ತಾಂತ್ರಿಕತೆ ಅಭಿವೃದ್ಧಿಗೆ ಬಳಕೆಯಾಗಲಿ:ಪ್ರಧಾನಿ ಮೋದಿ
Team Udayavani, Feb 12, 2018, 6:00 AM IST
ದುಬೈ: “ತಾಂತ್ರಿಕ ಸಂಶೋಧನೆಗಳು ಮತ್ತು ವಿಚಾರಗಳು ಜನಸಾಮಾನ್ಯರನ್ನು ಸಬಲೀಕರಣಗೊಳಿಸಿದೆ. ಅದನ್ನು ಮಾನವರ ಸದುಪಯೋಗಕ್ಕೆ ಬಳಕೆ ಮಾಡಬೇಕೇ ಹೊರತು ವಿನಾಶಕ್ಕೆ ಅಲ್ಲ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ದುಬೈನಲ್ಲಿ ಆಯೋಜಿಸಲಾಗಿರುವ ವಿಶ್ವ ಸರ್ಕಾರಿ ಸಮ್ಮೇಳನ (ವರ್ಲ್x ಗವರ್ನ್ಮೆಂಟ್ ಸಮಿಟ್)ದಲ್ಲಿ ಪ್ರಧಾನ ಭಾಷಣ ಮಾಡಿದ ಪ್ರಧಾನಿ, ತಂತ್ರಜ್ಞಾನದ ದುರ್ಬಳಕೆ ಮೇಲೆ ನಿಗಾ ವಹಿಸಬೇಕಾಗಿದೆ. ಜಗತ್ತು ತಾಂತ್ರಿಕವಾಗಿ ಅಭೂತಪೂರ್ವ ಅಭಿವೃದ್ಧಿ ಸಾಧಿಸಿದ್ದರೂ ಬಡತನ ಮತ್ತು ಅಪೌಷ್ಟಿಕತೆ ಹೋಗಲಾಡಿಸಲು ಸಾಧ್ಯವಾಗಿಲ್ಲ ಎಂದೂ ವಿಷಾದಿಸಿದ್ದಾರೆ. “ನಾವು ಹೆಚ್ಚಿನ ಪ್ರಮಾಣದ ಹಣವನ್ನು ಬಾಂಬ್, ಕ್ಷಿಪಣಿಗಳನ್ನು ಸಿದ್ಧಪಡಿಸಲು ವಿನಿಯೋಗಿಸುತ್ತಿದ್ದೇವೆ. ಅದೇ ತಂತ್ರಜ್ಞಾನವನ್ನು ಮಾನವ ಸದ್ಬಳಕೆಗೆ ಬಳಸುವಂತಾಗಬೇಕು’ ಎಂದು ಹೇಳಿದ್ದಾರೆ.
ಆರು “ಆರ್’ ಗಳು:
“ನಾವು ಆರು ಆರ್ಗಳನ್ನು ಪಾಲಿಸಿದರೆ ಸಂತೋಷ ಹೊಂದಲು ಸಾಧ್ಯ. ಅವುಗಳೆಂದರೆ ರೆಡ್ನೂಸ್ (ತಗ್ಗಿಸು), ರೀಯೂಸ್ (ಮರು ಬಳಕೆ), ರೀಸೈಕಲ್ (ಪುನರುಪಯೋಗಿಸು), ರಿಕವರ್ (ಮರಳಿ ಪಡೆದುಕೊಳ್ಳುವುದು), ರೀಡಿಸೈನ್ (ಮರು ವಿನ್ಯಾಸ), ರಿಮ್ಯಾನ್ಯುಫ್ಯಾಕ್ಚರ್ (ಮರು ಉತ್ಪಾದಿಸು). ಈ ನಿಯಮಗಳನ್ನು ಪಾಲಿಸಿದಾಗ ಸಂತೋಷ ವೃದ್ಧಿಯಾಗುತ್ತದೆ’ ಎಂದಿದ್ದಾರೆ ಪ್ರಧಾನಿ.
ದೇಶಗಳು ಒಂದಾಗಬೇಕು:
ತಮ್ಮ ನೇತೃತ್ವದ ಕೇಂದ್ರ ಸರ್ಕಾರ “ಸಬ್ ಕಾ ಸಾಥ್; ಸಬ್ ಕಾ ವಿಕಾಸ್’ ಎಂಬ ನಿಯಮ ಅನುಸರಿಸುತ್ತಿದೆ. ಅದು ಕೇವಲ ಭಾರತಕ್ಕೆ ಮಾತ್ರವಲ್ಲ. ವಿಶ್ವದ ಎಲ್ಲಾ ರಾಷ್ಟ್ರಗಳಿಗೂ ಅನ್ವಯವಾಗುತ್ತದೆ. ಎಲ್ಲಾ ರಾಷ್ಟ್ರಗಳು ಮುಂದಾಗಿ ಸಹ್ಯ ಅಭಿವೃದ್ಧಿಯತ್ತ ಮನಸ್ಸು ಮಾಡಬೇಕು. ಏಕೆಂದರೆ ನಾವೆಲ್ಲರೂ ಪರಸ್ಪರ ಸಂಪರ್ಕ ಹೊಂದಿದ ವಿಶ್ವದಲ್ಲಿ ಬದುಕುತ್ತಿದ್ದೇವೆ. ತಾಂತ್ರಿಕವಾಗಿ ಜಗತ್ತು ಬದಲಾಗುತ್ತಿರುವಾಗ ಹೊಸ ರೀತಿಯ ಸವಾಲುಗಳು ಬರುತ್ತವೆ. ಅವುಗಳನ್ನು ಎದುರಿಸಲು ಎಲ್ಲ ದೇಶಗಳೂ ಒಂದಾಗಬೇಕು ಎಂದಿದ್ದಾರೆ.
ದೇಶದ ರೈತರ ಆದಾಯವನ್ನು 2020ರ ಒಳಗೆ ವೃದ್ಧಿಸಲು ಎಲ್ಲ ರೀತಿಯ ಕ್ರಮ ಕೈಗೊಳ್ಳಲಾಗಿದೆ. ಜತೆಗೆ ಆಧಾರ್ ಜಾರಿಯಿಂದಾಗಿ ಸರ್ಕಾರಕ್ಕೆ 5 ಲಕ್ಷ ಕೋಟಿ ರೂ.ಗಳಷ್ಟು (8 ಬಿಲಿಯನ್ ಡಾಲರ್) ಉಳಿತಾಯವಾಗಿದೆ ಎಂದೂ ಹೇಳಿದ್ದಾರೆ.
ದೇಗುಲ ನಿರ್ಮಾಣಕ್ಕೆ ಪಿಎಂ ಶಂಕುಸ್ಥಾಪನೆ
ಪ್ರಧಾನಿ ನರೇಂದ್ರ ಮೋದಿ ಅಬುಧಾಬಿಯಲ್ಲಿ ನಿರ್ಮಾಣವಾಗಲಿರುವ ಮೊದಲ ಹಿಂದೂ ದೇಗುಲಕ್ಕೆ ಭಾನುವಾರ ಶಂಕುಸ್ಥಾಪನೆ ನೆರವೇರಿಸಿದ್ದಾರೆ.
ದುಬೈ ಒಪೇರಾ ಹೌಸ್ನಲ್ಲಿ ಭಾರತೀಯ ಸಮುದಾಯವನ್ನು ಉದ್ದೇಶಿಸಿ ಮಾತನಾಡುವ ಮೊದಲು ವಿಡಿಯೋ ಕಾನ್ಫರೆನ್ಸ್ ಮೂಲಕ ಶಂಕುಸ್ಥಾಪನೆ ನೆರವೇರಿಸಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ದೇಗುಲಗಳು ಸೌಹಾರ್ದತೆ ಮತ್ತು ಮಾನವೀಯತೆಯ ನಡುವಿನ ಸಂಬಂಧದ ವೇಗವನ್ನು ವರ್ಧಿಸುವುದಕ್ಕೆ ಕಾರಣವಾಗುತ್ತವೆ. ಈ ಅಂಶವೇ ಭಾರತವನ್ನು ಗುರುತಿಸುವಿಕೆಯ ಪ್ರಧಾನ ಅಂಶ ಎಂದಿದ್ದಾರೆ. ಇಲ್ಲಿನ ಆಡಳಿತಾಧಿಕಾರಿಗಳು ದೇಶದ ಸಾಂಸ್ಕೃತಿಕ ಇತಿಹಾಸ ಗಮನಿಸಿ ಜಮೀನು ನೀಡಿದ್ದಾರೆ. ಹೀಗಾಗಿ ಇತರರಿಗೆ ತೊಂದರೆಯಾಗದಂತೆ ದೇಗುಲದ ನಿರ್ಮಾಣಕಾರರು ಮತ್ತು ಭಕ್ತರು ಮುಂದಿನ ದಿನಗಳಲ್ಲಿ ವರ್ತಿಸಬೇಕು ಎಂದು ಸಲಹೆ ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ
Thailandನಲ್ಲಿ ಗುಜರಿ ಮಾಫಿಯಾದ ಕಿಂಗ್ ಪಿನ್ ರವಿ ಕಾನಾ, ಪ್ರಿಯತಮೆ ಕಾಜಲ್ ಜಾ ಬಂಧನ
ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ
Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು
MUST WATCH
ಹೊಸ ಸೇರ್ಪಡೆ
Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ
Students Notes: ಸ್ಕ್ರೀನ್ ಶಾರ್ಟ್ಗಳೆಂದು ಪುಸ್ತಕವಾಗದಿರಲಿ
ತೆಲುಗಿನಲ್ಲಿ ಮಾಲಾಶ್ರೀ ಚಿತ್ರ; ಮಾರಕಾಸ್ತ್ರ ಈಗ ಮಾರಣಾಯುಧಂ
Devadurga: ಅಪಘಾತದಲ್ಲಿ ಬೈಕ್ ಸವಾರರಿಬ್ಬರು ಸಾವು
Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ