ಭಾರತ, ತಾಲಿಬಾನ್ ಪ್ರತಿನಿಧಿಗಳ ಚರ್ಚೆ
Team Udayavani, Oct 22, 2021, 6:50 AM IST
ಹೊಸದಿಲ್ಲಿ: ರಷ್ಯಾ ರಾಜಧಾನಿ ಮಾಸ್ಕೋದಲ್ಲಿ ಬುಧವಾರದಿಂದ ಆರಂಭವಾಗಿರುವ “ಮಾಸ್ಕೋ ಫಾರ್ಮ್ಯಾಟ್’ ಅಡಿಯಲ್ಲಿ ನಡೆದ ಸಮಾಲೋಚನ ಸಭೆಯಲ್ಲಿ ಭಾಗವಹಿಸಿರುವ ಭಾರತದ ಪ್ರತಿನಿಧಿಗಳು, ಸಭೆಯ ಮೊದಲ ದಿನವೇ ತಾಲಿಬಾನಿ ನಾಯಕರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.
ಸಭೆಯಲ್ಲಿ ಭಾಗವಹಿಸಿದ್ದ ಭಾರತೀಯ ಅಧಿಕಾರಿಗಳ ನಿಯೋಗಕ್ಕೆ ಭಾರತದ ವಿದೇ ಶಾಂಗ ಇಲಾಖೆಯ ಪಾಕಿಸ್ಥಾನ- ಅಫ್ಘಾನಿಸ್ಥಾನ ವಿಭಾಗದ ಜಂಟಿ ಕಾರ್ಯದರ್ಶಿಯಾಗಿರುವ ಜೆ.ಪಿ. ಸಿಂಗ್ ನೇತೃತ್ವ ವಹಿಸಿದ್ದರೆ, ತಾಲಿಬಾನಿ ಗಳ ನಿಯೋಗಕ್ಕೆ ಅಫ್ಘಾನಿಸ್ಥಾನದ ಉಪ ಪ್ರಧಾನಿ ಅಬ್ದುಲ್ ಸಲಾಂ ಅನಾಫಿ ಮುಂದಾಳತ್ವ ವಹಿಸಿ ದ್ದರು. ಸಭೆಯಲ್ಲಿ ಚರ್ಚಿಸಲಾದ ವಿಚಾರಗಳ ಬಗ್ಗೆ ಕೇಂದ್ರ ಸರ್ಕಾರದಿಂದ ಯಾವುದೇ ಪ್ರಕಟಣೆ ಹೊರಬಿದ್ದಿಲ್ಲ. ಆದರೆ, ಅಫ್ಘಾನಿಸ್ಥಾನದ “ಟೋಲೋ ನ್ಯೂಸ್’ಗೆ ನೀಡಿರುವ ಸಂದರ್ಶ ನದಲ್ಲಿ ತಾಲಿಬಾನ್ ವಕ್ತಾರ ಝಬೀ ವುಲ್ಲಾ ಮುಜಾ ಹಿದೀನ್ ವಿವರಣೆ ನೀಡಿದ್ದಾನೆ. ಸಭೆಯಲ್ಲಿ, ಅಫ್ಘಾನಿಸ್ಥಾನಕ್ಕೆ ಹಲವಾರು ದಶಕಗಳಿಂದ ನೀಡುತ್ತಾ ಬಂದಿರುವ ಮಾನ ವೀಯ ಹಾಗೂ ಮೂಲಸೌಕರ್ಯಗಳ ಸೇವೆ ಮುಂದುವರಿಸಲು ಭಾರತ ಆಸಕ್ತಿ ಹೊಂದಿರುವುದಾಗಿ ತಾಲಿಬಾನಿಗಳಿಗೆ ಮನ ದಟ್ಟು ಮಾಡಲಾಯಿತು. ಇದಕ್ಕೆ ತಾಲಿಬಾನಿಗಳ ಸಹಕಾರ ಬೇಕೆಂದು ಭಾರತ ಮನವಿ ಮಾಡಿದೆ. ಎರಡೂ ದೇಶಗಳ ಬಾಂಧವ್ಯಾಭಿವೃದ್ಧಿಗೆ ಪರಸ್ಪರ ಅಗತ್ಯ ಸಹಕಾರ ನೀಡುವುದು ಹಾಗೂ ಇತರ ನೆರೆ ರಾಷ್ಟ್ರಗಳ ರಾಜತಾಂತ್ರಿಕ ಹಾಗೂ ಆರ್ಥಿಕ ಪರಿಸ್ಥಿತಿ ಅಭಿವೃದ್ಧಿಗೆ ಶ್ರಮಿಸುವ ಬಗ್ಗೆ ಎರಡೂ ಕಡೆಯ ಪ್ರತಿನಿಧಿಗಳು ಸಹಮತ ವ್ಯಕ್ತಪಡಿಸಿವೆ ಎಂದು ಆತ ಹೇಳಿದ್ದಾನೆ.
ಏನಿದು “ಮಾಸ್ಕೋ ಫಾರ್ಮ್ಯಾಟ್’?:
ಅಫ್ಘಾನಿಸ್ಥಾನದ ವಿದ್ಯಮಾನಗಳನ್ನು, ಸಮಸ್ಯೆಗಳನ್ನು ರಾಜತಾಂತ್ರಿಕ ನೆಲೆಗಟ್ಟಿನಲ್ಲಿ ಚರ್ಚಿಸಿ ಬಗೆಹರಿಸಿಕೊಳ್ಳುವ ಉದ್ದೇಶ ದಿಂದ, ರಷ್ಯಾ, ಅಫ್ಘಾನಿಸ್ಥಾನ, ಭಾರತ, ಇರಾನ್, ಚೀನಾ, ಪಾಕಿಸ್ಥಾನ ರಾಷ್ಟ್ರಗಳು ಸೇರಿ, 2017ರಲ್ಲಿ ಮಾಸ್ಕೋ ಫಾರ್ಮ್ಯಾಟ್ ಎಂಬ ವೇದಿಕೆಯನ್ನು ರಚಿಸಲಾಗಿದೆ. ಆಗಿನಿಂದ ಇಲ್ಲಿಯವರೆಗೆ ಮಾಸ್ಕೋದಲ್ಲಿ ಹಲವಾರು ಸುತ್ತಿನ ಸಭೆಗಳನ್ನು ನಡೆಸ ಲಾಗಿದೆ. ಅಫ್ಘಾನಿಸ್ಥಾನದಲ್ಲಿ ತಾಲಿಬಾನಿ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಈ ಮಾದರಿಯ ಸಭೆ ನಡೆದಿರುವುದು ಇದೇ ಮೊದಲು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Madhya Pradesh Rally; ಕೈಯಿಂದ ಮೀಸಲಾತಿ ಕಸಿಯುವ ಯತ್ನ: ಪ್ರಧಾನಿ ಮೋದಿ
Rahul Gandhi: ಜಾತಿಗಣತಿಯನ್ನು ಯಾವ ಶಕ್ತಿಯೂ ತಡೆಯಲಾರದು: ರಾಹುಲ್ ಗಾಂಧಿ
Rajveer Diler: ಹೃದಯಾಘಾತದಿಂದ ಬಿಜೆಪಿ ಸಂಸದ ರಾಜ್ವೀರ್ ದಿಲೇರ್ ನಿಧನ
Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್
LS Polls: ವೇದಿಕೆಯಲ್ಲಿ ಭಾಷಣ ಮಾಡುತ್ತಲೇ ಅಸ್ವಸ್ಥಗೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ
MUST WATCH
ಹೊಸ ಸೇರ್ಪಡೆ
Exam; ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆ-2ಕ್ಕೆ 1.49 ಲಕ್ಷ ವಿದ್ಯಾರ್ಥಿಗಳ ನೋಂದಣಿ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ