ಸಾವಿನ ಮನೆ ಕಡೆ ಬೆರಳು ಮಾಡಿದ ನೀಚ ಚೀನ
Team Udayavani, Dec 10, 2021, 7:10 AM IST
ಜನರಲ್ ರಾವತ್ ಸಾವಿನಿಂದಾಗಿ ಇಡೀ ಭಾರತವೇ ಶೋಕ ಸಾಗರದಲ್ಲಿ ಮುಳುಗೇಳುತ್ತಿದ್ದರೆ, ಅತ್ತ ಚೀನ ಸಾವಿನ ಮನೆಯಾಚೆ ನಿಂತು ತುತ್ಛ ಮಾತುಗಳನ್ನಾಡುವ ಮೂಲಕ ತನ್ನ ನೀಚತನವನ್ನು ಪ್ರದರ್ಶಿಸಿದೆ.
ಚೀನ ಸರಕಾರದಲ್ಲಿ ಹೊಟ್ಟೆ ಹೊರೆದುಕೊಳ್ಳುತ್ತಿರುವ “ಗ್ಲೋಬಲ್ ಟೈಮ್ಸ್’ ಎಂಬ ಪತ್ರಿಕೆ, “ಜನರಲ್ ರಾವತ್ ಅವರ ಸಾವು, ಭಾರತೀಯ ಪಡೆಗಳಲ್ಲಿನ ನ್ಯೂನತೆಗಳನ್ನು ಎತ್ತಿ ತೋರಿಸಿದೆ. ಇದಲ್ಲದೆ, ಸುಸಜ್ಜಿತ ವ್ಯವಸ್ಥೆಯನ್ನಾಗಲೀ, ಯುದ್ಧಕ್ಕೆ ಬೇಕಾದ ಪೂರ್ವತಯಾರಿಯನ್ನಾಗಲೀ ಆ ದೇಶ ಹೊಂದಿಲ್ಲ ಎಂಬುದನ್ನು ಜ| ರಾವತ್ ಸಾವು ದೃಢೀಕರಿಸಿದೆ. ರಾವತ್ರ ಸಾವಿನಿಂದಾಗಿ ಭಾರತದ ಸೇನಾ ಆಧುನೀಕರಣ ಯೋಜನೆಗೆ ದೊಡ್ಡ ಹೊಡೆತ ಬಿದ್ದಿದೆ’ ಎಂದು ಲೇವಡಿ ಮಾಡಿದೆ.
ಇನ್ನು, ಚೀನದ ಸೇನಾ ತಜ್ಞ ವೇಯ್ ಡಾಂಕ್ಸು “ಭಾರತೀಯ ಮಾಧ್ಯಮಗಳು, ಪ್ರತಿಕೂಲ ಹವಾಮಾನ, ಹೆಲಿಕಾಪ್ಟರನ್ನು ನಿಗದಿತ ಎತ್ತರಕ್ಕಿಂತ ಹೆಚ್ಚು ಎತ್ತರದಲ್ಲಿ ಹಾರಿಸಿರುವುದು ಅಪಘಾತಕ್ಕೆ ಕಾರಣವಾಗಿರಬಹುದು ಎಂದಿವೆ. ಇದು ನಿಜವೇ ಆಗಿದ್ದರೆ ನಿಯಮ ಮೀರುವುದು ಸರಿಯಲ್ಲ’ ಎಂದಿದ್ದಾರೆ. ಇದನ್ನೇ ತನ್ನ ವರದಿಯಲ್ಲಿ ಉಲ್ಲೇಖೀಸಿ ಸಂಪಾದಕೀಯ ಬರೆದಿರುವ ಪತ್ರಿಕೆ, ಸೇನಾ ಯಂತ್ರೋಪಕರಣಗಳನ್ನು ಬಳಸುವಲ್ಲಿ ಭಾರತೀಯರು ಅಸಮರ್ಥರು’ ಎಂದಿದೆ.
ರಾವತ್ ನಿಧನದಿಂದ ಭಾರತೀಯ ಸೇನಾ ಪಡೆಗಳ ಆಧುನೀಕರಣ ಪ್ರಕ್ರಿಯೆಗೆ ದೊಡ್ಡ ಹೊಡೆತ ಬಿದ್ದಿದೆ ಎಂದು ಹೇಳುವ ಮೂಲಕ, ಈ ಪತ್ರಿಕೆ, ಭಾರತವು ತನ್ನ ಸೇನೆಯನ್ನು ಆಧುನೀಕರಣಗೊಳಿಸುತ್ತಿರುವುದರ ಬಗ್ಗೆ ಆತಂಕಗೊಂಡಿತ್ತು ಎಂಬುದನ್ನು ಪರೋಕ್ಷವಾಗಿ ಒಪ್ಪಿಕೊಂಡಿದೆ.
ಪಾಕ್ಗಾದರೂ ಇದೆ ಕೊಂಚ ಮಾನವೀಯತೆ.. ಆದರೆ… ಸಾಂಪ್ರದಾಯಿಕ ಶತ್ರುವೆಂದೇ ಬಿಂಬಿಸಲ್ಪಟ್ಟಿರುವ ಪಾಕಿಸ್ಥಾನದ ಸೇನೆಯ ಮುಖ್ಯಸ್ಥ ನದೀಮ್ ರಾಜಾ ಹಾಗೂ ಜಂಟಿ ಮುಖ್ಯಸ್ಥರಾದ ಜ| ಖುಮರ್ ಜಾವೇಜ್ ಬಾಜ್ವಾ ಜ| ರಾವತ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಆದರೆ ಚೀನ ಮಾತ್ರ ಕನಿಷ್ಠ ಮಾನವೀಯತೆಯನ್ನೂ ತೋರದೆ ಭಾರತದ ಕಡೆ ಬೆರಳು ಮಾಡಿ ಅವಹೇಳನ ಮಾಡುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Baltimore bridge: ಬಾಲ್ಟಿಮೋರ್ ಸೇತುವೆ ಕುಸಿತ: ಇಬ್ಬರ ಮೃತದೇಹ ಹೊರತೆಗೆದ ರಕ್ಷಣಾ ತಂಡ
America: ಕಾನೂನು ಸಮರದಲ್ಲಿ ಹೈರಾಣ-ಹಣ ಸಂಗ್ರಹಕ್ಕಾಗಿ ಟ್ರಂಪ್ ಬೈಬಲ್ ಮಾರಾಟ!
Baltimore bridge collapse; ಆರು ಕಾರ್ಮಿಕರು ನಾಪತ್ತೆ: ಪತ್ತೆ ಕಾರ್ಯ ಸ್ಥಗಿತ
Anjali Chakra – Sufi Malik; ಮದುವೆಗೂ ಮುನ್ನ ಭಾರತ-ಪಾಕ್ ಸಲಿಂಗಿ ಜೋಡಿ ಬ್ರೇಕಪ್!
H5N1: ವಿಯೆಟ್ನಾಂನಲ್ಲಿ ಹಕ್ಕಿಜ್ವರಕ್ಕೆ ಮೊದಲ ಬಲಿ!
MUST WATCH
ಹೊಸ ಸೇರ್ಪಡೆ
Congress candidate: ನಾನು ಹುಟ್ಟಿದಾಗ ಒಕ್ಕಲಿಗ, ಬೆಳೆಯುತ್ತ ವಿಶ್ವಮಾನವ: ಲಕ್ಷ್ಮಣ್
Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ
Dinesh Gundu Rao: ಕ್ಷಯ ರೋಗ ನಿಯಂತ್ರಣ ಔಷಧ ಪೂರೈಕೆಗೆ ಕೇಂದ್ರಕ್ಕೆ ಮನವಿ; ದಿನೇಶ್
Lok Sabha elections: ಸಂಸದ ಬಸವರಾಜುಗೆ “ಗೋ ಬ್ಯಾಕ್’ ಎಂದ ಬಿಜೆಪಿಗರು!
Narayan Gowda: ಹೆಚ್ಚಿನ ಮತಗಳಿಂದ ಎಚ್ಡಿಕೆ ಗೆಲ್ಲಿಸುತ್ತೇವೆ: ನಾರಾಯಣ ಗೌಡ