟಿನಿಂದ ಅನತಿ ದೂರದ ಚೆಕ್ಪೋಸ್ಟ್ ಮೇಲೆ ದಾಳಿಯಾಗಿದೆ. ಆದಾಗ್ಯೂ ಅಣೆಕಟ್ಟಿಗೆ ಪಾಕ್ ಪ್ರಾಯೋಜಿತ ಉಗ್ರರ ಭೀತಿ ನಿರಂತರವಾಗಿದೆ ಎಂದು ಹೇಳಿದ್ದಾರೆ.
ಮೋದಿ ಉದ್ಘಾಟಿಸಿದ್ದ ಸಲ್ಮಾ ಅಣೆಕಟ್ಟು:
ಕಳೆದ ವರ್ಷ ಜೂನ್ನಲ್ಲಿ ಪ್ರಧಾನಿ ನರೇಂದ್ರ ಮೋದಿ ಈ ಅಣೆಕಟ್ಟನ್ನು ಉದ್ಘಾಟಿಸಿದ್ದರು. ದ್ವಿಪಕ್ಷೀಯ ಸಂಬಂಧ ವೃದ್ಧಿ, ರಾಜಕೀಯ ಕಾರ್ಯತಂತ್ರದ ಅನ್ವಯ ಈ ಅಣೆಕಟ್ಟನ್ನು ಭಾರತ ನಿರ್ಮಿಸಿಕೊಟ್ಟಿತ್ತು. ಸುಮಾರು 75 ಸಾವಿರ ಎಕರೆ ಭೂಮಿಗೆ ಈ ಅಣೆಕಟ್ಟು ನೀರುಣಿಸುತ್ತದೆ. ಅಲ್ಲದೇ 42 ಮೆ.ವ್ಯಾ ವಿದ್ಯುತ್ ಉತ್ಪಾದನೆ ಮಾಡುತ್ತದೆ. ಹೆರಾತ್ ಪ್ರಾಂತ್ಯಕ್ಕೆ ಈ ಅಣೆಕಟ್ಟು ವಿದ್ಯುತ್, ನೀರು ಪೂರೈಕೆಯ ಪ್ರಮುಖ ಮೂಲವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Russia War: ಉಕ್ರೇನ್ ಮೇಲೆ ರಷ್ಯಾ ಭೀಕರ ದಾಳಿ-17 ಮಂದಿ ಮೃತ್ಯು; ನೆರವಿಗಾಗಿ ಮನವಿ
ನನ್ನ ಪತ್ನಿಗೆ ಏನಾದರೂ ಆದರೆ…: ಸೇನಾ ಮುಖ್ಯಸ್ಥರಿಗೆ ಎಚ್ಚರಿಕೆ ನೀಡಿದ ಇಮ್ರಾನ್ ಖಾನ್
Heavy Rain: ಮರಳುಗಾಡು ದುಬೈನಲ್ಲಿ ಧಾರಾಕಾರ ಮಳೆ, ಪ್ರವಾಹ ಪರಿಸ್ಥಿತಿ-ಜನಜೀವನ ಅಸ್ತವ್ಯಸ್ತ
Rain: ವರುಣನ ಆರ್ಭಟಕ್ಕೆ ನಲುಗಿದ ದುಬೈ… ವಿಮಾನ ನಿಲ್ದಾಣ ಜಲಾವೃತ, ಜನಜೀವನ ಅಸ್ತವ್ಯಸ್ಥ
Israel-Iran ಅಣುಯುದ್ಧ? ಇರಾನ್ನ ಅಣುಸ್ಥಾವರಗಳ ಮೇಲೆ ದಾಳಿ: ವಿಶ್ವಸಂಸ್ಥೆ ಆತಂಕ