ಇಂಗ್ಲೆಂಡ್ಗೆ ಬರದ ಆಂತಕ; ನೀರಿಗೂ ರೇಷನ್; ಬ್ರಿಟನ್ ಸರ್ಕಾರದಿಂದ ಅಧಿಕೃತ ಘೋಷಣೆ
1935ರ ನಂತರ ಈ ಪ್ರಾಂತ್ಯಗಳಲ್ಲಿ ಅತಿ ಕಡಿಮೆ ಮಳೆ
Team Udayavani, Aug 13, 2022, 7:20 AM IST
ಲಂಡನ್: ಅನೇಕ ದಿನಗಳಿಂದ ಅಗಾಧ ಉಷ್ಣ ಹಾಗೂ ಶುಷ್ಕ ವಾತಾವರಣ ಆವರಿಸಿರುವ ಲಂಡನ್ನ ಕೇಂದ್ರ ಭಾಗ, ದಕ್ಷಿಣ ಹಾಗೂ ಪೂರ್ವ ಭಾಗಗಳನ್ನು ಬರಪೀಡಿತ ಪ್ರದೇಶಗಳೆಂದು ಬ್ರಿಟನ್ ಸರ್ಕಾರ ಅಧಿಕೃತವಾಗಿ ಘೋಷಿಸಿದೆ.
ಜುಲೈ ತಿಂಗಳಲ್ಲಿ ಈ ಪ್ರಾಂತ್ಯಗಳಲ್ಲಿ ಸರಾಸರಿ ಉತ್ತಮ ಮಳೆಯಾಗುತ್ತಿತ್ತು. ಆದರೆ, ಈ ಬಾರಿಯ ಜುಲೈನಲ್ಲಿ ಅಲ್ಲಿ ಶೇ. 35ರಷ್ಟು ಮಳೆ ಮಾತ್ರ ಬಿದ್ದಿದೆ. 1935ರ ನಂತರ ಹೀಗಾಗುತ್ತಿರುವುದು ಇದೇ ಮೊದಲು ಎಂದು ತಜ್ಞರು ತಿಳಿಸಿದ್ದಾರೆ.
ಹೀಗಾಗಿ, ಅಲ್ಲಿನ ಸೂಪರ್ ಮಾರ್ಕೆಟ್ಗಳಲ್ಲಿ ನೀರಿನ ಬಾಟಲಿಗಳ ಮಾರಾಟ ಬಿರುಸಾಗಿದೆ. ಅದರ ಪೂರೈಕೆಯಲ್ಲಿ ಕೂಡ ವ್ಯತ್ಯಯ ಉಂಟಾಗಿದೆ. ಹೀಗಾಗಿ, ಪ್ರತಿ ಗ್ರಾಹಕರಿಗೆ ಮೂರು ನೀರಿನ ಬಾಕ್ಸ್ಗಳನ್ನು ಮಾತ್ರ ನೀಡಲಾಗುತ್ತದೆ ಎಂದು ನೋಟಿಸ್ ಅಂಟಿಸಲಾಗಿದೆ.
ಬತ್ತಿ ಹೋಯ್ತು ಥೇಮ್ಸ್ ಉಗಮಸ್ಥಾನ
ಲಂಡನ್ನ ಜೀವನದಿಯಾಗಿರುವ ಥೇಮ್ಸ್ನ ಉಗಮಸ್ಥಾನ ಬತ್ತಿ ಹೋಗಿದೆ ಎಂಬ ಮತ್ತೂಂದು ಆತಂಕಕಾರಿ ವಿಚಾರವನ್ನು ಬ್ರಿಟನ್ ಹವಾಮಾನ ಇಲಾಖೆಯ ಅಧಿಕಾರಿಗಳು ಹೊರಹಾಕಿದ್ದಾರೆ. ನದಿಯ ಉಗಮ ಸ್ಥಾನವಾದ ಗ್ಲೌಸಿಸ್ಟೆರ್ಶೈನ್ ಪರ್ವತ ಶ್ರೇಣಿಗಳಲ್ಲಿ ಪ್ರತಿ ವರ್ಷದ ಚೈತ್ರಕಾಲದಲ್ಲಿ ಅಪಾರ ಮಳೆ ಸುರಿಯುವುದರಿಂದ ನದಿ ಮೈದುಂಬಿ ಹರಿಯುತ್ತದೆ.
ಆದರೆ, ಈ ಬಾರಿ ಜುಲೈನಲ್ಲಿ ಅತಿಯಾದ ಉಷ್ಣ ಆವರಿಸಿದ ಹಿನ್ನೆಲೆಯಲ್ಲಿ ನದಿಯ ಉಗಮಸ್ಥಾನದಲ್ಲಿ ಚೈತ್ರವೇ ಮಾಯವಾಗಿದ್ದು ಅದರ ಪರಿಣಾಮ, ಉಗಮ ಸ್ಥಾನ ಬತ್ತಿಹೋಗಿದೆ ಎಂದು ತಜ್ಞರು ಹೇಳಿದ್ದಾರೆ.
ಉತ್ತರ ಧ್ರುವದಲ್ಲಿ ತೊಂದರೆ:!
ಭೂಮಿಯ ಉತ್ತರ ಭಾಗದಲ್ಲಿರುವ ಆರ್ಕ್ಟಿಕ್ ಪ್ರದೇಶದಲ್ಲಿ ಶಾಖ, ಭೂಮಿಯ ಮಿಕ್ಕೆಲ್ಲಾ ಭಾಗಗಳಿಗಿಂತ ನಾಲ್ಕು ಪಟ್ಟು ಹೆಚ್ಚಾಗಿದೆ. 43 ವರ್ಷಗಳಿಗೆ ಹೋಲಿಕೆ ಮಾಡಿದರೆ ಈ ಪ್ರದೇಶದಲ್ಲಿ 2.7 ಡಿಗ್ರಿ ಸೆಲ್ಸಿಯಸ್ ತಾಪಮಾನ ಹೆಚ್ಚಾಗಿದೆ.
ಹೀಗಾಗಿ, ಈ ಭಾಗದಲ್ಲಿರುವ ಮಂಜು ತ್ವರಿತವಾಗಿ ಕರಗಿ ಸಮುದ್ರ ಸೇರುವುದರಿಂದ ಸಮುದ್ರದ ನೀರಿನ ಮಟ್ಟ ಹೆಚ್ಚಾಗಿ, ಜಲಪ್ರಯಳದಂಥ ಅಪಾಯಗಳು ಸಂಭವಿಸುವ ಸಾಧ್ಯತೆಗಳಿವೆ ಎಂದು ತಜ್ಞರು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Baltimore bridge: ಬಾಲ್ಟಿಮೋರ್ ಸೇತುವೆ ಕುಸಿತ: ಇಬ್ಬರ ಮೃತದೇಹ ಹೊರತೆಗೆದ ರಕ್ಷಣಾ ತಂಡ
America: ಕಾನೂನು ಸಮರದಲ್ಲಿ ಹೈರಾಣ-ಹಣ ಸಂಗ್ರಹಕ್ಕಾಗಿ ಟ್ರಂಪ್ ಬೈಬಲ್ ಮಾರಾಟ!
Baltimore bridge collapse; ಆರು ಕಾರ್ಮಿಕರು ನಾಪತ್ತೆ: ಪತ್ತೆ ಕಾರ್ಯ ಸ್ಥಗಿತ
Anjali Chakra – Sufi Malik; ಮದುವೆಗೂ ಮುನ್ನ ಭಾರತ-ಪಾಕ್ ಸಲಿಂಗಿ ಜೋಡಿ ಬ್ರೇಕಪ್!
H5N1: ವಿಯೆಟ್ನಾಂನಲ್ಲಿ ಹಕ್ಕಿಜ್ವರಕ್ಕೆ ಮೊದಲ ಬಲಿ!
MUST WATCH
ಹೊಸ ಸೇರ್ಪಡೆ
Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್, ಸ್ಟೋಯಿನಿಸ್, ಅಗರ್ ಹೊರಕ್ಕೆ
ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್
Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್
Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್ಗಳು: ಪ್ರವಾಸಿಗರಿಗೆ ಭಯ
IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್ಗಳ ಜಯ