ಜರ್ಮನಿ :ನಿತ್ಯ 2 ಲಕ್ಷ ಪರೀಕ್ಷೆಯ ಗುರಿ


Team Udayavani, Mar 31, 2020, 6:35 PM IST

ಜರ್ಮನಿ :ನಿತ್ಯ 2 ಲಕ್ಷ ಪರೀಕ್ಷೆಯ ಗುರಿ

ಜರ್ಮನಿ : ಕೋವಿಡ್ 19 ವೈರಸ್‌ ಜರ್ಮನಿಗೂ ಅತಿ ದೊಡ್ಡತಲೆ ನೋವಾಗಿದೆ. ವೈರಸ್‌ ವ್ಯಾಪಕವಾಗಿ ಹಬ್ಬುವುದನ್ನು ನಿಯಂತ್ರಿಸುವ ಮತ್ತು ಗುರುತಿಸುವ ಭಾಗವಾಗಿಅದು ನಿತ್ಯ 2 ಲಕ್ಷ ಮಂದಿಯ ಪರೀಕ್ಷೆ ನಡೆಸಲು ಉದ್ದೇಶಿಸಿದೆ. ಇದಕ್ಕಾಗಿ ಭರದ ಸಿದ್ಧತೆ ನಡೆಸಿದೆ.

ಈ ವಿಷಯದಲ್ಲಿ ಅದು ದ.ಕೊರಿಯಾವನ್ನು ಮಾದರಿಯನ್ನಾಗಿ ತೆಗೆದುಕೊಂಡಿದ್ದು, ಪಾಸಿಟಿವ್‌ ಕೇಸ್‌ಗಳು ಗುರುತಿಸುವಿಕೆ, ಪ್ರದೇಶ, ವ್ಯಕ್ತಿಗಳನ್ನು ಗುರುತಿಸಲು ಮೊಬೈಲ್‌ ಸಾಫ್ಟ್‌ವೇರ್‌ ಬಳಕೆ ಉತ್ತೇಜನವನ್ನು ಗಮನಿಸಿದೆ. ಈಗಾಗಲೇ ಜರ್ಮನಿ ವಿಶ್ವದಲ್ಲೇ ಅತ್ಯಧಿಕ ವೇಗದಲ್ಲಿ ಕೋವಿಡ್ 19 ಪರೀಕ್ಷೆಯನ್ನು ಅತಿ ವೇಗವಾಗಿ ನಡೆಸುವ ದೇಶವಾಗಿ ಹೊರಹೊಮ್ಮಿದೆ. ಅಲ್ಲಿ ವಾರಕ್ಕೆ 5 ಲಕ್ಷ ಮಂದಿಯ ಪರೀಕ್ಷೆಯನ್ನು ಮಾಡಲಾಗುತ್ತಿದೆ.

ಸಣ್ಣ ಪ್ರಮಾಣದಲ್ಲಿಜನರಿಗೆ ಕೋವಿಡ್ 19 ಲಕ್ಷಣಗಳು ಕಂಡರೂ ಪರೀಕ್ಷೆ ಮಾಡುವ ವ್ಯವಸ್ಥೆಯನ್ನು ತರುವುದಾಗಿ ಅದು ಹೇಳಿದೆ. ಈ ಮೂಲಕ ರೋಗ ವ್ಯಾಪಕವಾಗುವುದನ್ನು ತಡೆಯಲಾಗುವುದು ಎಂದು ಹೇಳಿದೆ.

ಗುರುತಿಸುವಿಕೆ, ಪತ್ತೆ ಮತ್ತು ಚಿಕಿತ್ಸೆ ವಿಧಾನದಡಿ ಅತಿ ವೇಗವಾಗಿ ಕೊರೊನಾವನ್ನು ನಿಯಂತ್ರಣಕ್ಕೆ ತರುವ ಉದ್ದೇಶವಿದೆ ಎಂದು ಅಲ್ಲಿನ ಪ್ರಧಾನಿ ಏಂಜೆಲಾ ಮಾರ್ಕೆಲ್‌ ಹೇಳಿದ್ದಾರೆ.

ಸದ್ಯ ಜರ್ಮನಿಯಲ್ಲಿ 57298 ಪ್ರಕರಣಗಳು ಪತ್ತೆಯಾಗಿದ್ದು, ನಿನ್ನೆ ಒಂದೇ ದಿನದಲ್ಲಿ 4751 ಪ್ರಕರಣಗಳು ಹೆಚ್ಚಾಗಿದ್ದವು. ದ.ಕೊರಿಯಾ ರೀತಿ ಕಾರ್ಯವೆಸಗಲು ಜರ್ಮನಿಗೆ ತೊಡಕಾದ ವಿಚಾರವೆಂದರೆ, ಜನರನ್ನು ಟ್ರ್ಯಾಕ್‌ ಮಾಡುವ ವ್ಯವಸ್ಥೆ ಹೆಚ್ಚಾಗಿ ಇಲ್ಲದೇಇರುವುದು. ಕ್ರೆಡಿಟ್‌ಕಾರ್ಡ್‌ ಪಾವತಿ ಸೇರಿದಂತೆ ಎಲ್ಲ ರೀತಿಯಲ್ಲಿ ಜನರನ್ನು ಟ್ರ್ಯಾಕಿಂಗ್‌ ಮಾಡುವ ವ್ಯವಸ್ಥೆ (ಫೇಸ್‌ರೆಕಗ್ನಿಶನ್‌. ಕರೆ, ಮೊಬೈಲ್‌ಟವರ್‌ಲೊಕೇಶನ್‌ ಹಿಸ್ಟರಿ) ಇತ್ಯಾದಿಗಳನ್ನು ದ.ಕೊರಿಯಾ ಪರಿಣಾಮಕಾರಿಯಾಗಿ ಹೊಂದಿದೆ.

ಆದರೆ ಜರ್ಮನಿ ಜನರ ಬಗ್ಗೆ ಇಷ್ಟೊಂದು ಮಾಹಿತಿಗಳನ್ನು ಬಹು ಹಿಂದಿನಿಂದಲೇ ಕಲೆ ಹಾಕುವ ರೂಢಿಯನ್ನು ಹೊಂದಿಲ್ಲ. ಆದ್ದರಿಂದ ಇದನ್ನು ಮುಂದೆ ಪರಿಣಾಮಕಾರಿಯಾಗಿ ಮಾಡಬೇಕೆಂದು ತೀರ್ಮಾನಿಸುತ್ತಿದೆ. ಜತೆಗೆ ಇದನ್ನು ಇಟ್ಟುಕೊಂಡು ರೋಗಿಗಳ ಸಂಪರ್ಕಕ್ಕೆ ಬಂದವರನ್ನು ಪರಿಣಾಮಕಾರಿಯಾಗಿ ಗುರುತಿಸಬಹುದು ಎನ್ನುವ ಅರಿವು ಅದಕ್ಕಾಗಿದೆ. ಅಲ್ಲದೇ ಮುಂದಿನ ಒಂದು ವಾರದಲ್ಲಿ ರೋಗಿಗಳ ಸಂಖ್ಯೆದುಪ್ಪಟ್ಟಾಗುವ ಸಾಧ್ಯತೆ ಇದ್ದು ಕೂಡಲೇ ಪರೀಕ್ಷೆಯನ್ನು ಇನ್ನಷ್ಟು ವೇಗಗೊಳಿಸುವ ಇರಾದೆ ಅದರದ್ದು. ಈ ಕಾರಣ ಮುಂದಿನ ದಿನಗಳಲ್ಲಿ ದೇಶದ ಜನರನ್ನು ಸಾಮೂಹಿಕ ಪರೀಕ್ಷೆಗೆ ಒಳಪಡಿಸುವ ಉದ್ದೇಶವನ್ನೂ ಅಲ್ಲಿಯ ಸರಕಾರ ಹೊಂದಿದೆ.

ಕೋವಿಡ್ 19 ವೈರಸ್‌ ವಿಚಾರದಲ್ಲಿ ಈಗಾಗಲೇ ಇತರ ನೆರೆಹೊರೆಯ ದೇಶಗಳಿಗಿಂತ ಕಡಿಮೆ ಸಾವಿನ ಪ್ರಮಾಣವನ್ನುಜರ್ಮನಿ ಹೊಂದಿದೆ. ಅಲ್ಲಿನ ಸಾವಿನ ಪ್ರಮಾಣ ಶೇ.08ರಷ್ಟಿದ್ದು ಇದು ಕಳೆದೊಂದು ವಾರದಿಂದ ಶೇ.08ರಷ್ಟಾಗಿತ್ತು. ಇದೇ ವೇಳೆ ಇಟಲಿಯಲ್ಲಿ ಶೇ.11.0 ಮತ್ತು ಸ್ಪೇನ್‌ ಶೇ.8.3 ಮತ್ತು ಫ್ರಾನ್ಸ್ ಶೇ.6.5 ಮತ್ತು ಬ್ರಿಟನ್‌ನಲ್ಲಿ ಶೇ.6.3ರಷ್ಟಾಗಿತ್ತು.

ಟಾಪ್ ನ್ಯೂಸ್

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

1-pak

Pak ಆತ್ಮಾಹುತಿ ದಾಳಿ: ಐವರು ಜಪಾನೀಯರು ಪಾರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-pak

Pak ಆತ್ಮಾಹುತಿ ದಾಳಿ: ಐವರು ಜಪಾನೀಯರು ಪಾರು

Israel – Iran: ಕ್ಷಿಪಣಿ ದಾಳಿಯ ಮೂಲಕ ಸೇಡು ತೀರಿಸಿಕೊಂಡ ಇಸ್ರೇಲ್; ಎಚ್ಚರಿಕೆ ನೀಡಿದ ಇರಾನ್

Israel – Iran: ಕ್ಷಿಪಣಿ ದಾಳಿಯ ಮೂಲಕ ಸೇಡು ತೀರಿಸಿಕೊಂಡ ಇಸ್ರೇಲ್; ಎಚ್ಚರಿಕೆ ನೀಡಿದ ಇರಾನ್

Russia War: ಉಕ್ರೇನ್‌ ಮೇಲೆ ರಷ್ಯಾ ಭೀಕರ ದಾಳಿ-17 ಮಂದಿ ಮೃತ್ಯು; ನೆರವಿಗಾಗಿ ಮನವಿ

Russia War: ಉಕ್ರೇನ್‌ ಮೇಲೆ ರಷ್ಯಾ ಭೀಕರ ದಾಳಿ-17 ಮಂದಿ ಮೃತ್ಯು; ನೆರವಿಗಾಗಿ ಮನವಿ

ನನ್ನ ಪತ್ನಿಗೆ ಏನಾದರೂ ಆದರೆ…: ಸೇನಾ ಮುಖ್ಯಸ್ಥರಿಗೆ ಎಚ್ಚರಿಕೆ ನೀಡಿದ ಇಮ್ರಾನ್ ಖಾನ್

ನನ್ನ ಪತ್ನಿಗೆ ಏನಾದರೂ ಆದರೆ…: ಸೇನಾ ಮುಖ್ಯಸ್ಥರಿಗೆ ಎಚ್ಚರಿಕೆ ನೀಡಿದ ಇಮ್ರಾನ್ ಖಾನ್

Heavy Rain: ಮರಳುಗಾಡು ದುಬೈನಲ್ಲಿ ಧಾರಾಕಾರ ಮಳೆ, ಪ್ರವಾಹ ಪರಿಸ್ಥಿತಿ-ಜನಜೀವನ ಅಸ್ತವ್ಯಸ್ತ

Heavy Rain: ಮರಳುಗಾಡು ದುಬೈನಲ್ಲಿ ಧಾರಾಕಾರ ಮಳೆ, ಪ್ರವಾಹ ಪರಿಸ್ಥಿತಿ-ಜನಜೀವನ ಅಸ್ತವ್ಯಸ್ತ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

1-wqeqweqweeqweqe

Brahmos; ಫಿಲಿಪ್ಪೀನ್ಸ್‌ಗೆ ಬ್ರಹ್ಮೋಸ್‌: ಭಾರತದ ಮೊದಲ ರಫ್ತು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.