ಯುಎಇಯಲ್ಲಿ ಉಕ್ಕು ,ಕಬ್ಬಿಣ ಬಳಸದ ದೇಗುಲ
ಮೋದಿ ಶಿಲಾನ್ಯಾಸ ಮಾಡಿದ್ದ ಮಂದಿರ
Team Udayavani, Feb 15, 2020, 6:30 AM IST
ಉದ್ದೇಶಿತ ಮಂದಿರದ ಮಾದರಿ...
ದುಬಾೖ: ಎರಡು ವರ್ಷಗಳ ಹಿಂದೆ ಪ್ರಧಾನಿ ಮೋದಿ ಯುಎಇಯಲ್ಲಿ ಶಿಲಾನ್ಯಾಸ ನೆರವೇರಿಸಿದ್ದ ಸ್ವಾಮಿ ನಾರಾಯಣ ದೇವಸ್ಥಾನ ಲೋಹದ ಬಳಕೆಯಿಲ್ಲದೆ ವಿಶಿಷ್ಟವಾಗಿ ನಿರ್ಮಾಣವಾಗುತ್ತಿದೆ.
ಯುಎಇಯಲ್ಲಿ ಹಿಂದೂ ಮೊದಲ ದೇಗುಲವಿದು. ಇದನ್ನು ಉಕ್ಕು ಮತ್ತು ಕಬ್ಬಿಣ ಬಳಕೆ ಮಾಡದೆಯೇ ಭಾರತೀಯ ಸಾಂಪ್ರದಾಯಿಕ ವಾಸ್ತು ಶೈಲಿಯಲ್ಲಿ ನಿರ್ಮಿಸಲಾಗುತ್ತಿದೆ. ಹಾರು ಬೂದಿಯಿಂದ ನಿರ್ಮಿಸಲಾದ ಕಾಂಕ್ರೀಟ್ ಬಳಸ ಲಾಗುತ್ತಿದೆ. ಬೋಚಾಸನಸ್ವಾಮಿ ಶ್ರೀ ಅಕ್ಷರ ಪುರುಷೋತ್ತಮ ಸ್ವಾಮಿ ನಾರಾಯಣ ಸಂಸತ್ (ಬಿಎಪಿಎಸ್) ಅದರ ಹೊಣೆ ಹೊತ್ತುಕೊಂಡಿದೆ. ಗುರುವಾರ ನಿರ್ಮಾಣ ಆರಂಭವಾಗಿದ್ದು, ಯುಇಎ ಮತ್ತು ಇತರ ಅರಬ್ ರಾಷ್ಟ್ರಗಳಿಂದ ಬಂದ ಸಾವಿರಾರು ಭಾರತೀಯರು ಈ ಸಂಭ್ರಮದ ಕ್ಷಣಗಳನ್ನು ಕಣ್ತುಂಬಿಕೊಂಡರು.
ಎರಡು ವರ್ಷಗಳ ಹಿಂದೆ ಪ್ರಧಾನಿ ಮೋದಿ ದುಬಾೖಗೆ ಭೇಟಿ ನೀಡಿದ್ದ ವೇಳೆ ದೇಗುಲ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಿದ್ದರು.
ಹಾರು ಬೂದಿ ಬಳಕೆ
ಕಾಮಗಾರಿಯ ಬಗ್ಗೆ ವಿವರಣೆ ನೀಡಿರುವ ಸಮಿತಿ ವಕ್ತಾರ ಅಶೋಕ್ ಕೋಟೆಚಾ, ದೇಗುಲದ ಅಡಿಪಾಯಕ್ಕೆ ಕಬ್ಬಿಣ, ಉಕ್ಕು ಬಳಸುತ್ತಿಲ್ಲ. ಹಾರು ಬೂದಿಯ ಕಾಂಕ್ರೀಟ್ ಬಲಿಷ್ಠವಾಗಿದ್ದು, ರಾಸಾಯನಿಕ ಪ್ರತಿರೋಧ ಗುಣ ಹೊಂದಿ ರುವುದರಿಂದ ಬಾಳಿಕೆ ಹೆಚ್ಚು ಎಂದಿದ್ದಾರೆ.
ಪ್ರಮುಖರ ಉಪಸ್ಥಿತಿ
ನಿರ್ಮಾಣ ಆರಂಭದ ವೇಳೆ ಯುಎಇಯಲ್ಲಿ ಭಾರತದ ರಾಯಭಾರಿ ಪವನ್ ಕಪೂರ್ ಮತ್ತು ದುಬಾೖಯಲ್ಲಿರುವ ಭಾರತದ ದೂತಾವಾಸ ಕಚೇರಿಯ ಕಾನ್ಸುಲ್ ಜನರಲ್ ವಿಪುಲ್, ಭಾರತೀಯ ವ್ಯಾಪಾರ ಸಮುದಾಯದ ಪ್ರಮುಖ ಸದಸ್ಯರು ಮತ್ತು ಸಮುದಾಯ ಅಭಿವೃದ್ಧಿ ಪ್ರಾಧಿಕಾರ (ಸಿಡಿಎ), ದುಬಾೖ ಮತ್ತು ಅಬುಧಾಬಿಯ ಸದಸ್ಯರು ಹಾಜರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Israel – Iran: ಕ್ಷಿಪಣಿ ದಾಳಿಯ ಮೂಲಕ ಸೇಡು ತೀರಿಸಿಕೊಂಡ ಇಸ್ರೇಲ್; ಎಚ್ಚರಿಕೆ ನೀಡಿದ ಇರಾನ್
Russia War: ಉಕ್ರೇನ್ ಮೇಲೆ ರಷ್ಯಾ ಭೀಕರ ದಾಳಿ-17 ಮಂದಿ ಮೃತ್ಯು; ನೆರವಿಗಾಗಿ ಮನವಿ
ನನ್ನ ಪತ್ನಿಗೆ ಏನಾದರೂ ಆದರೆ…: ಸೇನಾ ಮುಖ್ಯಸ್ಥರಿಗೆ ಎಚ್ಚರಿಕೆ ನೀಡಿದ ಇಮ್ರಾನ್ ಖಾನ್
Heavy Rain: ಮರಳುಗಾಡು ದುಬೈನಲ್ಲಿ ಧಾರಾಕಾರ ಮಳೆ, ಪ್ರವಾಹ ಪರಿಸ್ಥಿತಿ-ಜನಜೀವನ ಅಸ್ತವ್ಯಸ್ತ
Rain: ವರುಣನ ಆರ್ಭಟಕ್ಕೆ ನಲುಗಿದ ದುಬೈ… ವಿಮಾನ ನಿಲ್ದಾಣ ಜಲಾವೃತ, ಜನಜೀವನ ಅಸ್ತವ್ಯಸ್ಥ
MUST WATCH
ಹೊಸ ಸೇರ್ಪಡೆ
Lok Sabha Election: ‘ಬಿವೈಆರ್ಗೆ 3 ಲಕ್ಷ ಮತ ಅಂತರದ ಗೆಲುವು ಖಚಿತ’
ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ
Kushtagi: ನಿರೀಕ್ಷಿತ ಫಲಿತಾಂಶ ಬಾರದ ಹಿನ್ನೆಲೆ ಮನನೊಂದು ವಿದ್ಯಾರ್ಥಿನಿ ಆತ್ಮಹತ್ಯೆ
Vijayapura: ಸಿಡಿಲು ಬಡಿದು ಓರ್ವನಿಗೆ ಗಾಯ, ಮೂರು ಜಾನುವಾರು ಸಾವು
Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್