ಅಫ್ಘಾನ್ನಲ್ಲಿ ಭೂಕಂಪ: ಭಾರತದಲ್ಲಿ ತಲ್ಲಣ
Team Udayavani, Feb 1, 2018, 6:35 AM IST
ಕಾಬೂಲ್/ಹೊಸದಿಲ್ಲಿ: ಅಫ್ಘಾನಿಸ್ಥಾನದ ಉತ್ತರ ಭಾಗದಲ್ಲಿ 6.1 ತೀವ್ರತೆಯ ಭೂಕಂಪ ಬುಧವಾರ ಮಧ್ಯಾಹ್ನ ಸಂಭವಿಸಿದ್ದು, ಇದರ ಪ್ರಭಾವ ಉತ್ತರ ಭಾರತದಲ್ಲೂ ಕಂಡುಬಂದಿದೆ. ದೆಹಲಿ ಸೇರಿದಂತೆ ಹಲವು ರಾಜ್ಯಗಳಲ್ಲಿ ಒಂದು ನಿಮಿಷಕ್ಕೂ ಹೆಚ್ಚು ಕಾಲ ಭೂಮಿ ಕಂಪಿಸಿದೆ. ಭೂಕಂಪದಿಂದಾಗಿ ಪಾಕಿಸ್ಥಾನದಲ್ಲಿ ಓರ್ವ ಬಾಲಕಿ ಸಾವನ್ನಪ್ಪಿದ್ದು, 19 ಜನರಿಗೆ ಗಾಯವಾಗಿದೆ. 2015ರಲ್ಲಿ 7.5 ತೀವ್ರತೆಯ ಭೂಕಂಪ ಸಂಭವಿಸಿ 380 ಕ್ಕೂ ಹೆಚ್ಚು ಜನರ ಸಾವಿಗೆ ಕಾರಣವಾಗಿದ್ದ ಜುರ್ಮ್ ಪ್ರದೇಶದಲ್ಲೇ ಈ ಬಾರಿಯೂ ಕಂಪನ ಸಂಭವಿಸಿದೆ. ಶ್ರೀನಗರದಲ್ಲಿ ಫ್ಲೈಓವರ್ಗಾಗಿ ನಿರ್ಮಿಸಿದ್ದ ಕಾಂಕ್ರಿಟ್ ಪಿಲ್ಲರ್ ಕುಸಿದು ಬಿದ್ದಿದೆ. ಹಿಂದು ಕುಷ್ ಪರ್ವತ ಪ್ರಾಂತ್ಯದ ತಜಕಿಸ್ತಾನದ ಗಡಿಯಲ್ಲಿ ಭೂಕಂಪ ಸಂಭವಿಸಿದ್ದು, ಇದರ ಕೇಂದ್ರ 191 ಕಿ.ಮೀ ಆಳದಲ್ಲಿದೆ ಎಂದು ಯುಎಸ್ ಜಿಯೋಲಾಜಿಕಲ್ ಸರ್ವೆ ಹೇಳಿದೆ. ಕಾಬೂಲ್ನಲ್ಲಿ ಎರಡು ಬಾರಿ ತೀವ್ರ ಪ್ರಮಾಣದ ಕಂಪನ ಸಂಭವಿಸಿದ್ದು, ಭೀತಿಗೊಂಡ ಜನರು ಮನೆಗಳಿಂದ ಹೊರಗೆ ಓಡಿ ಬಂದಿದ್ದಾರೆ. ಪಾಕಿಸ್ಥಾನದ ಇಸ್ಲಾಮಾ ಬಾದ್, ಪೇಶಾವರ ಮತ್ತು ಲಾಹೋರ್ನಲ್ಲೂ ಭೂಮಿ ಕಂಪಿಸಿದ್ದು, ಜನರನ್ನು ಕಟ್ಟಡಗಳಿಂದ ತಕ್ಷಣ ಸ್ಥಳಾಂತರಗೊಳಿಸಲಾಗಿದೆ.
ಪಾಕ್ನಲ್ಲಿ ಹಲವು ಕಟ್ಟಡಗಳು ಉರುಳಿರುವುದರಿಂದ ಇಲ್ಲಿ ಇನ್ನಷ್ಟು ಜನರಿಗೆ ಗಾಯವಾಗಿರಬಹುದು ಎಂದು ಊಹಿಸಲಾಗಿದೆ. 2005ರ ಅಕ್ಟೋಬರ್ನಲ್ಲಿ ಪಾಕ್ನ ಕೆಲ ಭಾಗಗಳಲ್ಲಿ ಭೂಕಂಪವಾಗಿ 80 ಸಾವಿರ ಮಂದಿ ಅಸುನೀಗಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Baltimore bridge: ಬಾಲ್ಟಿಮೋರ್ ಸೇತುವೆ ಕುಸಿತ: ಇಬ್ಬರ ಮೃತದೇಹ ಹೊರತೆಗೆದ ರಕ್ಷಣಾ ತಂಡ
America: ಕಾನೂನು ಸಮರದಲ್ಲಿ ಹೈರಾಣ-ಹಣ ಸಂಗ್ರಹಕ್ಕಾಗಿ ಟ್ರಂಪ್ ಬೈಬಲ್ ಮಾರಾಟ!
Baltimore bridge collapse; ಆರು ಕಾರ್ಮಿಕರು ನಾಪತ್ತೆ: ಪತ್ತೆ ಕಾರ್ಯ ಸ್ಥಗಿತ
Anjali Chakra – Sufi Malik; ಮದುವೆಗೂ ಮುನ್ನ ಭಾರತ-ಪಾಕ್ ಸಲಿಂಗಿ ಜೋಡಿ ಬ್ರೇಕಪ್!
H5N1: ವಿಯೆಟ್ನಾಂನಲ್ಲಿ ಹಕ್ಕಿಜ್ವರಕ್ಕೆ ಮೊದಲ ಬಲಿ!
MUST WATCH
ಹೊಸ ಸೇರ್ಪಡೆ
ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್
Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್
Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್ಗಳು: ಪ್ರವಾಸಿಗರಿಗೆ ಭಯ
IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್ಗಳ ಜಯ
Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು