ದಾವೂದ್ನಿಂದ ಭಾರತಕ್ಕೆ ಅಪಾಯ
Team Udayavani, Jul 11, 2019, 5:06 AM IST
ನ್ಯೂಯಾರ್ಕ್: ಭೂಗತ ಪಾತಕಿ ದಾವೂದ್ ಇಬ್ರಾಹಿಂ, ಜೈಶ್ ಎ ಮೊಹಮದ್ ಮತ್ತು ಲಷ್ಕರ್ ಉಗ್ರರಿಂದ ಭಾರತಕ್ಕೆ ಅಪಾಯವಿದೆ ಎಂಬ ವಿಚಾರದ ಕುರಿತಂತೆ ವಿಶ್ವ ಸಂಸ್ಥೆಯ ಗಮನ ಸೆಳೆಯುವ ಯತ್ನವನ್ನು ಭಾರತ ನಡೆಸಿದ್ದು, ದಾವೂದ್ ಗ್ಯಾಂಗ್ ಉಗ್ರರಿಗೆ ನೆರವಾಗುತ್ತಿದೆ ಎಂದು ವಿಶ್ವಸಂಸ್ಥೆಯಲ್ಲಿ ದೂರಿದೆ.
ಉಗ್ರ ಸಂಘಟನೆಗಳು ನೈಸರ್ಗಿಕ ಸಂಪನ್ಮೂಲಗಳ ಬಳಕೆ ಮತ್ತು ಮಾನವ ಕಳ್ಳಸಾಗಣೆಯಂತಹ ವಹಿವಾಟಿನ ಮೂಲಕ ತಮ್ಮ ಉಗ್ರ ಚಟುವಟಿಕೆಗಳಿಗೆ ಹಣ ಗಳಿಕೆ ಮಾಡುತ್ತಿವೆ. ಇದೇ ರೀತಿ, ಅಪರಾಧ ಚಟುವಟಿಕೆ ನಡೆಸುವ ಗ್ಯಾಂಗ್ಗಳೂ ಉಗ್ರರಿಗೆ ನೆರವಾಗುತ್ತಿವೆ. ಖೋಟಾ ನೋಟು ಮುದ್ರಣ, ಅಕ್ರಮ ಹಣ ಕಾಸು, ಶಸ್ತ್ರಾಸ್ತ್ರ ವಹಿವಾಟು, ಮಾದಕದ್ರವ್ಯ ಕಳ್ಳ ಸಾಗಣೆ ಯಂತಹ ಚಟುವಟಿಕೆಗಳಲ್ಲಿ ದಾವೂದ್ ಇಬ್ರಾಹಿಂನ ಡಿ ಕಂಪೆನಿ ತೊಡಗಿಸಿಕೊಂಡಿದೆ.
ದಾವೂದ್ ಗ್ಯಾಂಗ್ ಉಗ್ರ ಸಂಘಟನೆಗಳಾದ ಜೈಷ್ ಹಾಗೂ ಲಷ್ಕರ್ ಜೊತೆಗೆ ಕೈಜೋಡಿಸಿವೆ ಎಂದು ವಿಶ್ವಸಂಸ್ಥೆಯಲ್ಲಿ ಭಾರತದ ಕಾಯಂ ರಾಯಭಾರಿ ಸೈಯದ್ ಅಕºರುದ್ದೀನ್ ಹೇಳಿದ್ದಾರೆ. ಉಗ್ರ ಚಟುವಟಿಕೆ ಮತ್ತು ಅಕ್ರಮ ಚಟುವಟಿಕೆಗಳೆರಡೂ ಬಹುತೇಕ ಸನ್ನಿವೇಶಗಳಲ್ಲಿ ಒಟ್ಟಿಗೆ ನಡೆಯುತ್ತಿವೆ. ಇದನ್ನು ನಾವು ತಡೆಯುವ ಅಗತ್ಯವಿದೆ ಎಂದು ಸೈಯದ್ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Israel – Iran: ಕ್ಷಿಪಣಿ ದಾಳಿಯ ಮೂಲಕ ಸೇಡು ತೀರಿಸಿಕೊಂಡ ಇಸ್ರೇಲ್; ಎಚ್ಚರಿಕೆ ನೀಡಿದ ಇರಾನ್
Russia War: ಉಕ್ರೇನ್ ಮೇಲೆ ರಷ್ಯಾ ಭೀಕರ ದಾಳಿ-17 ಮಂದಿ ಮೃತ್ಯು; ನೆರವಿಗಾಗಿ ಮನವಿ
ನನ್ನ ಪತ್ನಿಗೆ ಏನಾದರೂ ಆದರೆ…: ಸೇನಾ ಮುಖ್ಯಸ್ಥರಿಗೆ ಎಚ್ಚರಿಕೆ ನೀಡಿದ ಇಮ್ರಾನ್ ಖಾನ್
Heavy Rain: ಮರಳುಗಾಡು ದುಬೈನಲ್ಲಿ ಧಾರಾಕಾರ ಮಳೆ, ಪ್ರವಾಹ ಪರಿಸ್ಥಿತಿ-ಜನಜೀವನ ಅಸ್ತವ್ಯಸ್ತ
Rain: ವರುಣನ ಆರ್ಭಟಕ್ಕೆ ನಲುಗಿದ ದುಬೈ… ವಿಮಾನ ನಿಲ್ದಾಣ ಜಲಾವೃತ, ಜನಜೀವನ ಅಸ್ತವ್ಯಸ್ಥ