ಟ್ರಂಪ್‌ ಯುದ್ದೋನ್ಮಾದ, ಜಗತ್ತಿನ ಬೃಹತ್‌ ಶಕ್ತಿಗಳ ನಡುವೆ ಕದನ ಕುತೂಹಲ


Team Udayavani, Aug 10, 2017, 8:35 AM IST

trump.jpg

ವಾಷಿಂಗ್ಟನ್‌: ಜಗತ್ತಿನ ಎರಡು ಬೃಹತ್‌ ಶಕ್ತಿಗಳ ನಡುವೆ ಯುದ್ದೋನ್ಮಾದ. ಇಬ್ಬರೂ ಕ್ಷಿಪಣಿಗಳಿಗೆ ಪರಸ್ಪರ ಗುರಿ ನಿಗದಿ ಮಾಡಿಟ್ಟು, ಟ್ರಿಗರ್‌ ಒತ್ತಲು ಕಾಯುತ್ತಿದ್ದಾರೆ. ಈಗ ಮೊದಲು ಯಾರ ಬಾಂಬ್‌ ಯಾರ ಮೇಲೆ ಬೀಳಲಿದೆ? ಯಾರು ಜಗತ್ತಿನ ಅಳಿವಿಗೆ ನಾಂದಿ ಹಾಡುತ್ತಾರೆ ಎಂಬುದನ್ನು ಇಡೀ ವಿಶ್ವವೇ ತುದಿಗಾಲಲ್ಲಿ ನಿಂತು, ಉಸಿರು ಬಿಗಿ ಹಿಡಿದು ನೋಡುತ್ತಿದೆ!

ಒಂದೆಡೆ ಭಾರತ-ಚೀನ ಗಡಿಯಲ್ಲಿ ಉದ್ವಿಗ್ನತೆ ಉಲ್ಬಣಿಸಿದರೆ, ಮತ್ತೂಂದೆಡೆ ಅಮೆರಿಕ-ಉತ್ತರ ಕೊರಿಯಾ ನಡುವೆ ಅಕ್ಷರಶಃ ಯುದ್ಧ ನಡೆಯುವ ವಾತಾವರಣ ಸೃಷ್ಟಿಯಾಗಿದೆ. ಭಾರತ-ಚೀನ ನಡುವೆ ಯುದ್ಧ ಪರಿಸ್ಥಿತಿಯೇನೂ ಸೃಷ್ಟಿಯಾಗಿಲ್ಲವಾದರೂ ಅಮೆರಿಕ ಹಾಗೂ ಉತ್ತರ ಕೊರಿಯಾ ಪರಸ್ಪರ ಕ್ಷಿಪಣಿ ಉಡಾಯಿಸುವ ಲೆಕ್ಕಕ್ಕೆ ಮಾತನಾಡುತ್ತಿವೆ. ಹೀಗಾಗಿ ಎಲ್ಲೆಡೆ ಕದನ ಕುತೂಹಲ ಮಡುಗಟ್ಟಿದೆ.

ಅಮೆರಿಕದ ಸೇನಾ ಸಾಮಗ್ರಿಗಳನ್ನು ಸಂಗ್ರಹಿಸಿರುವ ಗುವಾಮ್‌ ಮೇಲೆ ಕ್ಷಿಪಣಿ ದಾಳಿ ನಡೆಸುವುದಾಗಿ ಮೊನ್ನೆ ಯಷ್ಟೇ ಉತ್ತರ ಕೊರಿಯಾ ಹೇಳಿತ್ತು. ಅದಕ್ಕೆ ಪ್ರತಿಕ್ರಿಯಿಸಿ ರುವ ಅಮೆರಿಕ ಅಧ್ಯಕ್ಷ ಟ್ರಂಪ್‌, ದಕ್ಷಿಣ ಕೊರಿಯಾದಿಂದ ಬರುವ ಬೆದರಿಕೆಗಳಿಗೆ ಬೆಂಕಿಯಂಥ ಆಕ್ರೋಶದಿಂದ ಉತ್ತರಿಸುವುದಾಗಿ ಹೇಳಿದ್ದಾರೆ. ಈ ನಡುವೆ ಉತ್ತರ ಕೊರಿಯಾ ಬೆಂಬಲಕ್ಕೆ ನಿಂತಿರುವ ಚೀನ, “ಉತ್ತರ ಕೊರಿಯಾ ತಂಟೆಗೆ ಬಂದರೆ ಹುಷಾರ್‌!’ ಎಂಬರ್ಥದಲ್ಲಿ ವಿಶ್ವದ ದೊಡ್ಡಣ್ಣನ ಮೇಲೇ ಗುಟುರು ಹಾಕಿದೆ.

ಮಾತಲ್ಲೇ ಬಲಾಬಲ ಪ್ರದರ್ಶನ: ಮೊದಲು ಮಾತಿನ ಯುದ್ಧ ಆರಂಭಿಸಿದ ಉತ್ತರ ಕೊರಿಯಾ ಅಧ್ಯಕ್ಷ ಕಿಮ್‌ ಜಾಂಗ್‌ ಉನ್‌, ಅಮೆರಿಕದ ಸೇನಾ, ಶಸ್ತ್ರಾಸ್ತ್ರ ನೆಲೆಯನ್ನೇ ಉಡಾಯಿಸುವ ಬೆದರಿಕೆ ಹಾಕಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, “ಉತ್ತರ ಕೊರಿಯಾ ಹೀಗೇ ಬೆದರಿಕೆ ಹಾಕುತ್ತಿದ್ದರೆ ಜಗತ್ತು ಹಿಂದೆಂದೂ ಕಂಡರಿಯದಂಥ ಬೆಂಕಿಯಂಥ ಆಕ್ರೋಶ ಎದುರಿಸಬೇಕಾಗುತ್ತದೆ,’ ಎಂದಿದ್ದಾರೆ. ಈ ವಾಗ್ಯುದ್ಧದ ನಂತರ ಈಗ “ಬಲ ಪ್ರದರ್ಶನ’ದ ಸರದಿ. “ನನ್ನ ಬಳಿ 60ಕ್ಕೂ ಹೆಚ್ಚು ಅಣು ಬಾಂಬ್‌ಗಳು ಸಿದ್ಧವಾಗಿವೆ’ ಎಂದು ಉತ್ತರ ಕೊರಿಯಾ ಹೇಳಿದರೆ, “ನನ್ನಲ್ಲಿರುವ ಅಣ್ವಸ್ತ್ರ ಸಂಗ್ರಹ ಹಿಂದೆಂದಿಗಿಂತಲೂ ಬಲಿಷ್ಠವಾಗಿದೆ. ಹಿಂದೆ, ಇಂದು, ಮುಂದೆಂದೂ ಜಗತ್ತಿಗೆ ನಾನೊಬ್ಬನೇ ದೊಡ್ಡಣ್ಣ’ ಎಂದು ಅಮೆರಿಕ ಅಧ್ಯಕ್ಷ ಟ್ವೀಟಿಸಿದ್ದಾರೆ.

ಸದ್ದಿಲ್ಲದೆ ಸಮರಾಭ್ಯಾಸ: ಅಮೆರಿಕ, ಕೊರಿಯಾ ನಡುವಿನ ಈ ವಾಗ್ಯುದ್ಧ ಕಂಡ ಅಮೆರಿಕನ್ನರು ಮತ್ತು ಕೊರಿಯನ್ನರು ಅಕ್ಷರಶಃ ನಿದ್ದೆಗೆಟ್ಟಿದ್ದಾರೆ. “ನಮ್ಮ ಬಿ-1ಬಿ ಸ್ಟ್ರಾಟಜಿಕ್‌ ಬಾಂಬರ್‌ಗಳು “ಇಂದು ರಾತ್ರಿಯೇ ಹೋರಾಟ’ಕ್ಕೆ ಸನ್ನದ್ಧವಾಗಿವೆ’ ಎನ್ನುವ ಮೂಲಕ ಅಮೆರಿಕ ವಾಸ್ತವ ಯುದ್ಧದ ಸೂಚನೆ ನೀಡಿದೆ. ಇದಕ್ಕೆ ಇಂಬು ನೀಡುವಂತೆ ಎರಡು ಬಿ-1ಬಿ ಬಾಂಬರ್‌ಗಳನ್ನು ಬಳಸಿ ಕೊರಿಯಾದ ದ್ವೀಪದಲ್ಲಿ 10 ಗಂಟೆಗಳ ಕಾಲ ಸಮರಾಭ್ಯಾಸ ನಡೆಸಲಾಗಿದೆ. ಇದರ ಬೆನ್ನಲ್ಲೇ ಉತ್ತರ ಕೊರಿಯಾ ಗುವಾಮ್‌ ಮೇಲೆ ಕ್ಷಿಪಣಿ ದಾಳಿ ನಡೆಸುವ ಹೇಳಿಕೆ ನೀಡಿದೆ. ಜತೆಗೆ ಅಮೆರಿಕ “ಅಣು ಯುದ್ಧದ ಉನ್ಮಾದ’ದಲ್ಲಿದೆ ಎಂದು ಹೇಳಿದೆ. ಇದೇ ವೇಳೆ “ಉತ್ತರ ಕೊರಿಯಾದ ಯಾವುದೇ ಬೆದರಿಕೆ ನಂಬಲು ಅರ್ಹವಲ್ಲ. ಹೀಗಾಗಿ ಅಮೆರಿಕನ್ನರು ಆತಂಕ ಪಡದೆ ರಾತ್ರಿ ಆರಾಮವಾಗಿ ನಿದ್ದೆ ಮಾಡಬಹುದು,’ ಎಂದು ಅಮೆರಿಕ ವಿದೇಶಾಂಗ ಸಚಿವ ರೆಕ್ಸ್‌ ಟಿಲ್ಲರ್‌ಸನ್‌ ಅಭಯ ನೀಡಿದ್ದಾರೆ.

ಟಾಪ್ ನ್ಯೂಸ್

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

1-aaaaaa

BJP ಮೋದಿ ಮಾಡೆಲ್ ಹೆಸರಿನಲ್ಲಿ ಚೊಂಬಿನ ಮಾಡೆಲ್ ನೀಡಿದೆ: ಸುರ್ಜೇವಾಲ

1-weqwewqe

Davangere: 10 ರೂ.ಗಳ ನಾಣ್ಯ ರೂಪದಲ್ಲಿ 25 ಸಾವಿರ ರೂ. ಠೇವಣಿ ಕಟ್ಟಿದ ಅಭ್ಯರ್ಥಿ!

Exam

CET ಸುಗಮವಾಗಿ ನಡೆದಿದೆ: ಆಕ್ಷೇಪಣೆ ಸಲ್ಲಿಕೆಗೆ ಏ.27ರವರೆಗೆ ಅವಕಾಶ

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Israel – Iran: ಕ್ಷಿಪಣಿ ದಾಳಿಯ ಮೂಲಕ ಸೇಡು ತೀರಿಸಿಕೊಂಡ ಇಸ್ರೇಲ್; ಎಚ್ಚರಿಕೆ ನೀಡಿದ ಇರಾನ್

Israel – Iran: ಕ್ಷಿಪಣಿ ದಾಳಿಯ ಮೂಲಕ ಸೇಡು ತೀರಿಸಿಕೊಂಡ ಇಸ್ರೇಲ್; ಎಚ್ಚರಿಕೆ ನೀಡಿದ ಇರಾನ್

Russia War: ಉಕ್ರೇನ್‌ ಮೇಲೆ ರಷ್ಯಾ ಭೀಕರ ದಾಳಿ-17 ಮಂದಿ ಮೃತ್ಯು; ನೆರವಿಗಾಗಿ ಮನವಿ

Russia War: ಉಕ್ರೇನ್‌ ಮೇಲೆ ರಷ್ಯಾ ಭೀಕರ ದಾಳಿ-17 ಮಂದಿ ಮೃತ್ಯು; ನೆರವಿಗಾಗಿ ಮನವಿ

ನನ್ನ ಪತ್ನಿಗೆ ಏನಾದರೂ ಆದರೆ…: ಸೇನಾ ಮುಖ್ಯಸ್ಥರಿಗೆ ಎಚ್ಚರಿಕೆ ನೀಡಿದ ಇಮ್ರಾನ್ ಖಾನ್

ನನ್ನ ಪತ್ನಿಗೆ ಏನಾದರೂ ಆದರೆ…: ಸೇನಾ ಮುಖ್ಯಸ್ಥರಿಗೆ ಎಚ್ಚರಿಕೆ ನೀಡಿದ ಇಮ್ರಾನ್ ಖಾನ್

Heavy Rain: ಮರಳುಗಾಡು ದುಬೈನಲ್ಲಿ ಧಾರಾಕಾರ ಮಳೆ, ಪ್ರವಾಹ ಪರಿಸ್ಥಿತಿ-ಜನಜೀವನ ಅಸ್ತವ್ಯಸ್ತ

Heavy Rain: ಮರಳುಗಾಡು ದುಬೈನಲ್ಲಿ ಧಾರಾಕಾರ ಮಳೆ, ಪ್ರವಾಹ ಪರಿಸ್ಥಿತಿ-ಜನಜೀವನ ಅಸ್ತವ್ಯಸ್ತ

Rain: ವರುಣನ ಆರ್ಭಟಕ್ಕೆ ನಲುಗಿದ ದುಬೈ… ವಿಮಾನ ನಿಲ್ದಾಣ ಜಲಾವೃತ, ಜನಜೀವನ ಅಸ್ತವ್ಯಸ್ಥ

Rain: ವರುಣನ ಆರ್ಭಟಕ್ಕೆ ನಲುಗಿದ ದುಬೈ… ವಿಮಾನ ನಿಲ್ದಾಣ ಜಲಾವೃತ, ಜನಜೀವನ ಅಸ್ತವ್ಯಸ್ಥ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

1-aaaaaa

BJP ಮೋದಿ ಮಾಡೆಲ್ ಹೆಸರಿನಲ್ಲಿ ಚೊಂಬಿನ ಮಾಡೆಲ್ ನೀಡಿದೆ: ಸುರ್ಜೇವಾಲ

1-weqwewqe

Davangere: 10 ರೂ.ಗಳ ನಾಣ್ಯ ರೂಪದಲ್ಲಿ 25 ಸಾವಿರ ರೂ. ಠೇವಣಿ ಕಟ್ಟಿದ ಅಭ್ಯರ್ಥಿ!

Minchu

Bidar; ಬಿರುಗಾಳಿ‌ ಸಹಿತ ಭಾರಿ ಮಳೆ :ಸಿಡಿಲು ಬಡಿದು‌ ರೈತ ಸಾವು

1-wewqewqe

Kalaburgi: ಮಹಿಳೆಯ ಬಾತ್ ರೂಮ್ ವಿಡಿಯೋ ರೆಕಾರ್ಡ್ ಮಾಡಿದ ಸೆಕ್ಯೂರಿಟಿ ಗಾರ್ಡ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.