ಅಬುಧಾಬಿಯಲ್ಲಿ 17.5 ಕೋಟಿ ಜ್ಯಾಕ್ಪಾಟ್ ಗೆದ್ದ ಕೇರಳಿಗ
Team Udayavani, Feb 5, 2018, 4:12 PM IST
ದುಬೈ : ಅಬುಧಾಬಿಯಲ್ಲಿ ನೆಲೆಸಿರುವ ಕೇರಳದ ಸುನಿಲ್ ಮಾಪಟ್ಟಾ ಕೃಷ್ಣನ್ ಕುಟ್ಟಿ ನಾಯರ್ ಅವರು 17.5 ಕೋಟಿ ರೂ. ಮೌಲ್ಯದ ಲಾಟರಿಯನ್ನು ಗೆದ್ದುಕೊಂಡು ಕೋಟ್ಯಧೀಶರಾಗಿದ್ದಾರೆ ಎಂದು ಮಾದ್ಯಮ ವರದಿಗಳು ತಿಳಿಸಿವೆ.
ಕೃಷ್ಣನ್ ಕುಟ್ಟಿ ನಾಯರ್ ಅವರು ಎರಡನೇ ಅತೀ ದೊಡ್ಡ ಮೊತ್ತದ ಲಾಟರಿ ಬಹುಮಾನವಾಗಿ 10 ದಶಲಕ್ಷ ಧಿರಮ್ಗಳನ್ನು (ಅಂದಾಜು 17,68 00,000 ರೂ.) ಮನೆಗೆ ಒಯ್ಯಲಿದ್ದಾರೆ ಎಂದು ಗಲ್ಫ್ ನ್ಯೂಸ್ ವರದಿಮಾಡಿದೆ.
ಅತ್ಯಂತ ದುಬಾರಿ ಎನಿಸುವ 500 ಧಿರಮ್ ಬೆಲೆಯ ರಾಫೆಲ್ ಟಿಕೆಟನ್ನು ಸಾಮಾನ್ಯವಾಗಿ ಕೆಲ ವ್ಯಕ್ತಿಗಳು ಜತೆಗೂಡಿ ಖರೀದಿಸಿ ಬಹುಮಾನ ಬಂದಾಗ ಅದನ್ನು ಹಂಚಿಕೊಳ್ಳುವ ರೂಢಿ ಎಂದು
ಗಲ್ಫ್ ನ್ಯೂಸ್ ವರದಿ ಹೇಳಿದೆ.
ನಾಯರ್ ಅವರು ತಮಗೆ ಸಿಕ್ಕಿರುವ ಈ ಬೃಹತ್ ಮೊತ್ತದ ಬಹುಮಾನವನ್ನು ತಮ್ಮ ಮೂವರು ಸ್ನೇಹಿತರೊಂದಿಗೆ ಹಂಚಿಕೊಳ್ಳಲಿದ್ದಾರೆ ಎಂದು ಟಿಕೆಟ್ ದರಕ್ಕೆ ವಂತಿಗೆ ನೀಡಿದ್ದ ಅವರ ಸಹೋದ್ಯೋಗಿ ಹೇಳಿದ್ದಾರೆ.
ಈ ವರ್ಷ ಜನವರಿ 7ರಂದು ನಡೆದಿದ್ದ 12 ದಶಲಕ್ಷ ಧಿರಮ್ಗಳ ಬಹುಮಾನದ “ಬಿಗ್ ಟಿಕೆಟ್ ಡ್ರಾ’ ನಲ್ಲಿ ಕೇರಳದ ಹರಿಕೃಷ್ಣನ್ ವಿ ನಾಯರ್ ಬೃಹತ್ ಮೊತ್ತದ ಬಹುಮಾನವನ್ನು ಗೆದ್ದಿದ್ದರು. ಅವರು ಅಜ್ಮಾನ್ ವಾಸಿಯಾಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ
Thailandನಲ್ಲಿ ಗುಜರಿ ಮಾಫಿಯಾದ ಕಿಂಗ್ ಪಿನ್ ರವಿ ಕಾನಾ, ಪ್ರಿಯತಮೆ ಕಾಜಲ್ ಜಾ ಬಂಧನ
ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ
Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು
MUST WATCH
ಹೊಸ ಸೇರ್ಪಡೆ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ