ಸೇನೆ ವಿರೋಧಿಗಳಿಗೆ ಉಗ್ರ ಪಟ್ಟ
ಪ್ರತಿರೋಧ ಒಡ್ಡಿದವರಿಗೆಲ್ಲ ಪಾಕ್ ಸರಕಾರದಿಂದ ಹಿಂಸೆ
Team Udayavani, Oct 20, 2019, 4:25 AM IST
ಇಸ್ಲಾಮಾಬಾದ್: ಪಾಕಿಸ್ಥಾನದಲ್ಲಿ ಸೇನೆಯ ಕುಕೃತ್ಯಗಳನ್ನು ವಿರೋಧಿಸಿದವರಿಗೆ ಉಗ್ರ ಪಟ್ಟವನ್ನು ಕಟ್ಟಲಾಗುತ್ತಿದ್ದು, ಅವರಿಗೆ ಮಾನಸಿಕ ಹಿಂಸೆ ನೀಡುತ್ತಿರುವುದು ತಿಳಿದು ಬಂದಿದೆ. ಇತ್ತೀಚೆಗೆ ಸೇನೆಯ ಕುಕೃತ್ಯವನ್ನು ಖಂಡಿಸಿ ಮಾತನಾಡಿದ್ದ ಗುಲಾಲೈ ಇಸ್ಮಾಯಿಲ್ ಎಂಬ ಮಹಿಳೆಯ ವಿರುದ್ಧ ಉಗ್ರರಿಗೆ ನೆರವು ನೀಡಿದ ಆರೋಪ ಹೊರಿಸಿ ಎಫ್ಐಆರ್ ದಾಖಲಿಸಲಾಗಿತ್ತು. ಅಷ್ಟೇ ಅಲ್ಲ, ಆಕೆಯ ಮನೆಯ ಮೇಲೂ ದಾಳಿ ನಡೆಸಲಾಗಿತ್ತು.
ಸದ್ಯ ಈಕೆ ಪಾಕಿಸ್ಥಾನ ತೊರೆದು ಅಮೆರಿಕದಲ್ಲಿ ಆಶ್ರಯ ಕೋರಿದ್ದಾರೆ. ಈಕೆಯ ತಂದೆ ಮತ್ತು ತಾಯಿ ಪಾಕಿಸ್ಥಾನದಲ್ಲಿದ್ದು, ಇವರ ಮೇಲೂ ದೂರು ದಾಖಲಿಸಿ ಹಿಂಸೆ ನೀಡಲಾಗುತ್ತಿದೆ. ಕೆಲವೇ ದಿನಗಳ ಹಿಂದಷ್ಟೇ ಮನೆಯ ಮೇಲೆ ದಾಳಿ ನಡೆಸುವ ಯತ್ನವನ್ನೂ ನಡೆಸ ಲಾಗಿದೆ ಎಂದು ತಿಳಿದುಬಂದಿದೆ.
ಗುಲಾಲೈ ಕುಟುಂಬವು ಪಾಶೂನ್ ಚಳವಳಿಗೆ ಬೆಂಬಲ ವ್ಯಕ್ತಪಡಿಸಿದ್ದು, ಸೇನೆಯ ಕೆಂಗಣ್ಣಿಗೆ ಗುರಿಯಾಗಿದೆ. ಪಾಶೂನ್ ಚಳ ವಳಿಯು ಪಾಕ್ ಸೇನೆ ನಡೆಸುತ್ತಿರುವ ಹಿಂಸಾ ಚಾರವನ್ನು ತೀವ್ರವಾಗಿ ಖಂಡಿಸುತ್ತಿದೆ. ಈ ಚಳವಳಿಯು ಅಫ್ಘಾನಿಸ್ತಾನದ ಗಡಿ ಭಾಗ ದಲ್ಲಿ ಸಕ್ರಿಯವಾಗಿದೆ.ಗುಲಾಲೈ ಇಸ್ಮಾಯಿಲ್ ತಂದೆ ಉರ್ದು ಉಪನ್ಯಾಸಕರಾಗಿದ್ದು, 1980ರಿಂ ದಲೂ ಸೇನೆಯ ಹಿಂಸಾಚಾರವನ್ನು ವಿರೋಧಿ ಸುತ್ತಿ ದ್ದಾರೆ. ಇವರು ಹಲವು ಬಾರಿ ಸೇನೆಯ ದಾಳಿಗೆ ತುತ್ತಾಗಿದ್ದು, ಜೈಲು ವಾಸವನ್ನೂ ಅನು ಭವಿಸಿದ್ದಾರೆ. ಇವರ ವಿರುದ್ಧ ಉಗ್ರ ಸಂಘಟನೆ ತಾಲಿಬಾನ್ ಕೂಡ ಕತ್ತಿ ಮಸೆಯುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ
Thailandನಲ್ಲಿ ಗುಜರಿ ಮಾಫಿಯಾದ ಕಿಂಗ್ ಪಿನ್ ರವಿ ಕಾನಾ, ಪ್ರಿಯತಮೆ ಕಾಜಲ್ ಜಾ ಬಂಧನ
ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ
Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು
Kuala Lumpur; ಪರಸ್ಪರ ಡಿಕ್ಕಿ ಹೊಡೆದು ಪತನಗೊಂಡ ಕಾಪ್ಟರ್ಗಳು: 10 ಯೋಧರು ಸಾವು
MUST WATCH
ಹೊಸ ಸೇರ್ಪಡೆ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ
Rajveer Diler: ಹೃದಯಾಘಾತದಿಂದ ಬಿಜೆಪಿ ಸಂಸದ ರಾಜ್ವೀರ್ ದಿಲೇರ್ ನಿಧನ
Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್
OTT Release: ವಿಜಯ್ ದೇವರಕೊಂಡ ʼಫ್ಯಾಮಿಲಿ ಸ್ಟಾರ್ʼ ಓಟಿಟಿ ರಿಲೀಸ್ಗೆ ಡೇಟ್ ಫಿಕ್ಸ್
Theft ಶಿರೂರು: ಜ್ಯುವೆಲ್ಲರಿ ಅಂಗಡಿ ಶಟರ್ ಮುರಿದು ಕಳ್ಳತನ