- Tuesday 10 Dec 2019
ಎಲ್ಲೆಡೆ ವಿದ್ಯಾರ್ಥಿಗಳ ಪ್ರತಿಭಟನೆ
Team Udayavani, Mar 16, 2019, 12:30 AM IST
ಬರ್ಲಿನ್: ಸ್ವೀಡನ್ನಲ್ಲಿ ತಾಪಮಾನ ವೈಪರೀತ್ಯ ನಿಯಂತ್ರಿಸಲು ಸರಕಾರ ಸೂಕ್ತ ಕ್ರಮ ಕೈಗೊಂಡಿಲ್ಲ ಎಂಬ ಕಾರಣಕ್ಕೆ ದೇಶಾದ್ಯಂತ ವಿದ್ಯಾರ್ಥಿಗಳು ಸ್ವಯಂಪ್ರೇರಿತರಾಗಿ ಶುಕ್ರವಾರ ತರಗತಿಗೆ ಹಾಜರಾಗದೇ ಪ್ರತಿಭಟಿಸಿದ್ದಾರೆ. 16 ವರ್ಷದ ಹೋರಾಟಗಾರ್ತಿ ಗ್ರೆಟಾ ಥನ್ಬರ್ಗ್ ಈ ಹೋರಾಟದ ರೂವಾರಿ. ಈಕೆಯ ನೇತೃತ್ವದಲ್ಲಿ ಕಳೆದ ವರ್ಷ ಸ್ವೀಡನ್ ಸಂಸತ್ತಿನ ಎದುರು ಪ್ರತಿಭಟನೆ ನಡೆಸಲಾಗಿತ್ತು. ಅಂದಿನಿಂದಲೂ ಪ್ರತಿ ಶುಕ್ರವಾರ ಒಂದಲ್ಲ ಒಂದು ಕಡೆ ಪ್ರತಿಭಟನೆಯನ್ನು ನಡೆಸಲಾಗುತ್ತಿದೆ. ಇತ್ತೀಚೆಗೆ ಥನ್ಬರ್ಗ್ರನ್ನು ನೊಬೆಲ್ ಶಾಂತಿ ಪ್ರಶಸ್ತಿಗೂ ಶಿಫಾರಸು ಮಾಡಲಾಗಿತ್ತು. ಈಗ ಪಾದಯಾತ್ರೆ ನಡೆಸಿ, ಇಲ್ಲವಾದರೆ ನಂತರ ಈಜಾಡಿ ಎಂಬುದು ಗ್ರೆಟಾ ಘೋಷವಾಕ್ಯ.ಬರ್ಲಿನ್ನಲ್ಲಿ ಸುಮಾರು 20 ಸಾವಿರ ಪ್ರತಿಭಟನೆಕಾರರು ಸೇರಿದ್ದರು.
ಇದೇ ವೇಳೆ ಭಾರತದಲ್ಲೂ ಪ್ರತಿಭಟನೆ ನಡೆದಿದ್ದು, ದಿಲ್ಲಿಯಲ್ಲಿ ಸುಮಾರು 500 ವಿದ್ಯಾರ್ಥಿಗಳು ಹಾಜರಾಗಿದ್ದರು. ಈ ಹಿಂದಿನ ಚಳಿಗಾಲದ ವೇಳೆ ದಿಲ್ಲಿಯ ವಾತಾವರಣವನ್ನು ಶುದ್ಧಗೊಳಿಸುವುದಾಗಿ ರಾಜಕಾರಣಿಗಳು ಹೇಳಿದ್ದರು. ಆದರೆ ಈಗಲೂ ವಾತಾವರಣ ಹಾಗೆಯೇ ಇದೆ ಎಂದು ವಿದ್ಯಾರ್ಥಿಗಳು ಆಕ್ಷೇಪಿಸಿದ್ದಾರೆ. ದಿಲ್ಲಿಯಲ್ಲಿ ಫ್ರೈಡೇಸ್ ಫಾರ್ ಫ್ಯೂಚರ್ (ಭವಿಷ್ಯಕ್ಕಾಗಿ ಶುಕ್ರವಾರ) ಎಂಬ ಘೋಷವಾಕ್ಯದಲ್ಲಿ ಪ್ರತಿಭಟನೆ ನಡೆಸಲಾಗಿದೆ.
ಈ ವಿಭಾಗದಿಂದ ಇನ್ನಷ್ಟು
-
ಸಿಡ್ನಿ: ದಿಲ್ಲಿ ಬಳಿಕ ಇದೀಗ ಆಸ್ಟ್ರೇಲಿಯಾದ ಸಿಡ್ನಿಯಲ್ಲೂ ದಟ್ಟ ಹೊಗೆ ಆವರಿಸಿದ್ದು, ವಾಯುಮಾಲಿನ್ಯ ಪ್ರಮಾಣ ಅಪಾಯದ ಮಟ್ಟಕ್ಕಿಂತ 11 ಪಟ್ಟು ಏರಿಕೆ ಕಂಡಿದೆ. ಕಳೆದ...
-
ಯುನೈಟೆಡ್ ಕಿಂಗ್ ಡಮ್: 2015ರ ಭೂಕಂಪದಿಂದ ನೇಪಾಳ ಜನರ ಬದುಕು ತತ್ತರಿಸಿ ಹೋಗಿದ್ದು, ಸ್ಥಳೀಯ ಜನರ ಆರೋಗ್ಯ, ಶಿಕ್ಷಣ ಹಾಗೂ ಕುಟುಂಬಗಳಿಗೆ ನೆರವು(ದೇಣಿಗೆ ಸಂಗ್ರಹ)...
-
ನ್ಯೂಯಾರ್ಕ್: ಅಮೆರಿಕದ ಮಾಜಿ ಬೇಸ್ ಬಾಲ್ ಆಟಗಾರ, ಜಗತ್ತಿನಾದ್ಯಂತ “ಐಸ್ ಬಕೆಟ್ ಚಾಲೆಂಜ್” ಮೂಲಕ ದೇಣಿಗೆ ಸಂಗ್ರಹಿಸಲು ಸ್ಫೂರ್ತಿಯಾಗಿದ್ದ ಪೀಟ್ ಫ್ರೇಟ್ಸ್(34ವರ್ಷ)...
-
ವಾಷಿಂಗ್ಟನ್: ಒಂದು ವೇಳೆ ಭಾರತದ ಸಂಸತ್ ನ ಉಭಯ(ಲೋಕಸಭೆ, ರಾಜ್ಯಸಭೆ) ಸದನಗಳಲ್ಲಿಯೂ ಪೌರತ್ವ (ತಿದ್ದುಪಡಿ) ವಿಧೇಯಕ ಅಂಗೀಕಾರವಾದರೆ ಗೃಹ ಸಚಿವ ಅಮಿತ್ ಶಾ ವಿರುದ್ಧ...
-
ಬರ್ಹಿ/ಬೊಕಾರೋ: ಕರ್ನಾಟಕದ ವಿಧಾನಸಭೆಗೆ 2018ರಲ್ಲಿ ನಡೆದಿದ್ದ ಚುನಾವಣೆಯಲ್ಲಿ ಜನರ ತೀರ್ಪನ್ನು ಕಾಂಗ್ರೆಸ್ ಮತ್ತು ಜೆಡಿಎಸ್ ತಿರುಚಿ, ಹಿಂಬಾಗಿಲಿನಿಂದ ಅಧಿಕಾರಕ್ಕೆ...
ಹೊಸ ಸೇರ್ಪಡೆ
-
ಸಿಡ್ನಿ: ದಿಲ್ಲಿ ಬಳಿಕ ಇದೀಗ ಆಸ್ಟ್ರೇಲಿಯಾದ ಸಿಡ್ನಿಯಲ್ಲೂ ದಟ್ಟ ಹೊಗೆ ಆವರಿಸಿದ್ದು, ವಾಯುಮಾಲಿನ್ಯ ಪ್ರಮಾಣ ಅಪಾಯದ ಮಟ್ಟಕ್ಕಿಂತ 11 ಪಟ್ಟು ಏರಿಕೆ ಕಂಡಿದೆ. ಕಳೆದ...
-
ಉಜಿರೆ: ಡ್ರಗ್ಸ್, ಕುಡಿತ, ಅತ್ಯಾಚಾರ, ಕಳ್ಳತನ ಇವೆಲ್ಲ ದೋಷಗಳು ದೌರ್ಬಲ್ಯಗಳಾಗಿದ್ದು, ಮುಚ್ಚಿಟ್ಟಷ್ಟು ಜಟಿಲವಾದ ಅನಾಹುತಗಳಿಗೆ ಕಾರಣವಾಗುತ್ತವೆ. ಇವೆಲ್ಲವನ್ನು...
-
ಕಾಸರಗೋಡು: 2020ನೇ ಇಸವಿಯ ಡಿಸೆಂಬರ್ ತಿಂಗಳಲ್ಲಿ ಮನೆ ಯಿಲ್ಲದ ಎಲ್ಲರಿಗೂ ವಸತಿ ಭಾಗ್ಯ ಒದಗಲಿದೆ ಎಂದು ಸ್ಥಳೀಯಾಡಳಿತ ಸಚಿವ ಎ.ಸಿ. ಮೊಯ್ದಿನ್ ಭರವಸೆ ನೀಡಿದರು. ವೆಸ್ಟ್...
-
ಬೆಂಗಳೂರು: ನಮ್ಮ ಮೆಟ್ರೋದಲ್ಲಿ ಪ್ರಯಾಣಿಸುವವರಿಗೆ ಸಿಹಿ ಸುದ್ದಿಯೊಂದು ಲಭಿಸಿದೆ. 2020ರ ಜನವರಿಯಿಂದ ಮೆಟ್ರೋ ಸಂಚಾರ ಸಮಯದಲ್ಲಿ ವಿಸ್ತರಣೆಯಾಗಿದೆ. ಇನ್ನು ಮೆಟ್ರೋ...
-
ಯುನೈಟೆಡ್ ಕಿಂಗ್ ಡಮ್: 2015ರ ಭೂಕಂಪದಿಂದ ನೇಪಾಳ ಜನರ ಬದುಕು ತತ್ತರಿಸಿ ಹೋಗಿದ್ದು, ಸ್ಥಳೀಯ ಜನರ ಆರೋಗ್ಯ, ಶಿಕ್ಷಣ ಹಾಗೂ ಕುಟುಂಬಗಳಿಗೆ ನೆರವು(ದೇಣಿಗೆ ಸಂಗ್ರಹ)...