ತವಾಂಗ್‌ನಲ್ಲಿ ಚೀನ ಕಿರಿಕ್‌; ಹೆಚ್ಚಿದ ಚೀನಿ ಸೈನಿಕರ ಗಸ್ತು

ಪದೇ ಪದೆ ಹಿರಿಯ ಅಧಿಕಾರಿಗಳ ಭೇಟಿ

Team Udayavani, Oct 27, 2021, 6:15 AM IST

ತವಾಂಗ್‌ನಲ್ಲಿ ಚೀನ ಕಿರಿಕ್‌; ಹೆಚ್ಚಿದ ಚೀನಿ ಸೈನಿಕರ ಗಸ್ತು

ತವಾಂಗ್‌/ಹೊಸದಿಲ್ಲಿ: ಲಡಾಖ್‌ನ ಪೂರ್ವ ಭಾಗ ದಲ್ಲಿ ಕಿತಾಪತಿ ಮಾಡಿ, ಚೀನ ಪೆಟ್ಟು ತಿಂದಿದೆ. ಅದರಿಂದ ಪಾಠ ಕಲಿಯದ ಭಾರತದ ನೆರೆಯ ರಾಷ್ಟ್ರ ಈಗ ಅರುಣಾಚಲ ಪ್ರದೇಶದ ತವಾಂಗ್‌ನಲ್ಲಿ ಕೂಡ ಗಸ್ತು ಬಿಗಿಗೊಳಿಸಿದೆ. ಈಗಾಗಲೇ ಅರುಣಾಚಲ ಪ್ರದೇಶ ತನಗೆ ಸೇರಿದ್ದು ಎಂದು ವಾದಿಸುವ ಚೀನ, ಇತ್ತೀಚೆಗೆ ಉಪರಾಷ್ಟ್ರತಿ ಎಂ. ವೆಂಕಯ್ಯ ನಾಯ್ಡು ನೀಡಿದ್ದ ಭೇಟಿಗೂ ತಕರಾರು ತೆಗೆದಿತ್ತು. ತವಾಂಗ್‌ ವ್ಯಾಪ್ತಿಯಲ್ಲಿ ಚೀನ ಸೇನೆಯಲ್ಲಿ ಹೊಸತಾಗಿ ರಚಿಸಲಾದ ತುಕಡಿಗಳನ್ನು ನಿಯೋಜಿಸಿದೆ. ಜತೆಗೆ ಸೇನೆಯ ಹಿರಿಯ ಅಧಿಕಾರಿಗಳು ಪದೇ ಪದೆ ಆ ಸ್ಥಳಕ್ಕೆ ಭೇಟಿ ನೀಡುತ್ತಿದ್ದಾರೆ.

ದೇಶದ ಸೇನೆ ಕಂಡುಕೊಂಡ ಪ್ರಕಾರ ತವಾಂಗ್‌ನ ಲುಂಗ್ರೋ ಲಾ, ಝಿಮಿತಾಂಗ್‌ ಮತ್ತು ಭುಮ್‌ ಲಾ ಪ್ರದೇಶಗಳಲ್ಲಿ ಚೀನ ಸೇನೆಯ ವಿವಿಧ ರೀತಿಯ ಚಟುವಟಿಕೆಗಳು ಬಿರುಸಾಗಿವೆ. ಅದಕ್ಕೆ ಪೂರಕವಾಗಿ ಕೇಂದ್ರ ಸರಕಾರದಿಂದ ಈಗಾಗಲೇ ಹಲವಾರು ಮೂಲ ಸೌಕರ್ಯಗಳನ್ನು ಅಭಿವೃದ್ಧಿಗೊಳಿಸುವ ಕಾಮಗಾರಿ ಭರದಿಂದ ಸಾಗಿದೆ. ಈ ಮೂಲಕ ಚೀನದ ದುಃಸ್ಸಾಹಸ ತಡೆಯಲು ಎಲ್ಲ ರೀತಿಯ ಕ್ರಮಗಳು ವಿಳಂಬವಿಲ್ಲದೆ ಸಾಗಿದೆ ಎಂದು ಭೂ ಸೇನೆಯ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ಲುಂಗ್ರೋ ಲಾದಲ್ಲಿ 2020ರ ಜನವರಿಯಿಂದ ಪ್ರಸಕ್ತ ವರ್ಷದ ಅಕ್ಟೋಬರ್‌ ವರೆಗೆ 90 ಬಾರಿ ಚೀನ ಗಸ್ತು ನಡೆಸಿದೆ. 2018 ಮತ್ತು 2019ಕ್ಕೆ ಹೋಲಿಕೆ ಮಾಡಿದರೆ, ಅದರ ಪ್ರಮಾಣ ಹೆಚ್ಚಾಗಿದೆ.

ಕಳವಳಕಾರಿ ಅಂಶವೆಂದರೆ, ಲಡಾಖ್‌ನ ಪೂರ್ವ ಭಾಗದಲ್ಲಿ ದಾಳಿ ನಡೆಸುವುದಕ್ಕಿಂತ ಮೊದಲೇ ತವಾಂಗ್‌ ವ್ಯಾಪ್ತಿಯಲ್ಲಿ ಗಸ್ತು ತಿರುಗುವುದನ್ನು ಹೆಚ್ಚು ಮಾಡಿತ್ತು ಚೀನ ಸೇನೆ. 2018-19ನೇ ಸಾಲಿನಲ್ಲಿ 10, 2020-21ನೇ ಸಾಲಿನಲ್ಲಿ ಸೆಪ್ಟೆಂಬರ್‌ ವರೆಗಿನ ಮಾಹಿತಿ ಪ್ರಕಾರ 35 ಬಾರಿ ಡ್ರ್ಯಾಗನ್‌ ಸೇನೆ ಅಲ್ಲಿ ಠಳಾಯಿಸಿತ್ತು.

1986ರಿಂದ ನಿಯಂತ್ರಣ: ಲುಂಗ್ರೋ ಲಾ ಮತ್ತು ಝಿಮಿತಾಂಗ್‌ ವಲಯದಲ್ಲಿ 1986-87ನೇ ಸಾಲಿನಲ್ಲಿ ಉಂಟಾಗಿದ್ದ ಬಿಗುವಿನ ಪರಿಸ್ಥಿತಿ ಬಳಿಕ ಭಾರತದ ಸೇನೆ ಆ ಪ್ರದೇಶವನ್ನು ತನ್ನ ನಿಯಂತ್ರಣಕ್ಕೆ ಪಡೆದುಕೊಂಡಿತು. ಝಮಿತಾಂಗ್‌ ವಲಯದಲ್ಲಿ ಕೂಡ ಚೀನ ಸೇನೆಯ ಗಸ್ತು ಕಳೆದ ತಿಂಗಳು 24ಕ್ಕೆ ಏರಿಕೆ ಯಾಗಿತ್ತು ಎಂಬ ಅಂಶವೂ ದೃಢಪಟ್ಟಿದೆ.

ಇದನ್ನೂ ಓದಿ:ಎವೈ.4.2 ಆತಂಕಕಾರಿಯಲ್ಲ: ಐಸಿಎಂಆರ್‌ ವಿಜ್ಞಾನಿ ಸಮೀರನ್‌ ಪಾಂಡಾ ಪ್ರತಿಪಾದನೆ

ಲಡಾಖ್‌ನಲ್ಲಿ ಸಂಘರ್ಷದ ಬಳಿಕ ಎರಡೂ ದೇಶ ಗಳ ನಡುವೆ ಹಲವು ಸುತ್ತಿನ ಸೇನಾಧಿಕಾರಿಗಳ ಮಟ್ಟದ ಮಾತುಕತೆ ನಡೆದಿದ್ದರೂ ಪೂರ್ಣ ಫ‌ಲಪ್ರದ ಎಂಬ ಫ‌ಲಿತಾಂಶ ಪ್ರಕಟವಾಗಿಲ್ಲ. ಗೋಗ್ರಾ ಸೇರಿದಂತೆ ಹಲವು ಮುಂಚೂಣಿ ನೆಲೆಗಳಿಂದ ಸೇನೆ ವಾಪಸ್‌ ಪಡೆಯು ವುದರಲ್ಲಿ ಒಮ್ಮತಾಭಿಪ್ರಾಯ ಮೂಡಿಲ್ಲ.

ಸನ್ನದ್ಧ ಸ್ಥಿತಿಯಲ್ಲಿ: ಪೂರ್ವ ವಲಯಕ್ಕೆ ಸಂಬಂಧಿಸಿದಂತೆ ಚೀನ ವಿರುದ್ಧ ದೇಶದ ಸೇನೆ ಸನ್ನದ್ಧ ಸ್ಥಿತಿಯಲ್ಲಿಯೇ ಇದೆ. ಎಂ777 ಅಲ್ಟ್ರಾ ಲೈಟ್‌ ಹೊವಿಟ್ಜರ್‌, ಸಿ ಎಚ್‌-47ಎಫ್ ಚಿನೂಕ್‌ ಹೆಲಿಕಾಪ್ಟರ್‌ಗಳು, ಬೋಫೋರ್ಸ್‌ ಗನ್‌ಗಳನ್ನು ಒಳಗೊಂಡ ಅತ್ಯಾಧು ನಿಕ ಶಸ್ತ್ರಾಸ್ತ್ರಗಳನ್ನು ನಿಯೋಜಿಸಲಾಗಿದೆ.

ಪಿನಾಕಾ ನಿಯೋಜನೆ
ದೇಶಿಯವಾಗಿಯೇ ಅಭಿವೃದ್ಧಿಪಡಿಸಲಾಗಿರುವ ಪಿನಾಕಾ ಕ್ಷಿಪಣಿಯನ್ನೂ ಚೀನ ವಿರುದ್ಧ ಗುರಿ ಇರಿಸಲಾಗಿದೆ. 75 ಕಿ.ಮೀ. ದೂರದ ವೈರಿ ನೆಲೆಗಳನ್ನು ಛೇದಿಸುವ ಸಾಮರ್ಥ್ಯ ಇರುವ ಆ ಕ್ಷಿಪಣಿಯ ಅತ್ಯಾಧುನಿಕ ಆವೃತ್ತಿಯನ್ನು ಎಲ್‌ಎಸಿ ವ್ಯಾಪ್ತಿಯಲ್ಲಿ ನಿಯೋಜಿಸಲು ಇನ್ನಷ್ಟೇ ಅನುಮತಿ ನೀಡಲಾಗಿದೆ.

ಹೊಸ ಮಾಹಿತಿ ಏನು?
ಚೀನ ಸೇನೆಯ ಅತ್ಯುನ್ನತ ಅಧಿಕಾರಿಗಳ ಭೇಟಿ, ಪರಿಸ್ಥಿತಿ ಅವಲೋಕನ
ಸೇನೆಯ ಹೊಸ ತುಕಡಿಗಳ ನಿಯೋಜನೆ, ಹೆಚ್ಚಿದ ಗಸ್ತು

ದೇಶದ ಸಿದ್ಧತೆ ಏನು?
ಉಪಗ್ರಹ ಆಧಾರಿತ ಮಾಹಿತಿ ಮೂಲಕ ಸ್ಥಳದಲ್ಲಿ ಹೆಚ್ಚಿನ ಭದ್ರತೆ
ತವಾಂಗ್‌ ವ್ಯಾಪ್ತಿಯಲ್ಲಿ ಸೇನೆಗೆ ಮೂಲ ಸೌಕರ್ಯ ಯೋಜನೆ ಬಲವೃದ್ಧಿ
ಡ್ರೋನ್‌ ಮತ್ತು ಇತರ ಅತ್ಯಾಧುನಿಕ ವ್ಯವಸ್ಥೆ ಮೂಲಕ ಭದ್ರತೆ

 

ಟಾಪ್ ನ್ಯೂಸ್

Aranthodu ಕಾಂಗ್ರೆಸ್‌ ಕಾರ್ಯಕರ್ತನ ಮೇಲೆ ಹಲ್ಲೆ

Aranthodu ಕಾಂಗ್ರೆಸ್‌ ಕಾರ್ಯಕರ್ತನ ಮೇಲೆ ಹಲ್ಲೆ

Madhya Pradesh Rally; ಕೈಯಿಂದ ಮೀಸಲಾತಿ ಕಸಿಯುವ ಯತ್ನ: ಪ್ರಧಾನಿ ಮೋದಿ

Madhya Pradesh Rally; ಕೈಯಿಂದ ಮೀಸಲಾತಿ ಕಸಿಯುವ ಯತ್ನ: ಪ್ರಧಾನಿ ಮೋದಿ

Congress ಅಭ್ಯರ್ಥಿ ಡಿ.ಕೆ. ಸುರೇಶ್‌ 6 ಮಂದಿ ಆಪ್ತರ ಮನೆ ಮೇಲೆ ಐಟಿ ದಾಳಿ

Congress ಅಭ್ಯರ್ಥಿ ಡಿ.ಕೆ. ಸುರೇಶ್‌ 6 ಮಂದಿ ಆಪ್ತರ ಮನೆ ಮೇಲೆ ಐಟಿ ದಾಳಿ

Congress ವಿರುದ್ಧ ಬಿಜೆಪಿ ಕ್ಯೂಆರ್‌ ಕೋಡ್‌ ಸಮರ

Congress ವಿರುದ್ಧ ಬಿಜೆಪಿ ಕ್ಯೂಆರ್‌ ಕೋಡ್‌ ಸಮರ

Lok Sabha Elections; ಕುಮಾರಸ್ವಾಮಿ ಪರ ಕೊನೆಗೂ ಪ್ರಚಾರಕ್ಕೆ ಬಾರದ ಸುಮಲತಾ

Lok Sabha Elections; ಕುಮಾರಸ್ವಾಮಿ ಪರ ಕೊನೆಗೂ ಪ್ರಚಾರಕ್ಕೆ ಬಾರದ ಸುಮಲತಾ

ಮಹಿಳೆಯರಿಗೆ 2 ಸಾವಿರ ಕೊಟ್ಟು ಗಂಡಸರ ಜೇಬಿಗೆ ಕತ್ತರಿ: ಕುಮಾರಸ್ವಾಮಿ

ಮಹಿಳೆಯರಿಗೆ 2 ಸಾವಿರ ಕೊಟ್ಟು ಗಂಡಸರ ಜೇಬಿಗೆ ಕತ್ತರಿ: ಕುಮಾರಸ್ವಾಮಿ

OBC ವರ್ಗಕ್ಕೆ ಕಾಂಗ್ರೆಸ್‌ನಿಂದ ಅನ್ಯಾಯ: ಸುನಿಲ್‌ ಕುಮಾರ್‌

OBC ವರ್ಗಕ್ಕೆ ಕಾಂಗ್ರೆಸ್‌ನಿಂದ ಅನ್ಯಾಯ: ಸುನಿಲ್‌ ಕುಮಾರ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ

Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ

Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್‌ ಗಗನ ಯಾತ್ರೆ

Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್‌ ಗಗನ ಯಾತ್ರೆ

Thailandನಲ್ಲಿ ಗುಜರಿ ಮಾಫಿಯಾದ ಕಿಂಗ್‌ ಪಿನ್‌ ರವಿ ಕಾನಾ, ಪ್ರಿಯತಮೆ ಕಾಜಲ್‌ ಜಾ ಬಂಧನ

Thailandನಲ್ಲಿ ಗುಜರಿ ಮಾಫಿಯಾದ ಕಿಂಗ್‌ ಪಿನ್‌ ರವಿ ಕಾನಾ, ಪ್ರಿಯತಮೆ ಕಾಜಲ್‌ ಜಾ ಬಂಧನ

ತಂಗಿಯ ಸಮಾಧಿ ಸ್ಥಳಕ್ಕೆ  ಭೇಟಿ ನೀಡುವುದನ್ನು ವ್ಲಾಗ್‌ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ

ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್‌ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ

Andhra Student passed away After Getting Trapped In Frozen Kyrgyzstan Waterfall

Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Aranthodu ಕಾಂಗ್ರೆಸ್‌ ಕಾರ್ಯಕರ್ತನ ಮೇಲೆ ಹಲ್ಲೆ

Aranthodu ಕಾಂಗ್ರೆಸ್‌ ಕಾರ್ಯಕರ್ತನ ಮೇಲೆ ಹಲ್ಲೆ

Madhya Pradesh Rally; ಕೈಯಿಂದ ಮೀಸಲಾತಿ ಕಸಿಯುವ ಯತ್ನ: ಪ್ರಧಾನಿ ಮೋದಿ

Madhya Pradesh Rally; ಕೈಯಿಂದ ಮೀಸಲಾತಿ ಕಸಿಯುವ ಯತ್ನ: ಪ್ರಧಾನಿ ಮೋದಿ

ಕೊಲೆಗಾಗಿಯೇ ಚಾಕು ಖರೀದಿಸಿದ್ದ ಫ‌ಯಾಜ್‌: ಮೂರೂವರೆ ತಾಸು ಸ್ಥಳ ಮಹಜರು ಮಾಡಿದ ಸಿಐಡಿ ತಂಡ

ಕೊಲೆಗಾಗಿಯೇ ಚಾಕು ಖರೀದಿಸಿದ್ದ ಫ‌ಯಾಜ್‌: ಮೂರೂವರೆ ತಾಸು ಸ್ಥಳ ಮಹಜರು ಮಾಡಿದ ಸಿಐಡಿ ತಂಡ

Congress ಅಭ್ಯರ್ಥಿ ಡಿ.ಕೆ. ಸುರೇಶ್‌ 6 ಮಂದಿ ಆಪ್ತರ ಮನೆ ಮೇಲೆ ಐಟಿ ದಾಳಿ

Congress ಅಭ್ಯರ್ಥಿ ಡಿ.ಕೆ. ಸುರೇಶ್‌ 6 ಮಂದಿ ಆಪ್ತರ ಮನೆ ಮೇಲೆ ಐಟಿ ದಾಳಿ

Congress ವಿರುದ್ಧ ಬಿಜೆಪಿ ಕ್ಯೂಆರ್‌ ಕೋಡ್‌ ಸಮರ

Congress ವಿರುದ್ಧ ಬಿಜೆಪಿ ಕ್ಯೂಆರ್‌ ಕೋಡ್‌ ಸಮರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.