ಸ್ಪರ್ಧಾತ್ಮಕ ರಾಷ್ಟ್ರವಾಗಲಿದೆ ಭಾರತ: ಅಮಿತಾಭ್ ಕಾಂತ್
Team Udayavani, Dec 14, 2019, 7:45 PM IST
ವಾಷಿಂಗ್ಟನ್: ಕಳೆದ ಕೆಲವು ವರ್ಷಗಳಿಂದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಜಾರಿಗೊಳಿಸಿರುವ ಐತಿಹಾಸಿಕ ಹಾಗೂ ಸರಣಿ ಸುಧಾರಣಾ ಕ್ರಮಗಳು ದೀರ್ಘಕಾಲದಲ್ಲಿ ಭಾರತವನ್ನು ಸ್ಪರ್ಧಾತ್ಮಕ ಹಾಗೂ ಉತ್ಪಾದಕ ದಕ್ಷ ರಾಷ್ಟ್ರವನ್ನಾಗಿಸಲಿದೆ ಎಂದು ನೀತಿ ಆಯೋಗದ ಸಿಇಒ ಅಮಿತಾಭ್ ಕಾಂತ್ ಹೇಳಿದ್ದಾರೆ. ಅಮೆರಿಕದ ಶೈಕ್ಷಣಿಕ ತಜ್ಞರು, ಸ್ಟಾರ್ಟಪ್ಗ್ಳು, ಕಾರ್ಪೊರೇಟ್ ಗಣ್ಯರು ಹಾಗೂ ಸರ್ಕಾರದ ಅಧಿಕಾರಿಗಳೊಂದಿಗಿನ ಸಭೆಗೆಂದು ಬೋಸ್ಟನ್ಗೆ ಆಗಮಿಸಿರುವ ಅಮಿತಾಭ್ ಅವರು ಪಿಟಿಐ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಈ ವಿಚಾರ ತಿಳಿಸಿದ್ದಾರೆ. ಭಾರತದ ಪ್ರಗತಿಯ ಕಥೆ ಈಗಷ್ಟೇ ಆರಂಭವಾಗಿದೆ. ಜಿಎಸ್ಟಿ, ದಿವಾಳಿ ಕಾಯ್ದೆ, ರೇರಾದಂಥ ರಿಯಲ್ ಎಸ್ಟೇಟ್ ಸುಧಾರಣಾ ಕ್ರಮಗಳು ಭಾರತದ ಆರ್ಥಿಕತೆಯನ್ನು ಎತ್ತರಕ್ಕೆ ಕೊಂಡೊಯ್ಯಲಿದೆ ಎಂದೂ ಅವರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pak ಆತ್ಮಾಹುತಿ ದಾಳಿ: ಐವರು ಜಪಾನೀಯರು ಪಾರು
Israel – Iran: ಕ್ಷಿಪಣಿ ದಾಳಿಯ ಮೂಲಕ ಸೇಡು ತೀರಿಸಿಕೊಂಡ ಇಸ್ರೇಲ್; ಎಚ್ಚರಿಕೆ ನೀಡಿದ ಇರಾನ್
Russia War: ಉಕ್ರೇನ್ ಮೇಲೆ ರಷ್ಯಾ ಭೀಕರ ದಾಳಿ-17 ಮಂದಿ ಮೃತ್ಯು; ನೆರವಿಗಾಗಿ ಮನವಿ
ನನ್ನ ಪತ್ನಿಗೆ ಏನಾದರೂ ಆದರೆ…: ಸೇನಾ ಮುಖ್ಯಸ್ಥರಿಗೆ ಎಚ್ಚರಿಕೆ ನೀಡಿದ ಇಮ್ರಾನ್ ಖಾನ್
Heavy Rain: ಮರಳುಗಾಡು ದುಬೈನಲ್ಲಿ ಧಾರಾಕಾರ ಮಳೆ, ಪ್ರವಾಹ ಪರಿಸ್ಥಿತಿ-ಜನಜೀವನ ಅಸ್ತವ್ಯಸ್ತ