ಕೆನಡಾದ ಪ್ರಧಾನಿ ಪತ್ನಿಗೆ ಕೊರೊನಾ ಸೋಂಕು
ಗೃಹದಿಂದಲೇ ಆಡಳಿತ ನಡೆಸುತ್ತಿಸುತ್ತಿರುವ ಜಸ್ಟಿನ್ ಟ್ರಾಡೋ
Team Udayavani, Mar 14, 2020, 6:34 PM IST
ಟೊರಾಂಟೋ: ಕೆನಡಾದ ಸಂಸತ್ ಸ್ಥಗಿತಗೊಳಿಸಿ, ಪ್ರಧಾನಿ ಜಸ್ಟಿನ್ ಟ್ರಾಡೋ ಅವರು ತಮ್ಮ ಮನೆಯಿಂದಲೇ ಆಡಳಿತ ನಡೆಸುತ್ತಿದ್ದಾರೆ. ಹೊರ ದೇಶಗಳ ಪ್ರಯಾಣದಿಂದ ದೂರವಿರಿ ಎಂದು ಸಲಹೆ ನೀಡಿದ್ದಾರೆ. ಪತ್ನಿಗೆ ಕರೊನಾ ಸೋಂಕು ಇರುವ ಕಾರಣ ಜಸ್ಟಿನ್ ಅವರು ಯಾರೊಂದಿಗೂ ಸಂಪರ್ಕ ಹೊಂದುತ್ತಿಲ್ಲ.
ಯಾರೂ ಹ್ಯಾಂಡ್ಶೇಕ್ ಮತ್ತು ಚುಂಬನಗಳಿಂದ (ಕಿಸ್) ದೂರವಿರಬೇಕು ಎಂದು ಇಲ್ಲಿನ ಸಾರ್ವಜನಿಕ ಆರೋಗ್ಯ ಮುಖ್ಯಾಧಿಕಾರಿ ಡಾ.ತೇರೆಸಾ ಕೂಡಾ ಸಲಹೆ ನೀಡಿದ್ದಾರೆ. ಸಂಗೀತ ಕಚೇರಿ ಸೇರಿದಂತೆ ದೊಡ್ಡ ಕಾರ್ಯಕ್ರಮಗಳನ್ನು ರದ್ದುಗೊಳಿಸುವಂತೆ ಕೆನಡಾ ಸರಕಾರ ಸೂಚಿಸಿದೆ. ಅಷ್ಟೇ ಅಲ್ಲದೆ, 500ಕ್ಕೂ ಕ್ರೂಸ್ ಹಡಗುಗಳ ಸಂಚಾರ ಜುಲೈ 1ರವರೆಗೂ ಬಂದ್ ಮಾಡಲಾಗಿದೆ ಎಂದು ಸಾರಿಗೆ ಸಚಿವ ಮಾರ್ಕ್ ಗಾರ್ನಿಯೋ ಹೇಳಿದ್ದಾರೆ.
ವಿಮಾನಗಳ ನಿರ್ಬಂಧನ
ಕೆನಡಾಕ್ಕೆ ಹಿಂದಿರುಗುವ ಸಾಗರೋತ್ತರ ವಿಮಾನಗಳನ್ನು ನಿರ್ಬಂಧಿಸಲು ಚಿಂತನೆ ನಡೆಸಲಾಗುತ್ತಿದೆ. ವೈರಸ್ಗೆ ಕಡಿವಾಣ ಹಾಕಲು ಕನಿಷ್ಠ ಐದು ವಾರಗಳ ಕಾಲ ಹೌಸ್ ಆಫ್ ಕಾಮನ್ಸ್ ಅನ್ನು ಸ್ಥಗಿತಗೊಳಿಸಲಾಗಿದೆ. ಸಂಸತ್ತಿನ ಎಲ್ಲ ಪಕ್ಷಗಳು ಇದಕ್ಕೆ ಸಮ್ಮತಿ ಸೂಚಿಸಿವೆ. ಸದನದ ಮುಂದಿನ ಸಭೆ ಏಪ್ರಿಲ್ 20 ರ ಸೋಮವಾರ ನಡೆಯಲಿದೆ.
ಬಜೆಟ್ ಮುಂದೂಡಿಕೆ
ಮಾರ್ಚ್ 30 ರಂದು ಬಜೆಟ್ ಮಂಡಿಸಬೇಕಿತ್ತು. ಬಜೆಟ್ ಮಂಡಿಸುವ ಕುರಿತು ಮುಂದಿನ ದಿನಗಳಲ್ಲಿ ಘೋಷಿಸಲಾಗುವುದು ಎಂದು ಹಣಕಾಸು ಸಚಿವ ಬಿಲ್ ಮೊರ್ನಿಯೊ ತಿಳಿಸಿದ್ದಾರೆ. ಕೊರೊನಾ ಕುರಿತು ಸಂಬಂಧಿಸಿದಂತೆ ಪ್ರಧಾನಿ ಟ್ರಾಡೋ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಬ್ರಿಡಿಷ್ ಪ್ರಧಾನಿ ಬೋರಿಸ್ ಜಾನ್ಸನ್ ಅವರೊಂದಿಗೆ ಮನೆಯಿಂದಲೇ ಕರೆ ಮಾಡಿ ಚರ್ಚಿಸಿದ್ದಾರೆ. ಪತ್ನಿ ಸೋಫಿ ಟ್ರಾಡೊ ಅವರು ಬ್ರಿಟನ್ನಿಂದ ಮರಳಿದ ಬಳಿಕ ಕೊರೊನಾ ವೈರಸ್ ಸೋಂಕು ಪಾಸಿಟಿವ್ ಕಾಣಿಸಿಕೊಂಡಿತ್ತು. ಈ ಪರಿಣಾಮ ಮನೆಯಲ್ಲಿ ಟ್ರಾಡೋ ಅವರು ಪ್ರತ್ಯೇಕವಾಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ
Thailandನಲ್ಲಿ ಗುಜರಿ ಮಾಫಿಯಾದ ಕಿಂಗ್ ಪಿನ್ ರವಿ ಕಾನಾ, ಪ್ರಿಯತಮೆ ಕಾಜಲ್ ಜಾ ಬಂಧನ
ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ
Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು
MUST WATCH
ಹೊಸ ಸೇರ್ಪಡೆ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ