ಹೆತ್ತಬ್ಬೆಗೆ ಚಿಕಿತ್ಸೆಯಿತ್ತ ವೈದ್ಯನ ವಿರುದ್ಧ ಗೆದ್ದ ಪುತ್ರಿ

ವೈದ್ಯರು ಸೂಕ್ತ ಸಲಹೆ ನೀಡದ್ದರಿಂದ ಕಾಣಿಸಿಕೊಂಡ ಬೆನ್ನೆಲುಬಿನ ಸಮಸ್ಯೆ

Team Udayavani, Dec 3, 2021, 6:50 AM IST

ಹೆತ್ತಬ್ಬೆಗೆ ಚಿಕಿತ್ಸೆಯಿತ್ತ ವೈದ್ಯನ ವಿರುದ್ಧ ಗೆದ್ದ ಪುತ್ರಿ

ಲಂಡನ್‌: “ಅಯ್ಯೋ ಅಮ್ಮಾ ನನ್ನೇಕೆ ಹುಟ್ಟಿಸಿದೆ?’ ಹೀಗೆಂದು ಹೆತ್ತಮ್ಮನನ್ನು ಪ್ರಶ್ನಿಸುವವರಿದ್ದಾರೆ. ಹಾಗೆಂದು ಕೋರ್ಟ್‌ಗೆ ಹೋಗಿ ದಾವೆ ಹೂಡಿದವರು ಭಾರತದಲ್ಲಿ ಇಲ್ಲ. ಆದರೆ ಲಂಡನ್‌ನಲ್ಲಿ ಇವಿ ಟೊಂಬೆಸ್‌ (20) ಎಂಬ ಯುವತಿ ವೈದ್ಯರು ತಾಯಿಗೆ ತಪ್ಪು ಮಾಹಿತಿ ನೀಡಿದ್ದರಿಂದಲೇ ತನ್ನ ಹುಟ್ಟಿಗೆ ಕಾರಣರಾಗಿದ್ದಾರೆ ಎಂದು ಆರೋಪಿಸಿ ದಾವೆ ಹೂಡಿ, ಗೆದ್ದಿದ್ದಾಳೆ.

ಜಗತ್ತಿನಲ್ಲಿ ಇದೊಂದು ಅತ್ಯಂತ ಅಪರೂಪದ ಪ್ರಕರಣ ಎಂದು ವಿಶ್ಲೇಷಿಸಲಾಗುತ್ತಿದೆ. ಇವಿ ಅವರಿಗೆ ಹುಟ್ಟಿನಿಂದಲೇ ಬೆನ್ನೆಲುಬಿನ ಸಮಸ್ಯೆ ಉಂಟಾಗಿದೆ. ತನ್ನ ತಾಯಿ ಕ್ಯಾರೊ ಲೈನ್‌ ಅವರ ವೈದ್ಯ ಡಾ| ಫಿಲಿಪ್‌ ಮೈಕೆಲ್‌ ತನಗೆ ಬೆನ್ನೆಲುಬಿನ ಸಮಸ್ಯೆ ಉಂಟಾಗದಂತೆ ಸೂಕ್ತ ರೀತಿ ಯಲ್ಲಿ ಔಷಧ ಸೇವಿಸಲು ಸೂಚಿಸುವಲ್ಲಿ ವಿಫ‌ಲರಾಗಿ ದ್ದಾರೆ. ಹೀಗಾಗಿ ನನ್ನ ಜನನವಾಯಿತು ಎಂದು ದೂರಿದ್ದಾಳೆ. ಅದರಿಂದಾಗಿ ತಾನು 24 ಗಂಟೆಗಳ ಕಾಲ ಮೂಗಿನಲ್ಲಿ ನಳಿಕೆ ಇರಿಸಿಕೊಂಡೇ ಇರಬೇಕಾದ ಪರಿಸ್ಥಿತಿ ಉಂಟಾಗಿದೆ ಎಂದು ಆರೋಪಿಸಿದ್ದಾಳೆ.

ತಾಯಿ ಕ್ಯಾರೊಲೈನ್‌ ಗರ್ಭಿಣಿ ಯಾಗಿದ್ದಾಗ ಫಾಲಿಕ್‌ ಆ್ಯಸಿಡ್‌ ಅನ್ನು ಸೂಕ್ತ ರೀತಿಯಲ್ಲಿ ಸೇವಿಸುವಂತೆ ವೈದ್ಯಕೀಯ ಸಲಹೆ ನೀಡಲಿಲ್ಲ ಎಂದು ಆರೋಪಿಸಿದ್ದಾಳೆ. ಈ ಬಗ್ಗೆ ಲಂಡನ್‌ ಹೈಕೋರ್ಟ್‌ನಲ್ಲಿ ಇವಿ ಟೊಂಬೆಸ್‌ ದಾವೆ ಹೂಡಿದ್ದರು. ಅದನ್ನು ವಿಚಾರಣೆಗೆ ಕೈಗೆತ್ತಿಕೊಂಡ ಹೈಕೋರ್ಟ್‌ ಯುವತಿಯ ಪರವಾಗಿ ನ್ಯಾ| ರೊಸಾಲಿಂಡ್‌ ಅವರ ಪರವಾಗಿ ಯೇ ಆದೇಶ ತೀರ್ಪು ನೀಡಿ ನಗದು ಪರಿಹಾರ ನೀಡುವಂತೆಯೂ ಆದೇಶ ನೀಡಿದೆ.

ಇದನ್ನೂ ಓದಿ:ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಆಸ್ಪತ್ರೆಯಿಂದ ಡಿಸ್ಚಾರ್ಜ್

ಡಾ| ಫಿಲಿಪ್‌ ಮೈಕೆಲ್‌ ಬಳಿ ವೈದ್ಯಕೀಯ ಸಲಹೆ ಪಡೆಯುವ ಸಂದರ್ಭದಲ್ಲಿ ಇವಿ ಅವರ ತಾಯಿ ಗರ್ಭಿಣಿಯಾಗಿ ರಲಿಲ್ಲ. ಅನಂತರದ ಸಂದರ್ಭಗಳಲ್ಲಿ ವೈದ್ಯರು ಯುವತಿಯ ತಾಯಿಗೆ ಗರ್ಭಧಾರಣೆಯ ಮೊದಲ 12 ವಾರಗಳಲ್ಲಿ ಫಾಲಿಕ್‌ ಆಮ್ಲದ ಮಾತ್ರೆಗಳನ್ನು ತೆಗೆದುಕೊಳ್ಳಲು ಸೂಚಿಸುತ್ತಿದ್ದರೆ ಅರ್ಜಿದಾರರಿಗೆ ಇಂಥ ಪರಿಸ್ಥಿತಿ ಬರುತ್ತಿರಲಿಲ್ಲ. ಹೀಗಾಗಿ ಅವರಿಗೆ ಪರಿಹಾರ ನೀಡಬೇಕಾದ ಅಗತ್ಯವಿದೆ ಎಂದು ನ್ಯಾಯಮೂರ್ತಿ ತೀರ್ಪಿನಲ್ಲಿ ಆದೇಶಿಸಿದ್ದಾರೆ.

ಆರೋಪ ನಿರಾಕರಣೆ: ಯುವತಿ ಇವಿ ತಮ್ಮ ಮೇಲೆ ಹೊರಿಸಿದ ಆರೋಪಗಳನ್ನು ಡಾ| ಮೈಕೆಲ್‌ ಫಿಲಿಪ್‌ ನಿರಾಕರಿಸಿದ್ದಾರೆ. ಅವರ ತಾಯಿ ಕ್ಯಾರೊ ಲೈನ್‌ ಅವರಿಗೆ ಸೂಕ್ತ ರೀತಿಯಲ್ಲಿಯೇ ವೈದ್ಯಕೀಯ ಸಲಹೆ ನೀಡಿದ್ದಾಗಿ ಹೇಳಿದ್ದಾರೆ. ತಾಯಿ ಕ್ಯಾರೊ ಲೈನ್‌ ಕೂಡ ಪ್ರತಿಕ್ರಿಯೆ ನೀಡಿ, ವೈದ್ಯರು ಫಾಲಿಕ್‌ ಆ್ಯಸಿಡ್‌ ಮಾತ್ರೆ ತೆಗೆದುಕೊಳ್ಳುವ ಅಗತ್ಯವಿಲ್ಲ. ಉತ್ತಮ ಆಹಾರ ಪದ್ಧತಿ ಅನುಸರಿಸಿದರೆ ಸಾಕಾಗು ತ್ತದೆ ಎಂದು ಹೇಳಿದ್ದರು ಎಂದು ತಿಳಿಸಿದ್ದಾರೆ.

ನೋವಿನಲ್ಲೂ ಸಾಧನೆ ಬೆನ್ನೆಲುಬಿನ ಸಮಸ್ಯೆ ಇದ್ದಾಗಿಯೂ ಇವಿ ಟೊಂಬೆಸ್‌ ಕುದುರೆ ಸವಾರಿಯಲ್ಲಿ ಉತ್ತಮ ಪರಿಣತಿಯನ್ನು ಪಡೆದುಕೊಂಡಿದ್ದಾರೆ. ಅದರಲ್ಲಿಯೇ ಯಶಸ್ಸು ಸಾಧಿಸಿರುವ ಅವರು, ಹಲವು ಪ್ರಶಸ್ತಿಗಳನ್ನೂ ಗೆದ್ದುಕೊಂಡಿದ್ದಾರೆ.

ಟಾಪ್ ನ್ಯೂಸ್

1

ಉಚಿತವಾಗಿ ಕೆಲಸಕ್ಕೆ ಬರಲು ನಿರಾಕರಿಸಿದ್ದಕ್ಕೆ ಕಾರ್ಮಿಕರ ಗುಡಿಸಲಿಗೆ ಬೆಂಕಿಯಿಟ್ಟ ವ್ಯಕ್ತಿ

3-mandya

Mandya: ದಾಖಲೆ ಇಲ್ಲದ 99.20 ಲಕ್ಷ ಜಪ್ತಿ ಮಾಡಿದ ಚುನಾವಣಾಧಿಕಾರಿಗಳು

2-bng-crime

Bengaluru: ಭಜನೆ ಹಾಕಿದಕ್ಕೆ ದಾಂಧಲೆ: ಮೂವರ ಬಂಧನ

14-uv-fusion

Youths: ಎತ್ತ ಸಾಗುತ್ತಿದೆ ಯುವಜನತೆಯ ಚಿತ್ತ?

10-uv-fusion

Challenges of Life: ಬದುಕಿನ ಸವಾಲುಗಳ ಎದುರಿಸಿ ಮುನ್ನಡೆಯೋಣ…

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-eqwqeewqe

Airstrike; ಅಫ್ಘಾನಿಸ್ಥಾನದಲ್ಲಿ ಪಾಕ್‌ನಿಂದ ವೈಮಾನಿಕ ದಾಳಿ: 8 ಸಾವು

Russiaದ ಅಧ್ಯಕ್ಷ ಚುನಾವಣೆಯಲ್ಲಿ ಪುಟಿನ್‌ ಜಯಭೇರಿ: 3ನೇ ವಿಶ್ವ ಯುದ್ಧದ ಎಚ್ಚರಿಕೆ!

Russiaದ ಅಧ್ಯಕ್ಷ ಚುನಾವಣೆಯಲ್ಲಿ ಪುಟಿನ್‌ ಜಯಭೇರಿ: 3ನೇ ವಿಶ್ವ ಯುದ್ಧದ ಎಚ್ಚರಿಕೆ!

police USA

America ಮತ್ತೊಬ್ಬ ಭಾರತೀಯ ವಿದ್ಯಾರ್ಥಿ ಹತ್ಯೆ: 3ನೇ ಕೇಸು

Indian Couple: ಕೆನಡಾದಲ್ಲಿ ಭಾರತೀಯ ಮೂಲದ ದಂಪತಿ, ಮಗಳು ಸೇರಿ ಮೂವರು ಸಜೀವ ದಹನ…

Indian Couple: ಕೆನಡಾದಲ್ಲಿ ಭಾರತೀಯ ಮೂಲದ ದಂಪತಿ, ಮಗಳು ಸೇರಿ ಮೂವರು ಸಜೀವ ದಹನ…

putin (2)

Russia; ಸತತ 6ನೇ ಬಾರಿ ಅಧ್ಯಕ್ಷರಾಗಿ ವ್ಲಾದಿಮಿರ್‌ ಪುತಿನ್‌ ಆಯ್ಕೆ ಸಾಧ್ಯತೆ

MUST WATCH

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

udayavani youtube

ಇಲ್ಲಿ ಗ್ರಾಹಕರನ್ನ ನೋಡಿಕೊಳ್ಳುವ ರೀತಿಗೆ ಎಂಥಹವರೂ ಫಿದಾ ಆಗ್ತಾರೆ

udayavani youtube

ಶ್ರೀ ಪಣಿಯಾಡಿ ಅನಂತಪದ್ಮನಾಭ ದೇವಸ್ಥಾನ,ಪಣಿಯಾಡಿ|

udayavani youtube

Rameshwaram Cafe: ಹೇಗಾಯ್ತು ಸ್ಫೋಟ? ಭಯಾನಕ ಸಿಸಿಟಿವಿ ದೃಶ್ಯ ನೋಡಿ

udayavani youtube

ಅಯೋಧ್ಯೆ ಶ್ರೀ ರಾಮನ ಸೇವೆಯಲ್ಲಿ ಉಡುಪಿಯ ಬೆಳ್ಕಳೆ ಚಂಡೆ ಬಳಗ

ಹೊಸ ಸೇರ್ಪಡೆ

1

ಉಚಿತವಾಗಿ ಕೆಲಸಕ್ಕೆ ಬರಲು ನಿರಾಕರಿಸಿದ್ದಕ್ಕೆ ಕಾರ್ಮಿಕರ ಗುಡಿಸಲಿಗೆ ಬೆಂಕಿಯಿಟ್ಟ ವ್ಯಕ್ತಿ

3-mandya

Mandya: ದಾಖಲೆ ಇಲ್ಲದ 99.20 ಲಕ್ಷ ಜಪ್ತಿ ಮಾಡಿದ ಚುನಾವಣಾಧಿಕಾರಿಗಳು

2-bng-crime

Bengaluru: ಭಜನೆ ಹಾಕಿದಕ್ಕೆ ದಾಂಧಲೆ: ಮೂವರ ಬಂಧನ

14-uv-fusion

Youths: ಎತ್ತ ಸಾಗುತ್ತಿದೆ ಯುವಜನತೆಯ ಚಿತ್ತ?

10-uv-fusion

Challenges of Life: ಬದುಕಿನ ಸವಾಲುಗಳ ಎದುರಿಸಿ ಮುನ್ನಡೆಯೋಣ…

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.