ದುಬೈ ಕಾರು ಅಪಘಾತ: ಮಡಿದ ಕೇರಳದ ವೈದ್ಯನಿಗೆ ಸಹೋದ್ಯೋಗಿಗಳ ಸಂತಾಪ
Team Udayavani, Dec 4, 2019, 11:33 PM IST
ದುಬೈ: ದುಬೈಯಲ್ಲಿ ನಡೆದ ಅಪಘಾತವೊಂದರಲ್ಲಿ ಬಲಿಯಾದ ಭಾರತೀಯ ಮೂಲದ ವೈದ್ಯ ಡಾ| ಜಾನ್ ಮಾರ್ಷಲ್ ಸ್ಕಿನ್ನರ್ ಅವರಿಗೆ ದುಬೈನಲ್ಲಿ ಸಂತಾಪ ಸೂಚಿಸಲಾಯಿತು. ಮೃತರ ಕೌಟುಂಬಿಕರು, ಗೆಳೆಯರು, ಸಹೋದ್ಯೋಗಿಗಳು ಈ ಸಂತಾಪ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಅವರು ಕೆಲಸ ಮಾಡುತ್ತಿದ್ದ ಕ್ಲಿನಿಕ್ ಸಿಬಂದಿಗಳೂ ಸಹ ಭಾಗವಹಿಸಿದ್ದು ವಿಶೇಷವಾಗಿತ್ತು. ಇದರಲ್ಲಿ ಕಾಣಿಸಿಕೊಂಡಿದ್ದರು. ನವೆಂಬರ್ 26ರಂದುಚಾಲಕನ ನಿಯಂತ್ರಣ ತಪ್ಪಿದ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಈ ಸಾವು ಸಂಭವಿಸಿತ್ತು.
ದುಬೈನ್ ಅಲ್ ಮುಸಲ್ಲಾ ಮೆಡಿಕಲ್ ಸೆಂಟರ್ನಲ್ಲಿ 2 ದಶಕಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದ ಕೇರಳ ಮೂಲದ ಡಾ| ಜಾನ್ ಮಾರ್ಷಲ್ ಸ್ಕಿನ್ನರ್ (60) ಈ ದುರ್ಘಟನೆಯಲ್ಲಿ ಬಲಿಯಾಗಿದ್ದರು. ಕಾರು ನಿಯಂತ್ರಣ ಕಳೆದುಕೊಂಡು ರಸ್ತೆಯ ಪಕ್ಕ ಉರುಳಿದ ಪರಿಣಾಮ ಬೆಂಕಿ ಕಾಣಿಸಿಕೊಂಡಿದೆ. ಕಾರಿನಿಂದ ಹೊರಬರಲಾಗದೇ ಸ್ಕಿನ್ನರ್ ಅವರು ಮೃತಪಟ್ಟಿದ್ದಾರೆ ಎಂದು ದುಬೈ ಪೊಲೀಸ್ ವರದಿ ಮಾಡಿತ್ತು.
ಡಾ| ಜಾನ್ ಮಾರ್ಷಲ್ ಸ್ಕಿನ್ನರ್ ಅವರ ಪತ್ನಿ ಡಾ| ಸಿಸ್ಸಿ ಮಾರ್ಷಲ್ ಅವರು ತನ್ನ ಪತಿ ಮನೆಗೆ ಬಾರದಿರುವುದನ್ನು ಮನಗಂಡು ಪತಿಯ ಸಹೋದ್ಯೋಗಿಗಳಲ್ಲಿ ವಿಚಾರಿಸಿದಾಗ ಈ ಪ್ರಕರಣ ಬೆಳಕಿಗೆ ಬಂದಿತ್ತು. ಅರಬ್ ರಾಷ್ಟ್ರಗಳ ರಾಷ್ಟ್ರೀಯ ದಿನ ಆಚರಣೆಯಲ್ಲಿದ್ದ ಕಾರಣ ಸಹೋದ್ಯೋಗಿಗಳಿಗೆ ಒಟ್ಟು ಸೇರಲು ಆಗರಲಿಲ್ಲ. ಸರಣಿ ರಜೆಗಳನ್ನು ಎಲ್ಲಾ ಸಂಸ್ಥೆಗಳು ಘೋಷಿಸಿದ್ದವು. ಈ ಹಿನ್ನೆಲೆಯಲ್ಲಿ ಮತ್ತೆ ಕಚೇರಿಗಳು ತೆರೆಯಲಾರಂಭಿಸಿವೆ.
ಈ ಸಂತಾಪ ಸೂಚನೆ ಕಾರ್ಯಕ್ರಮದಲ್ಲಿ ಡಾ| ಜಾನ್ ಮಾರ್ಷಲ್ ಸ್ಕಿನ್ನರ್ ಅವರ ಪತ್ನಿ ಡಾ| ಸಿಸ್ಸಿ ಮಾರ್ಷಲ್, ಮಗಳು ರೆಬೆಕಾ ರಾಚೇಲ್ ಅವರು ಉಪಸ್ಥಿತರಿದ್ದರು. ಸಹೋದ್ಯೋಗಿಗಳು, ಸ್ನೇಹಿತರು ಅಪಾರ ಸಂಖ್ಯೆಯಲ್ಲಿ ಭಾಗವಹಿಸಿ ಅಗಲಿದ ಮಿತ್ರನಿಗೆ ಕಂಬನಿ ಮಿಡಿದರು. ಮೃತನ ಪತ್ನಿ ಮತ್ತು ಮಗಳನ್ನು ಸಂತೈಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ
Thailandನಲ್ಲಿ ಗುಜರಿ ಮಾಫಿಯಾದ ಕಿಂಗ್ ಪಿನ್ ರವಿ ಕಾನಾ, ಪ್ರಿಯತಮೆ ಕಾಜಲ್ ಜಾ ಬಂಧನ
ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ
Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು