- Sunday 15 Dec 2019
ಬೀಜಿಂಗ್: ಚಾರ್ಜಿಂಗ್ನಲ್ಲಿದ್ದ E-scooter ಸ್ಫೋಟ, ತಂದೆ,ಮಗಳು ಪಾರು
Team Udayavani, Aug 3, 2018, 5:36 PM IST
ಬೀಜಿಂಗ್ : ಇಲ್ಲಿನ ಅಪಾರ್ಟ್ಮೆಂಟ್ ಒಂದರ ಮನೆಯವರು ತಾವು ಹೊಸದಾಗಿ ಖರೀದಿಸಿದ್ದ ಇ-ಸ್ಕೂಟರ್ ಚಾರ್ಜ್ ಮಾಡಲು ಇಟ್ಟ ಸಂದರ್ಭದಲ್ಲಿ ಅದು ಸ್ಫೋಟಗೊಂಡ ಘಟನೆ ನಡೆದಿದೆ.
ಸ್ಫೋಟ ನಡೆದಾಗ ಮನೆಯಲ್ಲಿದ್ದ ತಂದೆ ಮತ್ತು ಮಗಳು ಪವಾಡ ಸದೃಶವಾಗಿ ಯಾವುದೇ ಗಾಯಗಳಿಲ್ಲದ ಪಾರಾದರೆಂದು ಸ್ಥಳೀಯ ಬೀಜಿಂಗ್ ಮಾರ್ನಿಂಗ್ ಫೋಸ್ಟ್ ವರದಿ ಮಾಡಿದೆ.
ಇ-ಸ್ಕೂಟರ್ ಸ್ಫೋಟಗೊಂಡ ಇಡಿಯ ಪ್ರಕರಣವು ಅಪಾರ್ಟ್ಮೆಂಟಿನ ಭದ್ರತಾ ವ್ಯವಸ್ಥೆಯ ಕ್ಯಾಮೆರಾದಲ್ಲಿ ದಾಖಲಾಗಿದ್ದು ಚೀನದ ಅಗ್ನಿಶಾಮಕ ದಳದವರು ಆ ಚಿತ್ರಿಕೆಯನ್ನು ಬಿಡುಗಡೆ ಮಾಡಿದ್ದಾರೆ.
ಚಾರ್ಜ್ ಗೆ ಇಟ್ಟಿದ್ದ ಇ-ಸ್ಕೂಟರ್ ನಿಂದ ಹೊಗೆ ಬರಲು ಆರಂಭವಾದಾಗ ತಂದೆ ಮತ್ತು ಮಗಳು ಮನೆಯ ಲಿವಿಂಗ್ ರೂಮಿನಲ್ಲೇ ಇದ್ದರು. ಹೊಗೆ ದಟ್ಟವಾಗುತ್ತಿದ್ದಂತೆಯೇ ತಂದೆ ಸ್ಕೂಟರ್ನ ಪ್ಲಗ್ ತೆಗೆಯಲು ಧಾವಿಸಿದರು. ಆದರೆ ಸಾಧ್ಯವಾಗದಾಗ ಮಗಳ ಸಹಿತ ಸುರಕ್ಷಿತವಾಗಿ ಹೊರಗೆ ಧಾವಿಸಿ ಬಂದು ಬಚಾವಾದರು. ಒಡನೆಯೇ ಅಪಾರ್ಟ್ಮೆಂಟ್ ಕಟ್ಟಡದ ಸುರಕ್ಷಾ ಸಿಬಂದಿಗಳು ಧಾವಿಸಿ ಬಂದು ಬೆಂಕಿ ನಂದಿಸಲು ಮುಂದಾದರು.
ಸ್ಫೋಟಗೊಂಡ ಇ-ಸ್ಕೂಟರನ್ನು ಮನೆಯವರು ಎರಡು ವಾರದ ಹಿಂದಷ್ಟೇ ಆನ್ಲೈನ್ ನಲ್ಲಿ 1,780 ಯುವಾನ್ (17,800 ರೂ.) ತೆತ್ತು ಖರೀದಿಸಿದ್ದರು. ಇದನ್ನು ಅವರು ಎರಡನೇ ಬಾರಿಯಷ್ಟೇ ಚಾರ್ಜ್ ಮಾಡುತ್ತಿದ್ದರು.
ಮನೆಯವರೀಗ ಸ್ಕೂಟರ್ ಉತ್ಪಾದಿಸಿದ ಕಂಪೆನಿ ವಿರುದ್ದ ದೂರು ದಾಖಲಿಸಿದ್ದು ತಮಗೆ 20,000 ಯುವಾನ್ (2 ಲಕ್ಷ ರೂ.) ನಷ್ಟವಾಗಿದೆ ಎಂದು ಪರಿಹಾರ ಕೋರಿದ್ದಾರೆ.
ಈ ವಿಭಾಗದಿಂದ ಇನ್ನಷ್ಟು
-
ಕಾಠ್ಮಂಡು: ಯಾತ್ರಾರ್ಥಿಗಳಿಂದ ತುಂಬಿದ್ದ ಬಸ್ ಕಮರಿಗೆ ಉರುಳಿ ಬಿದ್ದು ಸುಮಾರು 14 ಜನರು ಮೃತಪಟ್ಟ ಘಟನೆ ನೇಪಾಳದ ಕಾಠ್ಮಂಡುವಿನಲ್ಲಿ ನಡೆದಿದೆ. ನೇಪಾಳದ ರಾಜಧಾನಿ...
-
ಲಂಡನ್: ಈ ವರ್ಷದ ವಿಶ್ವ ಸುಂದರಿ ಅಂತಿಮ ಸುತ್ತು ಶನಿವಾರ ರಾತ್ರಿ ನಡೆದಿದ್ದು ಅಂತಿಮ ಪ್ರಶಸ್ತಿ ಪ್ರಕಟವಾಗಿದೆ. ಜಮೈಕಾದ ಟೋನಿ ಆನ್ ಸಿಂಗ್ ವಿಶ್ವ ಸುಂದರಿ ಕಿರೀಟ...
-
ವಾಷಿಂಗ್ಟನ್: ಕಳೆದ ಕೆಲವು ವರ್ಷಗಳಿಂದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಜಾರಿಗೊಳಿಸಿರುವ ಐತಿಹಾಸಿಕ ಹಾಗೂ ಸರಣಿ ಸುಧಾರಣಾ ಕ್ರಮಗಳು...
-
ವಾಷಿಂಗ್ಟನ್: ರಾಜಕೀಯ ವೈರಿ ಡೆಮೋಕ್ರಟಿಕ್ ಪಕ್ಷದ ಜೋ ಬಿಡೆನ್ ವಿರುದ್ಧ ತನಿಖೆ ನಡೆಸಲು ಉಕ್ರೈನ್ ಮೇಲೆ ಒತ್ತಡ ಹೇರಲು ಅಮೆರಿಕದ ಅಧ್ಯಕ್ಷಗಾದಿಯನ್ನು ದುರುಪಯೋಗಪಡಿಸಿಕೊಂಡ...
-
ಕ್ಯಾಲಿಫೋರ್ನಿಯಾ: ಕ್ಯಾಲಿಫೋರ್ನಿಯಾದ ಸಮುದ್ರ ತೀರದಲ್ಲಿ ರಾಶಿ, ರಾಶಿ ಬಿದ್ದಿದ್ದ ಈ ಮೀನುಗಳ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಲು ಆರಂಭಿಸಿದಾಗ ಎಲ್ಲರು...
ಹೊಸ ಸೇರ್ಪಡೆ
-
ವಿಜಯಪುರ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಜಿಪಂ ಕಚೇರಿ ಎದುರು ಅನಿರ್ದಿಷ್ಟ ಧರಣಿ ಆರಂಭಿಸಿದ್ದ ಸರಕಾರಿ ಹಾಸ್ಟೆಲ್ ಮತ್ತು ವಸತಿ ಶಾಲಾ ಹೊರಗುತ್ತಿಗೆ...
-
ಬೀದರ: ಜಿಲ್ಲಾ ಮತ್ತು ತಾಲೂಕು ಕನ್ನಡ ಸಮ್ಮೇಳನದ ಮಾದರಿಯಲ್ಲಿ ವಲಯ ಮತ್ತು ಗ್ರಾಮ ಕಸಾಪ ಘಟಕಗಳು ಹಮ್ಮಿಕೊಳ್ಳುವ ಕನ್ನಡ ಸಾಹಿತ್ಯ ಸಮ್ಮೆಳನಕ್ಕೆ ಕೇಂದ್ರ ಘಟಕದಿಂದ...
-
ಹರಿಹರ: ರೈಲ್ವೆ ಹಳಿ ಡಬ್ಲಿಂಗ್ ಕಾಮಗಾರಿ ಹಿನ್ನೆಲೆಯಲ್ಲಿ ಡಿ.15ರಿಂದ ಜ.13ರವರೆಗಿನ ಸುಮಾರು ಒಂದು ತಿಂಗಳವ ರೆಗೆ ಹರಿಹರ-ಚಿತ್ರದುರ್ಗ ಪ್ಯಾಸೆಂಜರ್ ಗಾಡಿ ಸಂಚಾರ...
-
ಕಲಬುರಗಿ: ಕಲಬುರಗಿ ಮತ್ತು ಯಾದಗಿರಿ ಡಿಸಿಸಿ ಬ್ಯಾಂಕ್ನಲ್ಲಿ ಟ್ರಾಕ್ಟರ್, ಪೈಪ್ಲೈನ್ ಮತ್ತು ಪಾಲಿಹೌಸ್ ಹಾಗೂ ತೋಟಗಾರಿಕೆ ಬೆಳೆಗೆ ಪಡೆದ ದೀರ್ಘಾವಧಿ...
-
ಮಣಿಪಾಲ: ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲೀಗ ಕಂಬಳದ ಕಹಳೆಯದ್ದೇ ಸದ್ದು. ಪ್ರತಿ ಶನಿವಾರ ಒಂದಲ್ಲ ಒಂದು ಕಡೆ ಕಂಬಳ ನಡೆಯುತ್ತಿದೆ. ಅಂತೆಯೇ ಡಿಸೆಂಬರ್ 14 ಮತ್ತು...