ಕ್ರೊಕಡೈಲ್ ಹಂಟರ್ ಸ್ಟೀವ್ ಇರ್ವಿನ್ ಗೆ ಡೂಡಲ್ ಗೌರವ


Team Udayavani, Feb 22, 2019, 3:18 AM IST

irvin-doodle-22-2.jpg

90ರ ದಶಕದಲ್ಲಿ ಮತ್ತು 2000ನೇ ಇಸವಿಯ ಪ್ರಾರಂಭದಲ್ಲಿ ಜಿಯೋಗ್ರಾಫಿಕ್, ಅನಿಮಲ್ ಪ್ಲಾನೆಟ್ ಚಾನೆಲ್ ಗಳಲ್ಲಿ ಈ ವ್ಯಕ್ತಿಯ ಮುಖ ಸಾಧಾರಣವಾಗಿ ಎಲ್ಲರಿಗೂ ಪರಿಚಯವಿದ್ದದ್ದೇ ಆಗಿತ್ತು. ಇವರೇ ಫೇಮಸ್ ಕ್ರೊಕಡೈಲ್ ಹಂಟರ್ ಅಂದರೆ ಮೊಸಳೆ ಬೇಟೆಗಾರ ಸ್ಟೀವ್ ಇರ್ವಿನ್. ತನ್ನ ವಿಶಿಷ್ಟ ಮ್ಯಾನರಿಸಂಗಳಿಂದ ಇರ್ವಿನ್ ಮೊಸಳೆಗಳನ್ನು ನೀರಿನಲ್ಲಿ, ದಡದಲ್ಲಿ ಹಿಡಿಯುವ ಶೈಲಿಯೇ ಜನಪ್ರಿಯವಾಗಿತ್ತು. ಹೀಗೆ ಪ್ರಾಣಿಪ್ರಿಯರ ಫೇವರಿಟ್ ಆಗಿದ್ದ ಇರ್ವಿನ್ ಅವರು 2006 ಸೆಪ್ಟಂಬರ್ 4ರಂದು ಸ್ಟಿಂಗ್ ರೇ ಫಿಶ್ ದಾಳಿಯಿಂದ ಮೃತಪಟ್ಟಿದ್ದರು. ‘ಓಶಿಯನ್ಸ್ ಡೆಡ್ಲಿಯೆಸ್ಟ್’ ಎಂಬ ಡಾಕ್ಯುಮೆಂಟರಿ ಚಿತ್ರೀಕರಣದ ಸಂದರ್ಭದಲ್ಲಿ ಈ ದುರ್ಘಟನೆ ಸಂಭವಿಸಿತ್ತು ಮತ್ತು ಸಾಹಸಿ ಇರ್ವಿನ್ ಅವರ ದುರಂತ ಮರಣಕ್ಕೆ ವಿಶ್ವವೇ ದುಃಖಿಸಿತ್ತು.


ಫೆಬ್ರವರಿ 22 ಸ್ಟೀವ್ ಇರ್ವಿನ್ ಅವರ ಜನ್ಮದಿನ. ಈ ಸಂದರ್ಭಕ್ಕಾಗಿ ಗೂಗಲ್ ಇರ್ವಿನ್ ಅವರಿಗೆ ‘ಡೂಡಲ್’ ಗೌರವವನ್ನು ಸಲ್ಲಿಸಿದೆ. ಡೂಡಲ್ ನಲ್ಲಿ ಇರ್ವಿನ್ ಅವರು ತನ್ನ ತೋಳಿನಲ್ಲಿ ಮೊಸಳೆಯೊಂದನ್ನು ಹಿಡಿದುಕೊಂಡು ನಗುತ್ತಿದ್ದರೆ, ಆ ಮೊಸಳೆ ‘ಎಲ್’ ಅಕ್ಷರವನ್ನು ತನ್ನ ಬಾಯಲ್ಲಿ ಕಚ್ಚಿಕೊಂಡಿರುವಂತೆ ಕ್ರಿಯೇಟಿವ್ ಆಗಿ ಈ ಡೂಡಲ್ ಅನ್ನು ಗೂಗಲ್ ರಚಿಸಿದೆ.


1996 ರಿಂದ 2007ರವರೆಗೆ ಇರ್ವಿನ್ ಅವರ ‘ದಿ ಕ್ರೊಕಡೈಲ್ ಹಂಟರ್’ ಡಾಕ್ಯುಮಂಟರಿ ಸರಣಿಯು ವಿಶ್ವಾದ್ಯಂತ ಅಪಾರ ಜನಮನ್ನಣೆ ಪಡೆದುಕೊಂಡಿತ್ತು. ಇಷ್ಟು ಮಾತ್ರವಲ್ಲದೆ ಇರ್ವಿನ್ ಅವರು ತನ್ನ ಪತ್ನಿ ಟೆರ್ರಿ ಇರ್ವಿನ್ ಮತ್ತು ಇಬ್ಬರು ಮಕ್ಕಳೊಂದಿಗೆ ಹಲವಾರು ಟಿ.ವಿ. ಶೋಗಳನ್ನು ನಡೆಸಿಕೊಡುತ್ತಿದ್ದರು. ಇವುಗಳಲ್ಲಿ ಕ್ರೊಕ್ ಫೈಲ್ಸ್ (1999-2001), ದಿ ಕ್ರೊಕಡೈಲ್ ಹಂಟರ್ ಡೈರೀಸ್ (2002-2006) ಮತ್ತು ನ್ಯೂ ಬ್ರೀಡ್ ವೆಟ್ಸ್ (2005) ಸರಣಿಗಳು ಇರ್ವಿನ್ ಅವರಿಗೆ ಅಪಾರ ಜನಪ್ರಿಯತೆಯನ್ನು ತಂದುಕೊಟ್ಟಿದ್ದವು. ಇಂತಹ ಪ್ರಾಣಿಪ್ರಿಯ ಸ್ಟೀವ್ ಇರ್ವಿನ್ ಇಂದು ಬದುಕಿದ್ದರೆ ಅವರಿಗೆ 57 ವರ್ಷಗಳಾಗಿರುತ್ತಿತ್ತು.

ತಮ್ಮ ಹೆತ್ತವರಿಂದ ಪ್ರಾರಂಭಿಸಲ್ಪಟ್ಟಿದ್ದ ಆಸ್ಟ್ರೇಲಿಯನ್ ಮೃಗಾಲಯದ ಒಡೆತನವನ್ನು ಇರ್ವಿನ್ ಅವರು ಹೊಂದಿದ್ದರು. ಈ ಮೃಗಾಲಯದಲ್ಲೇ ಇರ್ವಿನ್ ಅವರು ತಮ್ಮ ಪತ್ನಿಯನ್ನು ಪ್ರಥಮಬಾರಿ ಭೇಟಿಯಾಗಿದ್ದರು. ಇರ್ವಿನ್ ಕುಟುಂಬವೇ ವನ್ಯಜೀವಿಗಳು ಮತ್ತು ವನ್ಯಸ್ಥಳಗಳ ರಕ್ಷಣೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದೆ.

ಟಾಪ್ ನ್ಯೂಸ್

Team India; Not Hardik; Bhajji has suggested the name of Team India’s next T20 captain

Team India; ಹಾರ್ದಿಕ್ ಅಲ್ಲ; ಟೀಂ ಇಂಡಿಯಾದ ಮುಂದಿನ ಟಿ20 ನಾಯಕನ ಹೆಸರು ಸೂಚಿಸಿದ ಭಜ್ಜಿ

Neha ಕೊಲೆ ಆರೋಪಿ ನಿರ್ದೋಷಿಯಾಗಿ ಹೊರಗೆ ಬಂದರೆ ನಾವೇ ಶಿಕ್ಷೆ ಕೊಟ್ಟು ಜೈಲಿಗೆ ಹೋಗಲು ಸಿದ್ಧ

Neha ಕೊಲೆ ಆರೋಪಿ ನಿರ್ದೋಷಿಯಾಗಿ ಹೊರಗೆ ಬಂದ್ರೆ ನಾವೇ ಶಿಕ್ಷೆ ಕೊಟ್ಟು ಜೈಲಿಗೆ ಹೋಗಲು ಸಿದ್ಧ

18

ನೇಹಾ ಪ್ರಕರಣವನ್ನು ರಾಜಕೀಯಕ್ಕೆ ಬಳಸುವಂತಹ ನೀಚತನಕ್ಕೆ ಬಿಜೆಪಿ ಇಳಿದಿದೆ-ಚನ್ನರಾಜ ಹಟ್ಟಿಹೊಳಿ

Hubballi: ಮೂವರು ನಕಲಿ ಸಿಐಡಿ ಅಧಿಕಾರಿಗಳ ಬಂಧನ… ಮೊಬೈಲ್, ಬೈಕ್ ವಶ

Hubballi: ಮೂವರು ನಕಲಿ ಸಿಐಡಿ ಅಧಿಕಾರಿಗಳ ಬಂಧನ… ಮೊಬೈಲ್, ಬೈಕ್ ವಶ

ತಾಳಿಭಾಗ್ಯ ಯೋಜನೆ ತಂದ ಕಾಂಗ್ರೆಸ್ ಕಿತ್ತುಕೊಳ್ಳುವ ಕೆಲಸ ಎಂದೂ ಮಾಡಲ್ಲ: H.K. Patil

ತಾಳಿಭಾಗ್ಯ ಯೋಜನೆ ತಂದ ‘ಕಾಂಗ್ರೆಸ್’ ಕಿತ್ತುಕೊಳ್ಳುವ ಕೆಲಸ ಎಂದೂ ಮಾಡಲ್ಲ: H.K. Patil

Mumbai Airport: ನ್ಯೂಡಲ್ಸ್‌ ಪ್ಯಾಕೇಟ್‌ ನೊಳಗೆ ಕೋಟ್ಯಂತರ ಮೌಲ್ಯದ ವಜ್ರ ಕಳ್ಳಸಾಗಣೆ!

Mumbai Airport: ನ್ಯೂಡಲ್ಸ್‌ ಪ್ಯಾಕೇಟ್‌ ನೊಳಗೆ ಕೋಟ್ಯಂತರ ಮೌಲ್ಯದ ವಜ್ರ ಕಳ್ಳಸಾಗಣೆ!

ʼದುರ್ಗಿʼಯಾಗಿ ಚಂದನವನಕ್ಕೆ ಕಾಲಿಟ್ಟ ಕಾಲಿವುಡ್‌ ಬೆಡಗಿ: ಡಾಲಿ ಜೊತೆ ರೊಮ್ಯಾನ್ಸ್

ʼದುರ್ಗಿʼಯಾಗಿ ಚಂದನವನಕ್ಕೆ ಕಾಲಿಟ್ಟ ಕಾಲಿವುಡ್‌ ಬೆಡಗಿ: ಡಾಲಿ ಜೊತೆ ರೊಮ್ಯಾನ್ಸ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malaysian ನೌಕಾಪಡೆಯ 2 ಹೆಲಿಕಾಪ್ಟರ್ ಪತನ; 10 ಮಂದಿ ಮೃತ್ಯು, ಭಯಾನಕ ವಿಡಿಯೋ ಸೆರೆ

Malaysia ನೌಕಾಪಡೆಯ 2 ಹೆಲಿಕಾಪ್ಟರ್ ಪತನ; 10 ಮಂದಿ ಮೃತ್ಯು, ಭಯಾನಕ ವಿಡಿಯೋ ಸೆರೆ

Taiwan ನಲ್ಲಿ ಸರಣಿ ಭೂಕಂಪ… ರಾತ್ರಿಯಿಡೀ ಮನೆಯಿಂದ ಹೊರಗುಳಿದ ಮನೆಮಂದಿ

Taiwan ನಲ್ಲಿ ಸರಣಿ ಭೂಕಂಪ… ರಾತ್ರಿಯಿಡೀ ಮನೆಯಿಂದ ಹೊರಗುಳಿದ ಮನೆಮಂದಿ

1-wewwqewewqe

US ಪೌರತ್ವ: ಭಾರತೀಯರಿಗೆ ದ್ವಿತೀಯ ಸ್ಥಾನ

police USA

USA: ಅಪಘಾತದಲ್ಲಿ ಭಾರತ ಮೂಲದ ಇಬ್ಬರ ಸಾವು

ISREL

Hamas ದಾಳಿ ತಡೆಗೆ ವಿಫ‌ಲ: ಇಸ್ರೇಲ್‌ ಸೇನಾ ಗುಪ್ತಚರ ಮುಖ್ಯಸ್ಥ ರಾಜೀನಾಮೆ

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Team India; Not Hardik; Bhajji has suggested the name of Team India’s next T20 captain

Team India; ಹಾರ್ದಿಕ್ ಅಲ್ಲ; ಟೀಂ ಇಂಡಿಯಾದ ಮುಂದಿನ ಟಿ20 ನಾಯಕನ ಹೆಸರು ಸೂಚಿಸಿದ ಭಜ್ಜಿ

ಬಿಜೆಪಿ ದಲಿತರ ಪರ ಮೊಸಳೆ ಕಣ್ಣೀರು: ಬಿ.ಕೆ. ಹರಿಪ್ರಸಾದ

ಬಿಜೆಪಿ ದಲಿತರ ಪರ ಮೊಸಳೆ ಕಣ್ಣೀರು: ಬಿ.ಕೆ. ಹರಿಪ್ರಸಾದ

Haveri Lok Sabha constituency: “ಮೇ 7 ರಂದು ತಪ್ಪದೇ ಮತದಾನ ಮಾಡಿ’

Haveri Lok Sabha constituency: “ಮೇ 7 ರಂದು ತಪ್ಪದೇ ಮತದಾನ ಮಾಡಿ’

Neha ಕೊಲೆ ಆರೋಪಿ ನಿರ್ದೋಷಿಯಾಗಿ ಹೊರಗೆ ಬಂದರೆ ನಾವೇ ಶಿಕ್ಷೆ ಕೊಟ್ಟು ಜೈಲಿಗೆ ಹೋಗಲು ಸಿದ್ಧ

Neha ಕೊಲೆ ಆರೋಪಿ ನಿರ್ದೋಷಿಯಾಗಿ ಹೊರಗೆ ಬಂದ್ರೆ ನಾವೇ ಶಿಕ್ಷೆ ಕೊಟ್ಟು ಜೈಲಿಗೆ ಹೋಗಲು ಸಿದ್ಧ

18

ನೇಹಾ ಪ್ರಕರಣವನ್ನು ರಾಜಕೀಯಕ್ಕೆ ಬಳಸುವಂತಹ ನೀಚತನಕ್ಕೆ ಬಿಜೆಪಿ ಇಳಿದಿದೆ-ಚನ್ನರಾಜ ಹಟ್ಟಿಹೊಳಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.