ಸ್ಥಳೀಯ ಗ್ಯಾಂಗ್ ನಿಂದ ಹಣಕಾಸಿನ ವಿಚಾರಕ್ಕೆ ಖಲಿಸ್ಥಾನ್ ಸಂಘಟನೆಯ ಉನ್ನತ ನಾಯಕನ ಹತ್ಯೆ
ಆರ್ ಎಸ್ ಎಸ್ ನಾಯಕನನ್ನು ಹತ್ಯೆ ಮಾಡಿದ್ದ ‘’ಹ್ಯಾಪಿ ಪಿಎಚ್ ಡಿ” ಯ ಹತ್ಯೆ
Team Udayavani, Jan 28, 2020, 10:38 AM IST
ಲಾಹೋರ್: ಖಲಿಸ್ಥಾನ್ ಲಿಬರೇಶನ್ ಪೋರ್ಸ್ ಸಂಘಟನೆಯ ಉನ್ನತ ನಾಯಕನೋರ್ವನನ್ನು ಸ್ಥಳೀಯ ಗ್ಯಾಂಗ್ ಒಂದು ಹತ್ಯೆ ಮಾಡಿದೆ ಎಂದು ವರದಿಯಾಗಿದೆ.
ಭಾರತದಲ್ಲಿ ಅನೇಕ ಪಾತಕ ಕೃತ್ಯಗಳಲ್ಲಿ ಭಾಗಿಯಾಗಿದ್ದ, ಭಾರತದ ವಾಂಟೆಡ್ ಪಾತಕಿಗಳ ಪಟ್ಟಿಯಲ್ಲಿದ್ದ ಹರ್ಮೀತ್ ಸಿಂಗ್ ಹತ್ಯೆಯಾಗಿದೆ.
ಲಾಹೋರ್ ನ ಡೇರಾ ಚಾಹಲ್ ಗುರುದ್ವಾರದ ಬಳಿ ಸೋಮವಾರ ಮಧ್ಯಾಹ್ನ ಈ ಹತ್ಯೆ ಮಾಡಲಾಗಿದೆ ಎಂದು ವರದಿಯಾಗಿದೆ.
ಹಣಕಾಸಿನ ವಿಚಾರದಲ್ಲಿ ಸ್ಥಳೀಯ ಗ್ಯಾಂಗ್ ನೊಂದಿಗೆ ಕಲಹ ಉಂಟಾಗಿ ಹರ್ಮೀತ್ ಸಿಂಗ್ ಹತ್ಯೆ ಮಾಡಲಾಗಿದೆ ಎಂದು ವರದಿಯಾಗಿದೆ.
2016ರಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪಂಜಾಬ್ ನಾಯಕನೋರ್ವನನ್ನು ಹತ್ಯೆ ಮಾಡಿದ್ದ ಆರೋಪಿಯಾಗಿರುವ ಹರ್ಮೀತ್ ಸಿಂಗ್, ಡ್ರಗ್ಸ್ ಕಳ್ಳ ಸಾಗಾಣಿಕೆ ಕೃತ್ಯದಲ್ಲೂ ಭಾಗಿಯಾಗಿದ್ದ.
ಪಂಜಾಬ್ ನ ಅಮೃತಸರದ ನಿವಾಸಿಯಾಗಿದ್ದ ಆತ ಕಳೆದ ಎರಡು ದಶಕದಿಂದ ಪಾಕಿಸ್ಥಾನದಲ್ಲಿ ನೆಲೆಸಿದ್ದ.
‘’ಹ್ಯಾಪಿ ಪಿಎಚ್ ಡಿ’’ ಎಂದು ಹೆಸರುವಾಸಿಯಾಗಿದ್ದ ಈತನ ವಿರುದ್ಧ ಇಂಟರ್ ಪೋಲ್ ಕಳೆದ ಅಕ್ಟೋಬರ್ ನಲ್ಲಿ ರೆಡ್ ಕಾರ್ನರ್ ನೋಟೀಸ್ ಜಾರಿ ಮಾಡಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Russia War: ಉಕ್ರೇನ್ ಮೇಲೆ ರಷ್ಯಾ ಭೀಕರ ದಾಳಿ-17 ಮಂದಿ ಮೃತ್ಯು; ನೆರವಿಗಾಗಿ ಮನವಿ
ನನ್ನ ಪತ್ನಿಗೆ ಏನಾದರೂ ಆದರೆ…: ಸೇನಾ ಮುಖ್ಯಸ್ಥರಿಗೆ ಎಚ್ಚರಿಕೆ ನೀಡಿದ ಇಮ್ರಾನ್ ಖಾನ್
Heavy Rain: ಮರಳುಗಾಡು ದುಬೈನಲ್ಲಿ ಧಾರಾಕಾರ ಮಳೆ, ಪ್ರವಾಹ ಪರಿಸ್ಥಿತಿ-ಜನಜೀವನ ಅಸ್ತವ್ಯಸ್ತ
Rain: ವರುಣನ ಆರ್ಭಟಕ್ಕೆ ನಲುಗಿದ ದುಬೈ… ವಿಮಾನ ನಿಲ್ದಾಣ ಜಲಾವೃತ, ಜನಜೀವನ ಅಸ್ತವ್ಯಸ್ಥ
Israel-Iran ಅಣುಯುದ್ಧ? ಇರಾನ್ನ ಅಣುಸ್ಥಾವರಗಳ ಮೇಲೆ ದಾಳಿ: ವಿಶ್ವಸಂಸ್ಥೆ ಆತಂಕ
MUST WATCH
ಹೊಸ ಸೇರ್ಪಡೆ
Bidar; ನಾಮಪತ್ರ ಸಲ್ಲಿಸಲು ಓಡೋಡಿ ಬಂದ ಖೂಬಾ
Belagavi; ಕೋಟ್ಯಾಧೀಶೆ ಪ್ರಿಯಾಂಕಾ; ಸತೀಶ್ ಜಾರಕಿಹೊಳಿ ಮಗಳ ಆಸ್ತಿ ವಿವರ ಇಲ್ಲಿದೆ
Dharwad; ದಿಂಗಾಲೇಶ್ವರ ಸ್ವಾಮೀಜಿ ನಾಮಪತ್ರ ಸಲ್ಲಿಕೆ: ಸಚಿವ ಜೋಶಿ ವಿರುದ್ದ ಗಂಭೀರ ಆರೋಪ
Lok Sabha Election: ಉಡುಪಿ- ಜಯಪ್ರಕಾಶ್ ಹೆಗ್ಡೆ ಬಿರುಸಿನ ಪ್ರಚಾರ, ದೇವಾಲಯಕ್ಕೆ ಭೇಟಿ
Beltangady: ಮನೆ ಮಾಲಕಿ ಮೇಲೆ ಸಾಕು ನಾಯಿ ದಾಳಿ