
ಮಸೀದಿ ಮೇಲೆ ಬಂದೂಕುಧಾರಿ ಗುಂಪು ದಾಳಿ: ಧರ್ಮ ಗುರು ಸೇರಿ 12 ಮಂದಿ ಬಲಿ
Team Udayavani, Dec 5, 2022, 9:40 AM IST

ನವದೆಹಲಿ: ಬಂದೂಕುಧಾರಿ ಡಕಾಯಿತರ ಗುಂಪೊಂದು ಮಸೀದಿಯೊಂದರ ಮೇಲೆ ದಾಳಿ ಮಾಡಿ 12 ಮಂದಿಯನ್ನು ಕೊಂದು, ಇತರರನ್ನು ಅಪಹರಿಸಿರುವ ಘಟನೆ ನೈಜೀರಿಯಾದಲ್ಲಿ ಡಿ.3 ( ಶನಿವಾರದಂದು) ರಾತ್ರಿ ನಡೆದಿದೆ ಎಂದು ವರದಿ ತಿಳಿಸಿದೆ.
ಮೈಗಾಮ್ಜಿ ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸುತ್ತಿದ್ದ ವೇಳೆ ಬೈಕ್ ನಲ್ಲಿ ಬಂದ ಗುಂಪೊಂದು ಏಕಾಏಕಿ ಗುಂಡು ಹಾರಿಸಲು ಶುರು ಮಾಡಿದೆ. ಇದರಿಂದ ಆತಂಕಗೊಂಡ ಜನರು ಅತ್ತಿತ್ತ ಓಡಿದ್ದಾರೆ. ಬಂದೂಕುಧಾರಿಗಳು ಕೆಲವರನ್ನು ಶೂಟ್ ಮಾಡಿದ್ದಾರೆ. ಭಯದಿಂದ ಓಡಿ ಕೆಲವರು ಪ್ರಾಣ ಉಳಿಸಿಕೊಂಡಿದ್ದು, ಮಸೀದಿಯ ಮುಖ್ಯ ಧರ್ಮಗುರು (ಇಮಾಮ್) ಸೇರಿದಂತೆ ಒಟ್ಟು 12 ಮಂದಿಯನ್ನು ಡಕಾಯಿತರು ಗುಂಡು ಹೊಡೆದು ಸಾಯಿಸಿದ್ದಾರೆಂದು ವರದಿ ತಿಳಿಸಿದೆ.
ಇಷ್ಟು ಮಾತ್ರವಲ್ಲದೆ ಡಕಾಯಿತರು ಗ್ರಾಮಸ್ಥರಲ್ಲಿ ಹಣಕ್ಕೆ ಬೇಡಿಕೆಯಿಟ್ಟು ಕೆಲವರನ್ನು ಅಪಹರಿಸಿಕೊಂಡು ಓಡಿದ್ದಾರೆ ಎಂದು ವರದಿ ತಿಳಿಸಿದೆ.
ಪೊಲೀಸರು ಬಂದೂಕುಧಾರಿ ಗುಂಪಿನ ಪತ್ತೆಗೆ ತನಿಖೆ ಆರಂಭಿಸಿದ್ದಾರೆ. ಸ್ಥಳೀಯರು ಕೆಲ ಭಕ್ತರನ್ನು ರಕ್ಷಣೆ ಮಾಡಿದ್ದರೆಂದು ಪೊಲೀಸರು ಹೇಳಿದ್ದಾರೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಟೊಯೋಟಾ ಮೋಟಾರ್ನ ಅಧ್ಯಕ್ಷರಾಗಿ ಅಕಿಯೋ ಟೊಯೋಡಾ ಆಯ್ಕೆ

ಆಸ್ಟ್ರೇಲಿಯಾದಲ್ಲಿ ಕಿಡಿಗೇಡಿಗಳಿಂದ ಹಿಂದೂ ದೇಗುಲ ಧ್ವಂಸ; ಭಾರತದಿಂದ ಖಂಡನೆ

ಎಮಿರೇಟ್ಸ್ ವಿಮಾನದಲ್ಲಿ ದುಬೈಗೆ ಪ್ರಯಾಣ…ಆಕಾಶ ಮಾರ್ಗ ಮಧ್ಯದಲ್ಲೇ ಮಗುವಿಗೆ ಜನ್ಮ

ಎರಡು ವರ್ಷ ನಿಷೇಧದ ಬಳಿಕ ಫೇಸ್ಬುಕ್,ಇನ್ಸ್ಟಾಗ್ರಾಮ್ ಗೆ ಬರಲಿದ್ದಾರೆ ಡೊನಾಲ್ಡ್ ಟ್ರಂಪ್

ನೈಜೀರಿಯಾ: ಬಾಂಬ್ ಸ್ಫೋಟಗೊಂಡು ಜಾನುವಾರು, 27 ಮಂದಿ ಕುರಿಗಾಹಿಗಳು ಮೃತ್ಯು
MUST WATCH

ಅನುದಾನ ನೀಡಿ ವರ್ಷವಾದರೂ ಆರಂಭವಾಗದ ಕಾಮಗಾರಿ ; ಗ್ರಾಮಸ್ಥರಿಂದ ಚುನಾವಣಾ ಬಹಿಷ್ಕಾರದ ಎಚ್ಚರಿಕೆ

ಮರಳಿನಲ್ಲಿ ಅರಳಿತು ತುಳುನಾಡ ನಾಗಾರಾಧನೆ | Malpe Beach Uthsava 2023 | Udupi – Udayavani

Beach Utsavaದಲ್ಲಿ ತರ ತರಹದ ಸ್ಪರ್ಧೆ, ಚಟುವಟಿಕೆಗಳು !ರಘುಪತಿ ಭಟ್ಟರು ಹೇಳಿದ್ದೇನು ?

ಕೃಷ್ಣ ನಗರಿಯ ಕುರಿತು ಅಭಿಮಾನದ ಮಾತುಗಳನ್ನಾಡಿದ Melody King Rajesh Krishnan

ಯಾರು ಬೇಕಾದರೂ ಸುಲಭವಾಗಿ ನಂದಿ ಬಟ್ಟಲು ಹೂವಿನಿಂದ ಸುಂದರ ಹಾರ ತಯಾಸಬಹುದು
ಹೊಸ ಸೇರ್ಪಡೆ

“ಮಗುವನ್ನು ಉಳಿಸಲು ಆಗುವುದಿಲ್ಲ.. ಮಕ್ಕಳನ್ನು ಕೊಂದು ತಾವೂ ಆತ್ಮಹತ್ಯೆ ಮಾಡಿಕೊಂಡ ದಂಪತಿ

ಬಂಡಾಯಕ್ಕೇ ಸದ್ಯ ಬಿಸಿ: ಭಿನ್ನ ಧ್ವನಿಗಳ ಮೆತ್ತಗಾಗಿಸಲು ಅಖಾಡಕ್ಕೆ ಇಳಿದ ಬಿಜೆಪಿ ವರಿಷ್ಠರು

ಎಲ್ಲ ಕಾಲೇಜುಗಳಲ್ಲೂ ರಾಯಣ್ಣ, ನೇತಾಜಿ ಪ್ರತಿಮೆ ಸ್ಥಾಪನೆಗೆ ಆದೇಶ: ಸಿಎಂ ಬೊಮ್ಮಾಯಿ

ನಾರೀಶಕ್ತಿಗೆ ಜೈಕಾರ: ಮಿಲಿಟರಿಯಲ್ಲಿ ನಾರೀಶಕ್ತಿ, ಸ್ತಬ್ಧಚಿತ್ರಗಳಲ್ಲೂ “ನಾರಿ’

ಅ-19 ಮಹಿಳಾ ಟಿ20 ವಿಶ್ವಕಪ್: ಇಂದು ಭಾರತ-ನ್ಯೂಜಿಲೆಂಡ್ ಉಪಾಂತ್ಯ