ನೀರು ಉಳಿಸಲು ಸಾವಿರಾರು ಒಂಟೆಗಳ ಮಾರಣಹೋಮ-ಆಸ್ಟ್ರೇಲಿಯಾ ಸರ್ಕಾರದ ನಿರ್ಧಾರ: ವರದಿ
ಈ ಕಾರ್ಯಾಚರಣೆ ಬುಧವಾರದಿಂದ ಆರಂಭವಾಗಿದ್ದು, ಇದಕ್ಕಾಗಿ ಸರ್ಕಾರ ಹೆಲಿಕಾಪ್ಟರ್ ಗಳನ್ನು ಕಳುಹಿಸಿದೆ
Team Udayavani, Jan 8, 2020, 4:57 PM IST
ಸಿಡ್ನಿ: ಭೀಕರ ಕಾಳ್ಗಿಚ್ಚಿಗೆ ನಲುಗಿ ಹೋಗಿರುವ ಆಸ್ಟ್ರೇಲಿಯಾ ಇದೀಗ ನೀರನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಸುಮಾರು ಹತ್ತು ಸಾವಿರ ಒಂಟೆಗಳನ್ನು ಕೊಲ್ಲುವ ನಿರ್ಧಾರ ಕೈಗೊಂಡಿದೆ. ಕಾಳ್ಗಿಚ್ಚಿನ ನಡುವೆಯೇ ಒಂಟೆಗಳು ಅಧಿಕ ಪ್ರಮಾಣದಲ್ಲಿ ನೀರು ಕುಡಿಯುತ್ತಿರುವುದೇ ಇದಕ್ಕೆ ಕಾರಣ ಎಂದು ಆಸ್ಟ್ರೇಲಿಯಾ ಹೇಳಿದೆ!
ಒಂಟೆಗಳು ಅಧಿಕ ಪ್ರಮಾಣದಲ್ಲಿ ನೀರು ಕುಡಿಯುತ್ತಿದ್ದು, ಇದೀಗ ಹತ್ತು ಸಾವಿರ ಒಂಟೆಗಳನ್ನು ಕೊಲ್ಲುವ ಐದು ದಿನಗಳ ಕಾರ್ಯಾಚರಣೆಗೆ ಆಸ್ಟ್ರೇಲಿಯಾ ಸರ್ಕಾರ ಮುಂದಾಗಿದೆ. ಈ ಕಾರ್ಯಾಚರಣೆ ಬುಧವಾರದಿಂದ ಆರಂಭವಾಗಿದ್ದು, ಇದಕ್ಕಾಗಿ ಸರ್ಕಾರ ಹೆಲಿಕಾಪ್ಟರ್ ಗಳನ್ನು ಕಳುಹಿಸಿದೆ ಎಂದು ದ ಹಿಲ್ ಪತ್ರಿಕೆ ವರದಿ ಮಾಡಿದೆ.
ಗ್ರಾಮೀಣ ಪ್ರದೇಶದಲ್ಲಿ ಒಂಟೆಗಳು ಅಧಿಕವಾಗಿ ವಾಸವಾಗಿವೆ. ಇವುಗಳಿಂದಾಗಿ ಕುಡಿಯುವ ನೀರಿಗೆ ಮತ್ತು ಆಹಾರಕ್ಕೆ ಭಾರೀ ತೊಂದರೆಯಾಗುತ್ತಿದೆ ಎಂದು ಹೆಚ್ಚು ಮತ್ತು ಕಡಿಮೆ ಜನಸಂಖ್ಯೆ ಹೊಂದಿರುವ ಸ್ಥಳೀಯ ಸರ್ಕಾರದ ಪ್ರದೇಶವಾದ ಎಪಿವೈನ ಎಕ್ಸಿಕ್ಯೂಟಿವ್ ಬೋರ್ಡ್ ಸದಸ್ಯೆ ಮಾರ್ಟಿಯಾ ಬಾಕೆರ್ ತಿಳಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಮೂಲನಿವಾಸಿಗಳು ವಾಸವಾಗಿರುವ ಎಪಿವೈ ಪ್ರದೇಶದಿಂದಲೇ ಮೊದಲು ಒಂಟೆಗಳ ಹತ್ಯೆ ಕಾರ್ಯಾಚರಣೆ ಆರಂಭಗೊಂಡಿದೆ ಎಂದು ಹೇಳಿದೆ. ಕಾಳ್ಗಿಚ್ಚಿನಿಂದಾಗಿ ನಾವು ಸೆಖೆಯಲ್ಲಿ ಬೇಯುವಂತಾಗಿದೆ. ಅಲ್ಲದೇ ನಮಗೆ ಅಸೌಖ್ಯದ ಭಾವನೆ ಎದುರಾಗತೊಡಗಿದೆ. ಇದಕ್ಕೆ ಮುಖ್ಯ ಕಾರಣ ಒಂಟೆಗಳು. ಯಾಕೆಂದರೆ ಅವುಗಳು ಮನೆಯ ಸುತ್ತಲೂ ಆಗಮಿಸಿ ಏರ್ ಕಂಡಿಷನ್ ನಿಂದ ಹೊರಬೀಳುವ ನೀರನ್ನು ಕುಡಿಯಲು ಪ್ರಯತ್ನಿಸುತ್ತಿವೆ ಎಂದು ಮಾರ್ಟಿಯಾ ತಿಳಿಸಿದ್ದಾರೆ.
ನವೆಂಬರ್ ನಿಂದ ಕಾಳ್ಗಿಚ್ಚು ಆರಂಭವಾದಾಗಿನಿಂದ ಒಂಟೆಗಳ ಹಾವಳಿ, ಹೆಚ್ಚು ನೀರನ್ನು ಕುಡಿಯಲು ಆರಂಭಿಸಿದ್ದರಿಂದ ಅವುಗಳ ಹತ್ಯೆಗೆ ನಿರ್ಧಾರ ತೆಗೆದುಕೊಳ್ಳಲಾಗಿದೆ. ಇದರಿಂದ ಹೆಚ್ಚು ನೀರು ಉಳಿತಾಯವಾಗಲಿದೆ ಎಂದು ಮಾರ್ಟಿಯಾ ವಿವರಿಸಿರುವುದಾಗಿ ವರದಿ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸಿರಿಯಾದ ಮೇಲೆ ಇಸ್ರೇಲ್ ವೈಮಾನಿಕ ದಾಳಿ… 5 ಹಿಜ್ಬುಲ್ ಸದಸ್ಯರು ಸೇರಿ 38 ಮಂದಿ ಹತ
Baltimore bridge: ಬಾಲ್ಟಿಮೋರ್ ಸೇತುವೆ ಕುಸಿತ: ಇಬ್ಬರ ಮೃತದೇಹ ಹೊರತೆಗೆದ ರಕ್ಷಣಾ ತಂಡ
America: ಕಾನೂನು ಸಮರದಲ್ಲಿ ಹೈರಾಣ-ಹಣ ಸಂಗ್ರಹಕ್ಕಾಗಿ ಟ್ರಂಪ್ ಬೈಬಲ್ ಮಾರಾಟ!
Baltimore bridge collapse; ಆರು ಕಾರ್ಮಿಕರು ನಾಪತ್ತೆ: ಪತ್ತೆ ಕಾರ್ಯ ಸ್ಥಗಿತ
Anjali Chakra – Sufi Malik; ಮದುವೆಗೂ ಮುನ್ನ ಭಾರತ-ಪಾಕ್ ಸಲಿಂಗಿ ಜೋಡಿ ಬ್ರೇಕಪ್!
MUST WATCH
ಹೊಸ ಸೇರ್ಪಡೆ
Yathindra Siddaramaiah ಗೂಂಡಾ, ರೌಡಿ ಹೇಳಿಕೆ : EC ಗೆ ದೂರು ನೀಡಿದ ಬಿಜೆಪಿ
AAP ‘ಮಹಾರ್ಯಾಲಿ’ಯಲ್ಲಿ ಭಾಗಿಯಾಗಲಿರುವ ರಾಹುಲ್,ಖರ್ಗೆ,ಪವಾರ್, ಅಖಿಲೇಶ್
Lok Sabha Election: ಮಹಿಳೆ ಅಡುಗೆ ಮನೆಗಷ್ಟೇ ಸೀಮಿತವಲ್ಲ: ಗಾಯತ್ರಿ ಸಿದ್ದೇಶ್ವರ
Kannada Cinema; ಚಿತ್ರೀಕರಣ ಮುಗಿಸಿದ ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’
ಲೋಕಸಭಾ ಚುನಾವಣೆ: ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರ ಸೂರಜ್ ನಾಯ್ಕ ಸೋನಿ ?