ಮತ್ತೆ ಭಾರತವನ್ನು ಹೊಗಳಿದ ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್
Team Udayavani, Aug 14, 2022, 8:00 PM IST
ಇಸ್ಲಾಮಾಬಾದ್: ಪ್ರಧಾನಿ ಸ್ಥಾನದಿಂದ ಕೆಳಗಿಳಿದಾಗಿನಿಂದ ಭಾರತವನ್ನು ಹೊಗಳಿ, ಪಾಕ್ ಸರ್ಕಾರವನ್ನು ದೂರುತ್ತಿರುವ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಈಗ ಮತ್ತೊಮ್ಮೆ ಭಾರತವನ್ನು ಹೊಗಳಿದ್ದಾರೆ. ಲಾಹೋರ್ನಲ್ಲಿ ರ್ಯಾಲಿ ನಡೆಸಿದ ಇಮ್ರಾನ್, “ಸ್ವತಂತ್ರ ದೇಶವೆಂದರೆ ಭಾರತದ ರೀತಿಯಿರಬೇಕು’ ಎಂದಿದ್ದಾರೆ.
“ರಷ್ಯಾದಿಂದ ತೈಲ ಖರೀದಿಸಬೇಡಿ ಎಂದು ಅಮೆರಿಕ ಭಾರತಕ್ಕೆ ಒತ್ತಡ ಹೇರಿತ್ತು. ಆದರೆ ಅದನ್ನು ಭಾರತದ ವಿದೇಶಾಂಗ ಸಚಿವರಾದ ಜೈಶಂಕರ್ ಅವರು ಖಡಕ್ ಉತ್ತರದೊಂದಿಗೆ ನಿರಾಕರಿಸಿದರು. ಇದು ಸ್ವತಂತ್ರ ವಿದೇಶಾಂಗ ನೀತಿ ಹೊಂದಿರುವ ದೇಶದ ನಿರ್ಧಾರ. ಭಾರತ ಮತ್ತು ನಮಗೆ ಒಟ್ಟಿಗೇ ಸ್ವಾತಂತ್ರ್ಯ ಸಿಕ್ಕಿತ್ತು. ಅವರು ವಿದೇಶಾಂಗ ನೀತಿಯಲ್ಲಿ ಸ್ವತಂತ್ರ ನಿರ್ಧಾರ ತೆಗೆದುಕೊಳ್ಳುತ್ತಿರುವಾಗ ನಮ್ಮ ದೇಶದ ಸರ್ಕಾರಕ್ಕೆ ಹಾಗೆ ಮಾಡದಂತೆ ತಡೆಯುತ್ತಿರುವುದು ಯಾರು?’ ಎಂದು ಇಮ್ರಾನ್ ಪ್ರಶ್ನಿಸಿದ್ದಾರೆ.
ಹಾಗೆಯೇ ಸ್ಲೊವಾಕಿಯಾದ ಬ್ರಾಟಿಸ್ಲಾವಾ ವೇದಿಕೆಯಲ್ಲಿ ಜೈಶಂಕರ್ ಅವರು ಅಮೆರಿಕಕ್ಕೆ ಉತ್ತರಿಸಿದ್ದ ವಿಡಿಯೋವನ್ನೂ ಇಮ್ರಾನ್ ಪ್ಲೇ ಮಾಡಿದ್ದಾರೆ.
ನಾವು ರಷ್ಯಾದಿಂದ ಕಡಿಮೆ ಬೆಲೆಯಲ್ಲಿ ತೈಲ ಖರೀದಿಸಲು ಮಾತುಕತೆ ನಡೆಸಿದ್ದೆವು. ಆದರೆ ಈಗಿನ ಸರ್ಕಾರಕ್ಕೆ ಅಮೆರಿಕದ ಒತ್ತಡವನ್ನು ತಳ್ಳಿಹಾಕುವುದಕ್ಕೂ ಧೈರ್ಯವಿಲ್ಲ ಎಂದೂ ಇಮ್ರಾನ್ ದೂರಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು
Kuala Lumpur; ಪರಸ್ಪರ ಡಿಕ್ಕಿ ಹೊಡೆದು ಪತನಗೊಂಡ ಕಾಪ್ಟರ್ಗಳು: 10 ಯೋಧರು ಸಾವು
Malaysia ನೌಕಾಪಡೆಯ 2 ಹೆಲಿಕಾಪ್ಟರ್ ಪತನ; 10 ಮಂದಿ ಮೃತ್ಯು, ಭಯಾನಕ ವಿಡಿಯೋ ಸೆರೆ
Taiwan ನಲ್ಲಿ ಸರಣಿ ಭೂಕಂಪ… ರಾತ್ರಿಯಿಡೀ ಮನೆಯಿಂದ ಹೊರಗುಳಿದ ಮನೆಮಂದಿ
US ಪೌರತ್ವ: ಭಾರತೀಯರಿಗೆ ದ್ವಿತೀಯ ಸ್ಥಾನ