ಹೆಚ್ಚಿದ ಟ್ರಕ್ಕರ್ ಗಳ ಪ್ರತಿಭಟನೆ: ಕೆನಡಾದಲ್ಲಿ ತುರ್ತು ಪರಿಸ್ಥಿತಿ ಜಾರಿಗೊಳಿಸಿದ ಟ್ರುಡೊ
Team Udayavani, Feb 15, 2022, 9:16 AM IST
ಒಟ್ಟಾವ: ಕೆನಡಾದ ಪ್ರಧಾನ ಮಂತ್ರಿ ಜಸ್ಟಿನ್ ಟ್ರುಡೊ ಸೋಮವಾರ ಕೋವಿಡ್ ಆರೋಗ್ಯ ನಿಯಮಗಳ ವಿರುದ್ಧ ಟ್ರಕ್ಕರ್ ನೇತೃತ್ವದ ಪ್ರತಿಭಟನೆಗಳನ್ನು ಕೊನೆಗೊಳಿಸಲು ಅಪರೂಪವಾಗಿ ಬಳಸಿದ ತುರ್ತು ಅಧಿಕಾರವನ್ನು ಜಾರಿ ಮಾಡಿದ್ದಾರೆ.
ಕೆನಡಾದ ಇತಿಹಾಸದಲ್ಲಿ ಶಾಂತಿ ಸಮಯದಲ್ಲಿ ಎರಡನೇ ಬಾರಿಗೆ ಈ ತುರ್ತು ಅಧಿಕಾರ ಬಳಸಲಾಗಿದೆ. ಅಮೇರಿಕಾ ಗಡಿ ದಾಟುತ್ತಿದ್ದ 11 ಮಂದಿಯನ್ನು ಬಂದೂಕುಗಳ ಸಂಗ್ರಹದೊಂದಿಗೆ ಪೊಲೀಸರು ಬಂಧಿಸಿದ ಬಳಿಕ ಈ ನಿರ್ಧಾರ ಮಾಡಲಾಗಿದೆ.
ಈ ಹಂತದಲ್ಲಿ ಮಿಲಿಟರಿಯನ್ನು ನಿಯೋಜಿಸಲಾಗುವುದಿಲ್ಲ, ಆದರೆ ದಿಗ್ಬಂಧನಗಳನ್ನು ತೆರವುಗೊಳಿಸುವ ಸಲುವಾಗಿ ಪ್ರತಿಭಟನಾಕಾರರನ್ನು ಬಂಧಿಸಲು ಮತ್ತು ಅವರ ಟ್ರಕ್ಗಳನ್ನು ವಶಪಡಿಸಿಕೊಳ್ಳಲು ಅಧಿಕಾರಿಗಳಿಗೆ ಹೆಚ್ಚಿನ ಅಧಿಕಾರವನ್ನು ನೀಡಲಾಗುವುದು ಎಂದು ಟ್ರೂಡೊ ಹೇಳಿದರು.
ಹಿಂಸಾಚಾರದ ಬೆದರಿಕೆ ಮುಂದುವರಿದಂತೆ, ಕೌಟ್ಸ್, ಆಲ್ಬರ್ಟಾ ಮತ್ತು ಮೊಂಟಾನಾದ ಸ್ವೀಟ್ ಗ್ರಾಸ್ ನಡುವಿನ ಗಡಿಯಲ್ಲಿ ರೈಫಲ್ಗಳು, ಕೈಬಂದೂಕುಗಳು, ದೇಹದ ರಕ್ಷಾಕವಚ ಮತ್ತು ಮದ್ದುಗುಂಡುಗಳೊಂದಿಗೆ 11 ಪ್ರತಿಭಟನಾಕಾರರನ್ನು ಬಂಧಿಸಲಾಯಿತು ಎಂದು ಫೆಡರಲ್ ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ:ಕಾನ್ಪುರ ಚುನಾವಣಾ ರ್ಯಾಲಿ: ತ್ರಿವಳಿ ತಲಾಖ್ನಿಂದ ಲಾಭ; ಪ್ರಧಾನಿ ಮೋದಿ ಪ್ರತಿಪಾದನೆ
1970 ರ ಅಕ್ಟೋಬರ್ ಬಿಕ್ಕಟ್ಟಿನ ಸಂದರ್ಭದಲ್ಲಿ ಟ್ರುಡೊ ಅವರ ತಂದೆ, ಮಾಜಿ ಪ್ರಧಾನ ಮಂತ್ರಿ ಪಿಯರೆ ಟ್ರುಡೊ ಅವರು ಈ ಹಿಂದೆ ತುರ್ತು ಕಾಯಿದೆಯನ್ನು ಬಳಸಿದ್ದರು.
ಕೆನಡಾ ಮತ್ತು ಯುನೈಟೆಡ್ ಸ್ಟೇಟ್ಸ್ ನಡುವಿನ ಗಡಿಯನ್ನು ದಾಟಲು ಲಸಿಕೆ ಪಡೆಯುವುದು ಕಡ್ಡಾಯವೆಂದು ಕೆನಡಾ ಸರ್ಕಾರ ಘೋಷಿಸಿದ ಬಳಿಕ ಲಸಿಕೆಗಳ ವಿರುದ್ಧ ಕೆನಡಾದ ಟ್ರಕ್ಕರ್ಗಳು ಪ್ರತಿಭಟನೆ ಆರಂಭಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Baltimore bridge: ಬಾಲ್ಟಿಮೋರ್ ಸೇತುವೆ ಕುಸಿತ: ಇಬ್ಬರ ಮೃತದೇಹ ಹೊರತೆಗೆದ ರಕ್ಷಣಾ ತಂಡ
America: ಕಾನೂನು ಸಮರದಲ್ಲಿ ಹೈರಾಣ-ಹಣ ಸಂಗ್ರಹಕ್ಕಾಗಿ ಟ್ರಂಪ್ ಬೈಬಲ್ ಮಾರಾಟ!
Baltimore bridge collapse; ಆರು ಕಾರ್ಮಿಕರು ನಾಪತ್ತೆ: ಪತ್ತೆ ಕಾರ್ಯ ಸ್ಥಗಿತ
Anjali Chakra – Sufi Malik; ಮದುವೆಗೂ ಮುನ್ನ ಭಾರತ-ಪಾಕ್ ಸಲಿಂಗಿ ಜೋಡಿ ಬ್ರೇಕಪ್!
H5N1: ವಿಯೆಟ್ನಾಂನಲ್ಲಿ ಹಕ್ಕಿಜ್ವರಕ್ಕೆ ಮೊದಲ ಬಲಿ!
MUST WATCH
ಹೊಸ ಸೇರ್ಪಡೆ
Lok Sabha elections: ಸಂಸದ ಬಸವರಾಜುಗೆ “ಗೋ ಬ್ಯಾಕ್’ ಎಂದ ಬಿಜೆಪಿಗರು!
Narayan Gowda: ಹೆಚ್ಚಿನ ಮತಗಳಿಂದ ಎಚ್ಡಿಕೆ ಗೆಲ್ಲಿಸುತ್ತೇವೆ: ನಾರಾಯಣ ಗೌಡ
Mangaluru;ಮನೆಯಲ್ಲೇ ಅಕ್ರಮ ಕಸಾಯಿಖಾನೆ:ಗೋಮಾಂಸ ಸಹಿತ ಮೂವರ ಬಂಧನ
Raksha Ramaiah: ಯಾರಿಗೆ ಟಿಕೆಟ್ ಕೊಟ್ಟರೂ ಅಭ್ಯರ್ಥಿ ಪರ ಕೆಲಸ ಮಾಡ್ತೇವೆ; ರಕ್ಷಾ ರಾಮಯ್ಯ
World’s largest ಅನಕೊಂಡ ಅನಾ ಜೂಲಿಯಾ ಸಾವು; ಆಗಿದ್ದೇನು?