ಇಮ್ರಾನ್ ಖಾನ್ ಅಕ್ರಮ ಮಕ್ಕಳಲ್ಲಿ ಹಲವರು ಭಾರತೀಯರು: ಮಾಜಿ ಪತ್ನಿ
Team Udayavani, Jul 13, 2018, 11:20 AM IST
ಇಸ್ಲಾಮಾಬಾದ್ : ರಾಜಕಾರಣಿಯಾಗಿ ಪರಿವರ್ತಿತರಾಗಿರುವ ಮಾಜಿ ಕ್ರಿಕೆಟಿಗ, ಪಾಕಿಸ್ಥಾನ್ ತೆಹರೀಕ್ ಎ ಇನ್ಸಾಫ್ ಪಕ್ಷದ ಮುಖ್ಯಸ್ಥರಾಗಿರುವ ತನ್ನ ಮಾಜಿ ಪತಿ ಇಮ್ರಾನ್ ಖಾನ್ ಹಲವಾರು ಕಾನೂನುಬಾಹಿರ ಮಕ್ಕಳ ಅಪ್ಪನಾಗಿದ್ದು ಇವರಲ್ಲಿ ಹಲವರು ಭಾರತೀಯರು ಎಂದು ಇಮ್ರಾನ್ ಮಾಜಿ ಪತ್ನಿ ರೆಹಾಮ್ ಖಾನ್ ತನ್ನ ಪುಸ್ತಕದಲ್ಲಿ ಬರೆದಿದ್ದಾರೆ.
ಪಾಕಿಸ್ಥಾನದಲ್ಲಿ ಇದೇ ಜು.25ರಂದು ಮಹಾ ಚುನಾವಣೆ ನಡೆಯಲಿದ್ದು ಅದಕ್ಕೆ ಮುನ್ನ ಅಲ್ಲಿನ ರಾಜಕಾರಣಿಗಳ ವಿರುದ್ಧ, ಆರೋಪ, ಪ್ರತ್ಯಾರೋಪ, ಕೆಸರೆರಚುವಿಕೆಯೇ ಮೊದಲಾಗಿ ಬಹಿರಂಗ ಮಾನಹಾನಿಕರ ಮಾತುಗಳು ಪ್ರವಾಹೋಪಾದಿಯಲ್ಲಿ ಹರಿಯುತ್ತಿವೆ.
ಇಮ್ರಾನ್ ಮಾಜಿ ಪತ್ನಿ ರೆಹಾಮ್ ಖಾನ್ ಬರೆದಿರುವ “ರೆಹಾಮ್ ಖಾನ್” ಶೀರ್ಷಿಕೆಯ ವಿವಾದಾತ್ಮಕ ಪುಸ್ತಕ ನಿನ್ನೆ ಗುರುವಾರ ಬಿಡುಗಡೆಯಾಗಿದೆ. ಈ ಪುಸ್ತಕದಲ್ಲಿ ರೆಹಾಮ್, ಇಮ್ರಾನ್ ಜತೆಗಿನ ತನ್ನ ಹತ್ತು ತಿಂಗಳ ಮದುವೆಯು ಎಷ್ಟೊಂದು ಪ್ರಕ್ಷುಬ್ಧ ವಾಗಿತ್ತು ಎಂಬುದನ್ನು ವಿವರಿಸಿದ್ದಾರೆ.
ಈ ಪುಸ್ತಕದ ಒಂದು ಅಧ್ಯಾಯದಲ್ಲಿ ರೆಹಾಮ್, “ಇಮ್ರಾನ್ ಖಾನ್ ತನ್ನ ವಿವಾಹೇತರ ಸಂಬಂಧಗಳ ಫಲವಾಗಿ ತಾನು ಐದು ಮಕ್ಕಳ ಅಪ್ಪನಾಗಿದ್ದೇನೆ’ ಎಂಬುದನ್ನು ಖುದ್ದು ಒಪ್ಪಿಕೊಂಡಿದ್ದಾಗಿ ಬಹಿರಂಗಪಡಿಸಿದ್ದಾರೆ.
“ನಾನು ಅಕ್ರಮ ಸಂಬಂಧ ಹೊಂದಿದ್ದ ಯಾವುದೇ ಮಹಿಳೆಯರು ತಮ್ಮ ಮದುವೆಗಳನ್ನು ಉಳಿಸಿಕೊಳ್ಳಲು ಎಂದೂ ನನ್ನೊಂದಿಗಿನ ಅಕ್ರಮ ಲೈಂಗಿಕ ಸಂಬಂಧಗಳನ್ನು ಬಹಿರಂಗಪಡಿಸಿಯೇ ಇಲ್ಲ” ಎಂದು ಇಮ್ರಾನ್ ಕೊಚ್ಚಿಕೊಂಡಿರುವುದಾಗಿ ರೆಹಾಮ್ ತನ್ನ ಪುಸ್ತಕದಲ್ಲಿ ಬರೆದಿದ್ದಾರೆ.
“ನನ್ನ ಅಕ್ರಮ ಮಕ್ಕಳಲ್ಲಿ ಕನಿಷ್ಠ ಐವರು ಭಾರತೀಯರು; ಅವರಲ್ಲಿ ಅತ್ಯಂತ ಹಿರಿಯನಾಗಿರುವವನು ಈಗ 34ರ ಹರೆಯದವನಾಗಿದ್ದಾನೆ’ ಎಂದು ಇಮ್ರಾನ್ ಹೇಳಿರುವುದಾಗಿ ರೆಹಾಮ್ ಬರೆದಿದ್ದಾರೆ.
ರೆಹಾಮ್ ಬರೆದಿರುವ ಪ್ರಕಾರ್ ಇಮ್ರಾನ್ ಖಾನ್ ಬದುಕು ಸಂಪೂರ್ಣವಾಗಿ “ಸೆಕ್ಸ್, ಡ್ರಗ್ಸ್, ರಾಕ್ ಎನ್ ರೋಲ್’ ನಿಂದ ಕೂಡಿದುದಾಗಿದೆ. “ನನ್ನ ಪುಸ್ತಕದಲ್ಲಿ ಇಮ್ರಾನ್ ವಿರುದ್ಧ ನಾನು ಬರೆದಿರುವ ಎಲ್ಲ ಸಂಗತಿಗಳನ್ನು ಕೋರ್ಟಿನಲ್ಲಿ ಸಾಬೀತು ಪಡಿಸಿ ತೋರಿಸುತ್ತೇನೆ’ ಎಂದು ರೆಹಾಮ್ ಜಿಯೋ ನ್ಯೂಸ್ ಗೆ ನೀಡಿರುವ ಸಂದರ್ಶನದಲ್ಲಿ ಹೇಳಿದ್ದಾರೆ.
ಬ್ರಿಟಿಷ್ ಪಾಕಿಸ್ಥಾನೀ ಬ್ರಾಡ್ಕಾಸ್ಟ್ ಪತ್ರಕರ್ತೆಯಾಗಿದ್ದ ರೆಹಾಮ್ ಅವರ ಮದುವೆ ಇಮ್ರಾನ್ ಖಾನ್ ಜತೆಗೆ ನಡೆದದ್ದು 2015ರ ಜನವರಿ 6ರಂದು. ಆದರೆ ಈ ಮದುವೆ ಅದೇ ವರ್ಷ ಅಕ್ಟೋಬರ್ 30ರಂದು ಮುರಿದು ಬಿತ್ತು. ಇಮ್ರಾನ್ ಗೆ ಇದು ತನ್ನ ಎರಡನೇ ಮದುವೆಯಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Israel – Iran: ಕ್ಷಿಪಣಿ ದಾಳಿಯ ಮೂಲಕ ಸೇಡು ತೀರಿಸಿಕೊಂಡ ಇಸ್ರೇಲ್; ಎಚ್ಚರಿಕೆ ನೀಡಿದ ಇರಾನ್
Russia War: ಉಕ್ರೇನ್ ಮೇಲೆ ರಷ್ಯಾ ಭೀಕರ ದಾಳಿ-17 ಮಂದಿ ಮೃತ್ಯು; ನೆರವಿಗಾಗಿ ಮನವಿ
ನನ್ನ ಪತ್ನಿಗೆ ಏನಾದರೂ ಆದರೆ…: ಸೇನಾ ಮುಖ್ಯಸ್ಥರಿಗೆ ಎಚ್ಚರಿಕೆ ನೀಡಿದ ಇಮ್ರಾನ್ ಖಾನ್
Heavy Rain: ಮರಳುಗಾಡು ದುಬೈನಲ್ಲಿ ಧಾರಾಕಾರ ಮಳೆ, ಪ್ರವಾಹ ಪರಿಸ್ಥಿತಿ-ಜನಜೀವನ ಅಸ್ತವ್ಯಸ್ತ
Rain: ವರುಣನ ಆರ್ಭಟಕ್ಕೆ ನಲುಗಿದ ದುಬೈ… ವಿಮಾನ ನಿಲ್ದಾಣ ಜಲಾವೃತ, ಜನಜೀವನ ಅಸ್ತವ್ಯಸ್ಥ
MUST WATCH
ಹೊಸ ಸೇರ್ಪಡೆ
Gujarat Lok Sabha Constituency: ಗುಜರಾತ್ ಎಂಬ ಕೇಸರಿ ಕೋಟೆಗೆ ಲಗ್ಗೆ ಸಾಧ್ಯವೇ?
Lok Sabha Election: ಮಠಾಧೀಶರ ಆಶೀರ್ವಾದ ಪಡೆದ ಬಿಜೆಪಿ ಅಭ್ಯರ್ಥಿ ಗಾಯಿತಿ ಸಿದ್ದೇಶ್ವರ
Israel – Iran: ಕ್ಷಿಪಣಿ ದಾಳಿಯ ಮೂಲಕ ಸೇಡು ತೀರಿಸಿಕೊಂಡ ಇಸ್ರೇಲ್; ಎಚ್ಚರಿಕೆ ನೀಡಿದ ಇರಾನ್
Gadaga ಹತ್ಯೆ ಪ್ರಕರಣ; ಆರೋಪಿಗಳ ಪತ್ತೆಗೆ ಪರಿಶೀಲನೆ ಮುಂದುವರೆದಿದೆ: ಗದಗ ಎಸ್ಪಿ
Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ