ಜನಾಂಗೀಯ ದ್ವೇಷ: ನ್ಯಾಯದ ಭರವಸೆ
Team Udayavani, Mar 7, 2017, 3:45 AM IST
ವಾಷಿಂಗ್ಟನ್: ಜನಾಂಗೀಯ ದ್ವೇಷದ ಪ್ರಕರಣಗಳಲ್ಲಿ ಸಂತ್ರಸ್ತರಾದ ಭಾರತೀಯರಿಗೆ ಆದಷ್ಟು ಬೇಗ ನ್ಯಾಯ ಒದಗಿಸಿಕೊಡುವ ಭರವಸೆಯನ್ನು ಅಮೆರಿಕ ಸೋಮವಾರ ನೀಡಿದೆ.
ಅಮೆರಿಕದಲ್ಲಿ ಭಾರತೀಯರ ಮೇಲಿನ ಜನಾಂಗೀಯ ದ್ವೇಷದ ಪ್ರಕರಣಗಳು ಮುಂದುವರಿದಿರುವ ಬೆನ್ನಲ್ಲೇ ವಿದೇಶಾಂಗ ಇಲಾಖೆಗೆ ಧಾವಿಸಿದ ಭಾರತೀಯ ರಾಯಭಾರಿಯು, ಇತ್ತೀಚೆಗಿನ ವಿದ್ಯಮಾನಗಳ ಕುರಿತು ಮಾಹಿತಿ ನೀಡಿದ್ದಾರೆ. ಇದಕ್ಕೆ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿರುವ ಅಮೆರಿಕದ ಸಚಿವಾಲಯ, “ನಮ್ಮ ಸರ್ಕಾರದ ಪರವಾಗಿ ನಾವು ಸಂತ್ರಸ್ತರಾದ ಎಲ್ಲ ಭಾರತೀಯರಿಗೆ ಸಾಂತ್ವನ ಹೇಳಬಯಸುತ್ತೇವೆ ಮತ್ತು ನಿಮಗೆ ನ್ಯಾಯ ಒದಗಿಸಿಕೊಡಲು ಎಲ್ಲ ರೀತಿಯ ಪ್ರಯತ್ನ ಮಾಡುತ್ತೇವೆ,’ ಎಂದಿದೆ.
ಎಫ್ಬಿಐ ತನಿಖೆ: ಇದೇ ವೇಳೆ, ಸಿಖ್ ವ್ಯಕ್ತಿ ದೀಪ್ ರಾಯ್ ಮೇಲೆ ನಡೆದ ಗುಂಡಿನ ದಾಳಿ ಕುರಿತು ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್(ಎಫ್ಬಿಐ) ತನಿಖೆ ಆರಂಭಿಸಿದೆ. ಜನಾಂಗೀಯ ದ್ವೇಷದ ಕೃತ್ಯವೆಂದು ಶಂಕಿಸಿ, ಆ ನಿಟ್ಟಿನಲ್ಲಿ ತನಿಖೆ ನಡೆಸಲಾಗುತ್ತಿದೆ.
ಮತ್ತೂಬ್ಬನ ಶವ ಪತ್ತೆ: ಈ ಎಲ್ಲ ಬೆಳವಣಿಗೆಗಳ ನಡುವೆ, ನ್ಯೂಜೆರ್ಸಿಯಲ್ಲಿ 29 ವರ್ಷದ ಭಾರತೀಯನೊಬ್ಬನ ಶವ ಪತ್ತೆಯಾಗಿದೆ. ಆದರೆ, ಇದು ವೈಯಕ್ತಿಕ ವಿಚಾರಕ್ಕೆ ನಡೆದ ಕೊಲೆಯೇ ಹೊರತು, ಜನಾಂಗೀಯ ಅಪರಾಧವಲ್ಲ ಎಂದು ಕುಟುಂಬ ಸದಸ್ಯರು ಹೇಳಿದ್ದಾರೆ.
ಸಿಎನ್ಎನ್ ವಿರುದ್ಧ ಕಿಡಿ: ಇನ್ನೊಂದೆಡೆ, ಸಿಎನ್ಎನ್ನಲ್ಲಿ ಪ್ರಸಾರವಾಗುತ್ತಿರುವ “ಬಿಲೀವರ್ ವಿತ್ ರೆಝಾ ಅಸ್ಲಾನ್’ ಎಂಬ ಕಾರ್ಯಕ್ರಮದ ವಿರುದ್ಧ ಅಮೆರಿಕದಲ್ಲಿರುವ ಭಾರತೀಯರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅಘೋರಿಗಳ ಹಿಂದಿನ ಕಥೆಗಳನ್ನು ಹೇಳುವಾಗ ಹಿಂದೂಧರ್ಮವನ್ನು ಅವಹೇಳನ ಮಾಡಲಾಗಿದೆ ಎಂದು ಅಧ್ಯಕ್ಷ ಟ್ರಂಪ್ ಅವರ ಪ್ರಮುಖ ಬೆಂಬಲಿಗ, ಶಲಭ್ ಕುಮಾರ್ ಆರೋಪಿಸಿದ್ದಾರೆ.
ದ್ವೇಷದ ವಿಡಿಯೋ
ಅಮೆರಿಕದ ಓಹಿಯೋದ ಕೊಲಂಬಸ್ ನಗರದಲ್ಲಿ ಭಾರತೀಯರು ಆಡುತ್ತಿರುವ, ಪಾರ್ಕ್ನಲ್ಲಿ ಸುತ್ತಾಡುತ್ತಿರುವ ಫೋಟೋಗಳು ಹಾಗೂ ವಿಡಿಯೋಗಳನ್ನು ವಲಸಿಗರ ವಿರೋಧಿ ವೆಬ್ಸೈಟ್ನಲ್ಲಿ ವ್ಯಕ್ತಿಯೊಬ್ಬ ಅಪ್ಲೋಡ್ ಮಾಡಿದ್ದಾನೆ. ಜತೆಗೆ, ಭಾರತೀಯರು ಅಮೆರಿಕನ್ನರ ಉದ್ಯೋಗಗಳನ್ನು ಕಿತ್ತುಕೊಂಡು, ಆರಾಮವಾಗಿದ್ದಾರೆ. ಓಹಿಯೋದ ಈ ನಗರದಲ್ಲಿ ಭಾರತೀಯರೇ ತುಂಬಿದ್ದಾರೆ. ಅಮೆರಿಕನ್ನರನ್ನು ಇಲ್ಲಿಂದ ಓಡಿಸಲಾಗಿದೆ ಎಂದು “ಸೇವ್ಅಮೆರಿಕನ್ ಐಟಿ ಜಾಬ್ಸ್.ಕಾಮ್’ನಲ್ಲಿ ಹಾಕಲಾಗಿದೆ. ಮಾ.6ರಂದು ಅಪ್ಲೋಡ್ ಆದ ಈ ವಿಡಿಯೋಗಳನ್ನು ಯೂಟ್ಯೂಬ್ನಲ್ಲಿ 41 ಸಾವಿರಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ
Thailandನಲ್ಲಿ ಗುಜರಿ ಮಾಫಿಯಾದ ಕಿಂಗ್ ಪಿನ್ ರವಿ ಕಾನಾ, ಪ್ರಿಯತಮೆ ಕಾಜಲ್ ಜಾ ಬಂಧನ
ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ
Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು