ಮರಣದಂಡನೆಗೊಳಗಾಗಿದ್ದ ಕೇರಳ ಮೂಲದ ವ್ಯಕ್ತಿಗೆ ಜೀವದಾನ ನೀಡಿದ ಉದ್ಯಮಿ
Team Udayavani, Jun 4, 2021, 6:40 AM IST
ಅಬುದಾಭಿ: ಯುಎಇಯ ಅಬಧಾಬಿಯಲ್ಲಿ ಮರಣದಂಡನೆಗೊಳಗಾಗಿದ್ದ ಕೇರಳಿಗ ಬೆಕ್ಸ್ ಕೃಷ್ಣನ್ ಅಕ್ಷರಶಃ ಜೀವದಾನ ಪಡೆದಿದ್ದಾರೆ!
ಅವರನ್ನು ಖ್ಯಾತ ಉದ್ಯಮಿ, ಲುಲು ಗ್ರೂಪ್ ಮುಖ್ಯಸ್ಥ ಎಂ.ಎ.ಯೂಸುಫ್ ಅಲಿ 1 ಕೋಟಿ ರೂ. ಪರಿಹಾರ ನೀಡಿ ರಕ್ಷಿಸಿದ್ದಾರೆ. 2012ರಲ್ಲಿ ಅವರು ಬೇಕಾಬಿಟ್ಟಿ ಕಾರು ಚಲಾಯಿಸಿ ದ್ದರಿಂದ ಸೂಡಾನ್ನ ಬಾಲಕ ಮೃತಪಟ್ಟಿದ್ದ.
ಈ ಹಿನ್ನೆಲೆಯಲ್ಲಿ ಅವರಿಗೆ ಯುಎಇ ಸುಪ್ರೀಂ ಕೋರ್ಟ್ ಮರಣದಂಡನೆ ವಿಧಿಸಿತ್ತು. ಕೃಷ್ಣನ್ ಕುಟುಂಬ ಅಲಿ ಅವರಿಗೆ ಸಮಸ್ಯೆ ವಿವರಿಸಿತು. ಬಾಲಕನ ಕುಟುಂಬವನ್ನು ಸುಡಾನ್ನಿಂದ ಕರೆಯಿಸಿಕೊಂಡು ಕುಟುಂಬಕ್ಕೆ ತಾವೇ 1 ಕೋಟಿ ರೂ. ಪರಿಹಾರಧನ ನೀಡಿದರು.
ಬಳಿಕ ಕುಟುಂಬ ಕೃಷ್ಣನ್ರನ್ನು ಕ್ಷಮಿಸಲು ಒಪ್ಪಿತು. ಸುಪ್ರೀಂ ಕೋರ್ಟ್ ಕೂಡ ಕೃಷ್ಣನ್ ಅವರನ್ನು ಬಿಡುಗಡೆ ಮಾಡಿದೆ. 9 ವರ್ಷಗಳ ಅನಂತರ ಕೃಷ್ಣನ್ ಜೈಲಿನಿಂದ ಸದ್ಯದಲ್ಲೇ ಹೊರಬರಲಿದ್ದಾರೆ. ಒಮ್ಮೆ ಯೂಸುಫ್ ಅಲಿಯನ್ನು ನೋಡಿ, ಕೇರಳಕ್ಕೆ ಬರುವುದು ಕೃಷ್ಣನ್ ಅವರ ಮುಂದಿನ ಗುರಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pak ಆತ್ಮಾಹುತಿ ದಾಳಿ: ಐವರು ಜಪಾನೀಯರು ಪಾರು
Israel – Iran: ಕ್ಷಿಪಣಿ ದಾಳಿಯ ಮೂಲಕ ಸೇಡು ತೀರಿಸಿಕೊಂಡ ಇಸ್ರೇಲ್; ಎಚ್ಚರಿಕೆ ನೀಡಿದ ಇರಾನ್
Russia War: ಉಕ್ರೇನ್ ಮೇಲೆ ರಷ್ಯಾ ಭೀಕರ ದಾಳಿ-17 ಮಂದಿ ಮೃತ್ಯು; ನೆರವಿಗಾಗಿ ಮನವಿ
ನನ್ನ ಪತ್ನಿಗೆ ಏನಾದರೂ ಆದರೆ…: ಸೇನಾ ಮುಖ್ಯಸ್ಥರಿಗೆ ಎಚ್ಚರಿಕೆ ನೀಡಿದ ಇಮ್ರಾನ್ ಖಾನ್
Heavy Rain: ಮರಳುಗಾಡು ದುಬೈನಲ್ಲಿ ಧಾರಾಕಾರ ಮಳೆ, ಪ್ರವಾಹ ಪರಿಸ್ಥಿತಿ-ಜನಜೀವನ ಅಸ್ತವ್ಯಸ್ತ