ಇಸ್ಕಾನ್ ದೇಗುಲದ ಮೇಲೆ ದಾಳಿ: 15 ದಿನಗಳ ಅಂತರದಲ್ಲಿ ಮೂರನೇ ಕುಕೃತ್ಯ
ಆಸೀಸ್ನ ಮೆಲ್ಬರ್ನ್ಲ್ ನಲ್ಲಿ ಖಲಿಸ್ತಾನ ಕಿಡಿಗೇಡಿಗಳ ಕೃತ್ಯ
Team Udayavani, Jan 24, 2023, 7:30 AM IST
ಮೆಲ್ಬರ್ನ್: ಖಲಿಸ್ತಾನಿ ಉಗ್ರರಿಂದ ಆಸ್ಟ್ರೇಲಿಯದಲ್ಲಿ ಹಿಂದೂ ದೇವಸ್ಥಾನಗಳ ಮೇಲಿನ ದಾಳಿ ಮುಂದುವರಿದಿದೆ. ಹೊಸ ಪ್ರಕರಣದಲ್ಲಿ ವಿಕ್ಟೋರಿಯಾ ಪ್ರಾಂತ್ಯದ ಮೆಲ್ಬರ್ನ್ ನ ಆಲ್ಬರ್ಟ್ ಪಾರ್ಕ್ನಲ್ಲಿರುವ ಇಸ್ಕಾನ್ ಶ್ರೀಕೃಷ್ಣ ದೇಗುಲದ ಮೇಲೆ ದಾಳಿ ಮಾಡಿ ಗೋಡೆಗಳನ್ನು ಹಾಳು ಗೆಡವಿದ್ದಾರೆ. ಮಾತ್ರವಲ್ಲ “ಹಿಂದೂಸ್ತಾನ್ ಮುರ್ದಾಬಾದ್’ ಎಂದು ಬರೆದಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಇಸ್ಕಾನ್ನ ಸಂವಹನ ವಿಭಾಗದ ನಿರ್ದೇಶಕ ಭಕ್ತ ದಾಸ್ “ಪೂಜಾ ಸ್ಥಳದ ಮೇಲೆ ಇಂಥ ಅತಿರೇಕದ ವರ್ತನೆಯಿಂದ ನಾವು ಆಘಾತಗೊಂಡಿದ್ದೇವೆ. ಸಿಸಿಟಿವಿ ದಾಖಲೆಗಳ ಸಹಿತ ವಿಕ್ಟೋರಿಯಾ ಪೊಲೀಸರಿಗೆ ದೂರು ನೀಡಿದ್ದೇವೆ’ ಎಂದು ಹೇಳಿದ್ದಾರೆ.
ವಿಕ್ಟೋರಿಯದ ಪ್ರಾಂತ್ಯದ ಹಂಗಾಮಿ ಮುಖ್ಯಮಂತ್ರಿ ಜಸಿಂತಾ ಅಲನ್ ಖಂಡಿಸಿದ್ದಾರೆ. “ವಿಕ್ಟೋರಿಯದ ಎಲ್ಲರೂ ತಮ್ಮ ನಂಬಿಕೆಗಳನ್ನು ಅನುಸರಿಸಲು ಸ್ವತಂತ್ರರು. ಜನಾಂಗೀಯ ಭೇದ, ದೂರು, ದ್ವೇಷಗಳಿಲ್ಲದೇ ಎಲ್ಲರೂ ಬದುಕಲು ಅರ್ಹರು. ವೈವಿಧ್ಯತೆ ವಿಕ್ಟೋರಿಯದ ದೊಡ್ಡ ಶಕ್ತಿ. ಇಂತಹ ದಾಳಿಗಳನ್ನು ನಾವು ಟೀಕಿಸುತ್ತೇವೆ’ ಎಂದು ಹೇಳಿದ್ದಾರೆ.
ಕೇವಲ 15 ದಿನಗಳ ಅಂತರದಲ್ಲಿ ಮೂರು ದೇವಸ್ಥಾನಗಳ ಮೇಲೆ ದಾಳಿ ಮಾಡಿ ಹಾಳು ಮಾಡಲಾಗಿದೆ. ಜ.12ರಂದು ಮೆಲ್ಬರ್ನ್ ಸ್ವಾಮಿ ನಾರಾಯಣ ದೇಗುಲದ ಮೇಲೆ, ಜ.16ರಂದು ವಿಕ್ಟೋರಿಯದ ಕೇರಂ ಡೌನ್ಸ್ನಲ್ಲಿರುವ ಐತಿಹಾಸಿಕ ಶ್ರೀಶಿವ-ವಿಷ್ಣು ದೇಗುಲದ ಮೇಲೆ ದಾಳಿ ಮಾಡಲಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pak ಆತ್ಮಾಹುತಿ ದಾಳಿ: ಐವರು ಜಪಾನೀಯರು ಪಾರು
Israel – Iran: ಕ್ಷಿಪಣಿ ದಾಳಿಯ ಮೂಲಕ ಸೇಡು ತೀರಿಸಿಕೊಂಡ ಇಸ್ರೇಲ್; ಎಚ್ಚರಿಕೆ ನೀಡಿದ ಇರಾನ್
Russia War: ಉಕ್ರೇನ್ ಮೇಲೆ ರಷ್ಯಾ ಭೀಕರ ದಾಳಿ-17 ಮಂದಿ ಮೃತ್ಯು; ನೆರವಿಗಾಗಿ ಮನವಿ
ನನ್ನ ಪತ್ನಿಗೆ ಏನಾದರೂ ಆದರೆ…: ಸೇನಾ ಮುಖ್ಯಸ್ಥರಿಗೆ ಎಚ್ಚರಿಕೆ ನೀಡಿದ ಇಮ್ರಾನ್ ಖಾನ್
Heavy Rain: ಮರಳುಗಾಡು ದುಬೈನಲ್ಲಿ ಧಾರಾಕಾರ ಮಳೆ, ಪ್ರವಾಹ ಪರಿಸ್ಥಿತಿ-ಜನಜೀವನ ಅಸ್ತವ್ಯಸ್ತ