ನಟಿ ಏಂಜಲಿನಾ ಉದಾಹರಣೆ ನೀಡಿ ರೋಗಿಗಳ ಸ್ತನ, ಗುಪ್ತಾಂಗ ಪರೀಕ್ಷೆ; ಭಾರತೀಯ ಮೂಲದ ವೈದ್ಯ ದೋಷಿ
ರೋಗಿಗಳ ಭಯವನ್ನೇ ವೈಯಕ್ತಿಕ ತೃಪ್ತಿಗಾಗಿ ಬಳಸಿಕೊಂಡಿರುವುದಾಗಿ ಕಾಟೆ ಬೆಕ್ಸ್ ವಾದ ಮಂಡಿಸಿದ್ದರು
Team Udayavani, Dec 11, 2019, 3:45 PM IST
ಲಂಡನ್: ಕ್ಯಾನ್ಸರ್ ರೋಗಿಗಳ ಭಯವನ್ನೇ ಬಂಡವಾಳ ಮಾಡಿಕೊಂಡು ಅನಪೇಕ್ಷಿತವಾಗಿ ಮಹಿಳೆಯರ ಗುಪ್ತಾಂಗಗಳನ್ನು ಪರೀಕ್ಷಿಸುವ ಮೂಲಕ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಭಾರತೀಯ ಮೂಲದ ವೈದ್ಯ ದೋಷಿ ಎಂದು ಬ್ರಿಟನ್ ಕೋರ್ಟ್ ಮಂಗಳವಾರ ತಿಳಿಸಿದೆ.
ಮಹಿಳಾ ರೋಗಿಗಳ ಭಯವನ್ನೇ ಆಧಾರವಾಗಿಟ್ಟುಕೊಂಡು ಹಲವಾರು ಮಹಿಳೆಯರ ಮೇಲೆ ಲೈಂಗಿಕ ಶೋಷಣೆ ನಡೆಸಿರುವ ವೈದ್ಯ ಮನೀಸ್ ಶಾನ ಅಪರಾಧ ಸಾಬೀತಾಗಿರುವುದಾಗಿ ಕೋರ್ಟ್ ಹೇಳಿದೆ. ಮನೀಶ್ ಶಾ ಜನರಲ್ ಪ್ರಾಕ್ಟೀಷನರ್ ಲೈಂಗಿಕ ಕಿರುಕುಳ ಪ್ರಕರಣದಲ್ಲಿ 25 ಕೌಂಟ್ಸ್ ಗಳಲ್ಲಿ ದೋಷಿಯಾಗಿರುವುದಾಗಿ ಲಂಡನ್ ನ ಓಲ್ಡ್ ಬೈಲೈ ಕೋರ್ಟ್ ತೀರ್ಪು ನೀಡಿರುವುದಾಗಿ ವರದಿ ವಿವರಿಸಿದೆ.
ಹಾಲಿವುಡ್ ಸ್ಟಾರ್ ನಟಿ ಏಂಜಲಿನಾ ಜೋಲಿ ಹೆಸರು ಹೇಳಿ ವಂಚಿಸುತ್ತಿದ್ದ!
ಮುಂಜಾಗ್ರತಾ ಕ್ರಮವಾಗಿ ಹಾಲಿವುಡ್ ಸ್ಟಾರ್ ನಟಿ ಏಂಜಲಿನಾ ಜೋಲಿ ಸ್ತನ ಕ್ಯಾನ್ಸರ್ ಬಗ್ಗೆ ಮಾಡಿಸಿಕೊಂಡ ಚಿಕಿತ್ಸೆಯ ಕುರಿತು ಪ್ರಕಟಗೊಂಡಿದ್ದ ಸುದ್ದಿಯನ್ನೇ ತನ್ನ ಆಸ್ಪತ್ರೆಗೆ ಬಂದ ಮಹಿಳಾ ರೋಗಿಗಳ ತಪಾಸಣೆ ವೇಳೆ ಹೇಳುತ್ತಿದ್ದ. ಅದೇ ರೀತಿ ನೀವೂ ಕೂಡಾ ಸ್ತನ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ಮಹಿಳಾ ರೋಗಿಗಳಿಗೆ ಸಮಾಲೋಚನೆ ವೇಳೆ ತಿಳಿಸುತ್ತಿದ್ದ ಎಂದು ವಿಚಾರಣೆಯಲ್ಲಿ ಬಹಿರಂಗವಾಗಿದೆ.
ಸ್ತನ ಪರೀಕ್ಷೆಯ ನೆಪದಲ್ಲಿಯೇ ಮಹಿಳಾ ರೋಗಿಯ ಗುಪ್ತಾಂಗ, ಗುದ ಪರೀಕ್ಷೆ ನಡೆಸಿ ನಂತರ ಲೈಂಗಿಕ ಶೋಷಣೆ ನಡೆಸುತ್ತಿದ್ದ. ನಿಜಕ್ಕೂ ವೈದ್ಯಕೀಯವಾಗಿ ಅಂತಹ ಪರೀಕ್ಷೆಯನ್ನು ನಡೆಸಬೇಕಾದ ಅಗತ್ಯವೇ ಇಲ್ಲ ಎಂದು ಪ್ರಾಸಿಕ್ಯೂಟರ್ ಕಾಟೆ ಬೆಕ್ಸ್ ವಿಚಾರಣೆ ವೇಳೆ ಜ್ಯೂರಿಗೆ ತಿಳಿಸಿರುವುದಾಗಿ ವರದಿ ಹೇಳಿದೆ.
ಹೆದರಿಕೆ ಎನ್ನುವುದು ನಂಬಲಾಗದ ವಿಷಯವಾಗಿದ್ದು, ಕೆಲವು ವಿಷಯಗಳು ಆರೋಗ್ಯದ ವಿಚಾರದಲ್ಲಿ ಕ್ಯಾನ್ಸರ್ ಗೆ ಪೂರಕವಾಗಿರಬಹುದು. ಆದರೆ ಶಾ ಅದನ್ನೇ ತನ್ನ ಸ್ವಾರ್ಥಕ್ಕೆ ಬಳಸಿಕೊಂಡಿದ್ದ. ರೋಗಿಗಳ ಭಯವನ್ನೇ ವೈಯಕ್ತಿಕ ತೃಪ್ತಿಗಾಗಿ ಬಳಸಿಕೊಂಡಿರುವುದಾಗಿ ಕಾಟೆ ಬೆಕ್ಸ್ ವಾದ ಮಂಡಿಸಿದ್ದರು.
ಹೀಗೆ ಸುಮಾರು 23 ಮಹಿಳಾ ರೋಗಿಗಳನ್ನು ಲೈಂಗಿಕ ತೀಟೆ ತೀರಿಸಿಕೊಳ್ಳಲು ಬಳಸಿಕೊಂಡ ಆರೋಪ ಸಾಬೀತಾಗಿರುವುದಾಗಿ ಜಡ್ಜ್ ಅನ್ನೆ ಮೊಲೈನೆವುಕ್ಸ್ ಆದೇಶ ನೀಡಿದ್ದು, ಶಿಕ್ಷೆಯ ಪ್ರಮಾಣವನ್ನು 2020ರ ಫೆಬ್ರುವರಿ 7ಕ್ಕೆ ಘೋಷಿಸುವುದಾಗಿ ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ
Thailandನಲ್ಲಿ ಗುಜರಿ ಮಾಫಿಯಾದ ಕಿಂಗ್ ಪಿನ್ ರವಿ ಕಾನಾ, ಪ್ರಿಯತಮೆ ಕಾಜಲ್ ಜಾ ಬಂಧನ
ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ
Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು
MUST WATCH
ಹೊಸ ಸೇರ್ಪಡೆ
IPL: ಎಲ್ಲೆ ಮೀರಿ ವಿಕೆಟ್ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್ ಸಲಾಂಗೆ ಛೀಮಾರಿ
IPL: ಇಂಪ್ಯಾಕ್ಟ್ ಪ್ಲೇಯರ್ ನಿಯಮಕ್ಕೆ ಅಕ್ಷರ್ ಪಟೇಲ್ ಕೂಡ ವಿರೋಧ
Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ
Sumalatha Ambareesh: ಟ್ವೀಟ್ನಲ್ಲಿ ಸಂಸದೆ ಸುಮಲತಾ ಅಂಬರೀಶ್ ವಿವೇಕದ ಪಾಠ
B.S.Yediyurappa: ಶಾಸಕ ಪ್ರಭು ಚವ್ಹಾಣ ಹೆಸರು ಹೇಳುತ್ತಿದ್ದಂತೆ ಬಿಎಸ್ವೈ ಗರಂ