ಬಂಜೆತನ ಪರಿಹಾರ ಭರವಸೆ ನೀಡಿ ಬ್ಲಾಕ್ಮೇಲ್
Team Udayavani, Oct 8, 2018, 6:00 AM IST
ಕಾಬೂಲ್: ಈ ತಾಯಿತ ಕಟ್ಟಿಕೊಳ್ಳಿ… ನಿಮ್ಮ ಬಂಜೆತನ ನಿವಾರಣೆಯಾಗುತ್ತದೆ… ಎಂದು ಲೆಕ್ಕವಿಲ್ಲದಷ್ಟು ಮಹಿಳೆಯರನ್ನು ಮೋಸ ಮಾಡಿ, ಬ್ಲಾಕ್ವೆುಲ್ ಮಾಡಿದ ರಸೂಲ್ ಲಾಂಡೆಗೆ ಈಗ ಅಫ್ಘಾನಿಸ್ತಾನದ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಈತ ಮೊದಲು ತಾಯಿತ ಕೊಟ್ಟು, ಸಮಸ್ಯೆ ಪರಿಹಾರವಾಗದಿದ್ದರೆ ತನ್ನೊಂದಿಗೆ ಮಲಗಲು ಹೇಳುತ್ತಿದ್ದ. ಮಹಿಳೆಯರೊಂದಿಗೆ ಲೈಂಗಿಕ ಸಂಬಂಧ ಬೆಳೆಸಿದ ವಿಡಿಯೋವನ್ನು ಚಿತ್ರೀಕರಿಸಿ ನಂತರ ಬ್ಲಾಕ್ವೆುàಲ್ ಮಾಡುತ್ತಿದ್ದ. ಪ್ರತಿ ತಿಂಗಳೂ ಇಷ್ಟು ಹಣ ಕೊಡಬೇಕೆಂದು ತಾಕೀತು ಮಾಡುತ್ತಿದ್ದ. ಧಾರ್ಮಿಕವಾಗಿ ಅತ್ಯಂತ ಸಂಪ್ರದಾಯಬದ್ಧ ದೇಶ ಅಫ್ಘಾನಿಸ್ತಾನದಲ್ಲಿ ಈತ ಈ ಕೃತ್ಯವನ್ನು ಹಲವು ವರ್ಷಗಳಿಂದ ನಡೆಸಿಕೊಂಡು ಬಂದಿದ್ದ. ಅಷ್ಟೇ ಅಲ್ಲ, ಕೆಲವು ವರ್ಷಗಳ ಹಿಂದೆ ಈತನ ಕೃತ್ಯ ಬಹಿರಂಗವಾದಾಗ ಟರ್ಕಿಗೆ ಓಡಿಹೋಗಿದ್ದ. ನಂತರ ಈತ ವಾಪಸ್ ಅಫ್ಘಾನಿಸ್ತಾನಕ್ಕೆ ಬಂದು ಸೇನೆಯನ್ನೂ ಸೇರಿಕೊಂಡಿದ್ದ. ಆದರೆ ಸೇನೆಯಲ್ಲಿ ಈತನ ಪೂರ್ವಾಪರ ತಿಳಿಯುತ್ತಿದ್ದಂತೆಯೇ ಅಲ್ಲಿಂದ ಕಾಲ್ಕಿತ್ತಿದ್ದಾನೆ. ಈಗ ಈತನ ಹುಡುಕಾಟ ನಡೆದಿದೆ.
ಆದರೆ ರಸೂಲ್ ಹುಡುಕಾಟ ನಡೆಸುತ್ತಿದ್ದಂತೆ ಸಮಾಜದಲ್ಲಿ ಈತ ನಡೆಸಿದ ಕುಕೃತ್ಯ ಬಯಲಾಗುತ್ತಿದೆ. ಮುಲ್ಲಾ ಲಾಂಡೆ ಎಂದೇ ಕುಖ್ಯಾತನಾಗಿರುವ ಈತನಿಂದ ಚಿಕಿತ್ಸೆ ಪಡೆದಿರುವ ಮಹಿಳೆಯರು ಸಮಾಜಕ್ಕೆ ಹೆದರಿ ಆತ್ಮಹತ್ಯೆಗೆ ಮುಂದಾಗುತ್ತಿದ್ದಾರೆ. ಕಳೆದ ಮೂರು ತಿಂಗಳಲ್ಲಿ ಇದೇ ರೀತಿ ಒಂಭತ್ತಕ್ಕೂ ಹೆಚ್ಚು ಮಹಿಳೆಯರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಈತನಿಂದ ಚಿಕಿತ್ಸೆ ಪಡೆದ ಹಲವರಿಗೆ ಮಕ್ಕಳೂ ಆಗಿದ್ದು, ಮರ್ಯಾದಾ ಹತ್ಯೆಯ ಶಂಕೆ ಇನ್ನಷ್ಟು ವ್ಯಾಪಕವಾಗುವ ಸಾಧ್ಯತೆಯಿದೆ. ಸದ್ಯ ಮುಲ್ಲಾ ಲಾಂಡೆ ಇರಾನ್ಗೆ ತೆರಳಿದ್ದಾನೆ ಎಂದು ಹೇಳಲಾಗುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ
Thailandನಲ್ಲಿ ಗುಜರಿ ಮಾಫಿಯಾದ ಕಿಂಗ್ ಪಿನ್ ರವಿ ಕಾನಾ, ಪ್ರಿಯತಮೆ ಕಾಜಲ್ ಜಾ ಬಂಧನ
ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ
Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು
MUST WATCH
ಹೊಸ ಸೇರ್ಪಡೆ
IPL: ಎಲ್ಲೆ ಮೀರಿ ವಿಕೆಟ್ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್ ಸಲಾಂಗೆ ಛೀಮಾರಿ
IPL: ಇಂಪ್ಯಾಕ್ಟ್ ಪ್ಲೇಯರ್ ನಿಯಮಕ್ಕೆ ಅಕ್ಷರ್ ಪಟೇಲ್ ಕೂಡ ವಿರೋಧ
Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ
Sumalatha Ambareesh: ಟ್ವೀಟ್ನಲ್ಲಿ ಸಂಸದೆ ಸುಮಲತಾ ಅಂಬರೀಶ್ ವಿವೇಕದ ಪಾಠ
B.S.Yediyurappa: ಶಾಸಕ ಪ್ರಭು ಚವ್ಹಾಣ ಹೆಸರು ಹೇಳುತ್ತಿದ್ದಂತೆ ಬಿಎಸ್ವೈ ಗರಂ