ವಿಶ್ವ ಕಲ್ಯಾಣಕ್ಕಾಗಿ ಭಾರತ-ಚೀನ ಒಗ್ಗೂಡಿ ಕೆಲಸಮಾಡಬೇಕಿದೆ: ಮೋದಿ
Team Udayavani, Apr 27, 2018, 6:16 PM IST
ವುಹಾನ್, ಚೀನ : ಇಡಿಯ ವಿಶ್ವವೇ ಕುತೂಹಲದಿಂದ ಕಾಣುತ್ತಿರುವ ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ನಡುವಿನ ಶೃಂಗಸಭೆಯು ಚೀನದ ವುಹಾನ್ನಲ್ಲಿ ಇಂದು ಶುಕ್ರವಾರ ಆರಂಭವಾಯಿತು.
ಡೋಕ್ಲಾಂ ವಿವಾದ ಬಳಿಕ ಭಾರತ – ಚೀನ ದ್ವಿಪಕ್ಷೀಯ ಬಾಂಧವ್ಯದಲ್ಲಿ ಬಿರುಕು ಕಂಡುಬಂದಿತ್ತು. ಅದೀಗ ಉಭಯ ನಾಯಕರ ದ್ವಿಪಕ್ಷೀಯ ಮಾತುಕತೆಯಲ್ಲಿ ಸೌಹಾರ್ದಯುತವಾಗಿ ಮುಚ್ಚಿಹೋಗುವುದನ್ನು ಎದುರು ನೋಡಲಾಗುತ್ತಿದೆ. ಅಂತೆಯೇ ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧಕ್ಕೆ ಹೊಸ ವ್ಯಾಖ್ಯಾನ ಲಭಿಸುವುದನ್ನು ಹಾರೈಸಲಾಗುತ್ತಿದೆ.
ಚೀನ ನೀಡಿರುವ ಭವ್ಯ ಸ್ವಾಗತಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಧನ್ಯವಾದ ಅರ್ಪಿಸಿದ್ದಾರೆ.
ಬೀಜಿಂಗ್ನಿಂದ ಹೊರಗೆ ಚೀನ ಅಧ್ಯಕ್ಷರಿಂದ ಎರಡು ಬಾರಿ ಸ್ವಾಗತ ಪಡೆದಿರುವ ಭಾರತೀಯ ಪ್ರಧಾನಿ ನಾನು; ಈ ಬಗ್ಗೆ ಭಾರತದ ಸಮಸ್ತ ಜನತೆ ಹೆಮ್ಮೆ ಪಡುತ್ತದೆ ಎಂದು ಮೋದಿ ವರ್ಣಿಸಿದ್ದಾರೆ.
ಸರಕಾರದ ವತಿಯಿಂದ ನೀಡಲಾದ ವಿಧ್ಯುಕ್ತ ಹಾಗೂ ಶಿಷ್ಟಾಚಾರ ಯುಕ್ತವಾದ ಸ್ವಾಗತದ ಬಳಿಕ ಪ್ರಧಾನಿ ಮೋದಿ ಅವರು ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, ಚೀನದ ಅಧ್ಯಕ್ಷರನ್ನು ಭಾರತಕ್ಕೆ ಆಹ್ವಾನಿಸಿದ್ದಾರೆ.
ಭಾರತ-ಚೀನ ಹೊಣೆಗಾರಿಕೆ ಅತ್ಯಪಾರವಾದದ್ದು; ವಿಶ್ವದ ಶೇ.40ರಷ್ಟು ಜನರ ಕಲ್ಯಾಣಕ್ಕಾಗಿ ಉಭಯ ದೇಶಗಳು ಕೆಲಸ ಮಾಡುವ ಹೊಣೆ ಹೊಂದಿವೆ. ಆದುದರಿಂದ ಎರಡೂ ದೇಶಗಳು ಒಗ್ಗೂಡಿ ಕಾರ್ಯ ನಿರ್ವಹಿಸುವ ಅಗತ್ಯ ಹಿಂದೆಂದಿಗಿಂತಲೂ ಇಂದು ಹೆಚ್ಚಿದೆ ಎಂದು ಮೋದಿ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pak ಆತ್ಮಾಹುತಿ ದಾಳಿ: ಐವರು ಜಪಾನೀಯರು ಪಾರು
Israel – Iran: ಕ್ಷಿಪಣಿ ದಾಳಿಯ ಮೂಲಕ ಸೇಡು ತೀರಿಸಿಕೊಂಡ ಇಸ್ರೇಲ್; ಎಚ್ಚರಿಕೆ ನೀಡಿದ ಇರಾನ್
Russia War: ಉಕ್ರೇನ್ ಮೇಲೆ ರಷ್ಯಾ ಭೀಕರ ದಾಳಿ-17 ಮಂದಿ ಮೃತ್ಯು; ನೆರವಿಗಾಗಿ ಮನವಿ
ನನ್ನ ಪತ್ನಿಗೆ ಏನಾದರೂ ಆದರೆ…: ಸೇನಾ ಮುಖ್ಯಸ್ಥರಿಗೆ ಎಚ್ಚರಿಕೆ ನೀಡಿದ ಇಮ್ರಾನ್ ಖಾನ್
Heavy Rain: ಮರಳುಗಾಡು ದುಬೈನಲ್ಲಿ ಧಾರಾಕಾರ ಮಳೆ, ಪ್ರವಾಹ ಪರಿಸ್ಥಿತಿ-ಜನಜೀವನ ಅಸ್ತವ್ಯಸ್ತ