ಪಾಕ್ ವಿರುದ್ಧ ಯುದ್ದದಲ್ಲಿ ಭಾರತ ಗೆಲ್ಲಬಹುದು ಆದರೆ ಪರಿಣಾಮ ಎದುರಿಸಬೇಕಾಗುತ್ತದೆ
ಪಾಕ್ ಪ್ರಧಾನಿ ಇಮ್ರಾನ್ ಖಾನ್ ಹೊಸ ವರಸೆ
Team Udayavani, Sep 15, 2019, 8:33 AM IST
ಇಸ್ಲಮಾಬಾದ್: ಪದೇ ಪದೇ ಯುದ್ಧದ ಬಗ್ಗೆ ಮಾತನಾಡುತ್ತಿರುವ ಪಾಕಿಸ್ಥಾನದ ಪ್ರಧಾನ ಮಂತ್ರಿ ಇಮ್ರಾನ್ ಖಾನ್ ಮತ್ತೆ ಯುದ್ದೋನ್ಮಾದದಲ್ಲಿದ್ದಾರೆ. ಅದರಲ್ಲೂ ಪರಮಾಣು ಯುದ್ದದ ಬಗ್ಗೆ ತೀವ್ರ ಆಸಕ್ತಿ ತೋರ್ಪಡಿಸುತ್ತಿರುವ ಇಮ್ರಾನ್, ಭಾರತದೆದುರು ಯುದ್ಧವಾದರೆ ಪಾಕಿಸ್ಥಾನ ಬಹುಶಃ ಸೋಲಬಹುದು. ಆದರೆ ಭಾರತ ಅದರ ಪರಿಣಾಮ ಎದರುರಿಸಬೇಕಾಗುತ್ತದೆ ಎಂದಿದ್ದಾರೆ.
ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಇಮ್ರಾನ್ ಖಾನ್, ಜಮ್ಮು ಕಾಶ್ಮೀರದಲ್ಲಿ ಅನುಚ್ಛೇಧ 370ನ್ನು ರದ್ದುಗೊಳಿಸಿರುವುದು ಭಾರತದ ‘ಅಕ್ರಮ ಸ್ವಾಧೀನ’ ಎಂದು ಬಣ್ಣಿಸಿದ್ದಾರೆ.
ಭಾರತದ ವಿರುದ್ಧ ಪರಮಾಣು ಯುದ್ದದ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಇಮ್ರಾನ್, “ ನಾನು ಹಿಂದೆ ಏನು ಹೇಳಿದ್ದೆ ಅದೇ ಮಾತಿಗೆ ಬದ್ಧನಾಗಿದ್ದೇನೆ. ಅದರಲ್ಲಿ ಯಾವ ಸಂದೇಹವೂ ಇಲ್ಲ. ನಾವು ಮೊದಲು ಪರಮಾಣು ಅಸ್ತ್ರ ಉಪಯೋಗಿಸುವುದಿಲ್ಲ. ನನಗೆ ಯುದ್ದದಲ್ಲಿ ಆಸಕ್ತಿ ಇಲ್ಲ. ಯುದ್ಧದಿಂದ ಸಮಸ್ಯೆ ಪರಿಹಾರವಾಗುತ್ತದೆ ಎಂದು ನಾನು ನಂಬುವುದಿಲ್ಲ. ವಿಯೆಟ್ನಾಮ್, ಇರಾಖ್ ನಲ್ಲಿ ನಡೆದ ಯುದ್ಧಗಳನ್ನು ಗಮನಿಸಿದರೆ ಯಾವ ಕಾರಣಗಳಿಗಾಗಿ ಯುದ್ಧವಾಗಿತ್ತೋ ಅದಕ್ಕಿಂತ ಹೆಚ್ಚಿನ ಸಮಸ್ಯೆಗಳು ಯುದ್ದದಿಂದ ಸೃಷ್ಟಿಯಾಗಿದೆ ಎಂದರು.
ಎರಡು ಪರಮಾಣು ಬಾಂಬ್ ಹೊಂದಿದ ದೇಶಗಳು ಸಾಂಪ್ರದಾಯಿಕ ಯುದ್ದ ಆರಂಭಿಸಿದರೂ ಅದು ಅಣು ಯುದ್ಧದದಲ್ಲಿ ಕೊನೆಗೊಳ್ಳುವ ಸಾಧ್ಯತೆ ಹೆಚ್ಚು. ಒಂದು ವೇಳೆ ಯುದ್ಧದಲ್ಲಿ ಪಾಕ್ ಸೋಲುವ ಹಂತಕ್ಕೆ ಬಂದರೆ ಆಗ ನಮ್ಮೆದುರು ಎರಡು ಸಾಧ್ಯತೆಗಳಿರುತ್ತದೆ. ಒಂದು ಶರಣಾಗಬೇಕು ಅಥವಾ ಕೊನೆಯ ಉಸಿರಿರುವರೆಗೆ ಹೋರಾಡಬೇಕು. ನಾವು ಎರಡನೇ ಸಾಧ್ಯತೆಯನ್ನೇ ಪರಿಗಣಿಸುತ್ತೇವೆ. ಅಣ್ವಸ್ತ್ರ ಹೊಂದಿದ ದೇಶ ಸಾಯುವ ಹಂತದಲ್ಲಿ ಹೋರಾಟ ನಡೆಸುವಾಗ ಖಂಡಿತ ಸುಮ್ಮನಿರುವುದಿಲ್ಲ ಎಂದು ಇಮ್ರಾನ್ ಅಣು ಯುದ್ಧದ ಬಗ್ಗೆ ಎಚ್ಚರಿಕೆ ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ
Thailandನಲ್ಲಿ ಗುಜರಿ ಮಾಫಿಯಾದ ಕಿಂಗ್ ಪಿನ್ ರವಿ ಕಾನಾ, ಪ್ರಿಯತಮೆ ಕಾಜಲ್ ಜಾ ಬಂಧನ
ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ
Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು
MUST WATCH
ಹೊಸ ಸೇರ್ಪಡೆ
Lok Sabha Polls: “ಮೋದಿ ಮತ್ತೂಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ
Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್
LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ