ಪಶುಪತಿನಾಥ ದೇಗುಲ ಭಾರತದ ಅನುದಾನ
Team Udayavani, Jun 17, 2020, 8:31 AM IST
ಕಠ್ಮಂಡು: ನೇಪಾಳದ ಪುರಾತನ ಸುಪ್ರಸಿದ್ಧ ಪಶುಪತಿನಾಥ ದೇವಸ್ಥಾನದಲ್ಲಿ ನೈರ್ಮಲ್ಯ ಸೌಲಭ್ಯ ಕಲ್ಪಿಸಲು ಭಾರತ ಮುಂದಾಗಿದೆ. ದೇಗುಲದ ಆವರಣದಲ್ಲಿ 2.33 ಕೋಟಿ ರೂ. ವೆಚ್ಚದಲ್ಲಿ ಈ ಯೋಜನೆ ನಿರ್ಮಾಣವಾಗಲಿದೆ. ನಕ್ಷೆ ತಗಾದೆ, ಗಡಿಯಲ್ಲಿ ನೇಪಾಳಿ ಪೊಲೀಸರ ದುರ್ವರ್ತನೆಗಳ ನಡುವೆ ಭಾರತದ ಈ ಔದಾರ್ಯಕ್ಕೆ ಪ್ರಶಂಸೆ ವ್ಯಕ್ತವಾಗಿದೆ. ಯೋಜನೆ ಸಂಬಂಧ ಭಾರತೀಯ ರಾಯಭಾರ ಕಚೇರಿ, ನೇಪಾಳದ ಫೆಡರಲ್ ವ್ಯವಹಾರ ಮತ್ತು ಸಾಮಾನ್ಯ ಆಡಳಿತ ಸಚಿವಾಲಯ, ಕಠ್ಮಂಡು ಮಹಾನಗರ ಪಾಲಿಕೆ ನಡುವೆ ಸೋಮವಾರ ಒಪ್ಪಂದ ಏರ್ಪಟ್ಟಿದೆ. ಯುನೆಸ್ಕೊ ವಿಶ್ವ ಪರಂಪರೆಯ ತಾಣಗಳಲ್ಲಿ ಒಂದಾದ ಪಶುಪತಿನಾಥ ದೇಗುಲದ ಆವರಣದಲ್ಲಿ ಕಠ್ಮಂಡು ಪಾಲಿಕೆ ನೈರ್ಮಲ್ಯ ಸೌಲಭ್ಯ ಕಾಮಗಾರಿ ಆರಂಭಿಸಲಿದೆ. 15 ತಿಂಗಳಲ್ಲಿ ಯೋಜನೆ ಪೂರ್ಣಗೊಳ್ಳಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ
Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು
Kuala Lumpur; ಪರಸ್ಪರ ಡಿಕ್ಕಿ ಹೊಡೆದು ಪತನಗೊಂಡ ಕಾಪ್ಟರ್ಗಳು: 10 ಯೋಧರು ಸಾವು
Malaysia ನೌಕಾಪಡೆಯ 2 ಹೆಲಿಕಾಪ್ಟರ್ ಪತನ; 10 ಮಂದಿ ಮೃತ್ಯು, ಭಯಾನಕ ವಿಡಿಯೋ ಸೆರೆ
Taiwan ನಲ್ಲಿ ಸರಣಿ ಭೂಕಂಪ… ರಾತ್ರಿಯಿಡೀ ಮನೆಯಿಂದ ಹೊರಗುಳಿದ ಮನೆಮಂದಿ