ಭೂಮಿಯ ಪರಿಭ್ರಮಣೆಯಲ್ಲಿ ವ್ಯತ್ಯಾಸ


Team Udayavani, Aug 1, 2022, 7:15 AM IST

thumb earth

ವಾಷಿಂಗ್ಟನ್‌: ದಿನಕ್ಕೆಷ್ಟು ಗಂಟೆ ಎಂದು ಕೇಳಿದರೆ ಇಪ್ಪತ್ತನಾಲ್ಕು ಎಂದು ತಡವಿಲ್ಲದೆ ಉತ್ತರಿಸುತ್ತೇವೆ. ಅಲ್ಲವೇ? ತನ್ನಷ್ಟಕ್ಕೆ ತಾನೇ ಒಂದು ಪೂರ್ತಿ ಸುತ್ತು ಹಾಕುವುದಕ್ಕೆ 24 ಗಂಟೆಗಳು ಎಂದರ್ಥ.

ಆದರೆ, ಜು. 29ರಂದು ಭೂಮಿಯು 1.59 ಮಿಲಿ ಸೆಕೆಂಡ್‌ಗಳಷ್ಟು ಮುಂಚಿತವಾಗಿಯೇ ತನ್ನ ಪರಿಭ್ರಮಣೆಯನ್ನು ಮುಗಿಸಿದೆ! ಹಾಗಂತ, ಭೂಮಿಗೆ ಇಷ್ಟು ವೇಗವಾಗಿ ಪರಿಭ್ರಮಣ ನಡೆಸಿದ್ದು ಇದೇ ಮೊದಲೇನಲ್ಲ.

ವಿಜ್ಞಾನಿಗಳ ಪ್ರಕಾರ, 1960ರ ನಂತರ ಭೂಮಿಯ ಪರಿಭ್ರಮಣೆಯ ವೇಗ ಹೆಚ್ಚಾಗಿದೆ. 1960ರ ಜು. 19ರಂದು ಭೂಮಿ, ಸೂರ್ಯನನ್ನು 1.47 ಸೆಕೆಂಡ್‌ಗಳಷ್ಟು ಮೊದಲೇ ಸುತ್ತಿ ಬಂದಿತ್ತು.

ಕಾರಣವೇನು?
ಭೂಮಿಯ ಪರಿಭ್ರಮಣೆಯ ವೇಗ ಏಕೆ ಹೀಗೆ ಹೆಚ್ಚಾಗುತ್ತಿದೆ ಎಂಬುದಕ್ಕೆ ನಿಖರ ಕಾರಣಗಳು ಏನು ಎಂಬುದು ತಿಳಿದುಬಂದಿಲ್ಲ. ಜಾಗತಿಕ ಹವಾಮಾನ ಬದಲಾವಣೆ, ಭೂಮಿಯ ಒಳ ಮತ್ತು ಹೊರ ಪದರಗಳಲ್ಲಿ ಆಗುತ್ತಿರುವ ಬದಲಾವಣೆಗಳೇ ಕಾರಣವಿರಬಹುದು ಎಂದು ವಿಜ್ಞಾನಿಗಳು ಅಂದಾಜಿಸಿದ್ದಾರೆ. ಇನ್ನೂ ಕೆಲವು ಸಂಶೋಧಕರು, ಭೂಮಿಯ ಧ್ರುವಗಳಲ್ಲಿ ಆಗುತ್ತಿರುವ ಪಲ್ಲಟವೇ ಇದಕ್ಕೆ ಕಾರಣವಿರಬಹುದು ಎಂದು ಹೇಳಿದ್ದಾರೆ.

ಏರುಪೇರಾದರೆ ಸಮಸ್ಯೆ ಖಂಡಿತ!
ಭೂಮಿಯ ಪರಿಭ್ರಮಣೆಯ ವೇಗ ಹೆಚ್ಚುತ್ತಿರುವುದಿಂದ ಬೇರೆಯದ್ದೇ ಸಮಸ್ಯೆಗಳು ಉಂಟಾಗುತ್ತವೆ ಎಂದು ತಜ್ಞರು ಅಂದಾಜಿಸಿದ್ದಾರೆ. ಹೀಗೆ, ಕೆಲವು ಮಿಲಿಸೆಕೆಂಡ್‌ಗಳಷ್ಟು ಮುನ್ನವೇ ಭೂಮಿ ತನ್ನನ್ನು ತಾನು ಸುತ್ತು ಹಾಕುವುದು ಮುಂದುವರಿದರೆ, ಸಮಯದ ಲೆಕ್ಕಾಚಾರದಲ್ಲಿ ರೂಪಿಸಲಾಗಿರುವ ತಂತ್ರಜ್ಞಾನದಲ್ಲಿ (ಉದಾಹರಣೆಗೆ ಕಂಪ್ಯೂಟರ್‌ ಟೈಮಿಂಗ್‌), ಶೆಡ್ಯೂಲಿಂಗ್‌ ಸೇವೆಗಳಲ್ಲಿ ವ್ಯತ್ಯಯವಾಗುತ್ತದೆ. ಅಂದರೆ, ಡಿಜಿಟಲ್‌ ಕ್ಲಾಕ್‌ನಲ್ಲಿ ದಿನದ 24 ಗಂಟೆ ಮುಗಿಯುವಾಗ 23 ಗಂಟೆ 59 ನಿಮಿಷ 58 ಸೆಕೆಂಡ್‌ (23:59:58), ಆನಂತರ 23:59:59, ತದನಂತರ 00:00:00 (ಮಧ್ಯರಾತ್ರಿ 12 ಗಂಟೆ) 00:00:01 ಎಂದು ತೋರಿಸುವಂತೆ ಕೋಡಿಂಗ್‌ ಮಾಡಲಾಗಿರುತ್ತದೆ.

ಭೂಮಿಯ ವೇಗ ಸರಾಸರಿ 1 ಸೆಕೆಂಡ್‌ನ‌ಷ್ಟು ಹೆಚ್ಚಾಗಿರುವುದರಿಂದ ದಿನದ ಲೆಕ್ಕಾಚಾರದಲ್ಲಿ ಒಂದು ಸೆಕೆಂಡ್‌ ಕಡಿಮೆ ಮಾಡಬೇಕಾಗುತ್ತದೆ. ಆಗ, ಕಂಪ್ಯೂಟರ್‌ ಹಾಗೂ ಇನ್ನಿತರ ಡಿಜಿಟಲ್‌ ಸಾಧನಗಳಲ್ಲಿ ಅಳವಡಿಸಲಾಗಿರುವ ಸಮಯದ ಎಣಿಕೆ ವ್ಯವಸ್ಥೆಯನ್ನು 23:59:58ರಿಂದ ನೇರವಾಗಿ 00:00:00 (ಮಧ್ಯರಾತ್ರಿ 11:58ರಿಂದ ನೇರವಾಗಿ 12 ಗಂಟೆಗೆ) ಜಂಪ್‌ ಆಗುವಂತೆ ಮಾಡಬೇಕಾಗುತ್ತದೆ.

ಆದರೆ, ಇಷ್ಟು ಮಾಡಿದರೆ ಸಮಯ ಎಣಿಕೆ ಸಮಸ್ಯೆಯೇನೋ ಸರಿಹೋದೀತು ಆದರೆ, ಸಮಯದ ಎಣಿಕೆ ಆಧಾರ ಮೇಲೆ ಕಾರ್ಯನಿರ್ವಹಿಸುವ ‌ ಸಾಫ್ಟ್ ವೇರ್‌ ಗಳು ಉಳ್ಳ ಸಾಮಗ್ರಿಗಳು ಸರಿಯಾಗಿ ಕೆಲಸ ಮಾಡದಂತಾಗಬಹುದು. ಕಂಪ್ಯೂಟರೀಕೃತ ಅಥವಾ ಡಿಜಿಟಲ್‌ ವ್ಯವಸ್ಥೆಗಳಂತೂ ಸಂಪೂರ್ಣ ಕ್ರಾಷ್‌ ಆಗಿಬಿಡುವ ಅಪಾಯವಿರುತ್ತದೆ ಎಂದು ತಜ್ಞರು ಎಚ್ಚರಿಸಿದ್ದಾರೆ.

ಟಾಪ್ ನ್ಯೂಸ್

23

ಹೂಡಿಕೆದಾರರಿಗೆ ಲಾಭಾಂಶ ನೀಡದ ಆರೋಪ ʼManjummel Boysʼ ನಿರ್ಮಾಪಕರ ವಿರುದ್ದ ದೂರು ದಾಖಲು

LS Polls: ವೇದಿಕೆಯಲ್ಲಿ ಭಾಷಣ ಮಾಡುತ್ತಲೇ ಅಸ್ವಸ್ಥಗೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ

LS Polls: ವೇದಿಕೆಯಲ್ಲಿ ಭಾಷಣ ಮಾಡುತ್ತಲೇ ಅಸ್ವಸ್ಥಗೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ

21

ಹೊಸ ಚಿತ್ರಕ್ಕೆ ಮಹೇಶ್‌ ಬಾಬು ರೆಡಿ: ‘ವೀರ ಮದಕರಿ’ ಬಾಲ ಕಲಾವಿದೆ ಈಗ ನಾಯಕಿ

Lok Sabha Election: ಗೋವಾದ ಎರಡೂ ಕ್ಷೇತ್ರದಲ್ಲಿ 16 ಅಭ್ಯರ್ಥಿಗಳು ಕಣಕ್ಕೆ, ಇಲ್ಲಿದೆ ವಿವರ

Lok Sabha Election: ಗೋವಾದ ಎರಡೂ ಕ್ಷೇತ್ರದಲ್ಲಿ 16 ಅಭ್ಯರ್ಥಿಗಳು ಕಣಕ್ಕೆ, ಇಲ್ಲಿದೆ ವಿವರ

ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್

ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್

Surjewala

BJP ಎಂದರೆ ಹೊಸ ಈಸ್ಟ್ ಇಂಡಿಯಾ ಕಂಪೆನಿ: ಸುರ್ಜೇವಾಲಾ ಕಿಡಿ

Kharge (2)

Kalaburagi; ಸತ್ತಾಗ ಮಣ್ಣಿಗಾದರೂ ಬನ್ನಿ: ಭಾವನಾತ್ಮಕವಾಗಿ ಮತಯಾಚಿಸಿದ ಖರ್ಗೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತಂಗಿಯ ಸಮಾಧಿ ಸ್ಥಳಕ್ಕೆ  ಭೇಟಿ ನೀಡುವುದನ್ನು ವ್ಲಾಗ್‌ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ

ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್‌ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ

Andhra Student passed away After Getting Trapped In Frozen Kyrgyzstan Waterfall

Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು

Copters crash into each other

Kuala Lumpur; ಪರಸ್ಪರ ಡಿಕ್ಕಿ ಹೊಡೆದು ಪತನಗೊಂಡ ಕಾಪ್ಟರ್‌ಗಳು: 10 ಯೋಧರು ಸಾವು

Malaysian ನೌಕಾಪಡೆಯ 2 ಹೆಲಿಕಾಪ್ಟರ್ ಪತನ; 10 ಮಂದಿ ಮೃತ್ಯು, ಭಯಾನಕ ವಿಡಿಯೋ ಸೆರೆ

Malaysia ನೌಕಾಪಡೆಯ 2 ಹೆಲಿಕಾಪ್ಟರ್ ಪತನ; 10 ಮಂದಿ ಮೃತ್ಯು, ಭಯಾನಕ ವಿಡಿಯೋ ಸೆರೆ

Taiwan ನಲ್ಲಿ ಸರಣಿ ಭೂಕಂಪ… ರಾತ್ರಿಯಿಡೀ ಮನೆಯಿಂದ ಹೊರಗುಳಿದ ಮನೆಮಂದಿ

Taiwan ನಲ್ಲಿ ಸರಣಿ ಭೂಕಂಪ… ರಾತ್ರಿಯಿಡೀ ಮನೆಯಿಂದ ಹೊರಗುಳಿದ ಮನೆಮಂದಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

23

ಹೂಡಿಕೆದಾರರಿಗೆ ಲಾಭಾಂಶ ನೀಡದ ಆರೋಪ ʼManjummel Boysʼ ನಿರ್ಮಾಪಕರ ವಿರುದ್ದ ದೂರು ದಾಖಲು

18-uv-fusion

Clay Pot: ಬಡವರ ಫ್ರಿಡ್ಜ್ ಮಣ್ಣಿನ ಮಡಕೆ

ಗುಡುಗು-ಸಿಡಿಲು: ಈ ಪ್ರಮುಖ ಮುನ್ನೆಚ್ಚರಿಕೆ ಗಮನದಲ್ಲಿರಲಿ…ಜಿಲ್ಲಾಧಿಕಾರಿ ಗಂಗೂಬಾಯಿ

ಗುಡುಗು-ಸಿಡಿಲು: ಈ ಪ್ರಮುಖ ಮುನ್ನೆಚ್ಚರಿಕೆ ಗಮನದಲ್ಲಿರಲಿ…ಜಿಲ್ಲಾಧಿಕಾರಿ ಗಂಗೂಬಾಯಿ

17-uv-fusion

UV Fusion: ನಿನ್ನೊಳಗೆ ನೀ ಇರುವಾಗ…

LS Polls: ವೇದಿಕೆಯಲ್ಲಿ ಭಾಷಣ ಮಾಡುತ್ತಲೇ ಅಸ್ವಸ್ಥಗೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ

LS Polls: ವೇದಿಕೆಯಲ್ಲಿ ಭಾಷಣ ಮಾಡುತ್ತಲೇ ಅಸ್ವಸ್ಥಗೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.