ಪಾಕ್ ಪ್ರವಾಹ ಮೊಹೆಂಜೊದಾರೋಗೆ ಹಾನಿ; ಇದು ವಿಶ್ವದ ಹಳೆಯ ನಾಗರಿಕತೆಯಲ್ಲಿ ಒಂದು
ನಿರಂತರ ಮಳೆಯಿಂದಾಗಿ ತಾಣದ ಕೆಲವು ಭಾಗಗಳಿಗೆ ಹಾನಿ
Team Udayavani, Sep 8, 2022, 7:20 AM IST
ವಿಶ್ವದ ಹಳೆಯ ನಾಗರಿಕತೆಯಲ್ಲಿ ಒಂದಾದ ಮೊಹೆಂಜೊದಾರೋ ತನ್ನ ಗತವೈಭವ ಕಳೆದುಕೊಳ್ಳುವ ಸನಿಹದಲ್ಲಿದೆ. ಪಾಕಿಸ್ಥಾನದಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಈ ಆತಂಕ ಉಂಟಾಗಿದೆ. ಮಳೆ ಪ್ರವಾಹದಿಂದಾಗಿ ಹಳೆಯ ನಾಗರಿಕತೆಯ ಕೆಲವು ಭಾಗಗಳಿಗೆ ಹಾನಿಯಾಗಿದೆ. ಇದರಿಂದ ಯುನೆಸ್ಕೋದ ವಿಶ್ವ ಪಾರಂಪರಿಕ ತಾಣ ಎಂಬ ಖ್ಯಾತಿಯನ್ನು ಕಳೆದುಕೊಳ್ಳುವ ಆತಂಕ ಎದುರಾಗಿದೆ.
5,000 ವರ್ಷಗಳ ಇತಿಹಾಸ
ಮೊಹೆಂಜೊದಾರೋ ನಾಗರಿಕತೆಗೆ ಸುಮಾರು 5,000 ವರ್ಷಗಳ ಇತಿಹಾಸವಿದೆ. ಹರಪ್ಪ ಮತ್ತು ಮೊಹೆಂಜೊದಾರೋ ವಿಶ್ವದ ಪ್ರಥಮ ನಾಗರಿಕತೆ ಎಂಬ ಖ್ಯಾತಿಯನ್ನು ಪಡೆದಿದೆ. ಸಿಂಧೂ ನದಿ ತೀರದಲ್ಲಿ ಉಗಮವಾದ ಮೊಹೆಂಜೊದಾರೋ ನಾಗರಿಕತೆಯು, ಈಜಿಪ್ಟ್ ಮತ್ತು ಮೆಸಪೊಟೊಮಿಯಾ ನಾಗರಿಕತೆಗಿಂತ ಬಹಳ ಹಳೆಯದಾಗಿದೆ. ಈ ತಾಣವು ದಕ್ಷಿಣ ಏಷ್ಯಾದಲ್ಲಿ ಉತ್ತಮ ಸಂರಕ್ಷಿತ ವಸಾಹತುಗಳಲ್ಲಿ ಒಂದಾಗಿದೆ.
ಯಾವ ಭಾಗದಲ್ಲಿದೆ?
ಸದ್ಯ ಅದು ಪಾಕಿಸ್ಥಾನದ ಸಿಂಧ್ ಪ್ರಾಂತದಲ್ಲಿ ಇದೆ. ಸುಕ್ಕೂರ್ ನಗರದ ನೈಋತ್ಯಕ್ಕೆ 80 ಕಿ.ಮೀ. ದೂರದಲ್ಲಿ ಮೊಹೆಂಜೊದಾರೋ ಇದೆ. ಇನ್ನೊಂದು ಹಳೆಯ ನಾಗರಿಕತೆ ಯಾದ ಹರಪ್ಪಾ, ಇದು ಪಾಕಿಸ್ಥಾನದ ಪಂಜಾಬ್ ಪ್ರಾಂತದಲ್ಲಿ ವಾಯವ್ಯಕ್ಕೆ 640 ಕಿ.ಮೀ. ದೂರದಲ್ಲಿದೆ.
ನಗರ ಯೋಜನೆಗೆ ಹೆಸರುವಾಸಿ
ಈ ತಾಣವು ನಗರ ಯೋಜನೆಗೆ ಹೆಸರುವಾಸಿಯಾಗಿದೆ. ಇಟ್ಟಿಗೆಗಳಿಂದ ನಿರ್ಮಿಸಿರುವ ಪಾದಚಾರಿ ಮಾರ್ಗ, ಅಭಿವೃದ್ಧಿಪಡಿಸಲಾದ ನೀರು ಸರಬರಾಜು, ಒಳಚರಂಡಿ ಮತ್ತು ಮುಚ್ಚಿದ ಒಳಚರಂಡಿ ವ್ಯವಸ್ಥೆ, ಶೌಚಾಲಯ ವ್ಯವಸ್ಥೆ, ಸುಸಜ್ಜಿತ ಮನೆಗಳು ಸೇರಿವೆ.
ನಿರಂತರ ಮಳೆಯಿಂದ ಹಾನಿ
1922ರಲ್ಲಿ ಮೊದಲ ಬಾರಿಗೆ ಮೊಹೆಂಜೊದಾರೋ ನಾಗರಿಕತೆಯ ಪಳೆಯುಳಿಕೆಗಳನ್ನು ಗುರುತಿಸಲಾಯಿತು. ಹವಾಮಾನ ಬದಲಾವಣೆ ಮತ್ತು ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ವಿಶ್ವದ ಪಾರಂಪರಿಕ ತಾಣ ಮೊಹೆಂಜೊದಾರೋ ಹಾನಿಯ ಭೀತಿ ಎದುರಿಸುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Israel – Iran: ಕ್ಷಿಪಣಿ ದಾಳಿಯ ಮೂಲಕ ಸೇಡು ತೀರಿಸಿಕೊಂಡ ಇಸ್ರೇಲ್; ಎಚ್ಚರಿಕೆ ನೀಡಿದ ಇರಾನ್
Russia War: ಉಕ್ರೇನ್ ಮೇಲೆ ರಷ್ಯಾ ಭೀಕರ ದಾಳಿ-17 ಮಂದಿ ಮೃತ್ಯು; ನೆರವಿಗಾಗಿ ಮನವಿ
ನನ್ನ ಪತ್ನಿಗೆ ಏನಾದರೂ ಆದರೆ…: ಸೇನಾ ಮುಖ್ಯಸ್ಥರಿಗೆ ಎಚ್ಚರಿಕೆ ನೀಡಿದ ಇಮ್ರಾನ್ ಖಾನ್
Heavy Rain: ಮರಳುಗಾಡು ದುಬೈನಲ್ಲಿ ಧಾರಾಕಾರ ಮಳೆ, ಪ್ರವಾಹ ಪರಿಸ್ಥಿತಿ-ಜನಜೀವನ ಅಸ್ತವ್ಯಸ್ತ
Rain: ವರುಣನ ಆರ್ಭಟಕ್ಕೆ ನಲುಗಿದ ದುಬೈ… ವಿಮಾನ ನಿಲ್ದಾಣ ಜಲಾವೃತ, ಜನಜೀವನ ಅಸ್ತವ್ಯಸ್ಥ
MUST WATCH
ಹೊಸ ಸೇರ್ಪಡೆ
Lok Sabha Election: ‘ಬಿವೈಆರ್ಗೆ 3 ಲಕ್ಷ ಮತ ಅಂತರದ ಗೆಲುವು ಖಚಿತ’
ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ
Kushtagi: ನಿರೀಕ್ಷಿತ ಫಲಿತಾಂಶ ಬಾರದ ಹಿನ್ನೆಲೆ ಮನನೊಂದು ವಿದ್ಯಾರ್ಥಿನಿ ಆತ್ಮಹತ್ಯೆ
Vijayapura: ಸಿಡಿಲು ಬಡಿದು ಓರ್ವನಿಗೆ ಗಾಯ, ಮೂರು ಜಾನುವಾರು ಸಾವು
Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್