ಲಂಕಾ ಸ್ಫೋಟ: ಮತ್ತೂಬ್ಬ ಭಾರತೀಯ ವಿಧಿವಶ
Team Udayavani, Apr 26, 2019, 5:52 AM IST
ಕೊಲಂಬೊ: ಶ್ರೀಲಂಕಾದಲ್ಲಿ ಸಂಭವಿಸಿದ ಈಸ್ಟರ್ ಸರಣಿ ಸ್ಫೋಟಗಳಲ್ಲಿ ಮೃತಪಟ್ಟ ಭಾರತೀಯರ ಸಂಖ್ಯೆ 11ಕ್ಕೇರಿದೆ. ಕೊಲಂಬೋದ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಭಾರತೀಯ ಗಾಯಾಳು ಬುಧವಾರ ರಾತ್ರಿ ನಿಧನ ಹೊಂದಿದ್ದಾರೆ. ಇತರ ವಿದೇಶಿ ಗಾಯಾಳುಗಳಲ್ಲಿಯೂ ಕೆಲವರು ಅಸುನೀಗಿದ್ದು, ಘಟನೆಯಲ್ಲಿ ಮೃತಪಟ್ಟ ವಿದೇಶಿಗರ ಸಂಖ್ಯೆ 36ಕ್ಕೇರಿದೆ ಎಂದು ಶ್ರೀಲಂಕಾದ ವಿದೇಶಾಂಗ ಇಲಾಖೆ ಹೇಳಿದೆ. ಜತೆಗೆ, 39 ದೇಶಗಳ ನಾಗರಿಕರಿಂದ ಬಂದಿದ್ದ ವೀಸಾ ಅರ್ಜಿಗಳನ್ನು ಪರಿಶೀಲನೆಯನ್ನು ಸದ್ಯಕ್ಕೆ ತಟಸ್ಥಗೊಳಿಸಲಾಗಿದೆ.
ರಕ್ಷಣಾ ಸಚಿವ ರಾಜೀನಾಮೆ: ಸರಣಿ ಸ್ಫೋಟದ ಬೆನ್ನಲ್ಲೇ ಶ್ರೀಲಂಕಾ ರಕ್ಷಣಾ ಸಚಿವ ಹೇಮಸಿರಿ ಫೆರ್ನಾಂಡೋ ಗುರುವಾರ ರಾಜೀನಾಮೆ ನೀಡಿದ್ದಾರೆ. ಗುಪ್ತಚರ ಮಾಹಿತಿ ಸಿಕ್ಕಿದ್ದರೂ ಸರಣಿ ಸ್ಫೋಟ ತಡೆಯಲು ವಿಫಲವಾದ ಹಿನ್ನೆಲೆಯಲ್ಲಿ ಇವರಿಗೆ ರಾಜೀನಾಮೆ ನೀಡುವಂತೆ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಸೂಚಿಸಿದ್ದರು ಎನ್ನಲಾಗಿದೆ.
ಮಸೀದಿಯಲ್ಲೂ ಸ್ಫೋಟ?: ಇದೇ ವೇಳೆ, ಚರ್ಚುಗಳಲ್ಲಿ ಸ್ಫೋಟ ನಡೆಸಿದ ಉಗ್ರರು ಶುಕ್ರವಾರದ ಪ್ರಾರ್ಥನೆ ವೇಳೆ ಲಂಕಾದ ಮಸೀದಿಗಳಲ್ಲೂ ಸ್ಫೋಟ ನಡೆಸಲು ಸಂಚು ರೂಪಿಸಿದ್ದಾರೆ ಎಂದು ಗುಪ್ತಚರ ಮಾಹಿತಿ ಬಂದಿದ್ದು, ಈ ಹಿನ್ನೆಲೆಯಲ್ಲಿ ನಿರ್ದಿಷ್ಟ ಸಮುದಾಯದ ಮಸೀದಿಗಳಿಗೆ ಭದ್ರತೆ ಒದಗಿಸಲಾಗಿದೆ. ಈಸ್ಟರ್ ಸ್ಫೋಟದ ತನಿಖೆ ನಡೆಸುತ್ತಿರುವ ಅಧಿಕಾರಿಗಳು, ಗುರುವಾರ 16 ಜನರನ್ನು ಬಂಧಿಸಿದ್ದು, ಇದರಿಂದಾಗಿ ಈವರೆಗೆ ಬಂಧನ ಕ್ಕೊಳಗಾಗಿರುವವರ ಸಂಖ್ಯೆ 76ಕ್ಕೇರಿದೆ.
ಡ್ರೋಣ್ ಹಾರಾಟಕ್ಕೆ ನಿಷೇಧ: ಶ್ರೀಲಂಕಾದ ವೈಮಾನಿಕ ಮಂಡಲದಲ್ಲಿ ಡ್ರೋಣ್ ಅಥವಾ ಯಾವುದೇ ಮಾನವ ರಹಿತ ವಿಮಾನಗಳ ಹಾರಾಟಕ್ಕೆ ಶ್ರೀಲಂಕಾದ ನಾಗರಿಕ ವಿಮಾನಯಾನ ಪ್ರಾಧಿಕಾರ ನಿಷೇಧ ಹೇರಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು
Kuala Lumpur; ಪರಸ್ಪರ ಡಿಕ್ಕಿ ಹೊಡೆದು ಪತನಗೊಂಡ ಕಾಪ್ಟರ್ಗಳು: 10 ಯೋಧರು ಸಾವು
Malaysia ನೌಕಾಪಡೆಯ 2 ಹೆಲಿಕಾಪ್ಟರ್ ಪತನ; 10 ಮಂದಿ ಮೃತ್ಯು, ಭಯಾನಕ ವಿಡಿಯೋ ಸೆರೆ
Taiwan ನಲ್ಲಿ ಸರಣಿ ಭೂಕಂಪ… ರಾತ್ರಿಯಿಡೀ ಮನೆಯಿಂದ ಹೊರಗುಳಿದ ಮನೆಮಂದಿ
US ಪೌರತ್ವ: ಭಾರತೀಯರಿಗೆ ದ್ವಿತೀಯ ಸ್ಥಾನ