
ಅಬ್ಬಾ… ಉ.ಕೊರಿಯಾದಲ್ಲಿ ಆಹಾರ ಬಿಕ್ಕಟ್ಟು: ಒಂದು ಕೆಜಿ ಬಾಳೆಹಣ್ಣು ಬೆಲೆ 3,300 ರೂಪಾಯಿ!
ಸಮಸ್ಯೆಯನ್ನು ಶೀಘ್ರವೇ ಪರಿಹರಿಸುವಂತೆ ಕೇಂದ್ರ ಸಮಿತಿ ಸಭೆಯಲ್ಲಿ ಕಿಮ್ ಪಕ್ಷದ ಮುಖಂಡರಲ್ಲಿ ಮನವಿ
Team Udayavani, Jun 21, 2021, 1:44 PM IST

ಪ್ಯೊಂಗ್ಯಾಂಗ್: ಕೋವಿಡ್ 19 ಲಾಕ್ ಡೌನ್, ನಿರ್ಬಂಧಗಳ ಹೇರಿಕೆಯಿಂದ ಭಾರತದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಜತೆಗೆ ದೈನಂದಿನ ಬಳಕೆ ವಸ್ತುಗಳ ಬೆಲೆಯೂ ಹೆಚ್ಚಳವಾಗುತ್ತಿದೆ. ಏತನ್ಮಧ್ಯೆ ಉತ್ತರಕೊರಿಯಾದಲ್ಲಿ ತೀವ್ರ ಆಹಾರ ಬಿಕ್ಕಟ್ಟು ಸೃಷ್ಟಿಯಾಗಿದ್ದು, ಅಗತ್ಯ ವಸ್ತುಗಳ ಆಹಾರ, ಪದಾರ್ಥಗಳ ಬೆಲೆ ಗಗನಕ್ಕೇರಿದೆ ಎಂದು ಸರ್ಕಾರಿ ಸುದ್ದಿ ಸಂಸ್ಥೆ ಕೊರಿಯನ್ ಸೆಂಟ್ರಲ್ ನ್ಯೂಸ್ ಏಜೆನ್ಸಿ ತಿಳಿಸಿದೆ.
ಇದನ್ನೂ ಓದಿ:ಫೈನಲ್ ಟೆಸ್ಟ್: ವಿರಾಟ್ ವಿಕೆಟ್ ನಮಗೆ ದೊಡ್ಡ ತಿರುವು ನೀಡಿತು ಎಂದ ಜ್ಯಾಮಿಸನ್
ದೇಶದಲ್ಲಿನ ತೀವ್ರವಾದ ಆಹಾರದ ಕೊರತೆಯನ್ನು ಗಮನದಲ್ಲಿಟ್ಟುಕೊಂಡು ಇದೊಂದು ಉದ್ವಿಗ್ನ ಪರಿಸ್ಥಿತಿ ಎಂದು ಉತ್ತರಕೊರಿಯಾ ಸರ್ವೋಚ್ಛ ನಾಯಕ ಕಿಮ್ ಜಾಂಗ್ ಒಪ್ಪಿಕೊಂಡಿರುವುದಾಗಿ ವರದಿಯಾಗಿದೆ.
ಕಳೆದ ವರ್ಷದ ಚಂಡಮಾರುತದ ಹೊಡೆತದಿಂದಾಗಿ ಸಂಭವಿಸಿದ ಹಾನಿಯಿಂದಾಗಿ ಕೃಷಿ ಕ್ಷೇತ್ರ ತನ್ನ ಧಾನ್ಯ ಉತ್ಪಾದನೆಯ ಯೋಜನೆಯನ್ನು ಪೂರೈಕೆ ಮಾಡಲು ವಿಫಲವಾದ ಪರಿಣಾಮ ಆಹಾರ ಕೊರತೆಗೆ ಕಾರಣವಾಗುವ ಮೂಲಕ ಜನರು ಉದ್ವಿಗ್ನಗೊಳ್ಳುವಂತಾಗಿದೆ ಎಂದು ಕಿಮ್ ಜಾಂಗ್ ಉನ್ ತಿಳಿಸಿದ್ದಾರೆ.
ಅಬ್ಬಾ ಹುಬ್ಬೇರಿಸಬೇಡಿ…ಒಂದು ಕೇಜಿ ಬಾಳೆಹಣ್ಣಿಗೆ…
ಹೌದು ಬೆಲೆ ಏರಿಕೆ ಬಿಸಿ ಹೇಗೆ ಜನಸಾಮಾನ್ಯರಿಂದ ಹಿಡಿದು ಮಧ್ಯಮವರ್ಗದವರಿಗೆ ತಟ್ಟಬಹುದು ಎಂಬುದಕ್ಕೆ ಉತ್ತರಕೊರಿಯಾದ ಪರಿಸ್ಥಿತಿಯೇ ಸಾಕ್ಷಿಯಾಗಿದೆ. ವರದಿಗಳ ಪ್ರಕಾರ, ಉತ್ತರಕೊರಿಯಾದಲ್ಲಿ ಆಹಾರ, ಪದಾರ್ಥಗಳ ಬೆಲೆ ಗಗನಕ್ಕೇರತೊಡಗಿದೆ.
ರಾಜಧಾನಿ ಪೊಂಗ್ಯಾಂಗ್ ನಲ್ಲಿ ಒಂದು ಕೆಜಿ ಬಾಳೆ ಹಣ್ಣನ್ನು 45 ಡಾಲರ್ (3,335 ರೂಪಾಯಿ) ಗೆ ಮಾರಾಟ ಮಾಡಲಾಗುತ್ತಿದೆ. ಬ್ಲ್ಯಾಕ್ ಟೀ ಪ್ಯಾಕೆಟ್ ಗೆ 5,190 ರೂಪಾಯಿ, ಕಾಫಿ ಪುಡಿ ಒಂದು ಕೆಜಿ ಪ್ಯಾಕೇಟ್ ಗೆ 7,414 ರೂಪಾಯಿ ಎಂದು ವರದಿ ತಿಳಿಸಿದೆ. ದೇಶದಲ್ಲಿ ತಲೆದೋರಿರುವ ಆಹಾರ ಸಮಸ್ಯೆಯನ್ನು ಶೀಘ್ರವೇ ಪರಿಹರಿಸುವಂತೆ ಕೇಂದ್ರ ಸಮಿತಿ ಸಭೆಯಲ್ಲಿ ಕಿಮ್ ಪಕ್ಷದ ಮುಖಂಡರಲ್ಲಿ ಮನವಿ ಮಾಡಿಕೊಂಡಿರುವುದಾಗಿ ವರದಿ ತಿಳಿಸಿದೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH

ಕಾಫಿನಾಡಲ್ಲಿ ಮುಂದುವರಿದ ಮತದಾನ ಬಹಿಷ್ಕಾರದ ಕೂಗು

ಅನುದಾನ ನೀಡಿ ವರ್ಷವಾದರೂ ಆರಂಭವಾಗದ ಕಾಮಗಾರಿ ; ಗ್ರಾಮಸ್ಥರಿಂದ ಚುನಾವಣಾ ಬಹಿಷ್ಕಾರದ ಎಚ್ಚರಿಕೆ

ಮರಳಿನಲ್ಲಿ ಅರಳಿತು ತುಳುನಾಡ ನಾಗಾರಾಧನೆ | Malpe Beach Uthsava 2023 | Udupi – Udayavani

Beach Utsavaದಲ್ಲಿ ತರ ತರಹದ ಸ್ಪರ್ಧೆ, ಚಟುವಟಿಕೆಗಳು !ರಘುಪತಿ ಭಟ್ಟರು ಹೇಳಿದ್ದೇನು ?

ಕೃಷ್ಣ ನಗರಿಯ ಕುರಿತು ಅಭಿಮಾನದ ಮಾತುಗಳನ್ನಾಡಿದ Melody King Rajesh Krishnan
ಹೊಸ ಸೇರ್ಪಡೆ

ಸಿ.ಟಿ ರವಿ ವಿರುದ್ಧ ಸ್ಪರ್ಧಿಸಿದರೆ ಅಡಿಕೆ ತೋಟ ಮಾರಿ 1 ಕೋಟಿ ರೂ ಕೊಡುತ್ತೇನೆ: ಸಿದ್ದರಾಮಯ್ಯಗೆ ಆಹ್ವಾನ

‘ಟಿಪ್ಪು ನಿಜ ಕನಸು’ ನಾಟಕದ ವಿರುದ್ದದ ದೂರು ಹಿಂಪಡೆದ ಅರ್ಜಿದಾರ: ಅಡ್ಡಂಡ ಸಂತಸ

‘ನಟ ಭಯಂಕರ’ನಿಗೆ ತಲೆಬಿಸಿ ತಂದ ರಾಸಲೀಲೆ ಸಿಡಿ..!

ಪ್ರತಿಭಾವಂತ ಕ್ರಿಕೆಟ್ ಪಟುಗಳ ತವರು ಕರ್ನಾಟಕ: ಕೆ.ವೈ.ವೆಂಕಟೇಶ್

ಎರಡು ಅದ್ಭುತ ಕ್ಯಾಚ್ ಗಳಿಂದ ಬೆರಗು ಮೂಡಿಸಿದ ಸೂರ್ಯಕುಮಾರ್; ವಿಡಿಯೋ ನೋಡಿ