ಮೂವತ್ತು ಸಾವಿರ ವಿಶ್ವ ಭೂಪಟಗಳನ್ನು ಚೀನಾ ನಾಶಪಡಿಸಿದ್ಯಾಕೆ ಗೊತ್ತಾ?
ಅರುಣಾಚಲಪ್ರದೇಶ ತನ್ನದೆಂದು ಮತ್ತೆ ಚೀನಾ ಕ್ಯಾತೆ...
Team Udayavani, Mar 26, 2019, 1:19 PM IST
ಬೀಜಿಂಗ್ : ವಿವಾದಿತ ಭೂಪ್ರದೇಶಗಳಾಗಿರುವ ಅರುಣಾಚಲ ಪ್ರದೇಶ ಹಾಗೂ ತೈವಾನ್ ಗಳನ್ನು ಚೀನಾದ ಭಾಗಗಳೆಂದು ನಮೂದಿಸದಿರುವ 30,000 ವಿಶ್ವ ಭೂಪಟಗಳನ್ನು ಚೀನಾದ ಕಸ್ಟಮ್ಸ್ ಅಧಿಕಾರಿಗಳು ಇತ್ತೀಚೆಗೆ ನಾಶಪಡಿಸಿದ್ದಾರೆಂದು ಚೀನಾ ಮಾಧ್ಯಮ ವರದಿಗಳಿಂದ ತಿಳಿದುಬಂದಿದೆ. ಈ ಭೂಪಟಗಳನ್ನು ಹೊರ ದೇಶಕ್ಕೆ ರಫ್ತು ಮಾಡಲು ಉದ್ದೇಶಿಸಲಾಗಿತ್ತು ಎಂಬುದಾಗಿ ಸರಕಾರಿ ಸ್ವಾಮ್ಯದ ‘ಗ್ಲೋಬಲ್ ಟೈಮ್ಸ್’ ಪತ್ರಿಕೆ ವರದಿ ಮಾಡಿದೆ.
ಭಾರತದ ಈಶಾನ್ಯ ರಾಜ್ಯಗಳಲ್ಲಿ ಒಂದಾಗಿರುವ ಅರುಣಾಚಲಪ್ರದೇಶವನ್ನು ಚೀನಾ ದಕ್ಷಿಣ ಟಿಬೆಟ್ ನ ಭಾಗವೆಂದು ಪ್ರತಿಪಾದಿಸುತ್ತಾ ಬಂದಿದೆ. ಮಾತ್ರವಲ್ಲದೆ ಭಾರತೀಯ ನಾಯಕರು ಈ ಭಾಗಕ್ಕೆ ಭೇಟಿ ನೀಡುವುದನ್ನು ಚೀನಾ ಪ್ರತೀಬಾರಿ ವಿರೋಧಿಸುತ್ತಲೇ ಇದೆ. ಆದರೆ ಇದಕ್ಕೆ ವ್ಯತಿರಿಕ್ತವಾಗಿ ಭಾರತವು ಅರುಣಾಚಲಪ್ರದೇಶವನ್ನು ತನ್ನದೇ ಭಾಗವೆಂದು ಸಮರ್ಥವಾಗಿ ಪ್ರತಿಪಾದಿಸುತ್ತಿದೆ ಮತ್ತು ಚೀನಾ ದೇಶದ ವಿರೋಧದ ಹೊರತಾಗಿಯೂ ಎಲ್ಲಾ ಪಕ್ಷಗಳ ರಾಜಕೀಯ ಮುಖಂಡರು ಅರುಣಾಚಲಪ್ರದೇಶಕ್ಕೆ ಆಗಾಗ್ಗೆ ಭೇಟಿ ನೀಡುತ್ತಲೇ ಇರುತ್ತಾರೆ. 3488 ಕಿಲೋ ಮೀಟರ್ ಉದ್ದದ ಗಡಿ ಪ್ರದೇಶವನ್ನು ಹಂಚಿಕೊಂಡಿರುವ ಭಾರತ ಮತ್ತು ಚೀನಾ ತಮ್ಮೊಳಗಿನ ಗಡಿ ವಿವಾದವನ್ನು ಪರಿಹರಿಸಿಕೊಳ್ಳಲು ಇದುವರೆಗೂ21 ಸುತ್ತಿನ ರಾಜತಾಂತ್ರಿಕ ಮಾತುಕತೆಗಳನ್ನು ನಡೆಸಿವೆ. ಇನ್ನೊಂದೆಡೆ ದ್ವೀಪರಾಷ್ಟ್ರ ತೈವಾನ್ ಅನ್ನು ತನ್ನದೇ ದೇಶದ ಭಾಗವೆಂದು ಚೀನಾ ಪರಿಗಣಿಸುತ್ತಿದೆ.
‘ಸಾರ್ವಭೌಮತೆ ಮತ್ತು ತನ್ನ ಭೂಭಾಗದ ಸಮಗ್ರತೆ ಯಾವುದೇ ದೇಶದ ಬಹುಮುಖ್ಯ ಅಂಶವಾಗಿರುತ್ತದೆ. ಅಂತಾರಾಷ್ಟ್ರೀಯ ಕಾನೂನಿನಡಿಯಲ್ಲಿ ತೈವಾನ್ ಮತ್ತು ದಕ್ಷಿಣ ಟಿಬೆಟ್ ಚೀನಾ ಭೂಪ್ರದೇಶದ ಅಂಗವೇ ಆಗಿರುವುದರಿಂದ ಅವುಗಳು ನಮಗೆ ಪವಿತ್ರ ಹಾಗೂ ಉಲ್ಲಂಘನಾರಹಿತ ಅಂಶಗಳಾಗಿವೆ. ಈ ಎಲ್ಲಾ ಕಾರಣಗಳಿಂದ ಸದ್ರಿ ನ್ಯೂನತೆಗಳನ್ನು ಹೊಂದಿದ್ದ ಭೂಪಟಗಳನ್ನು ನಾಶ ಮಾಡಿರುವುದು ಕಾನೂನಾತ್ಮಕವೇ ಆಗಿದೆ’ ಎಂದು ಚೀನಾದ ವಿದೇಶಾಂಗ ವ್ಯವಹಾರಗಳ ವಿಶ್ವವಿದ್ಯಾನಿಲಯದ ಅಂತಾರಾಷ್ಟ್ರೀಯ ಕಾನೂನು ವಿಭಾಗದ ಪ್ರಾಚಾರ್ಯರೊಬ್ಬರು ಅಭಿಪ್ರಾಯಪಟ್ಟಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ
Thailandನಲ್ಲಿ ಗುಜರಿ ಮಾಫಿಯಾದ ಕಿಂಗ್ ಪಿನ್ ರವಿ ಕಾನಾ, ಪ್ರಿಯತಮೆ ಕಾಜಲ್ ಜಾ ಬಂಧನ
ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ
Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು
MUST WATCH
ಹೊಸ ಸೇರ್ಪಡೆ
Lok Sabha Election 2024; ನಿಮ್ಮ ಮತವನ್ನು ಮಾರಿಕೊಳ್ಳಬೇಡಿ: ಗಣ್ಯರ ಮನವಿ
Daily Horoscope: ಉದ್ಯೋಗದಲ್ಲಿ ಮೇಲಧಿಕಾರಿಗಳಿಗೆ ತೃಪ್ತಿ, ಅಪೇಕ್ಷಿತ ಆರ್ಥಿಕ ನೆರವು ಲಭ್ಯ
Modi ಹಸಿ ಸುಳ್ಳು: ಸಿಎಂ ಸಿದ್ದರಾಮಯ್ಯ ಕೆಂಡ; ಒಬಿಸಿ, ಎಸ್ಸಿ ಮೀಸಲಾತಿ ಹೇಳಿಕೆಗೆ ವಿರೋಧ
Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ
Lok Sabha Election; ಹಂತ 1: 14 ಕ್ಷೇತ್ರಗಳ ಬಹಿರಂಗ ಪ್ರಚಾರ ಅಂತ್ಯ: ನಾಳೆ ಮತದಾನ