ಪಾಕಿಸ್ಥಾನದಲ್ಲಿ ಶುಕ್ರವಾರದ ಭಾಷಣ: ಉಗ್ರ ಸಯೀದ್ಗೆ ಸರಕಾರದ ನಿಷೇಧ
Team Udayavani, Mar 8, 2019, 6:04 AM IST
ಲಾಹೋರ್ : ಇಲ್ಲಿನ ಜಮಾದ್ ಉದ್ ದಾವಾ ಪ್ರಧಾನ ಕಾರ್ಯಾಲಯದ ಕಾದ್ಸಿಯಾ ಜಾಮಿಯಾ ಮಸೀದಿಯಲ್ಲಿ ಕಳೆದ ಹಲವು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಇಂದು ಶುಕ್ರವಾರದ ಪ್ರಾರ್ಥನಾ ಸಭೆಯಲ್ಲಿ ಉಪನ್ಯಾಸ ಮಾಡದಂತೆ ಉಗ್ರ ಹಾಫೀಜ್ ಸಯೀದ್ಗೆ ನಿಷೇಧ ಹೇರಲಾಗಿದೆ.
ಮುಂಬಯಿ ಉಗ್ರ ದಾಳಿಯ ಮಾಸ್ಟರ್ ಮೈಂಡ್ ಹಾಫೀಜ್ ಸಯೀದ್ ಗೆ ಪಾಕಿಸ್ಥಾನದ ಪಂಜಾಬ್ ಪ್ರಾಂತ್ಯದ ಲಾಹೋರ್ನಲ್ಲಿರುವ ಜೆಯುಡಿ ಪ್ರಧಾನ ಕಾರ್ಯಾಲಯದ ಮಸೀದಿಯಲ್ಲಿ ಇಂದು ಶುಕ್ರವಾರ ಭಾಷಣ ಮಾಡದಂತೆ ಪಾಕ್ ಸರಕಾರ ಇದೇ ಮೊದಲ ಬಾರಿಗೆ ನಿಷೇಧಿಸಿರುವುದು ಅಚ್ಚರಿಯ ವಿದ್ಯಮಾನವೆಂದು ತಿಳಿಯಲಾಗಿದೆ.
ಕಾದ್ಸಿಯಾ ಮಸೀದಿ ಪಂಬಾಜ್ ಸರಕಾರದ ನಿಯಂತ್ರಣದಲ್ಲಿರುವ ಹೊರತಾಗಿಯೂ ಈ ವರೆಗೂ ಹಾಫಿಜ್ ಸಯೀದ್ಗೆ ಶುಕ್ರವಾರದ ಪ್ರಾರ್ಥನಾ ಸಭೆಯಲ್ಲಿ ಭಾಷಣ ಮಾಡದಂತೆ ನಿರ್ಬಂಧಿಸಿರಲಿಲ್ಲ.
ಭಾರತ – ಪಾಕ್ ಉದ್ವಿಗ್ನತೆಯ ಹಿನ್ನೆಲೆಯಲ್ಲಿ ಉಗ್ರರನ್ನು ಸಂಪೂರ್ಣವಾಗಿ ಮಟ್ಟ ಹಾಕಬೇಕೆಂಬ ಅಂತಾರಾಷ್ಟ್ರೀಯ ಒತ್ತಡ ಪಾಕ್ ಸರಕಾರದ ಮೇಲೆ ಹೆಚ್ಚುತ್ತಿರುವ ಕಾರಣ ಪಂಜಾಬ್ ಸರಕಾರ ಕಾದ್ಸಿಯಾ ಜಾಮೀಯಾ ಮಸೀದಿಯನ್ನು ಸೀಲ್ ಮಾಡಿದ್ದು, ಹಾಫೀಜ್ ಸಯೀದ್ ಇಂದು ಶುಕ್ರವಾರ ಭಾಷಣ ಮಾಡುವುದನ್ನು ನಿಷೇಧಿಸಿದೆ ಎಂದು ಪಂಜಾಬ್ ಸರಕಾರದ ಹಿರಿಯ ಅಧಿಕಾರಿಯೋರ್ವರು ಪಿಟಿಐ ಗೆ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
AMU: ಇತಿಹಾಸದಲ್ಲೇ ಮೊದಲು… ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯಕ್ಕೆ ಮಹಿಳಾ ಉಪಕುಲಪತಿ ನೇಮಕ
Bengaluru: ಕದಂಬ ಹೋಟೆಲ್ ಸ್ಫೋಟ ಮಾಡುವುದಾಗಿ ಬೆದರಿಕೆ
Mandya LokSabha Constituency:ಸಕ್ಕರೆ ನಾಡಿನ ಪಾರುಪತ್ಯಕ್ಕೆ ಸಾಂಪ್ರದಾಯಿಕ ಜಿದ್ದಾಜಿದ್ದಿ
Rameshwaram Cafe Case: ರಾಮೇಶ್ವರಂ ಕೆಫೆ ಸ್ಫೋಟ ಶಂಕಿತರು ಮತ್ತೆ 7 ದಿನ ಎನ್ಐಎ ವಶಕ್ಕೆ
FIR: ಬಾಲಕಿಗೆ ಲೈಂಗಿಕ ದೌರ್ಜನ್ಯ, ಆರೋಪಿ ಬಂಧನ: ಎಫ್ಐಆರ್